ETV Bharat / state

ಬೆಂಗಳೂರಲ್ಲಿ ಮತ್ತೆ ಸೌಂಡ್​ ಮಾಡಿದ ರಿವಾಲ್ವಾರ್​​: ರೌಡಿ ಶೀಟರ್ಸ್​ ಕಾಲಿಗೆ ಗುಂಡೇಟು

ರೌಡಿಶೀಟರ್​ಗಳ ಬಂಧನಕ್ಕೆ ತೆರಳಿದ್ದ ವೇಳೆ ಆತ್ಮರಕ್ಷಣೆಗಾಗಿ ಪೊಲೀಸರು ರೌಡಿಶೀಟರ್​ಗಳ ಮೇಲೆ ಗುಂಡು ಹಾರಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

author img

By

Published : Jun 28, 2019, 9:53 AM IST

Updated : Jun 28, 2019, 11:15 AM IST

ಸಿಲಿಕಾನ್​ ಸಿಟಿಯಲ್ಲಿ ಮತ್ತೆ ಸೌಂಡ್​ ಮಾಡಿದ ಖಾಕಿ ರಿವಲ್ವಾರು

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಪೊಲೀಸರ ಮೇಲೆ ಹಲ್ಲೆ‌ ಮಾಡಲು ಮುಂದಾಗಿದ್ದ ರೌಡಿಗಳ ಮೇಲೆ ಪೊಲೀಸರು ಫೈರಿಂಗ್​ ಮಾಡುವ ಮೂಲಕ ಆರೋಪಿಗಳನ್ನ ಬಗ್ಗು ಬಡಿಯುತ್ತಿದ್ದಾರೆ. ಇದೀಗ ಕೆ.ಜಿ ಹಳ್ಳಿ ಪೊಲೀಸರು ಇಬ್ಬರು ರೌಡಿಶೀಟರ್​ಗಳ ಕಾಲಿಗೆ ಗುಂಡು ಹಾರಿಸಿದ್ದಾರೆ.

police
ಸಿಲಿಕಾನ್​ ಸಿಟಿಯಲ್ಲಿ ರೌಡಿ ಶೀಟರ್ಸ್​ಗೆ ಪೊಲೀಸರ ಗುಂಡೇಟು

ಕೆ.ಜಿ ಹಳ್ಳಿಯ ಫಯಾಜ್ ಅಲಿಯಾಸ್ ಪಂಚು ಮತ್ತು ವಾಸೀಂ ಅಲಿಯಾಸ್ ಕುಚ್ಚಮಟ್ಟಿ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ. ಈ ಇಬ್ಬರು ಆರೋಪಿಗಳು ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಕೆ.ಜಿ ಹಳ್ಳಿ ರೌಡಿಶೀಟರ್ ಸಲೀಂ ಎಂಬಾತನನ್ನ ಕೊಲೆ ಮಾಡಿದ್ರು. ಹೀಗಾಗಿ ಇವ್ರ ಪತ್ತೆಗೆ ಡಿಸಿಪಿ ರಾಹುಲ್ ನೇತೃತ್ವದಲ್ಲಿ ಬಾಣಸಾವಡಿ ಉಪ ವಿಭಾಗದ ಎಸಿಪಿ ಹೆಚ್ ಎಂ ಮಹದೇವಪ್ಪ, ಹೆಣ್ಣೂರು ಠಾಣೆ ಇನ್ಸ್​ಪೆಕ್ಟರ್ ಕುಲಕರ್ಣಿ ಕೆ.ಜಿ ಠಾಣೆ ಇನ್​ಸ್ಪೆಕ್ಟರ್​ ಪ್ರದೀಪ್ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು.

