ETV Bharat / state

ಸುಖಾಸುಮ್ಮನೇ ತಿರುಗಾಡುತ್ತಿದ್ದವರಿಗೆ ಎಸ್​ಪಿ​ ಚನ್ನಣ್ಣನವರ್ ಖಡಕ್ ವಾರ್ನಿಂಗ್​! - Bangalore News

ಹೊಸಕೋಟೆ ನಗರದ ಅಂಬೇಡ್ಕರ್ ಕಾಲೋನಿಯಲ್ಲಿ ಲಾಕ್​ಡೌನ್​ ವೇಳೆ ಸುಖಾ-ಸುಮ್ಮನೇ ಓಡಾಡುತ್ತಿದ್ದ ವಾಹನ ಸವಾರರನ್ನ ನಿಲ್ಲಿಸಿದ ಎಸ್​ಪಿ​ ರವಿ ಡಿ.ಚನ್ನಣ್ಣನವರ್,​ ಪೊಲೀಸರ ಜೊತೆ ವಾಹನಗಳ ಪರಿಶೀಲನೆ ಮಾಡುವ ಶಿಕ್ಷೆ ಕೊಡುವ ಮೂಲಕ ಬಿಸಿ ಮುಟ್ಟಿಸಿದ್ದಾರೆ.

S P Ravi D.Channannavar  gave A strange punishment to people
ಸುಖಾಸುಮ್ಮನೇ ತಿರುಗಾಡುತ್ತಿದ್ದವರಿಗೆ ವಿನೂತನ ಶಿಕ್ಷೆ ಎಸ್​ಪಿ​ ರವಿ ಡಿ.ಚನ್ನಣ್ಣನವರ್
author img

By

Published : Jul 15, 2020, 8:56 PM IST

ಹೊಸಕೋಟೆ (ಬೆಂಗಳೂರು ಗ್ರಾಮಾಂತರ): ಲಾಕ್​ಡೌನ್​ ವೇಳೆ ಸುಖಾಸುಮ್ಮನೇ ಓಡಾಡುತ್ತಿದ್ದ ವಾಹನ ಸವಾರರನ್ನು ಪರಿಶೀಲನೆ ಮಾಡಿದ ಎಸ್​ಪಿ​ ರವಿ ಡಿ. ಚನ್ನಣ್ಣನವರ್,​ ಪೊಲೀಸರ ಜೊತೆ ಖುದ್ದಾಗಿ ರಸ್ತೆಯಲ್ಲಿ ನಿಂತು ಕೆಲಸ ಮಾಡಿದ್ದಾರೆ.

ಸುಖಾಸುಮ್ಮನೇ ತಿರುಗಾಡುತ್ತಿದ್ದವರಿಗೆ ವಿನೂತನ ಶಿಕ್ಷೆ ಎಸ್​ಪಿ​ ರವಿ ಡಿ.ಚನ್ನಣ್ಣನವರ್

ಕೊರೊನಾ ವೈರಸ್ ಸೋಂಕು ಹರಡದಂತೆ ತಡೆಯಲು ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಲಾಕ್​ಡೌನ್ ಘೋಷಣೆ ಮಾಡಲಾಗಿದೆ. ಹೀಗಾಗಿ ಎಸ್​ಪಿ​ ರವಿ ಡಿ.ಚನ್ನಣ್ಣನವರ್ ಬೆಂಗಳೂರು ಗ್ರಾಮಾಂತರ ಪ್ರದೇಶಗಳಲ್ಲಿ ರೌಂಡ್ಸ್ ಹಾಕುತ್ತಿದ್ದರು. ಹೊಸಕೋಟೆ ನಗರದ ಅಂಬೇಡ್ಕರ್ ಕಾಲೋನಿಯಲ್ಲಿ ವಾಹನ ಸಂಚಾರ ಹೆಚ್ಚಾಗಿದ್ದುದನ್ನು ಗಮನಿಸಿದ ಅವರು, ತಾವೇ ಖುದ್ದಾಗಿ ವಾಹನಗಳ ಪರಿಶೀಲನೆ ನಡೆಸಿ ಸುಖಾಸುಮ್ಮನೇ ರಸ್ತೆಗಿಳಿದರೆ ಪ್ರಕರಣ ದಾಖಲಿಸಲಾಗುವುದು ಎಂದು ಖಡಕ್ ವಾರ್ನಿಂಗ್ ನೀಡಿದರು.

