ETV Bharat / state

ಮನೆ ಕೆಲಸದವರ ಮೇಲೆ ಸೆಕ್ಯೂರಿಟಿ ಗಾರ್ಡ್​ಗಳಿಂದ ಹಲ್ಲೆ - bangalore private villa

ತಮಿಳುನಾಡು ಮೂಲದವರಾದ ರತ್ಮಮ್ಮ ಮತ್ತು ಪತಿ ಕಿಶೋರ್​​ ಲಾಲ್​ ದಂಪತಿ ಮೇಲೆ ಸೆಕ್ಯೂರಿಟಿ ಗಾರ್ಡ್​ಗಳು ಹಲ್ಲೆ ನಡೆಸಿದ್ದು, ಈ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಮನೆ ಕೆಲಸದವರ ಮೇಲೆ ಸೆಕ್ಯೂರಿಟಿ ಗಾರ್ಡ್​ಗಳಿಂದ ಹಲ್ಲೆ
author img

By

Published : Aug 4, 2019, 9:16 AM IST

ಬೆಂಗಳೂರು: ಖಾಸಗಿ ವಿಲ್ಲಾವೊಂದರಲ್ಲಿ ಮನೆಗೆಲಸ ಮಾಡಿಕೊಂಡು ವಾಸವಿದ್ದ ದಂಪತಿ ಮೇಲೆ ಅದೇ ವಿಲ್ಲಾದ ಸೆಕ್ಯೂರಿಟಿ ಗಾರ್ಡ್​ಗಳು ಹಲ್ಲೆ ನಡೆಸಿದ್ದಾರೆ. ಈ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ತಮಿಳುನಾಡು ಮೂಲದವರಾದ ರತ್ಮಮ್ಮ ಮತ್ತು ಪತಿ ಕಿಶೋರ್​​ ಲಾಲ್​ ನೆರೆ ರಾಜ್ಯದಿಂದ ಬಂದು, ಕಳೆದ ಐದಾರು ವರ್ಷಗಳಿಂದ ಬೆಂಗಳೂರಿನ ವೈಟ್ ಫೀಲ್ಡ್​​​ನಲ್ಲಿರುವ ಜತ್ತಿ ದ್ವಾರಕಾಮಯಿ ವಿಲ್ಲಾದಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ಜುಲೈ 23ರಂದು ಸಂಜೆ ನಾಲ್ಕು ಗಂಟೆಗೆ ವಿಲ್ಲಾದ ಬಳಿ ಬಂದಾಗ ಸೆಕ್ಯೂರಿಟಿ ಗಾರ್ಡ್​ಗಳು ಇಲ್ಲದ ಕಾರಣ ಇವರೆ ಗೇಟ್​​ ತೆರೆದು ಒಳಗೆ ಪ್ರವೇಶಿಸಿದ್ದಾರೆಂದು ಸೆಕ್ಯೂರಿಟಿ ಗಾರ್ಡ್​ಗಳು ಹಲ್ಲೆ ನಡೆಸಿದ್ದಾರೆ. ಈ ಘಟನೆಯಲ್ಲಿ ಕಾಲಿನ ಮೂಳೆ ಮುರಿದುಕೊಂಡಿರುವ ರತ್ನಮ್ಮ ಪತಿ ಕಿಶೋರ್ ವೈಟ್ ಫೀಲ್ಡ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮನೆ ಕೆಲಸದವರ ಮೇಲೆ ಸೆಕ್ಯೂರಿಟಿ ಗಾರ್ಡ್​ಗಳಿಂದ ಹಲ್ಲೆ

ಜತ್ತಿ ದ್ವಾರಕಾಮಯಿ ವಿಲ್ಲಾದಲ್ಲಿ ಮಾಜಿ ಉಪ ರಾಷ್ಟ್ರಪತಿ ಜತ್ತಿ ಡಿ.ಬಿ.ಜತ್ತಿ ಕುಟುಂಬದವರು ವಾಸಿಸುತ್ತಿದ್ದರಂತೆ. ಆಗ ಕೀಳು ಜಾತಿ ಎಂಬ ಕಾರಣಕ್ಕೆ ಇವರನ್ನು ಕೆಲದಿಂದ ತೆಗೆದು ಹಾಕಿದ್ದರಂತೆ.

