ETV Bharat / state

ನಾನು ಗುಳ್ಳೆ ನರಿ ಎಂದ ಅನರ್ಹ ಶಾಸಕ ಎಂಟಿಬಿ ನಾಗರಾಜ

ನನ್ನನ್ನು ರಾಜಕೀಯವಾಗಿ ಟೀಕಿಸುವವರು ಹುಲಿ, ಸಿಂಹಗಳ ರೀತಿ ಬದುಕಲಿ. ತಾಲೂಕಿನ ಜನರ ಅಭಿವೃದ್ಧಿಯಾಗದಿದ್ದರೆ ನಾನು ಸಹಿಸುವುದಿಲ್ಲ. ಅದಕ್ಕಾಗಿಯೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಇದೊಂದು ಬಾರಿ ಉಪಚುನಾವಣೆಯಲ್ಲಿ ಗೆಲ್ಲಿಸಿ ಎಂದು ಅನರ್ಹ ಶಾಸಕ ಎಂಟಿಬಿ ನಾಗರಾಜ್​ ಮನವಿ ಮಾಡಿದರು.

author img

By

Published : Oct 2, 2019, 7:53 AM IST

ಅನರ್ಹ ಶಾಸಕ ಎಂಟಿಬಿ ನಾಗರಾಜ್

ಹೊಸಕೋಟೆ: ನಾನು ಗುಳ್ಳೆನರಿ, ನನ್ನನ್ನು ಟೀಕಿಸುವವರು ಹುಲಿ, ಸಿಂಹಗಳ ರೀತಿಯಲ್ಲಿರಲಿ ಎಂದು ಅನರ್ಹ ಶಾಸಕ ಎಂಟಿಬಿ ನಾಗರಾಜ್ ಶರತ್ ಬಚ್ಚೇಗೌಡ ಅವರಿಗೆ ಪರೋಕ್ಷವಾಗಿ ಟಾಂಗ್​ ನೀಡಿದರು.

ತಾಲೂಕಿನ ದೊಡ್ಡ ನಲ್ಲೂರುಹಳ್ಳಿಯಲ್ಲಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದ ನಂತರ ಮಾಧ್ಯಮಗಳ ಜತೆ ಮಾತನಾಡಿದರು.

ಅನರ್ಹ ಶಾಸಕ ಎಂಟಿಬಿ ನಾಗರಾಜ್

ಸಚಿವನಾಗಿಯೂ ನನ್ನ ಕ್ಷೇತ್ರಕ್ಕೆ ಏನು ಮಾಡಲು ಆಗುತ್ತಿರಲಿಲ್ಲ. ಅವರು ಕೊಟ್ಟ ಕಾರು ಹತ್ತಿ, ತಿಂಗಳ ಸಂಬಳ ಎಣಿಸಿಕೊಂಡು ಕೂಡಲು ನನ್ನಿಂದ ಆಗುವುದಿಲ್ಲ. ಅದಕ್ಕಾಗಿಯೆ ಕಾಂಗ್ರೆಸ್​ಗೆ ರಾಜೀನಾಮೆ ನೀಡಿ, ಪಕ್ಷ ತೊರೆದಿದ್ದೇನೆ ಎಂದು ಹೇಳಿದರು.

ಕ್ಷೇತ್ರದ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಯಾವುದೇ ಭೇದ - ಭಾವದಿಂದ ಜನರಿಗೆ ಅನ್ಯಾಯ ಮಾಡಿಲ್ಲ. ನಾನು ತಪ್ಪು ಮಾಡಿದರೆ ದೇವರೆ ನೋಡಿಕೊಳ್ಳಲಿ. ಮುಂಬರುವ ಉಪಚುನಾವಣೆಯಲ್ಲಿ ಇದೊಂದು ಬಾರಿ ನನಗೆ ಮತ ಹಾಕಿ ಗೆಲ್ಲಿಸಿ, ನನ್ನ ಪ್ರಭಾವ ತೋರಿಸುತ್ತೇನೆ ಎಂದು ಹೇಳಿದರು.

ಹೊಸಕೋಟೆ: ನಾನು ಗುಳ್ಳೆನರಿ, ನನ್ನನ್ನು ಟೀಕಿಸುವವರು ಹುಲಿ, ಸಿಂಹಗಳ ರೀತಿಯಲ್ಲಿರಲಿ ಎಂದು ಅನರ್ಹ ಶಾಸಕ ಎಂಟಿಬಿ ನಾಗರಾಜ್ ಶರತ್ ಬಚ್ಚೇಗೌಡ ಅವರಿಗೆ ಪರೋಕ್ಷವಾಗಿ ಟಾಂಗ್​ ನೀಡಿದರು.

ತಾಲೂಕಿನ ದೊಡ್ಡ ನಲ್ಲೂರುಹಳ್ಳಿಯಲ್ಲಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದ ನಂತರ ಮಾಧ್ಯಮಗಳ ಜತೆ ಮಾತನಾಡಿದರು.

ಅನರ್ಹ ಶಾಸಕ ಎಂಟಿಬಿ ನಾಗರಾಜ್

ಸಚಿವನಾಗಿಯೂ ನನ್ನ ಕ್ಷೇತ್ರಕ್ಕೆ ಏನು ಮಾಡಲು ಆಗುತ್ತಿರಲಿಲ್ಲ. ಅವರು ಕೊಟ್ಟ ಕಾರು ಹತ್ತಿ, ತಿಂಗಳ ಸಂಬಳ ಎಣಿಸಿಕೊಂಡು ಕೂಡಲು ನನ್ನಿಂದ ಆಗುವುದಿಲ್ಲ. ಅದಕ್ಕಾಗಿಯೆ ಕಾಂಗ್ರೆಸ್​ಗೆ ರಾಜೀನಾಮೆ ನೀಡಿ, ಪಕ್ಷ ತೊರೆದಿದ್ದೇನೆ ಎಂದು ಹೇಳಿದರು.

