ETV Bharat / state

ಮಹಿಳೆಯರ ಸಿದ್ದ ಉಡುಪು ಕಳ್ಳತನ ಪ್ರಕರಣ: ಆರೋಪಿ ಅಂದರ್​

ಸಾನ್ವಿ ಇಂಡಸ್ಟ್ರೀಸ್​ ಎಂಬ ಕಂಪೆನಿಯಲ್ಲಿ ಸುಮಾರು 27 ಲಕ್ಷ ಮೌಲ್ಯದ ಮಹಿಳಾ ಸಿದ್ದ ಉಡುಪುಗಳನ್ನು ಕಳ್ಳತನ ಮಾಡಿದ್ದು, ಶೀಘ್ರ ಕಾರ್ಯಚರಣೆ ನಡೆಸಿದ ಪೊಲೀಸರು ಆರೋಪಿಯನ್ನುಬಂಧಸಿದ್ದಾರೆ.

author img

By

Published : Mar 24, 2019, 10:30 PM IST

ಆರೋಪಿ ಅಂದರ್​

ದೊಡ್ಡಬಳ್ಳಾಪುರ: ಮಹಿಳೆಯರ ಸಿದ್ದ ಉಡುಪು ಫ್ಯಾಕ್ಟರಿಯಲ್ಲಿ ಕಳ್ಳತನ ಮಾಡಿದ ಆರೋಪಿ‌ಗಳನ್ನು ಬಂಧಿಸುವಲ್ಲಿ ದೊಡ್ಡಬಳ್ಳಾಪುರ ಪೊಲೀಸರು ಯಶಸ್ವಿಯಾಗಿದ್ದು, ಬಂಧಿತ ಆರೋಪಿಯಿಂದ 27 ಲಕ್ಷ ಮೌಲ್ಯದ ಮಹಿಳೆಯರ ಸಿದ್ಧ ಉಡುಪು ವಶಪಡಿಸಿಕೊಂಡಿದ್ದಾರೆ.

ಕಂಪನಿಯ ವೈಸ್ ಪ್ರೆಸಿಡೆಂಟ್ ವಿ. ರವಿಕುಮಾರ್‌ನನ್ನು ಬಂಧಿತ ಆರೋಪಿ. ದೊಡ್ಡಬಳ್ಳಾಪುರ ಹೊರವಲಯದ ಕೆಸಿಪಿ ಸರ್ಕಲ್ ಬಳಿಯ ಸಾನ್ವಿ ಇಂಡಸ್ಟ್ರೀಸ್​ನಲ್ಲಿ ಕಳ್ಳತನ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪನಿಯ ಹೆಚ್. ಆರ್. ಕೃಷ್ಣಮೂರ್ತಿ ದೊಡ್ಡ ಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ವನ್ನು ದಾಖಲು ಮಾಡಿದ್ದರು. ಮುಂಬೈ ಮೂಲದ ರಾಥೋಡ್ ಎಂಬುವವರು ಸಾನ್ವಿ ಇಂಡಸ್ಟ್ರೀಸ್ ಮಾಲೀಕರಾಗಿದ್ದು, ವೈಸ್ ಪ್ರೆಸಿಡೆಂಟ್ ಆಗಿ ತಮಿಳುನಾಡಿನ ರವಿಕುಮಾರ್ ಕಂಪನಿಯನ್ನು ನೋಡಿಕೊಳ್ಳುತ್ತಿದ್ದರು.

