ETV Bharat / state

ಒಂಟಿ ಬೈಕ್​ಗಳನ್ನೇ​​ ಟಾರ್ಗೆಟ್​ ಮಾಡುತ್ತಿದ್ದ ಖತರ್ನಾಕ್​ ಗ್ಯಾಂಗ್... ಫೋನ್​ ಬಿಟ್ಟೋಗಿ ತಗಲಾಕ್ಕೊಂಡ್ರು ಖದೀಮರು  ​

ಮಧ್ಯೆ ರಾತ್ರಿ ಓಡಾಡುವ ಬೈಕ್​ಗಳು, ಒಂಟಿಯಾಗಿ ಸಿಗುವವರನ್ನೇ ಟಾರ್ಗೆಟ್ ಮಾಡುತ್ತಿದ್ದ ಗ್ಯಾಂಗ್​ನ್ನು ಚನ್ನರಾಯಪಟ್ಟಣ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ​.

author img

By

Published : Jun 26, 2019, 1:05 PM IST

ದೇವನಹಳ್ಳಿ

ದೇವನಹಳ್ಳಿ: ಮಧ್ಯೆ ರಾತ್ರಿ ಒಂಟಿಯಾಗಿ ಓಡಾಡುವ ಬೈಕ್​ಗಳನ್ನು ಟಾರ್ಗೆಟ್ ಮಾಡಿ ಅವರಿಗೆ ಲಾಂಗ್​ ತೋರಿಸಿ ದರೋಡೆ ಮಾಡುತ್ತಿದ್ದ ಖತರ್ನಾಕ್​​ ಕಳ್ಳರ ಗ್ಯಾಂಗ್​ ಈಗ ಕಂಬಿ ಎಣಿಸುವಂತಾಗಿದೆ. ಖದೀಮರನ್ನು ಚನ್ನರಾಯಪಟ್ಟಣ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಂದೀಪ್ ರೆಡ್ಡಿ ಆಲಿಯಾಸ್ ಕೋತಿರೆಡ್ಡಿ, ಶ್ರೀನಿವಾಸ್, ನವೀನ್​, ರಜನಿಕಾಂತ್, ಸೀನ, ಪ್ರದೀಪ್ ಹಾಗೂ ಓರ್ವ ಬಾಲಕ ಈ ಬಂಧಿತ ಗ್ಯಾಂಗ್​ನಲ್ಲಿದ್ದಾನೆ. ಬಂಧಿತರು ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಮೂಲದವರಾಗಿದ್ದಾರೆ. ಇವರು ಸಣ್ಣಪುಟ್ಟ ಕೆಲಸಗಳನ್ನ ಮಾಡಿಕೊಂಡಿದ್ದು, ರಾತ್ರಿ ವೇಳೆ ರಸ್ತೆಯಲ್ಲಿ ಸಿಕ್ಕ ಸಿಕ್ಕ ಒಂಟಿ ಬೈಕ್‌ ಸವಾರರು ಹಾಗೂ ದಂಪತಿಗಳನ್ನ ಬೆದರಿಸಿ ದರೋಡೆ ಮಾಡುವುದನ್ನೇ ಕಾಯಕವನ್ನಾಗಿಸಿಕೊಂಡಿದ್ದರು.

ಖತರ್ನಾಕ್​ ಕಳ್ಳರ ಗ್ಯಾಂಗ್​ ಬಂಧಿಸಿದ ಚನ್ನರಾಯಪಟ್ಟಣ ಪೊಲೀಸರು

ಕಳೆದ ತಿಂಗಳು ಚನ್ನರಾಯಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯ ಕಗ್ಗಲಹಳ್ಳಿ ಗ್ರಾಮದ ಬಳಿ ಒಂಟಿಯಾಗಿ ಬೈಕ್‌ನಲ್ಲಿ ತೆರಳುತ್ತಿದ್ದ ದಂಪತಿಗೆ ಲಾಂಗ್ ತೋರಿಸಿ ಮಾಂಗಲ್ಯ ಸೇರಿದಂತೆ, ಚಿನ್ನದ ಉಂಗುರವನ್ನ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಂಡಿದ್ದ ಪೊಲೀಸರು 7 ಮಂದಿ ದರೋಡೆಕೋರರನ್ನು ಹೆಡೆಮುರಿ ಕಟ್ಟಿದ್ದಾರೆ.