ಗುರುವಾರ ರಾತ್ರಿ ಆರೋಪಿಗಳು ಹೆಣ್ಣೂರು ಬಂಡೆ ಸಮೀಪದ ಅರ್ಕಾವತಿ ಲೇಔಟ್ ಬಳಿ ಇರುವ ಮಾಹಿತಿ ಮೇರೆಗೆ ಪೊಲೀಸರು ಬಂಧನಕ್ಕೆ ತೆರಳಿದ್ರು. ಈ ವೇಳೆ ವಾಸೀಂ ಮತ್ತು ಫಯಾಜ್ ಪೊಲೀಸರ ಮೇಲೆಯೇ ಡ್ರ್ಯಾಗರ್​​ನಿಂದ ಹಲ್ಲೆ ಮಾಡಲು ಮುಂದಾಗಿದ್ದರು. ಈ ವೇಳೆ ಆತ್ಮರಕ್ಷಣೆಗೆ ಪೊಲೀಸ್ ಇನ್ಸ್​ಪೆಕ್ಟರ್​ ಕುಲಕರ್ಣಿ ಅವರು ವಾಸೀಂ ಕಾಲಿಗೆ ಹಾಗೂ ಫಯಾಜ್​ ಕಾಲಿಗೆ ಇನ್ಸ್​ಪೆಕ್ಟರ್​ ಪ್ರದೀಪ್ ಗುಂಡು ಹಾರಿಸಿ ಬಂಧಿಸಿದ್ದಾರೆ. ಮತ್ತೋರ್ವ ಆರೋಪಿ ವಾಸೀಂ ವಿರುದ್ಧ ಕೇರಳ ಸೇರಿದಂತೆ ನಗರದ ಹಲವು ಠಾಣೆಗಳಲ್ಲಿ ದರೋಡೆ, ಕೊಲೆ ಯತ್ನ ಪ್ರಕರಣ ದಾಖಲಾಗಿವೆ. ಸದ್ಯ ಆರೋಪಿಗಳನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಪೊಲೀಸರ ಮೇಲೆ ಹಲ್ಲೆ‌ ಮಾಡಲು ಮುಂದಾಗಿದ್ದ ರೌಡಿಗಳ ಮೇಲೆ ಪೊಲೀಸರು ಫೈರಿಂಗ್​ ಮಾಡುವ ಮೂಲಕ ಆರೋಪಿಗಳನ್ನ ಬಗ್ಗು ಬಡಿಯುತ್ತಿದ್ದಾರೆ. ಇದೀಗ ಕೆ.ಜಿ ಹಳ್ಳಿ ಪೊಲೀಸರು ಇಬ್ಬರು ರೌಡಿಶೀಟರ್​ಗಳ ಕಾಲಿಗೆ ಗುಂಡು ಹಾರಿಸಿದ್ದಾರೆ.

police
ಸಿಲಿಕಾನ್​ ಸಿಟಿಯಲ್ಲಿ ರೌಡಿ ಶೀಟರ್ಸ್​ಗೆ ಪೊಲೀಸರ ಗುಂಡೇಟು

ಕೆ.ಜಿ ಹಳ್ಳಿಯ ಫಯಾಜ್ ಅಲಿಯಾಸ್ ಪಂಚು ಮತ್ತು ವಾಸೀಂ ಅಲಿಯಾಸ್ ಕುಚ್ಚಮಟ್ಟಿ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ. ಈ ಇಬ್ಬರು ಆರೋಪಿಗಳು ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಕೆ.ಜಿ ಹಳ್ಳಿ ರೌಡಿಶೀಟರ್ ಸಲೀಂ ಎಂಬಾತನನ್ನ ಕೊಲೆ ಮಾಡಿದ್ರು. ಹೀಗಾಗಿ ಇವ್ರ ಪತ್ತೆಗೆ ಡಿಸಿಪಿ ರಾಹುಲ್ ನೇತೃತ್ವದಲ್ಲಿ ಬಾಣಸಾವಡಿ ಉಪ ವಿಭಾಗದ ಎಸಿಪಿ ಹೆಚ್ ಎಂ ಮಹದೇವಪ್ಪ, ಹೆಣ್ಣೂರು ಠಾಣೆ ಇನ್ಸ್​ಪೆಕ್ಟರ್ ಕುಲಕರ್ಣಿ ಕೆ.ಜಿ ಠಾಣೆ ಇನ್​ಸ್ಪೆಕ್ಟರ್​ ಪ್ರದೀಪ್ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು.