ಇನ್ನು ಈ ಆರೋಪದ ಬಗ್ಗೆ ದೂರವಾಣಿ ಮೂಲಕ ಪ್ರತಿಕ್ರಿಯೆ ನೀಡಿರುವ ಲಕ್ಷ್ಮಿ ಜತ್ತಿ, ಜಾತಿ ನಿಂದನೆ ಎಂಬುದು ಸುಳ್ಳು ಆರೋಪವಾಗಿದ್ದು, ನಮ್ಮ ಡಿ.ಬಿ.ಜತ್ತಿ ದ್ವಾರಕಾಮಯಿ ವಿಲ್ಲಾಗಳಲ್ಲಿ ಪ್ರತ್ಯೇಕ ಸೆಕ್ಯೂರಿಟಿಗಳಿದ್ದಾರೆ. ಹಾಗಾಗಿ ಸೆಕ್ಯೂರಿಟಿ ಗಾರ್ಡ್​ಗಳ ಮಧ್ಯೆ ಜಗಳವಾಗಿದ್ದು, ನಮ್ಮ ಗಾರ್ಡ್​ಗಳಿಗೆ ಹೊಡೆದದ್ದಲ್ಲದೆ ವಿನಾಕಾರಣ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಈ ಬಗ್ಗೆ ನಾವು ಸಹ ದೂರು ನೀಡಿದ್ದೇವೆ ಎಂದಿದ್ದಾರೆ.

ಇದೀಗ ಆ ದಂಪತಿ ಪ್ರಭಾಕರ್ ಎಂಬುವರ​​ ಮನೆಯಲ್ಲಿ ಕೆಲಸ ಮಾಡುತ್ತಿದ್ದು, ಇವರ ಮನೆಯಿಂದಲೂ ಕೆಲಸ ಬಿಟ್ಟು ಬೇರೆಡೆ ತೆರಳುವಂತೆ ಎರಡು ಮೂರು ಬಾರಿ ಬೆದರಿಕೆ ಹಾಕಿ, ಸೆಕ್ಯೂರಿಟಿ ಗಾರ್ಡ್​ಗಳಿಂದ ಆ ದಂಪತಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪ್ರಭಾಕರ್​ ಆರೋಪಿಸಿದ್ದಾರೆ.

ಬೆಂಗಳೂರು: ಖಾಸಗಿ ವಿಲ್ಲಾವೊಂದರಲ್ಲಿ ಮನೆಗೆಲಸ ಮಾಡಿಕೊಂಡು ವಾಸವಿದ್ದ ದಂಪತಿ ಮೇಲೆ ಅದೇ ವಿಲ್ಲಾದ ಸೆಕ್ಯೂರಿಟಿ ಗಾರ್ಡ್​ಗಳು ಹಲ್ಲೆ ನಡೆಸಿದ್ದಾರೆ. ಈ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ತಮಿಳುನಾಡು ಮೂಲದವರಾದ ರತ್ಮಮ್ಮ ಮತ್ತು ಪತಿ ಕಿಶೋರ್​​ ಲಾಲ್​ ನೆರೆ ರಾಜ್ಯದಿಂದ ಬಂದು, ಕಳೆದ ಐದಾರು ವರ್ಷಗಳಿಂದ ಬೆಂಗಳೂರಿನ ವೈಟ್ ಫೀಲ್ಡ್​​​ನಲ್ಲಿರುವ ಜತ್ತಿ ದ್ವಾರಕಾಮಯಿ ವಿಲ್ಲಾದಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ಜುಲೈ 23ರಂದು ಸಂಜೆ ನಾಲ್ಕು ಗಂಟೆಗೆ ವಿಲ್ಲಾದ ಬಳಿ ಬಂದಾಗ ಸೆಕ್ಯೂರಿಟಿ ಗಾರ್ಡ್​ಗಳು ಇಲ್ಲದ ಕಾರಣ ಇವರೆ ಗೇಟ್​​ ತೆರೆದು ಒಳಗೆ ಪ್ರವೇಶಿಸಿದ್ದಾರೆಂದು ಸೆಕ್ಯೂರಿಟಿ ಗಾರ್ಡ್​ಗಳು ಹಲ್ಲೆ ನಡೆಸಿದ್ದಾರೆ. ಈ ಘಟನೆಯಲ್ಲಿ ಕಾಲಿನ ಮೂಳೆ ಮುರಿದುಕೊಂಡಿರುವ ರತ್ನಮ್ಮ ಪತಿ ಕಿಶೋರ್ ವೈಟ್ ಫೀಲ್ಡ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮನೆ ಕೆಲಸದವರ ಮೇಲೆ ಸೆಕ್ಯೂರಿಟಿ ಗಾರ್ಡ್​ಗಳಿಂದ ಹಲ್ಲೆ

