ETV Bharat / state

3 ದಿನಗಳಲ್ಲಿ 1,87,678 ಗಣೇಶ ವಿಸರ್ಜನೆ : 5 ದಿನದ ನಂತರವೂ ಮೂರ್ತಿ ವಿಸರ್ಜನೆಗೆ ಪಾಲಿಕೆ ಅವಕಾಶ?

author img

By

Published : Sep 13, 2021, 7:19 PM IST

ಸೋಮವಾರ ನಾಲ್ಕನೇ ದಿನವಾಗಿದ್ದು, ಒಟ್ಟು ಐದು ದಿನದವರೆಗೂ ಗಣೇಶ ವಿಸರ್ಜನೆಗೆ ಪಾಲಿಕೆ ಅವಕಾಶ ಕಲ್ಪಿಸಿದೆ. ನಂತರವೂ ಬೇಡಿಕೆ ಇದ್ದರೆ, ಇರುವ ವ್ಯವಸ್ಥೆಯನ್ನೇ ಮುಂದುವರಿಸಲು ಬಿಬಿಎಂಪಿ ಯೋಜಿಸಿದೆ..

ಗಣೇಶ ಮೂರ್ತಿಗಳನ್ನು ವಿಸರ್ಜನೆ
ಗಣೇಶ ಮೂರ್ತಿಗಳನ್ನು ವಿಸರ್ಜನೆ

ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿನ್ನೆ ಸಂಚಾರಿ/ಮೊಬೈಲ್ ಟ್ಯಾಂಕರ್ ಹಾಗೂ ಕಲ್ಯಾಣಿ, ಹೊಂಡಗಳಲ್ಲಿ ಒಟ್ಟು 72,068 ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿದೆ.

ಕಳೆದ ಮೂರು ದಿನಗಳಿಂದ ಪಾಲಿಕೆ ವ್ಯಾಪ್ತಿಯ ಕಲ್ಯಾಣಿ/ಹೊಂಡಗಳು ಹಾಗೂ ಆಯಾ ವಲಯ ವ್ಯಾಪ್ತಿಯಲ್ಲಿ ಬರುವ ವಾರ್ಡ್​ಗಳ ಆಯ್ದ ಸ್ಥಳಗಳಲ್ಲಿ ವ್ಯವಸ್ಥೆ ಮಾಡಿರುವ ಸಂಚಾರಿ/ಮೊಬೈಲ್ ಟ್ಯಾಂಕರ್ ಗಳಲ್ಲಿ ಒಟ್ಟಾರೆ 1,87,678 ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿದೆ.

ಸೋಮವಾರ ನಾಲ್ಕನೇ ದಿನವಾಗಿದ್ದು, ಒಟ್ಟು ಐದು ದಿನದವರೆಗೂ ಗಣೇಶ ವಿಸರ್ಜನೆಗೆ ಪಾಲಿಕೆ ಅವಕಾಶ ಕಲ್ಪಿಸಿದೆ. ನಂತರವೂ ಬೇಡಿಕೆ ಇದ್ದರೆ, ಇರುವ ವ್ಯವಸ್ಥೆಯನ್ನೇ ಮುಂದುವರಿಸಲು ಬಿಬಿಎಂಪಿ ಯೋಜಿಸಿದೆ.

ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿನ್ನೆ ಸಂಚಾರಿ/ಮೊಬೈಲ್ ಟ್ಯಾಂಕರ್ ಹಾಗೂ ಕಲ್ಯಾಣಿ, ಹೊಂಡಗಳಲ್ಲಿ ಒಟ್ಟು 72,068 ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿದೆ.

ಕಳೆದ ಮೂರು ದಿನಗಳಿಂದ ಪಾಲಿಕೆ ವ್ಯಾಪ್ತಿಯ ಕಲ್ಯಾಣಿ/ಹೊಂಡಗಳು ಹಾಗೂ ಆಯಾ ವಲಯ ವ್ಯಾಪ್ತಿಯಲ್ಲಿ ಬರುವ ವಾರ್ಡ್​ಗಳ ಆಯ್ದ ಸ್ಥಳಗಳಲ್ಲಿ ವ್ಯವಸ್ಥೆ ಮಾಡಿರುವ ಸಂಚಾರಿ/ಮೊಬೈಲ್ ಟ್ಯಾಂಕರ್ ಗಳಲ್ಲಿ ಒಟ್ಟಾರೆ 1,87,678 ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿದೆ.

ಸೋಮವಾರ ನಾಲ್ಕನೇ ದಿನವಾಗಿದ್ದು, ಒಟ್ಟು ಐದು ದಿನದವರೆಗೂ ಗಣೇಶ ವಿಸರ್ಜನೆಗೆ ಪಾಲಿಕೆ ಅವಕಾಶ ಕಲ್ಪಿಸಿದೆ. ನಂತರವೂ ಬೇಡಿಕೆ ಇದ್ದರೆ, ಇರುವ ವ್ಯವಸ್ಥೆಯನ್ನೇ ಮುಂದುವರಿಸಲು ಬಿಬಿಎಂಪಿ ಯೋಜಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.