ETV Bharat / state

ಎಫ್​​ಕೆಸಿಸಿಐ ಕೃಷಿ ಸಮಾವೇಶಕ್ಕೆ 3 ಕೋಟಿ ರೂ. ಅನುದಾನ: ಸಿಎಂ ಬಿಎಸ್​ವೈ ಭರವಸೆ - ಎಫ್ಕೆಸಿಸಿಐ ಮಹಿಳಾ ಉದ್ಯಮಿಗಳ ದಿನಾಚರಣೆ ಉದ್ಘಾಟಿಸಿದ ಬಿ ಎಸ್​ ಯಡಿಯೂರಪ್ಪ

ಬೆಂಗಳೂರಿನಲ್ಲಿ ಎಫ್​​ಕೆಸಿಸಿಐ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಮಹಿಳಾ ಉದ್ಯಮಿಗಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಸಿಎಂ ಯಡಿಯೂರಪ್ಪ, ಮಹಿಳಾ ಉದ್ಯಮಿಗಳಿಗೆ ಉದಾರವಾಗಿ ಸಹಕಾರ ನೀಡುಲು ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದರು. ಅಲ್ಲದೆ ಸಲಹೆಗಳನ್ನು ನೂತನ ಯೋಜನೆಗಳಲ್ಲಿ ಅಳವಡಿಸುವುದಾಗಿ ತಿಳಿಸಿದರು.

ಮಹಿಳಾ ಉದ್ಯಮಿಗಳ ದಿನಾಚರಣೆ
author img

By

Published : Nov 19, 2019, 1:59 PM IST

ಬೆಂಗಳೂರು: ಎಫ್​ಕೆಸಿಸಿಐ ಬರುವ ಏಪ್ರಿಲ್ ತಿಂಗಳಲ್ಲಿ ನಡೆಸುವ ಕೃಷಿ ಹಾಗೂ ಆಹಾರ ಪ್ರದರ್ಶನ ಮೇಳಕ್ಕೆ ರಾಜ್ಯ ಸರ್ಕಾರದಿಂದ 3 ಕೋಟಿ ರೂ. ನೀಡುವುದಾಗಿ ಸಿಎಂ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದರು.

ನಗರದ ಎಫ್​​ಕೆಸಿಸಿಐ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಮಹಿಳಾ ಉದ್ಯಮಿಗಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳಾ ಉದ್ಯಮಕ್ಕೆ ರಾಜ್ಯ ಸರ್ಕಾರ ಸಾಕಷ್ಟು ಅನುಕೂಲ ಕಲ್ಪಿಸಿದೆ. ನಮ್ಮದು ಕೈಗಾರಿಕಾ ಸ್ನೇಹಿ ಸರ್ಕಾರ. ನಿಮ್ಮ ಸಲಹೆ ನಮ್ಮ ಪಾಲಿಸಿ ಜಾರಿಗೆ ತರುವಾಗ ಬಳಸಿಕೊಳ್ಳುತ್ತೇವೆ. ಮಹಿಳಾ ಉದ್ಯಮಕ್ಕೆ ಅಗತ್ಯ ಅನುಕೂಲ ಕಲ್ಪಿಸಲು ಸಿದ್ಧ ಎಂದರು.

3-crore-for-the-fkcci-agriculture-conference-cm-bs-y-who-promised-the-grant
ಮಹಿಳಾ ಉದ್ಯಮಿಗಳ ದಿನಾಚರಣೆ

ಶೇ. 14ರಷ್ಟು ಮಹಿಳಾ ಸಂಸ್ಥೆ

ಎಫ್​ಕೆಸಿಸಿಐ ಅಧ್ಯಕ್ಷ ಸಿ.ಆರ್.ಜನಾರ್ದನ ಮಾತನಾಡಿ, ಮಹಿಳೆಯರೇ ನಡೆಸುತ್ತಿರುವ ಉದ್ಯಮಗಳಲ್ಲಿ ಟಾಪ್ 50 ನಗರಗಳಲ್ಲಿ ಬೆಂಗಳೂರು 40ನೇ ಸ್ಥಾನ ಪಡೆದಿದೆ. 14ರಷ್ಟು ವ್ಯಾಪಾರ ಸಂಸ್ಥೆಗಳು ಮಹಿಳೆಯರಿಂದ ನಡೆಸಲ್ಪಡುತ್ತಿವೆ. ಪ್ರತ್ಯೇಕ ಸೆಲ್ ಸ್ಥಾಪಿಸಿ, ಪ್ರತ್ಯೇಕ ಟೆಕ್ ಪಾರ್ಕ್ ಅಗತ್ಯವಿದೆ. ಸಂಸ್ಥೆ 350 ಉದ್ಯಮ ಸಮಾವೇಶ ಮಾಡಿದ್ದು, ಸಾವಿರಾರು ಕೋಟಿ ಸರ್ಕಾರಕ್ಕೆ ಅನುದಾನ ಬರುವಂತೆ ಮಾಡಿದ್ದೇವೆ ಎಂದರು.