Devanahalli
ಖತರ್ನಾಕ್​ ಕಳ್ಳರ ಗ್ಯಾಂಗ್​ ಬಂಧಿಸಿದ ಪೊಲೀಸರು

ಚನ್ನರಾಯಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯ ಕಗ್ಗಲಹಳ್ಳಿ ಸುತ್ತಮುತ್ತ ಖದೀಮರನ್ನು ಬಂಧಿಸುವುದಕ್ಕಾಗಿ ಪೊಲೀಸ್​ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಖದೀಮರಿಗಾಗಿ ಪೊಲೀಸರು ಹಗಲು ರಾತ್ರಿ ಎನ್ನದೆ ಕಾಯುತ್ತಿದ್ದರು. ಕಗ್ಗಲಹಳ್ಳಿಯಿಂದ ದರೋಡೆ ಮಾಡಿ ಬರುತ್ತಿದ್ದ ಅನುಮಾನಾಸ್ಪದ ಕಾರೊಂದನ್ನು ನಮ್ಮ ಸಿಬ್ಬಂದಿ ಚೇಸ್ ಮಾಡಿದ್ದರು. ಈ ವೇಳೆ ಕಾರಿನಲ್ಲಿದ್ದ ಆರೋಪಿಗಳು ನಮ್ಮ ಜೀಪ್​ಗೆ ಗುದ್ದಿ ಕಾರು, ಮೊಬೈಲ್‌ಗಳನ್ನು ಅಲ್ಲೇ ಬಿಟ್ಟು ಎಸ್ಕೆಪ್ ಆಗಿದ್ದರು.

ಪೊಲೀಸ್ ಜೀಪ್​ ಚಾಲಕ ಕಳ್ಳನೋರ್ವನನ್ನು ಚೇಸ್ ಮಾಡಿ ಹಿಡಿದಿದ್ದು, ದರೋಡೆಕೋರರು ಬಳಸುತ್ತಿದ್ದ ಫೋನ್‌ಗಳ ಆಧಾರದಲ್ಲಿ ಆರೋಪಿಗಳ ಗ್ಯಾಂಗ್​ನ್ನು ಬಂಧಿಸಲಾಗಿದೆ. ಈ ಆರೋಪಿಗಳ ಮೇಲೆ ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಕೇಸ್‌ಗಳು ದಾಖಲಾಗಿವೆ. ಗ್ಯಾಂಗ್ ಲೀಡರ್ ಸಂದೀಪ್‌ ರೆಡ್ಡಿ ಮೇಲೆ ವಿವಿಧ ಠಾಣೆಗಳಲ್ಲಿ 20 ಪ್ರಕರಣಗಳಿವೆ.

ಬಂಧಿತರಿಂದ 8 ಲಕ್ಷ ಮೌಲ್ಯದ ಒಂದು ಕಾರು, ಚಿನ್ನದ ಉಂಗುರ, ತಾಳಿ, ಎರಡು ಬೈಕ್‌ಗಳು, ಒಂದು ಲ್ಯಾಪ್ ಟಾಪ್ ಸೇರಿದಂತೆ ನಗದನ್ನು ವಶಕ್ಕೆ ಪಡೆಯಲಾಗಿದೆ ಎಂದು ದೊಡ್ಡಬಳ್ಳಾಪುರ ಡಿವೈಎಸ್‌ಪಿ ಮೋಹನ್‌ ಕುಮಾರ್ ಮಾಹಿತಿ ನೀಡಿದರು.