ಜತ್ತಿ ದ್ವಾರಕಾಮಯಿ ವಿಲ್ಲಾದಲ್ಲಿ ಮಾಜಿ ಉಪ ರಾಷ್ಟ್ರಪತಿ ಜತ್ತಿ ಡಿ.ಬಿ.ಜತ್ತಿ ಕುಟುಂಬದವರು ವಾಸಿಸುತ್ತಿದ್ದರಂತೆ. ಆಗ ಕೀಳು ಜಾತಿ ಎಂಬ ಕಾರಣಕ್ಕೆ ಇವರನ್ನು ಕೆಲದಿಂದ ತೆಗೆದು ಹಾಕಿದ್ದರಂತೆ.

ಇನ್ನು ಈ ಆರೋಪದ ಬಗ್ಗೆ ದೂರವಾಣಿ ಮೂಲಕ ಪ್ರತಿಕ್ರಿಯೆ ನೀಡಿರುವ ಲಕ್ಷ್ಮಿ ಜತ್ತಿ, ಜಾತಿ ನಿಂದನೆ ಎಂಬುದು ಸುಳ್ಳು ಆರೋಪವಾಗಿದ್ದು, ನಮ್ಮ ಡಿ.ಬಿ.ಜತ್ತಿ ದ್ವಾರಕಾಮಯಿ ವಿಲ್ಲಾಗಳಲ್ಲಿ ಪ್ರತ್ಯೇಕ ಸೆಕ್ಯೂರಿಟಿಗಳಿದ್ದಾರೆ. ಹಾಗಾಗಿ ಸೆಕ್ಯೂರಿಟಿ ಗಾರ್ಡ್​ಗಳ ಮಧ್ಯೆ ಜಗಳವಾಗಿದ್ದು, ನಮ್ಮ ಗಾರ್ಡ್​ಗಳಿಗೆ ಹೊಡೆದದ್ದಲ್ಲದೆ ವಿನಾಕಾರಣ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಈ ಬಗ್ಗೆ ನಾವು ಸಹ ದೂರು ನೀಡಿದ್ದೇವೆ ಎಂದಿದ್ದಾರೆ.

ಇದೀಗ ಆ ದಂಪತಿ ಪ್ರಭಾಕರ್ ಎಂಬುವರ​​ ಮನೆಯಲ್ಲಿ ಕೆಲಸ ಮಾಡುತ್ತಿದ್ದು, ಇವರ ಮನೆಯಿಂದಲೂ ಕೆಲಸ ಬಿಟ್ಟು ಬೇರೆಡೆ ತೆರಳುವಂತೆ ಎರಡು ಮೂರು ಬಾರಿ ಬೆದರಿಕೆ ಹಾಕಿ, ಸೆಕ್ಯೂರಿಟಿ ಗಾರ್ಡ್​ಗಳಿಂದ ಆ ದಂಪತಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪ್ರಭಾಕರ್​ ಆರೋಪಿಸಿದ್ದಾರೆ.