ಮಹಿಳಾ ಉದ್ಯಮಿಗಳ ದಿನಾಚರಣೆ

ಕೃಷಿ ಪ್ರದರ್ಶನ

ಏ. 22ರಿಂದ 26ರವರೆಗೆ ಕೃಷಿ ಪ್ರದರ್ಶನ ಹಮ್ಮಿಕೊಂಡಿದ್ದೇವೆ. 30 ದೇಶಗಳ ಪ್ರತಿನಿಧಿಗಳು ಬರಲು ಒಪ್ಪಿದ್ದಾರೆ. ಹಲವು ದೇಶದಲ್ಲಿ ರೋಡ್ ಶೋ ಮಾಡಲಿದ್ದೇವೆ. ಪ್ರದರ್ಶನ ಮೂಲಕ 1000 ಮಂದಿ ಕೃಷಿ ಆಂತ್ರುಪ್ರಿನರ್​ಗಳನ್ನು ಸಿದ್ಧಪಡಿಸುತ್ತೇವೆ. ಕೃಷಿಗೆ ಉತ್ತೇಜನ ನೀಡಲು ಪ್ರಧಾನಿ ಹೊತ್ತ ಕನಸು ನನಸು ಮಾಡಲು ನಾವು ಮಂದಾಗಿದ್ದೇವೆ. 10 ಕೋಟಿ ರೂ. ವೆಚ್ಚವಾಗಲಿದೆ. ಇದರಲ್ಲಿ ಸರ್ಕಾರದಿಂದ 5 ಕೋಟಿ ರೂ. ಅನುದಾನ ನೀಡಬೇಕೆಂದು ಮನವಿ ಮಾಡಿದರು. ಸಮಾರಂಭದಲ್ಲಿ ಸಿಎಂ ಯಡಿಯೂರಪ್ಪ ಅವರು ಎಫ್​ಕೆಸಿಸಿಐ ಸಿದ್ಧಪಡಿಸಿದ ಕೈಗಾರಿಕಾ ನೀತಿ ವರದಿಯನ್ನು ಬಿಡುಗಡೆ ಮಾಡಿದರು.

ಬೆಂಗಳೂರು: ಎಫ್​ಕೆಸಿಸಿಐ ಬರುವ ಏಪ್ರಿಲ್ ತಿಂಗಳಲ್ಲಿ ನಡೆಸುವ ಕೃಷಿ ಹಾಗೂ ಆಹಾರ ಪ್ರದರ್ಶನ ಮೇಳಕ್ಕೆ ರಾಜ್ಯ ಸರ್ಕಾರದಿಂದ 3 ಕೋಟಿ ರೂ. ನೀಡುವುದಾಗಿ ಸಿಎಂ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದರು.

ನಗರದ ಎಫ್​​ಕೆಸಿಸಿಐ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಮಹಿಳಾ ಉದ್ಯಮಿಗಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳಾ ಉದ್ಯಮಕ್ಕೆ ರಾಜ್ಯ ಸರ್ಕಾರ ಸಾಕಷ್ಟು ಅನುಕೂಲ ಕಲ್ಪಿಸಿದೆ. ನಮ್ಮದು ಕೈಗಾರಿಕಾ ಸ್ನೇಹಿ ಸರ್ಕಾರ. ನಿಮ್ಮ ಸಲಹೆ ನಮ್ಮ ಪಾಲಿಸಿ ಜಾರಿಗೆ ತರುವಾಗ ಬಳಸಿಕೊಳ್ಳುತ್ತೇವೆ. ಮಹಿಳಾ ಉದ್ಯಮಕ್ಕೆ ಅಗತ್ಯ ಅನುಕೂಲ ಕಲ್ಪಿಸಲು ಸಿದ್ಧ ಎಂದರು.