ದೇವನಹಳ್ಳಿ: ಮಧ್ಯೆ ರಾತ್ರಿ ಒಂಟಿಯಾಗಿ ಓಡಾಡುವ ಬೈಕ್​ಗಳನ್ನು ಟಾರ್ಗೆಟ್ ಮಾಡಿ ಅವರಿಗೆ ಲಾಂಗ್​ ತೋರಿಸಿ ದರೋಡೆ ಮಾಡುತ್ತಿದ್ದ ಖತರ್ನಾಕ್​​ ಕಳ್ಳರ ಗ್ಯಾಂಗ್​ ಈಗ ಕಂಬಿ ಎಣಿಸುವಂತಾಗಿದೆ. ಖದೀಮರನ್ನು ಚನ್ನರಾಯಪಟ್ಟಣ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಂದೀಪ್ ರೆಡ್ಡಿ ಆಲಿಯಾಸ್ ಕೋತಿರೆಡ್ಡಿ, ಶ್ರೀನಿವಾಸ್, ನವೀನ್​, ರಜನಿಕಾಂತ್, ಸೀನ, ಪ್ರದೀಪ್ ಹಾಗೂ ಓರ್ವ ಬಾಲಕ ಈ ಬಂಧಿತ ಗ್ಯಾಂಗ್​ನಲ್ಲಿದ್ದಾನೆ. ಬಂಧಿತರು ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಮೂಲದವರಾಗಿದ್ದಾರೆ. ಇವರು ಸಣ್ಣಪುಟ್ಟ ಕೆಲಸಗಳನ್ನ ಮಾಡಿಕೊಂಡಿದ್ದು, ರಾತ್ರಿ ವೇಳೆ ರಸ್ತೆಯಲ್ಲಿ ಸಿಕ್ಕ ಸಿಕ್ಕ ಒಂಟಿ ಬೈಕ್‌ ಸವಾರರು ಹಾಗೂ ದಂಪತಿಗಳನ್ನ ಬೆದರಿಸಿ ದರೋಡೆ ಮಾಡುವುದನ್ನೇ ಕಾಯಕವನ್ನಾಗಿಸಿಕೊಂಡಿದ್ದರು.

ಖತರ್ನಾಕ್​ ಕಳ್ಳರ ಗ್ಯಾಂಗ್​ ಬಂಧಿಸಿದ ಚನ್ನರಾಯಪಟ್ಟಣ ಪೊಲೀಸರು

ಕಳೆದ ತಿಂಗಳು ಚನ್ನರಾಯಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯ ಕಗ್ಗಲಹಳ್ಳಿ ಗ್ರಾಮದ ಬಳಿ ಒಂಟಿಯಾಗಿ ಬೈಕ್‌ನಲ್ಲಿ ತೆರಳುತ್ತಿದ್ದ ದಂಪತಿಗೆ ಲಾಂಗ್ ತೋರಿಸಿ ಮಾಂಗಲ್ಯ ಸೇರಿದಂತೆ, ಚಿನ್ನದ ಉಂಗುರವನ್ನ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಂಡಿದ್ದ ಪೊಲೀಸರು 7 ಮಂದಿ ದರೋಡೆಕೋರರನ್ನು ಹೆಡೆಮುರಿ ಕಟ್ಟಿದ್ದಾರೆ.

Devanahalli
ಖತರ್ನಾಕ್​ ಕಳ್ಳರ ಗ್ಯಾಂಗ್​ ಬಂಧಿಸಿದ ಪೊಲೀಸರು

ಚನ್ನರಾಯಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯ ಕಗ್ಗಲಹಳ್ಳಿ ಸುತ್ತಮುತ್ತ ಖದೀಮರನ್ನು ಬಂಧಿಸುವುದಕ್ಕಾಗಿ ಪೊಲೀಸ್​ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಖದೀಮರಿಗಾಗಿ ಪೊಲೀಸರು ಹಗಲು ರಾತ್ರಿ ಎನ್ನದೆ ಕಾಯುತ್ತಿದ್ದರು. ಕಗ್ಗಲಹಳ್ಳಿಯಿಂದ ದರೋಡೆ ಮಾಡಿ ಬರುತ್ತಿದ್ದ ಅನುಮಾನಾಸ್ಪದ ಕಾರೊಂದನ್ನು ನಮ್ಮ ಸಿಬ್ಬಂದಿ ಚೇಸ್ ಮಾಡಿದ್ದರು. ಈ ವೇಳೆ ಕಾರಿನಲ್ಲಿದ್ದ ಆರೋಪಿಗಳು ನಮ್ಮ ಜೀಪ್​ಗೆ ಗುದ್ದಿ ಕಾರು, ಮೊಬೈಲ್‌ಗಳನ್ನು ಅಲ್ಲೇ ಬಿಟ್ಟು ಎಸ್ಕೆಪ್ ಆಗಿದ್ದರು.