Intro:ಪೈಲ್: ಹಲ್ಲೆ, ಪ್ಯಾಕೇಜ್

ದಿನಾಂಕ: 03-08-19


ಮನೆ ಕೆಲಸದವರ ಮೇಲೆ ಸೆಕ್ಯೂರಿಟಿ ಗಾರ್ಡ್ ಗಳಿಂದ ಹಲ್ಲೆ


ಆ ದಂಪತಿಗಳು ನೆರೆರಾಜ್ಯದಿಂದ‌ ಬಂದು ಬೆಂಗಳೂರಿನ ಖಾಸಗಿ ವಿಲ್ಲಾ ವೊಂದರಲ್ಲಿ ಮನೆಕೆಲಸ ಮಾಡಿಕೊಂಡು ವಾಸವಿದ್ದರು. ಪ್ರತಿನಿತ್ಯ ಆ ದಂಪತಿಗಳು ವಿಲ್ಲಾದಲ್ಲಿ ಕೆಲಸಕ್ಕೆ ಮಾಡಲು ಬರುತ್ತಿದ್ದವರೆಂದು ತಿಳಿದಿದ್ದರು ವಿಲ್ಲಾದ ಸೆಕ್ಯೂರಿಟಿ ಗಾರ್ಡ್ ಗಳು ಮಾರಣಾಂತಿಕ ಹಲ್ಲೆ ನಡೆಸಿದ್ದು, ಹಲ್ಲೆಯ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.‌


ಕಣ್ಣೀರು ಹಾಕುತ್ತಾ,‌ ತನ್ನ ಗಂಡ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಫೋಟೋಗಳನ್ನು ತೋರಿಸುತ್ತಿರುವ ಈ ಮಹಿಳೆಯ ಹೆಸರು ರತ್ನಮ್ಮ. ತಮಿಳುನಾಡಿನ ಮೂಲದವರಾದ ರತ್ನಮ್ಮ ಹಾಗೂ ಈಕೆಯ ಪತಿ ಕಿಶೋರ್ ಲಾಲ್ ಎಂಬುವರು ಕಳೆದ ಐದಾರು ವರ್ಷಗಳಿಂದ ಬೆಂಗಳೂರಿನ ವೈಟ್ ಪೀಲ್ಡ್ ನಲ್ಲಿರುವ ಜತ್ತಿ ದ್ವಾರಕಾಮಯಿ ವಿಲ್ಲಾದಲ್ಲಿ ಕೆಲಸ ಮಾಡಿಕೊಂಡಿದ್ದು, ಕಳೆದ ಜುಲೈ 23 ರಂದು ಸಂಜೆ ನಾಲ್ಕು ಗಂಟೆ ಸುಮಾರಿನಲ್ಲಿ ವಿಲ್ಲಾದಬಳಿ ಬಂದಾಗ ಸೆಕ್ಯೂರಿಟಿ ಗಾರ್ಡ್ ಗಳು ಇಲ್ಲದ ಕಾರಣ ಇವರೆ ಗೇಟೆ ತೆರೆದು ಒಳಗೆ ಪ್ರವೇಶಿಸಿದ್ದಾರೆಂದು ಸೆಕ್ಯೂರಿಟಿ ಗಾರ್ಡ್ ಗಳು ಹಲ್ಲೆ ನಡೆಸಿದ್ದು, ಈ ಘಟನೆಯಲ್ಲಿ ಕಾಲಿನ ಮೂಳೆ ಮುರಿಸಿಕೊಂಡಿರುವ ರತ್ನಮ್ಮ ಪತಿ ಕಿಶೋರ್ ವೈಟ್ ಪೀಲ್ಡ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ತಮಗೆ ನ್ಯಾಯ ದೊರಕಿಸಿಕೊಡುವಂತೆ ಮಾದ್ಯಮದವರ ಮುಂದೆ ಕಣ್ಣೀರಿಟ್ಟಿದ್ದಾಳಿ.