3-crore-for-the-fkcci-agriculture-conference-cm-bs-y-who-promised-the-grant
ಮಹಿಳಾ ಉದ್ಯಮಿಗಳ ದಿನಾಚರಣೆ

ಶೇ. 14ರಷ್ಟು ಮಹಿಳಾ ಸಂಸ್ಥೆ

ಎಫ್​ಕೆಸಿಸಿಐ ಅಧ್ಯಕ್ಷ ಸಿ.ಆರ್.ಜನಾರ್ದನ ಮಾತನಾಡಿ, ಮಹಿಳೆಯರೇ ನಡೆಸುತ್ತಿರುವ ಉದ್ಯಮಗಳಲ್ಲಿ ಟಾಪ್ 50 ನಗರಗಳಲ್ಲಿ ಬೆಂಗಳೂರು 40ನೇ ಸ್ಥಾನ ಪಡೆದಿದೆ. 14ರಷ್ಟು ವ್ಯಾಪಾರ ಸಂಸ್ಥೆಗಳು ಮಹಿಳೆಯರಿಂದ ನಡೆಸಲ್ಪಡುತ್ತಿವೆ. ಪ್ರತ್ಯೇಕ ಸೆಲ್ ಸ್ಥಾಪಿಸಿ, ಪ್ರತ್ಯೇಕ ಟೆಕ್ ಪಾರ್ಕ್ ಅಗತ್ಯವಿದೆ. ಸಂಸ್ಥೆ 350 ಉದ್ಯಮ ಸಮಾವೇಶ ಮಾಡಿದ್ದು, ಸಾವಿರಾರು ಕೋಟಿ ಸರ್ಕಾರಕ್ಕೆ ಅನುದಾನ ಬರುವಂತೆ ಮಾಡಿದ್ದೇವೆ ಎಂದರು.

ಮಹಿಳಾ ಉದ್ಯಮಿಗಳ ದಿನಾಚರಣೆ

ಕೃಷಿ ಪ್ರದರ್ಶನ

ಏ. 22ರಿಂದ 26ರವರೆಗೆ ಕೃಷಿ ಪ್ರದರ್ಶನ ಹಮ್ಮಿಕೊಂಡಿದ್ದೇವೆ. 30 ದೇಶಗಳ ಪ್ರತಿನಿಧಿಗಳು ಬರಲು ಒಪ್ಪಿದ್ದಾರೆ. ಹಲವು ದೇಶದಲ್ಲಿ ರೋಡ್ ಶೋ ಮಾಡಲಿದ್ದೇವೆ. ಪ್ರದರ್ಶನ ಮೂಲಕ 1000 ಮಂದಿ ಕೃಷಿ ಆಂತ್ರುಪ್ರಿನರ್​ಗಳನ್ನು ಸಿದ್ಧಪಡಿಸುತ್ತೇವೆ. ಕೃಷಿಗೆ ಉತ್ತೇಜನ ನೀಡಲು ಪ್ರಧಾನಿ ಹೊತ್ತ ಕನಸು ನನಸು ಮಾಡಲು ನಾವು ಮಂದಾಗಿದ್ದೇವೆ. 10 ಕೋಟಿ ರೂ. ವೆಚ್ಚವಾಗಲಿದೆ. ಇದರಲ್ಲಿ ಸರ್ಕಾರದಿಂದ 5 ಕೋಟಿ ರೂ. ಅನುದಾನ ನೀಡಬೇಕೆಂದು ಮನವಿ ಮಾಡಿದರು. ಸಮಾರಂಭದಲ್ಲಿ ಸಿಎಂ ಯಡಿಯೂರಪ್ಪ ಅವರು ಎಫ್​ಕೆಸಿಸಿಐ ಸಿದ್ಧಪಡಿಸಿದ ಕೈಗಾರಿಕಾ ನೀತಿ ವರದಿಯನ್ನು ಬಿಡುಗಡೆ ಮಾಡಿದರು.