ಪೊಲೀಸ್ ಜೀಪ್​ ಚಾಲಕ ಕಳ್ಳನೋರ್ವನನ್ನು ಚೇಸ್ ಮಾಡಿ ಹಿಡಿದಿದ್ದು, ದರೋಡೆಕೋರರು ಬಳಸುತ್ತಿದ್ದ ಫೋನ್‌ಗಳ ಆಧಾರದಲ್ಲಿ ಆರೋಪಿಗಳ ಗ್ಯಾಂಗ್​ನ್ನು ಬಂಧಿಸಲಾಗಿದೆ. ಈ ಆರೋಪಿಗಳ ಮೇಲೆ ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಕೇಸ್‌ಗಳು ದಾಖಲಾಗಿವೆ. ಗ್ಯಾಂಗ್ ಲೀಡರ್ ಸಂದೀಪ್‌ ರೆಡ್ಡಿ ಮೇಲೆ ವಿವಿಧ ಠಾಣೆಗಳಲ್ಲಿ 20 ಪ್ರಕರಣಗಳಿವೆ.

ಬಂಧಿತರಿಂದ 8 ಲಕ್ಷ ಮೌಲ್ಯದ ಒಂದು ಕಾರು, ಚಿನ್ನದ ಉಂಗುರ, ತಾಳಿ, ಎರಡು ಬೈಕ್‌ಗಳು, ಒಂದು ಲ್ಯಾಪ್ ಟಾಪ್ ಸೇರಿದಂತೆ ನಗದನ್ನು ವಶಕ್ಕೆ ಪಡೆಯಲಾಗಿದೆ ಎಂದು ದೊಡ್ಡಬಳ್ಳಾಪುರ ಡಿವೈಎಸ್‌ಪಿ ಮೋಹನ್‌ ಕುಮಾರ್ ಮಾಹಿತಿ ನೀಡಿದರು.