ಗುರುವಾರ ರಾತ್ರಿ ಆರೋಪಿಗಳು ಹೆಣ್ಣೂರು ಬಂಡೆ ಸಮೀಪದ ಅರ್ಕಾವತಿ ಲೇಔಟ್ ಬಳಿ ಇರುವ ಮಾಹಿತಿ ಮೇರೆಗೆ ಪೊಲೀಸರು ಬಂಧನಕ್ಕೆ ತೆರಳಿದ್ರು. ಈ ವೇಳೆ ವಾಸೀಂ ಮತ್ತು ಫಯಾಜ್ ಪೊಲೀಸರ ಮೇಲೆಯೇ ಡ್ರ್ಯಾಗರ್​​ನಿಂದ ಹಲ್ಲೆ ಮಾಡಲು ಮುಂದಾಗಿದ್ದರು. ಈ ವೇಳೆ ಆತ್ಮರಕ್ಷಣೆಗೆ ಪೊಲೀಸ್ ಇನ್ಸ್​ಪೆಕ್ಟರ್​ ಕುಲಕರ್ಣಿ ಅವರು ವಾಸೀಂ ಕಾಲಿಗೆ ಹಾಗೂ ಫಯಾಜ್​ ಕಾಲಿಗೆ ಇನ್ಸ್​ಪೆಕ್ಟರ್​ ಪ್ರದೀಪ್ ಗುಂಡು ಹಾರಿಸಿ ಬಂಧಿಸಿದ್ದಾರೆ. ಮತ್ತೋರ್ವ ಆರೋಪಿ ವಾಸೀಂ ವಿರುದ್ಧ ಕೇರಳ ಸೇರಿದಂತೆ ನಗರದ ಹಲವು ಠಾಣೆಗಳಲ್ಲಿ ದರೋಡೆ, ಕೊಲೆ ಯತ್ನ ಪ್ರಕರಣ ದಾಖಲಾಗಿವೆ. ಸದ್ಯ ಆರೋಪಿಗಳನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.

Intro:ಖಾಕಿ ರಿವಲ್ವಾರು ಮತ್ತೆ ಸದ್ದು
ರೌಡಿ ಶೀಟರ್ ಗಳ ಕಾಲಿಗೆ ಗುಂಡೇಟ್ ಮಾಡಿದ ಖಾಕಿ ಟೀಂ

ಭವ್ಯ

ಸಿಲಿಕಾನ್ ಸಿಟಿಯಲ್ಲಿ ಪೊಲೀಸರ ಮೇಲೆ ಹಲ್ಲೆ‌ಮಾಡಲು ಮುಂದಾಗುವ ಆರೋಪಿಗಳ‌ ಮೇಲೆ ಪೊಲೀಸರು ಶೂಟೌಟ್ ಮಾಡುವ ಮೂಲಕ ಆರೋಪಿಗಳನ್ನ ಬಗ್ಗು ಬಡಿತ್ತಿದ್ದಾರೆ. ಇದೀಗ ಕೆ.ಜಿ ಹಳ್ಳಿ ಪೊಲೀಸರು ಇಬ್ಬರು ರೌಡಿಶೀಟರ್ಗಳ ಕಾಲಿಗೆ ಗುಂಡು ಹಾರಿಸಿದ್ದಾರೆ.. ಕೆ.ಜಿಹಳ್ಳಿಯ ಫಯಾಜ್ ಅಲಿಯಾಸ್ ಪಂಚು ಮತ್ತು ವಾಸೀಂ ಅಲಿಯಾಸ್ ಕುಚ್ಚಮಟ್ಟಿ ಪೊಲೀಸರ ಗುಂಡೆಟಿಗೆ ಒಳಗಾದವರು‌‌..