ಈ ವೇಳೆ ಸುಖಾ-ಸುಮ್ಮನೇ ಓಡಾಡುತ್ತಿದ್ದ ವಾಹನ ಸವಾರರನ್ನ ನಿಲ್ಲಿಸಿ, ಪೊಲೀಸರ ಜೊತೆ ವಾಹನಗಳ ಪರಿಶೀಲನೆ ಮಾಡುವ ಶಿಕ್ಷೆ ಕೊಡುವ ಮೂಲಕ ಹೊಸಕೋಟೆ ಜನಕ್ಕೆ ಬಿಸಿ ಮುಟ್ಟಿಸಿದ್ದಾರೆ.

ಹೊಸಕೋಟೆ (ಬೆಂಗಳೂರು ಗ್ರಾಮಾಂತರ): ಲಾಕ್​ಡೌನ್​ ವೇಳೆ ಸುಖಾಸುಮ್ಮನೇ ಓಡಾಡುತ್ತಿದ್ದ ವಾಹನ ಸವಾರರನ್ನು ಪರಿಶೀಲನೆ ಮಾಡಿದ ಎಸ್​ಪಿ​ ರವಿ ಡಿ. ಚನ್ನಣ್ಣನವರ್,​ ಪೊಲೀಸರ ಜೊತೆ ಖುದ್ದಾಗಿ ರಸ್ತೆಯಲ್ಲಿ ನಿಂತು ಕೆಲಸ ಮಾಡಿದ್ದಾರೆ.

ಸುಖಾಸುಮ್ಮನೇ ತಿರುಗಾಡುತ್ತಿದ್ದವರಿಗೆ ವಿನೂತನ ಶಿಕ್ಷೆ ಎಸ್​ಪಿ​ ರವಿ ಡಿ.ಚನ್ನಣ್ಣನವರ್

ಕೊರೊನಾ ವೈರಸ್ ಸೋಂಕು ಹರಡದಂತೆ ತಡೆಯಲು ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಲಾಕ್​ಡೌನ್ ಘೋಷಣೆ ಮಾಡಲಾಗಿದೆ. ಹೀಗಾಗಿ ಎಸ್​ಪಿ​ ರವಿ ಡಿ.ಚನ್ನಣ್ಣನವರ್ ಬೆಂಗಳೂರು ಗ್ರಾಮಾಂತರ ಪ್ರದೇಶಗಳಲ್ಲಿ ರೌಂಡ್ಸ್ ಹಾಕುತ್ತಿದ್ದರು. ಹೊಸಕೋಟೆ ನಗರದ ಅಂಬೇಡ್ಕರ್ ಕಾಲೋನಿಯಲ್ಲಿ ವಾಹನ ಸಂಚಾರ ಹೆಚ್ಚಾಗಿದ್ದುದನ್ನು ಗಮನಿಸಿದ ಅವರು, ತಾವೇ ಖುದ್ದಾಗಿ ವಾಹನಗಳ ಪರಿಶೀಲನೆ ನಡೆಸಿ ಸುಖಾಸುಮ್ಮನೇ ರಸ್ತೆಗಿಳಿದರೆ ಪ್ರಕರಣ ದಾಖಲಿಸಲಾಗುವುದು ಎಂದು ಖಡಕ್ ವಾರ್ನಿಂಗ್ ನೀಡಿದರು.

ಈ ವೇಳೆ ಸುಖಾ-ಸುಮ್ಮನೇ ಓಡಾಡುತ್ತಿದ್ದ ವಾಹನ ಸವಾರರನ್ನ ನಿಲ್ಲಿಸಿ, ಪೊಲೀಸರ ಜೊತೆ ವಾಹನಗಳ ಪರಿಶೀಲನೆ ಮಾಡುವ ಶಿಕ್ಷೆ ಕೊಡುವ ಮೂಲಕ ಹೊಸಕೋಟೆ ಜನಕ್ಕೆ ಬಿಸಿ ಮುಟ್ಟಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.