Intro: KN_BNG_01_26_ Robbery gang _Arrest_Pkg_Ambarish_7203301

Slug : ರಾತ್ರಿ ವೇಳೆ ಒಂಟಿಯಾಗಿ ತೆರಳುತ್ತಿದ್ದ ಬೈಕ್‌ಗಳೇ ಇವರ ಟಾರ್ಗೆಟ್

ಲಾಂಗ್‌ಗಳಿಡಿದು ಬೆದರಿಕೆ ಹಾಕಿ ಚಿನ್ನಾಭರಣ ದೋಚುತ್ತಿದ್ದ ೭ ದರೋಡೆಕೋರರ ಬಂಧನ

ಪೊಲೀಸ್ ಜೀಪಿಗೆ ಆಕ್ಸಿಡೆಂಟ್ ಮಾಡಿ ಎಸ್ಕೆಪ್ ಆಗಿದ್ದ ಕಳ್ಳರು ಅಂದರ್

ಬೆಂಗಳೂರು: ಇಷ್ಟು ದಿನ ಕಳ್ಳರು ಒಂಟಿ ಮಹಿಳೆಯರನ್ನ ಟಾರ್ಗೆಟ್ ಮಾಡಿಕೊಂಡು ಸರಗಳ್ಳತನ ಮಾಡಿ ಎಸ್ಕೆಪ್ ಮಾಡ್ತಿದ್ರು. ಆದ್ರೆ ಇಲ್ಲೊಂದು ಕೇಸ್‌ನಲ್ಲಿ ಒಂಟಿ ಬೈಕ್‌ಗಳು, ಒಂಟಿಯಾಗಿ ಓಡಾಡುವವರನ್ನೆ ಟಾರ್ಗೆಟ್ ಮಾಡಿಕೊಂಡು ಮದ್ಯರಾತ್ರಿಯಲ್ಲೆ ದರೋಡೆಗೆ ಇಳಿತ್ತಿದ್ರು. ಲಾಂಗ್‌ಗಳನ್ನಿಡಿದು ರಸ್ತೆ ಕಾಯುತ್ತಿದ್ದ ದರೋಡೆ ಗ್ಯಾಂಗ್ ಒಂದನ್ನ ಪೊಲೀಸರು ಎಡೆ ಮುರಿ ಕಟ್ಟಿದ್ದಾರೆ. ಕಳ್ಳತನ ಮಾಡಿ ಎಸ್ಕೆಪ್ ಆಗುವ ವೇಳೆ ಪೊಲೀಸ್ ವಾಹನಕ್ಕೆ ಗುದ್ದಿ ಪರಾರಿಯಾಗಿದ್ದ ಖತರ್ನಾಕ್ ಗ್ಯಾಂಗ್ ಇದೀಗ ಕಂಬಿ ಹಿಂದೆ ಬಿದ್ದಿದ್ದಾರೆ.

ಹೌದು ರಸ್ತೆಯಲ್ಲಿ ಒಂಟಿಯಾಗಿ ಓಡಾಡ್ತಿದ್ದ ಬೈಕ್‌ಗಳನ್ನ ತಡೆದು ಲಾಂಗ್‌ಗಳನ್ನ ತೋರಿಸಿ ಬೆದರಿಸಿ ಚಿನ್ನಭಾರಣ, ಹಣವನ್ನ ದೋಚುತ್ತಿದ್ದ ಖತರ್ನಾಕ್ ಗ್ಯಾಂಗ್ ಒಂದನ್ನ ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರು ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ಮೂಲದವರಾಗಿದ್ದು ಸಂದೀಪ್ ರೆಡ್ಡಿ ಆಲಿಯಾಸ್ ಕೋತಿರೆಡ್ಡಿ, ಶ್ರೀನಿವಾಸ್, ನವೀನ, ರಜನಿಕಾಂತ್, ಸೀನ, ಪ್ರದೀಪ್ ಹಾಗೂ ೧೭ ವರ್ಷದ ಬಾಲಕನೊಬ್ಬ ಎಂದು ಗುರುತಿಸಲಾಗಿದೆ. ಅಂದಹಾಗೆ ಈ ೭ ಜನರ ದರೋಡೆ ಗ್ಯಾಂಗ್ ಹಲವಾರು ಸಣ್ಣಪುಟ್ಟ ಕೆಲಸಗಳನ್ನ ಮಾಡಿಕೊಂಡಿದ್ದು, ಕೆಲಸ ಮುಗಿದ ನಂತರ ರಾತ್ರಿ ವೇಳೆಯಲ್ಲಿ ರಸ್ತೆಯಲ್ಲಿ ಸಿಕ್ಕ ಸಿಕ್ಕ ಒಂಟಿ ಬೈಕ್‌ಗಳು ಹಾಗೂ ದಂಪತಿಗಳನ್ನ ಬೆದರಿಸಿ ದರೋಡೆ ಮಾಡುವುದನ್ನೆ ಕಾಯಕ ಮಾಡಿಕೊಂಡಿದ್ದಾರೆ. ಕಳೆದ ತಿಂಗಳು ಚನ್ನರಾಯಪಟ್ಟಣ ಪೊಲೀಸ್ ಠಾಣೆ ವ್ಯಾಫ್ತಿಯ ಕಗ್ಗಲಹಳ್ಳಿ ಗ್ರಾಮದ ಬಳಿ ಒಂಟಿಯಾಗಿ ಬೈಕ್‌ನಲ್ಲಿ ತೆರಳುತ್ತಿದ್ದ ದಂಪತಿಯನ್ನ ಲಾಂಗ್ ಹಿಡಿದು ಬೆದರಿಸಿ ಮಾಂಗಲ್ಯ ಸೇರಿದಂತೆ, ಚಿನ್ನದ ಉಂಗುರವನ್ನ ಕಿತ್ತು ಪರಾರಿಯಾಗಿದ್ರು. ಅದೇ ರೀತಿ ಇದೇ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮದ್ಯರಾತ್ರಿ ಒಂಟಿ ಬೈಕ್‌ಗಳನ್ನ ಟಾರ್ಗೆಟ್ ಮಾಡಿ ವ್ಯಕ್ತಿಗಳನ್ನ ಬೆದರಿಸಿ ಸಿಕ್ಕಸಿಕ್ಕ ವಸ್ತುಗಳನ್ನ ದೋಚಿ ಎಸ್ಕೆಪ್ ಹಾಗಿದ್ರು. ಈ ಪ್ರಕರಣವನ್ನ ಗಂಭಿರವಾಗಿ ತೆಗೆದುಕೊಂಡ ಚನ್ನರಾಯಪಟ್ಟಣ ಪೊಲೀಸರು ೭ ಮಂದಿ ದರೋಡೆಕೋರರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೈಟ್: ಮೋಹನ್‌ಕುಮಾರ್, ದೊಡ್ಡಬಳ್ಳಾಪುರ ಡಿವೈಎಸ್‌ಪಿ