ಈ ಇಬ್ಬರು ಆರೋಪಿಗಳು ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಕೆ.ಜಿ ಹಳ್ಳಿ ರೌಡಿಶೀಟರ್ ಸಲೀಂ ಎಂಬಾತನನ್ನ ಕೊಲೆ ಮಾಡಿದ್ರು. ಹೀಗಾಗಿ ಇವ್ರ ಪತ್ತೆಗೆ ಡಿಸಿಪಿ ರಾಹುಲ್ ನೇತೃತ್ವದಲ್ಲಿ ಬಾಣಸಾವಡಿ ಉಪ ವಿಭಾಗದ ಎಸಿಪಿ ಎಚ್ ಎಂ ಮಹದೇವಪ್ಪ , ಹೆಣ್ಣೂರು ಠಾಣೆ ಇನ್ಸ್ಪೆಕ್ಟರ್ ಎಚ್ ಡಿ ಕುಲಕರ್ಣಿ .ಕೆ.ಜಿ ಠಾಣೆ ಇನ್ಸ್ಪೆಕ್ಟರ್ ಪ್ರದೀಪ್ ನೇತೃತ್ವದಲ್ಲಿ ತಂಡ ರಚಿಸಿದ್ದು ನಿನ್ನೆ ರಾತ್ರಿ ಆರೋಪಿಗಳು ಹೆಣ್ಣೂರು ಬಂಡೆ ಸಮೀಪದ ಅರ್ಕಾವತಿ ಲೇಔಟ್ ಬಳಿ ಇರುವ ಮಾಹಿತಿ ಮೇರೆಗೆ ಬಂಧನಕ್ಕೆ ತೆರಳಿದ್ರು.. ಈ ವೇಳೆ ವಾಸೀಂ ಮತ್ತು ಫಯಾಜ್ ಪೋಲಿಸ್‌ ಮೇಲೆ ಡ್ರ್ಯಾಗರ್ ನಿಂದ ಹಲ್ಲೆ ಮಾಡಲು ಮುಂದಾಗಿದ್ದಾರೆ. ಈ ವೇಳೆ ಆತ್ಮರಕ್ಷಣೆಗೆ ಪೊಲೀಸ್ ಇನ್ಸ್ಪೆಕ್ಟರ್ ಕುಲಕರ್ಣಿ ವಾಸೀಂನ ಕಾಲಿಗೆ ಹಾಗೆ ಫಯಾಜ್ನ ಕಾಲಿಗೆ ಪ್ರದೀಪ್ ಇನ್ಸ್ಪೆಕ್ಟರ್ ಗುಂಡು ಹಾರಿಸಿ ಬಂಧಿಸಿದ್ದಾರೆ. ಹಾಗೆ ಇನ್ನಿತರ ಇವ್ರ ಸಹಚರುಗಳಾದ ಇರ್ಷಾದ್, ಸುಹೇಲ್, ಜಮೀರ್ ನನ್ನ ಬಂಧಿಸಲಾಗಿದೆ..

ಇನ್ನು ಈ ಆರೋಪಿಗಳ ಪೈಕಿ ಫಯಾಜ್ ಬನಶಂಕರಿ , ಕುಮಾರಸ್ವಾಮಿಲೇಔಟ್ ಠಾಣೆ ಗಳಲ್ಲಿ ಈತನ ಮೇಲೆ ಆರು ಪ್ರಕರಣ ದಾಖಲಾಗಿದೆ. ಇನ್ನೋಬ್ಬ ವಾಸೀಂ ವಿರುಧ್ದ ಕೇರಳ ಪೊಲಿಸ್ ಠಾಣೆ ಸೇರಿದಂತೆ ನಗರದ ಹಲವಾರು ಠಾಣೆಗಳಲ್ಲಿ ದರೋಡೆ, ಕೊಲೆ ಯತ್ನ ಪ್ರಕರಣ ದಾಖಲಾಗಿದೆ .ಸದ್ಯ ಆರೋಪಿಗಳನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆBody:KN_BNG_01_28_SHOUTOUT_BHAVYA_7204498Conclusion:KN_BNG_01_28_SHOUTOUT_BHAVYA_7204498
Last Updated : Jun 28, 2019, 11:15 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.