ಆರೋಪಿ ಅಂದರ್​

ಫೆಬ್ರವರಿ ತಿಂಗಳಲ್ಲಿ ಸ್ವಾನಿ ಇಂಡಸ್ಟ್ರೀಸ್​ಗೆ ಪಂಜಾಬ್ ನಿಂದ 70 ಬಾಕ್ಸ್ ಮಹಿಳೆಯರ ಸಿದ್ದ ಉಡುಪುಗಳ ಬಾಕ್ಸ್ ಬಂದಿರುತ್ತದೆ. ದಿ.19ರಂದು ಕಂಪನಿಗೆ ರಜೆ ಇದ್ದರಿಂದ ದಿ.20ರಂದು ಮಹಡಿಯಲ್ಲಿಟ್ಟದ್ದ ಮಹಿಳೆ‌ಯರ ಸಿದ್ಧ ಉಡುಪುಗಳ 70 ಬಾಕ್ಸ್ ನಾಪತ್ತೆ‌ಯಾಗಿರುತ್ತದೆ. ಇದರ ಮಾರುಕಟ್ಟೆ ಮೌಲ್ಯ 27 ಲಕ್ಷ ಇದೆ. ಕಂಪನಿಯ ಹೆಚ್ಆರ್ ಆಗಿರುವ ಕೃಷ್ಣಮೂರ್ತಿ ಅಕೌಂಟ್ ಪುನೀತ್, ಗೋವಿಂದ ರಾಜ್ ಮತ್ತು ಎಲೆಕ್ಟ್ರಿಶಿಯನ್ ಹೆಚ್ಆರ್ ಗೋವಿಂದ ಮತ್ತು ಸೆಕ್ಯೂರಿಟಿ ಗಾರ್ಡ್ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ವಿಚಾರಣೆ ನಡೆಸಿದ ಪೂಲೀಸರು ಕಳವು ಪ್ರಕರಣದ ಪ್ರಮುಖ ಆರೋಪಿ ಕಂಪನಿಯ ವೈಸ್ ಪ್ರೆಸಿಡೆಂಟ್ ವಿ. ರವಿಕುಮಾರ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪುನೀತ್, ಗೋವಿಂದ್‌ರಾಜ್ ಮತ್ತು ಸೆಕ್ಯೂರಿಟಿ ಗಾರ್ಡ್​ಗೆ ಕುಮ್ಮಕ್ಕು ನೀಡಿ ರವಿಕುಮಾರ್ ಕಳ್ಳತನ ಮಾಡಿಸಿದ್ದ. ಕಳ್ಳತನ ಮಾಡಿದ ವಸ್ತುಗಳನ್ನು ಮುತ್ತು‌ಕುಮಾರ್ ಅಂಗಡಿಗೆ 6 ಲಕ್ಷಕ್ಕೆ ಮಾರಾಟ ಮಾಡಿದ್ದ ಸುಮಾರು 27 ಲಕ್ಷ ಮೌಲ್ಯದ ಮಹಿಳೆಯರ ಒಳ ಉಡುಪನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಯಾರು ಈ ರವಿಕುಮಾರ್ ?

ಈತ ತಮಿಳುನಾಡಿನ ಕೊಯಮತ್ತೂರು ಬಳಿಯ ಸಿಂಗಾನಲ್ಲೂರಿನವನು. ಸದ್ಯ ಬೆಂಗಳೂರಿನ ಜೆಪಿ ನಗರದ ವಾಸಿಸುತ್ತಿದ್ದಾನೆ. ಎಂಬಿಎ ಓದಿರುವ ಈತ ಕೆನಡಾ, ಸಿಂಗಪುರ, ಜಪಾನ್ ದೇಶಗಳಲ್ಲಿ ಕೆಲಸ ಮಾಡಿದ್ದ. ಕಳೆದ 8 ತಿಂಗಳ ಹಿಂದೆಯಷ್ಟೇ ಸಾನ್ವಿ ಇಂಡಸ್ಟ್ರೀಸ್​ಗೆ ವೈಸ್ ಪ್ರೆಸಿಡೆಂಟ್ ಆಗಿ ಕೆಲಸಕ್ಕೆ ಸೇರಿದ್ದನು. ಬಾಂಬೆಯಲ್ಲಿರುವ ಕಂಪನಿ ಮಾಲೀಕರ ಮನಗೆದ್ದು, ಕಂಪನಿಯನ್ನು ತನ್ನ ಆಧೀನಕ್ಕೆ ತೆಗೆದುಕೊಂಡಿದ್ದನು. ಮಾಲೀಕರ ನಂಬಿಕೆಯನ್ನೇ ಬಂಡವಾಳ ಮಾಡಿಕೊಂಡ ರವಿಕುಮಾರ್ ಫೆ.19ರಂದು ಕಂಪನಿಗೆ ರಜೆ ಇದ್ದಿದ್ದರಿಂದ ಕಂಪನಿ ಉದ್ಯೋಗಿಗಳಾದ ಪುನೀತ್,ಗೋವಿಂದ ರಾಜ್ ಮತ್ತು ಸೆಕ್ಯೂರಿಟಿ ಗಾರ್ಡ್ ಕೈಯಲ್ಲಿ ಕಳ್ಳತನ ಮಾಡಿಸಿ ಮುತ್ತು‌ಕುಮಾರ್ ಎಂಬುವವರಿಗೆ ಮಾರಾಟ ಮಾಡಿದ್ದನು.