Intro:newsBody:ಎಫ್ಕೆಸಿಸಿಐ ಏಪ್ರಿಲ್ ನಲ್ಲಿ ಹಮ್ಮಿಕೊಂಡಿರುವ ಸಮಾವೇಶಕ್ಕೆ 3 ಕೋಟಿ ರೂ. ಅನುದಾನ ಭರವಸೆ ಕೊಟ್ಟ ಸಿಎಂ

ಬೆಂಗಳೂರು: ಎಫ್ಕೆಸಿಸಿಐ ಬರುವ ಏಪ್ರಿಲ್ ತಿಂಗಳಲ್ಲಿ ನಡೆಸುವ ಕೃಷಿ ಹಾಗೂ ಆಹಾರ ಪ್ರದರ್ಶನ ಮೇಳಕ್ಕೆ ರಾಜ್ಯ ಸರ್ಕಾರದಿಂದ 3 ಕೋಟಿ ರೂ ನೀಡುವುದಾಗಿ ಸಿಎಂ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದರು.
ಬೆಂಗಳೂರಿನಲ್ಲಿ ಎಫ್ಕೆಸಿಸಿಐ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಮಹಿಳಾ ಉದ್ಯಮಿಗಳ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಸಮಾರಂಭಕ್ಕೆ ಕೆಲ ದಿನ ಮುನ್ನ ಈ ವಿಚಾರ ನನ್ನ ಗಮನಕ್ಕೆ ತನ್ನಿ. ಅನುದಾನ ನೀಡಲು ಬದ್ಧವಾಗಿದ್ದೇನೆ ಎಂದರು.
ಮಹಿಳಾ ಉದ್ಯಮಕ್ಕೆ ರಾಜ್ಯ ಸರ್ಕಾರ ಸಾಕಷ್ಟು ಅನುಕೂಲ ಕಲ್ಪಿಸಿದೆ. ಕೈಗಾರಿಕಾ ಸ್ನೇಹಿ ಸರ್ಕಾರ ಇದಾಗಿದೆ. ಹೊಸ ನೀತಿ ಶೀಘ್ರ ಜಾರಿಗೆ ಬರಲಿದ್ದು ಅದರಲ್ಲಿ‌ಮಹಿಳಾ ಉದ್ಯಮಕ್ಕೆ ಹೆಚ್ಚು ಒತ್ತು ಸಿಗಲಿದೆ. ನಿಮ್ಮ ಸಲಹೆ ನಮ್ಮ ಪಾಲಿಸಿ ಜಾರಿಗೆ ತರುವಾಗ ಬಳಸಿಕೊಳ್ಳುತ್ತೇವೆ. ಮಹಿಳಾ ಉದ್ಯಮಕ್ಕೆ ಅಗತ್ಯ ಅನುಕೂಲ ಕಲ್ಪಿಸಲು ಸಿದ್ಧ. ನಿಮ್ಮ ಸಲಹೆ ಅತ್ಯುಪಯುಕ್ತ ಹಾಗೂ ನಮ್ಮ ಪಾಲಿಸಿಗೆ ಪೂರಕವಾಗಿದೆ. ಮಹಿಳಾ ಉದ್ಯಮ ರಾಜ್ಯದಲ್ಲಿ ಪ್ರಗತಿ ಹೊಂದುತ್ತಿದ್ದು, ಅದಕ್ಕೆ ಪೂರಕ ಸಹಕಾರ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸರ್ಕಾರ ಇವರ ಇನ್ನಷ್ಟು ಪ್ರಗತಿಗೆ ಕೊಡುಗೆ ನೀಡಲಿದೆ ಎಂದರು.
ಶೇ.14 ರಷ್ಟು ಮಹಿಳಾ ಸಂಸ್ಥೆ