ಜತ್ತಿ ದ್ವಾರಕಾಮಯಿ ವಿಲ್ಲಾದಲ್ಲಿ ಮಾಜಿ ಉಪರಾಷ್ಟ್ರಪತಿ ಜತ್ತಿ ಡಿ.ಬಿ. ಜತ್ತಿ ಕುಟುಂಬದವರು ವಾಸಿಸುತ್ತಿದ್ದು, ಈ ಮೊದಲು ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ರತ್ನಮ್ಮ ದಂಪತಿಗಳು ಕೀಳು ಜಾತಿಯವರೆಂದು ಕೆಲಸದಿಂದ ತೆಗೆದಿದ್ದು, ಇದೀಗ ಆ ದಂಪತಿಗಳು ನಮ್ಮ ಮನೆಯಲ್ಲಿ ಕೆಲಸ ಮಾಡುತ್ತಿರುವುದರಿಂದ ಕೆಲಸ ಬಿಟ್ಟು ಬೇರೆಡೆ ತೆರಳುವಂತೆ ಎರಡು ಮೂರು ಭಾರಿ ಬೆದರಿಕೆಹಾಕಿ ಇದೀಗ ಸೆಕ್ಯೂರಿಟಿ ಗಾರ್ಡ್ ಗಳಿಂದ ಹಲ್ಲೆ ನಡೆಸಿದ್ದಾರೆಂದು ಅರೋಪಿಸಿದ್ದು, ಈ ಸಂಬಂದ ವೈಟ್ ಪೀಲ್ಡ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.



Body: ಇನ್ನೂ ಈ ಆರೋಪದ ಬಗ್ಗೆ ದೂರವಾಣಿ ಮೂಲಕ ಪ್ರತಿಕ್ರಿಯೆ ನೀಡಿರುವ ಲಕ್ಷ್ಮಿ ಜತ್ತಿ ಜಾತಿ ನಿಂದನೆ ಎಂಬುದು ಸುಳ್ಳು ಆರೋಪವಾಗಿದ್ದು ನಮ್ಮ ಡಿಬಿ ಜತ್ತಿ ದ್ವಾರಕಮಯಿ ವಿಲ್ಲಾಗಳಲ್ಲಿ ಪ್ರತ್ಯೇಗ ಸೆಕ್ಯೂರಿಟಿಗಳಿದ್ದಾರೆ ಹಾಗಾಗಿ ಸೆಕ್ಯೂರಿಟಿ ಗಾರ್ಡ್ ಗಳ ಮದ್ಯೆ ಜಗಳವಾಗಿದ್ದು ನಮ್ಮ ಗಾರ್ಡ್ ಗಳಿಗೆ ಹೊಡೆದದ್ದಲ್ಲದೆ ವಿನಾಕಾರಣ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಈ ಬಗ್ಗೆ ನಾವು ಸಹ ದೂರು ನೀಡಿದ್ದೇವೆ ಎಂದಿದ್ದಾರೆ.



Conclusion:ಒಟ್ಟಾರೆ ಅಪ್ಪಾ ಅಮ್ಮ ಜಗಳದಲ್ಲಿ ಕೂಸು ಬಡವಾಯ್ತು ಅನ್ನೊಹಾಗೆ ವಿಲ್ಲಾದಲ್ಲಿ ವಾಸಿಸುವ ಮಾಲಿಕರ ನಡುವಿನ ಮುಸುಕಿನ ಗುದ್ದಾಟದಲ್ಲಿ ಬಡಪಾಯಿ ಕೂಲಿ ಕಾರ್ಮಿಕರು ತೊಂದರೆ ಅನುಭವಿಸುವಂತಾಗಿದ್ದು, ಈ ಪ್ರಕರಣ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದು ಯಾವ ರೀತಿ ಇದನ್ನು ಬಗೆಹರಿಸುತ್ತಾರೆ ಎಂದುಬದನ್ನು ಕಾದು ನೋಡಬೇಕಿದೆ.

ಧರ್ಮರಾಜು ಎಂ ಕೆಆರ್ ಪುರ

ಬೈಟ್: ಪ್ರಭಾಕರ್, ವಿಲ್ಲಾ ಮಾಲಿಕ

ಬೈಟ್: ರತ್ನಮ್ಮ, ಕಿಶೋರ್ ಲಾಲ್ ಪತ್ನಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.