ಪ್ರಕರಣ ಕುರಿತು ಶೀಘ್ರ ತನಿಖೆ ನಡೆಸಿದ ದೊಡ್ಡಬಳ್ಳಾಪುರ ಪೊಲೀಸರು ಪ್ರಕರಣ ಭೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ದೊಡ್ಡಬಳ್ಳಾಪುರ: ಮಹಿಳೆಯರ ಸಿದ್ದ ಉಡುಪು ಫ್ಯಾಕ್ಟರಿಯಲ್ಲಿ ಕಳ್ಳತನ ಮಾಡಿದ ಆರೋಪಿ‌ಗಳನ್ನು ಬಂಧಿಸುವಲ್ಲಿ ದೊಡ್ಡಬಳ್ಳಾಪುರ ಪೊಲೀಸರು ಯಶಸ್ವಿಯಾಗಿದ್ದು, ಬಂಧಿತ ಆರೋಪಿಯಿಂದ 27 ಲಕ್ಷ ಮೌಲ್ಯದ ಮಹಿಳೆಯರ ಸಿದ್ಧ ಉಡುಪು ವಶಪಡಿಸಿಕೊಂಡಿದ್ದಾರೆ.

ಕಂಪನಿಯ ವೈಸ್ ಪ್ರೆಸಿಡೆಂಟ್ ವಿ. ರವಿಕುಮಾರ್‌ನನ್ನು ಬಂಧಿತ ಆರೋಪಿ. ದೊಡ್ಡಬಳ್ಳಾಪುರ ಹೊರವಲಯದ ಕೆಸಿಪಿ ಸರ್ಕಲ್ ಬಳಿಯ ಸಾನ್ವಿ ಇಂಡಸ್ಟ್ರೀಸ್​ನಲ್ಲಿ ಕಳ್ಳತನ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪನಿಯ ಹೆಚ್. ಆರ್. ಕೃಷ್ಣಮೂರ್ತಿ ದೊಡ್ಡ ಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ವನ್ನು ದಾಖಲು ಮಾಡಿದ್ದರು. ಮುಂಬೈ ಮೂಲದ ರಾಥೋಡ್ ಎಂಬುವವರು ಸಾನ್ವಿ ಇಂಡಸ್ಟ್ರೀಸ್ ಮಾಲೀಕರಾಗಿದ್ದು, ವೈಸ್ ಪ್ರೆಸಿಡೆಂಟ್ ಆಗಿ ತಮಿಳುನಾಡಿನ ರವಿಕುಮಾರ್ ಕಂಪನಿಯನ್ನು ನೋಡಿಕೊಳ್ಳುತ್ತಿದ್ದರು.

ಆರೋಪಿ ಅಂದರ್​

ಫೆಬ್ರವರಿ ತಿಂಗಳಲ್ಲಿ ಸ್ವಾನಿ ಇಂಡಸ್ಟ್ರೀಸ್​ಗೆ ಪಂಜಾಬ್ ನಿಂದ 70 ಬಾಕ್ಸ್ ಮಹಿಳೆಯರ ಸಿದ್ದ ಉಡುಪುಗಳ ಬಾಕ್ಸ್ ಬಂದಿರುತ್ತದೆ. ದಿ.19ರಂದು ಕಂಪನಿಗೆ ರಜೆ ಇದ್ದರಿಂದ ದಿ.20ರಂದು ಮಹಡಿಯಲ್ಲಿಟ್ಟದ್ದ ಮಹಿಳೆ‌ಯರ ಸಿದ್ಧ ಉಡುಪುಗಳ 70 ಬಾಕ್ಸ್ ನಾಪತ್ತೆ‌ಯಾಗಿರುತ್ತದೆ. ಇದರ ಮಾರುಕಟ್ಟೆ ಮೌಲ್ಯ 27 ಲಕ್ಷ ಇದೆ. ಕಂಪನಿಯ ಹೆಚ್ಆರ್ ಆಗಿರುವ ಕೃಷ್ಣಮೂರ್ತಿ ಅಕೌಂಟ್ ಪುನೀತ್, ಗೋವಿಂದ ರಾಜ್ ಮತ್ತು ಎಲೆಕ್ಟ್ರಿಶಿಯನ್ ಹೆಚ್ಆರ್ ಗೋವಿಂದ ಮತ್ತು ಸೆಕ್ಯೂರಿಟಿ ಗಾರ್ಡ್ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ವಿಚಾರಣೆ ನಡೆಸಿದ ಪೂಲೀಸರು ಕಳವು ಪ್ರಕರಣದ ಪ್ರಮುಖ ಆರೋಪಿ ಕಂಪನಿಯ ವೈಸ್ ಪ್ರೆಸಿಡೆಂಟ್ ವಿ. ರವಿಕುಮಾರ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪುನೀತ್, ಗೋವಿಂದ್‌ರಾಜ್ ಮತ್ತು ಸೆಕ್ಯೂರಿಟಿ ಗಾರ್ಡ್​ಗೆ ಕುಮ್ಮಕ್ಕು ನೀಡಿ ರವಿಕುಮಾರ್ ಕಳ್ಳತನ ಮಾಡಿಸಿದ್ದ. ಕಳ್ಳತನ ಮಾಡಿದ ವಸ್ತುಗಳನ್ನು ಮುತ್ತು‌ಕುಮಾರ್ ಅಂಗಡಿಗೆ 6 ಲಕ್ಷಕ್ಕೆ ಮಾರಾಟ ಮಾಡಿದ್ದ ಸುಮಾರು 27 ಲಕ್ಷ ಮೌಲ್ಯದ ಮಹಿಳೆಯರ ಒಳ ಉಡುಪನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಯಾರು ಈ ರವಿಕುಮಾರ್ ?