ಕ್ಷೇತ್ರದ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಯಾವುದೇ ಭೇದ - ಭಾವದಿಂದ ಜನರಿಗೆ ಅನ್ಯಾಯ ಮಾಡಿಲ್ಲ. ನಾನು ತಪ್ಪು ಮಾಡಿದರೆ ದೇವರೆ ನೋಡಿಕೊಳ್ಳಲಿ. ಮುಂಬರುವ ಉಪಚುನಾವಣೆಯಲ್ಲಿ ಇದೊಂದು ಬಾರಿ ನನಗೆ ಮತ ಹಾಕಿ ಗೆಲ್ಲಿಸಿ, ನನ್ನ ಪ್ರಭಾವ ತೋರಿಸುತ್ತೇನೆ ಎಂದು ಹೇಳಿದರು.

Intro:ಹೊಸಕೋಟೆ:


ಶರತ್ ಬಚ್ಚೇಗೌಡ ಗುಳ್ಳೆನರಿ ಹೇಳಿಕೆಗೆ ಟಾಂಗ್ ನೀಡಿದ ಎಂಟಿಬಿ ನಾಗರಾಜ್.


ನನ್ನನ್ನು ಗುಳ್ಳೆ ನರಿ ಎಂಬುವವರು ಹುಲಿ ಸಿಂಹಗಳ ರೀತಿಯಲ್ಲಿಯೇ ಇರಲಿ‌ ನಾನು ಗುಳ್ಳೆನರಿತರಾನೆ ಇದ್ದು ಕ್ಷೇತ್ರದ ಅಭಿವೃದ್ಧಿ ಕೆಲಸ ಮಾಡುತ್ತೇನೆ ಎಂದು ಹೊಸಕೋಟೆಯ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಕಾರ್ಯಕರ್ತರ ಸಭೆ ಬಳಿಕ ಶರತ್ ಬಚ್ಚೇಗೌಡರ ಗುಳ್ಳೆ ನರಿ ಹೇಳಿಕೆಗೆ ಟಾಂಗ್ ನೀಡಿದ್ದಾರೆ,


Body:ಇಂದು ಹೊಸಕೋಟೆ ತಾಲ್ಲೂಕಿನ ದೊಡ್ಡನಲ್ಲೂರಹಳ್ಳಿಯ ಕೆಲ ಕಾಮಗಾರಿಗಳ ಗುದ್ದಲಿ ಪೂಜೆ ಬಳಿಕ ಕಾರ್ಯಕರ್ತರ ಸಭೆ ನಡೆಸಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಎಂಟಿಬಿ ನನ್ನನ್ನು ಗುಳ್ಳೆ ನರಿ ಎನ್ನುವವರು ಹುಲಿ‌‌‌‌ ಸಿಂಹಗಳ ರೀತಿಯಲ್ಲಿಯೇ ಇರಲಿ ಕ್ಷೇತ್ರದ ಅಭಿವೃದ್ಧಿ ಕೆಲಸ ಮಾಡ್ತಿನಿ,ನಾನು ಭೇದ ಭಾವದಿಂದ ಜನರಿಗೆ ಅನ್ಯಾಯ ಮಾಡಿದ್ರೆ ಈಶ್ವರನೆ ನೋಡಿಕೊಳ್ತಾನೆ.ನಾನು ದೇವರ ಬಳಿಕ ಮಾತದಾರರನ್ನೇ ದೇವರೆಂದು ತಿಳಿದು ಆತ್ಮದಲ್ಲಿಟ್ಟುಕೊಂಡಿರುವವನ್ನು ಎಂದು ಶರತ್ ಬಚ್ಚೇಗೌಡರ ಗುಳ್ಳೆ ನರಿ ಹೇಳಿಕೆಗೆ ಟಾಂಗ್ ನೀಡಿದರು,


Conclusion:ಇನ್ನು ಈ ಬಾರಿ ತಾಲ್ಲೂಕಿನಲ್ಲಿ ಶಾಸಕನಾಗಿ ಮಂತ್ರಿಯಾಗಿ ಅಭಿವೃದ್ಧಿ ಕೆಲಸ ಮಾಡಲು ಸಾಧ್ಯವಾಗಲಿಲ್ಲ ಎರಡುವರೆ ಲಕ್ಷ ರೂಪಾಯಿಗಳ ಸಂಬಳ ತೆಗೆದುಕೊಂಡು ಕಾರಿನಲ್ಲಿ ಓಡಾಡಿಕೊಂಡಿದ್ದೇ ಅಷ್ಟೇ ಅದಕ್ಕೆ ರಾಜೀನಾಮೆಯನ್ನು ಕೊಟ್ಟಿದ್ದೇನೆ ಮುಂಬರುವ ಉಪ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿ ಕಳೆದ ಹತ್ತುವರ್ಷದಲ್ಲಿ ಏನು ಕೆಲಸ ಮಾಡಿದ್ದೇನೆ ಅಂತ ಅಲ್ಲ ಈ ಮೂರುವರೆ ವರ್ಷ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಲು ಶ್ರಮಿಸುತ್ತೇನೆಂದು ಮತದಾರರಲ್ಲಿ ಕೇಳಿಕೊಳ್ಳುತ್ತೇನೆಂದು ತಿಳಿಸಿದರು.

ಬೈಟ್: ಎಂಟಿಬಿ ನಾಗರಾಜ್, ಹೊಸಕೋಟೆಯ ಅನರ್ಹ ಶಾಸಕ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.