ಎಫ್ಕೆಸಿಸಿಐ ಅಧ್ಯಕ್ಷ ಸಿ.ಆರ್. ಜನಾರ್ದನ ಮಾತನಾಡಿ, ಮಹಿಳೆಯರೇ ನಡೆಸುತ್ತಿರುವ ಉದ್ಯಮಗಳ ಟಾಪ್ 50 ನಗರದಲ್ಲಿ ಬೆಂಗಳೂರು 40 ನೇ ಸ್ಥಾನ ಮಹಿಳೆಯರ ಉದ್ಯಮ ಸ್ಥಾನ ಪಡೆದಿದೆ. ಶೇ. 14 ರಷ್ಟು ವ್ಯಾಪಾರ ಸಂಸ್ಥೆಗಳು ಮಹಿಳೆಯರಿಂದ ನಡೆಸಲ್ಪಡುತ್ತಿದೆ. ಮಹಿಳಾ ಉದ್ಯಮದಾರರಿಗೆ ಅನುಕೂಲವಾಗಲು ಶ್ರಮಿಸಿದ ಮಹಿಳಾ ಸಾಧಕರಿಗೆ ಧನ್ಯವಾದ‌ ಸಲ್ಲಿಸುತ್ತೇನೆ. ಪ್ರತ್ಯೇಕ ಸೆಲ್ ಸ್ಥಾಪಿಸಿ, ಪ್ರತ್ಯೇಕ ಟೆಕ್ ಪಾರ್ಕ್ ಅಗತ್ಯವಿದೆ, ಪ್ರತಿ ಜಿಲ್ಲಡಯಲ್ಲಿ ಸ್ಥಾಪಿಸಿ, ಸುಲಭ ಬಡ್ಡಿದರದಲ್ಲಿ ಸಾಲ, ಉನ್ನತ ಮಾರ್ಗದರ್ಶನ ಅಗತ್ಯವಿದೆ ಅದಕ್ಕೆ ಅವಕಾಶ ಮಾಡಿಕೊಡಿ. ಸಂಸ್ಥೆ 350 ಉದ್ಯಮ ಸಮಾವೇಶ ಮಾಡಿದ್ದು, ಸಾವಿರಾರು ಕೋಟಿ ಸರ್ಕಾರಕ್ಕೆ ಅನುದಾನ ಬರುವಂತೆ ಮಾಡಿದ್ದೇವೆ. ಏ.22 ರಿಂದ 26 ರವರೆಗೆ ಕೃಷಿ ಪ್ರದರ್ಶನ ಹಮ್ಮಿಕೊಂಡಿದ್ದೇವೆ. 30 ದೇಶದ ಪ್ರತಿನಿಧಿಗಳು ಬರಲು ಒಪ್ಪಿದ್ದೇವೆ. ಹಲವು ದೇಶದಲ್ಲಿ ರೋಡ್ ಶೋ ಮಾಡಲಿದ್ದೇವೆ. ಪ್ರದರ್ಶನ ಮೂಲಕ 1000 ಮಂದಿ ಕೃಷಿ ಆಂತ್ರುಪ್ರಿನರ್ ಗಳನ್ನು ಸಿದ್ಧಪಡಿಸುತ್ತೇವೆ. ಕೃಷಿಗೆ ಉತ್ತೇಜನ ನೀಡಲು ಪ್ರಧಾನಿ ಹೊತ್ತ ಕನಸು ನನಸು ಮಾಡಲು ನಾವು ಮದಾಗಿದ್ದೇವೆ. 10 ಕೋಟಿ ರೂ. ವೆಚ್ಚವಾಗಲಿದೆ, ಇದರಲ್ಲಿ ಸರ್ಕಾರದಿಂದ 5 ಕೋಟಿ ರೂ. ಅನುದಾನ ನೀಡಬೇಕೆಂದು ಮನವಿ ಮಾಡಿದರು.
ಸಮಾರಂಭದಲ್ಲಿ ಸಿಎಂ ಯಡಿಯೂರಪ್ಪ ಅವರು ಎಫ್ಕೆಸಿಸಿಐ ಸಿದ್ಧಪಡಿಸಿದ ಕೈಗಾರಿಕಾ ನೀತಿ ವರದಿಯನ್ನು ಬಿಡುಗಡೆ ಮಾಡಿದರು. ಸಮಾರಂಭದಲ್ಲಿ ಕೌನ್ಸುಲೇಟ್ ಜನರಲ್, ಇಸ್ರೆಲ್ ಡಾನಾ ಖ್ರುಶ್, ಹಿರಿಯ ಐಎಸ್ ಅಧಿಕಾರಿ ಗುಂಜನ್ ಕೃಷ್ಣ, ಎಫ್ಕೆಸಿಸಿಐ ಹಿರಿಯ ಉಪಾಧ್ಯಕ್ಷ ಪೆರಿಕಲ್ ಎಂ. ಸುಂದರ್, ಮಹಿಳಾ ಉದ್ಯಮ ಸಮಿತಿಯ ಅಧ್ಯಕ್ಷೆ ರೂಪಾ ರಾಣಿ ಮತ್ತಿತರರು ಉಪಸ್ಥಿತರಿದ್ದರು.Conclusion:news

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.