ಈತ ತಮಿಳುನಾಡಿನ ಕೊಯಮತ್ತೂರು ಬಳಿಯ ಸಿಂಗಾನಲ್ಲೂರಿನವನು. ಸದ್ಯ ಬೆಂಗಳೂರಿನ ಜೆಪಿ ನಗರದ ವಾಸಿಸುತ್ತಿದ್ದಾನೆ. ಎಂಬಿಎ ಓದಿರುವ ಈತ ಕೆನಡಾ, ಸಿಂಗಪುರ, ಜಪಾನ್ ದೇಶಗಳಲ್ಲಿ ಕೆಲಸ ಮಾಡಿದ್ದ. ಕಳೆದ 8 ತಿಂಗಳ ಹಿಂದೆಯಷ್ಟೇ ಸಾನ್ವಿ ಇಂಡಸ್ಟ್ರೀಸ್​ಗೆ ವೈಸ್ ಪ್ರೆಸಿಡೆಂಟ್ ಆಗಿ ಕೆಲಸಕ್ಕೆ ಸೇರಿದ್ದನು. ಬಾಂಬೆಯಲ್ಲಿರುವ ಕಂಪನಿ ಮಾಲೀಕರ ಮನಗೆದ್ದು, ಕಂಪನಿಯನ್ನು ತನ್ನ ಆಧೀನಕ್ಕೆ ತೆಗೆದುಕೊಂಡಿದ್ದನು. ಮಾಲೀಕರ ನಂಬಿಕೆಯನ್ನೇ ಬಂಡವಾಳ ಮಾಡಿಕೊಂಡ ರವಿಕುಮಾರ್ ಫೆ.19ರಂದು ಕಂಪನಿಗೆ ರಜೆ ಇದ್ದಿದ್ದರಿಂದ ಕಂಪನಿ ಉದ್ಯೋಗಿಗಳಾದ ಪುನೀತ್,ಗೋವಿಂದ ರಾಜ್ ಮತ್ತು ಸೆಕ್ಯೂರಿಟಿ ಗಾರ್ಡ್ ಕೈಯಲ್ಲಿ ಕಳ್ಳತನ ಮಾಡಿಸಿ ಮುತ್ತು‌ಕುಮಾರ್ ಎಂಬುವವರಿಗೆ ಮಾರಾಟ ಮಾಡಿದ್ದನು.

ಪ್ರಕರಣ ಕುರಿತು ಶೀಘ್ರ ತನಿಖೆ ನಡೆಸಿದ ದೊಡ್ಡಬಳ್ಳಾಪುರ ಪೊಲೀಸರು ಪ್ರಕರಣ ಭೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Intro:ಮಹಿಳೆಯರ ಸಿದ್ಧ ಉಡುಪು ಪ್ಯಾಕ್ಟರಿಯ ಸಿದ್ದ ಉಡುಪು‌ಗಳನ್ನು ಕಳ್ಳತನ ಮಾಡಿದ ಆರೋಪಿ‌ಗಳನ್ನು ಬಂಧಿಸುವಲ್ಲಿ ದೊಡ್ಡ‌ಬಳ್ಳಾಪುರ ಪೊಲೀಸರು ಯಶಸ್ವಿಯಾಗಿ‌ದ್ದಾರೆ. ಬಂಧಿತ ಆರೋಪಿಯಿಂದ 27 ಲಕ್ಷ ಮೌಲ್ಯದ ಮಹಿಳೆಯರ ಸಿದ್ಧ ಉಡುಪು ವಶಪಡಿಸಿಕೊಂಡಿದ್ದಾರೆ.


Body:70 ಬಾಕ್ಸ್ ಮಹಿಳೆಯರ ಒಳ ಉಡುಪು ಕದ್ದ ಖದೀಮರು

ದೊಡ್ಡಬಳ್ಳಾಪುರ ಹೊರವಲಯದ ಕೆಸಿಪಿ ಸರ್ಕಲ್ ಬಳಿಯ ಸಾನ್ವಿ ಇಂಡಸ್ಟ್ರೀಸ್ ನಲ್ಲಿ ಕಳ್ಳ‌ತನ ಪ್ರಕರಣ ನಡೆದಿದ್ದು. ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪನಿಯ ಹೆಚ್ ಆರ್ ಕೃಷ್ಣ‌ಮೂರ್ತಿ ದೊಡ್ಡ ಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ವನ್ನು ದಾಖಲು ಮಾಡಿರುತ್ತಾರೆ. ಮುಂಬೈ ಮೂಲದ ರಾಥೋಡ್ ಎಂಬುವರಿಗೆ ಸಾನ್ವಿ ಇಂಡಸ್ಟ್ರೀಸ್ ಮಾಲೀಕರಾಗಿದ್ದು ವೈಸ್ ಪ್ರೆಸಿಡೆಂಟ್ ಆಗಿ ತಮಿಳುನಾಡಿನ ರವಿಕುಮಾರ್ ಕಂಪನಿಯನ್ನು ನೋಡಿಕೋಳ್ಳುತ್ತಿದ್ದರು. ಫೆಬ್ರವರಿ ತಿಂಗಳಲ್ಲಿ ಸ್ವಾನಿ ಇಂಡಸ್ಟ್ರೀಸ್ ಗೆ ಪಂಜಾಬ್ ರಾಜ್ಯ‌ದಿಂದ 70 ಬಾಕ್ಸ್ ಮಹಿಳೆಯರ ಸಿದ್ದ ಉಡುಪುಗಳ ಬಾಕ್ಸ್ ಬಂದಿರುತ್ತದೆ. ದಿನಾಂಕ 19ರಂದು ಕಂಪನಿಗೆ ರಜೆ ಇದ್ದು ದಿನಾಂಕ 20 ತಾರೀಖ್ ನಾಲ್ಕನೇ ಮಹಡಿಯಲ್ಲಿಟ್ಟದ್ದ ಮಹಿಳೆ‌ಯರ ಸಿದ್ಧ ಉಡುಪುಗಳ 70 ಬಾಕ್ಸ್ ನಾಪತ್ತೆ‌ಯಾಗಿರುತ್ತದೆ. ಇದರ ಮಾರುಕಟ್ಟೆ ಮೌಲ್ಯ 27 ಲಕ್ಷ ಇದ್ದು. ಕಂಪನಿಯ ಹೆಚ್ ಆರ್ ಆಗಿರುವ ಕೃಷ್ಣ‌ಮೂರ್ತಿ
ಅಕೌಂಟ್ ಪುನೀತ್. ಗೋವಿಂದ ರಾಜ್ ಮತ್ತು ಎಲೆಕ್ರ್ಟೀಶಿಯನ್ . ಹೆಚ್ ಆರ್ ಗೋವಿಂದ ಮತ್ತು ಸೆಕ್ಯೂರಿಟಿ ಗಾರ್ಡ್ ಮೇಲೆ ಅನುಮಾನ ವ್ಯಕ್ತಪಡಿಸಿದರು. ವಿಚಾರಣೆ ನಡೆಸಿದ ಪೂಲೀಸರು ಕಳವು ಪ್ರಕರಣದ ಪ್ರಮುಖ ಆರೋಪಿ ಕಂಪನಿಯ ವೈಸ್ ಪ್ರೆಸಿಡೆಂಟ್ ವಿ. ರವಿಕುಮಾರ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪುನೀತ್. ಗೋವಿಂದ್‌ರಾಜ್ ಮತ್ತು ಸೆಕ್ಯೂರಿಟಿ ಗಾರ್ಡ್ ಗೆ ಕಳ್ಳತನದ ಕುಮ್ಮಕ್ಕು ನೀಡಿದ ರವಿಕುಮಾರ್ ಕಳ್ಳತನ ಮಾಡಿಸಿ. ಮುತ್ತು‌ಕುಮಾರ್ ಅಂಗಡಿಗೆ 6 ಲಕ್ಷಕ್ಕೆ ಮಾರಾಟಮಾಡಿದ. ಸುಮಾರು 27 ಲಕ್ಷ ಮೌಲ್ಯದ ಮಹಿಳೆಯರ ಒಳ ಉಡುಪು ಮತ್ತು ಆರೋಪಿಗಳನ್ನು ಬಂಧಿಸುವಲ್ಲಿ ದೊಡ್ಡ‌ಬಳ್ಳಾಪುರ ಪೊಲೀಸರು ಯಶಸ್ವಿಯಾಗಿ‌ದ್ದಾರೆ.

ಯಾರು ಈ ರವಿಕುಮಾರ್ ?

ತಮಿಳುನಾಡಿನ ಕೊಯಮತ್ತೂರು ಬಳಿಯ ಸಿಂಗಾನಲ್ಲೂರಿನವ. ಸದ್ಯ ಬೆಂಗಳೂರಿನ ಜೆಪಿ ನಗರದ ನಿವಾಸಿ. ಎಂಬಿಎ ಓದಿರುವ ಈತ ಕೆನಡಾ ಸಿಂಗಪುರ. ಜಪಾನ್ ದೇಶಗಳಲ್ಲಿ ಕೆಲಸ ಮಾಡಿದ್ಧ. ಈಗ್ಗೆ 8 ತಿಂಗಳ ಹಿಂದೆಯಷ್ಟೇ ಸಾನ್ವಿ ಇಂಡಸ್ಟ್ರೀಸ್ ಗೆ ವೈಸ್ ಪ್ರೆಸಿಡೆಂಟ್ ಆಗಿ ಕೆಲಸ ಮಾಡುತ್ತಿದ್ದ. ಬಾಂಬೆಯಲ್ಲಿರುವ ಕಂಪನಿ ಮಾಲೀಕರ ಮನಗೆದ್ದು ಕಂಪನಿಯನ್ನು ತನ್ನ ಆಧೀನಕ್ಕೆ ತೆಗೆದುಕೊಂಡಿದ್ದ. ಮಾಲೀಕರ ನಂಬಿಕೆಯನ್ನೇ ಬಂಡವಾಳ ಮಾಡಿಕೊಂಡ ರವಿಕುಮಾರ್ ಫೆಬ್ರವರಿ 19ರಂದು ಕಂಪನಿಗೆ ರಜೆ ಇದ್ದು ಅಂದು ಇತರೆ ಕಂಪನಿ ಉದ್ಯೋಗಿಗಳಾದ ಪುನೀತ್. ಗೋವಿಂದ ರಾಜ್ ಮತ್ತು ಸೆಕ್ಯೂರಿಟಿ ಗಾರ್ಡ್ ಕೈಯಲ್ಲಿ ಕಳ್ಳತನ ಮಾಡಿಸಿ ಮುತ್ತು‌ಕುಮಾರ್ ರವರಿಗೆ ಮಾರಾಟ ಮಾಡಿದ. ಕಂಪನಿಯ ಸಿಸಿಟಿವಿ ಕ್ಯಾಮೆರಾ ಆಫ್ ಮಾಡಿಸಿ ಕೃತ್ಯ ಮಾಡಿಸಿದ್ದ. ಪ್ರಕರಣ ಬಯಲಿಗೆ ಬರಬಾರದೆಂದು ಹಳೇಯ ಸಿಬ್ಬಂದಿಗಳನ್ನು ಕೆಲಸದಿಂದ ತೆಗೆದು ಹೊಸಬರನ್ನು ನೇಮಿಸಿದ್ದ.
ಆಡಿಟಿ‌ಂಟಿಗ್ ಮಾಡಿದ್ದಾಗ ಕಳ್ಳತನ ಬಯಲಿಗೆ ಬರುತ್ತದೆ. ತನಿಖೆ ನಡೆಸಿದ ದೊಡ್ಡ‌ಬಳ್ಳಾಪುರ ಪೊಲೀಸರು ಪ್ರಕರಣ ಭೇಧಿಸಲು ಯಶಸ್ವಿಯಾದರು. ಪೋಲಿಸರ ಕಾರ್ಯ‌ವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ: ರಾಮ್ ನಿವಾಸ್ ಸಫೆಟ್ ಮುಕ್ತ ಕಂಠದಿಂದ ಶ್ಲಾಘಿಸಿದರು




Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.