ಅಂದಹಾಗೆ ಮುಖ್ಯವಾಗಿ ಚನ್ನರಾಯಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯ ಕಗ್ಗಲಹಳ್ಳಿ ಸುತ್ತಮುತ್ತ ಆರೋಪಿಗಳಿಗಾಗಿ ಮದ್ಯಾರಾತ್ರಿ ನಾಕ ಬಂಧಿ ಹಾಕಿಕೊಂಡು ಪೊಲೀಸರು ಹಗಲು ರಾತ್ರಿ ಕಾಯ್ತಿದ್ರು. ಈ ವೇಳೆ ದರೋಡೆ ಮಾಡಿಕೊಂಡು ಬರುತ್ತಿದ್ದ ಅನುಮಾನಸ್ಪದ ಕಾರೊಂದನ್ನ ಚೇಸ್ ಮಾಡಿದ ಪೊಲೀಸರ ಕಾರಿಗೆ ಆರೋಪಿಗಳು ತಮ್ಮ ಸ್ವಿಪ್ಟ್ ಕಾರನ್ನ ಆಕ್ಸಿಡೆಂಟ್ ಮಾಡಿದ್ದಾರೆ. ಈ ವೇಳೆ ಪೊಲೀಸ್ ಜೀಪ್ ಹಾಗೂ ಕಳ್ಳರು ಬಳಸುತ್ತಿದ್ದ ಕಾರಿನ ಮುಂಭಾಗ ಸಂಪೂರ್ಣ ಜಖಂ ಆಗಿದೆ. ಇನ್ನೂ ಪೊಲೀಸ್ ಜೀಪಿಗೆ ಗುದ್ದಿದ್ದ ಖತರ್ನಾಕ್ ದರೋಡೆ ಗ್ಯಾಂಗ್ ಕಾರು ಮೊಬೈಲ್‌ಗಳು ಅಲ್ಲೆ ಬಿಟ್ಟು ಎಸ್ಕೆಪ್ ಹಾಗ್ತಿದ್ರು. ಆದ್ರೆ ಜೀಪಿನ ಪೊಲೀಸ್ ಚಾಲಕ ಕಳ್ಳನೊಬ್ಬನನ್ನ ಚೇಸ್ ಮಾಡಿ ಹಿಡಿದಿದ್ದಾನೆ. ಜತೆಗೆ ದರೋಡೆಕೋರರು ಬಳಸುತ್ತಿದ್ದ ಪೋನ್‌ಗಳ ಆಧಾರದಲ್ಲಿ ದರೋಡೆ ಮಾಡುತ್ತಿದ್ದ ೭ ಜನರ ಗ್ಯಾಂಗ್ ಅನ್ನ ಪೊಲೀಸರು ಪತ್ತೆಮಾಡಿ ಬಂಧಿಸಿದ್ದಾರೆ. ಬಂಧಿತ ೭ ಜನ ಆರೋಪಿಗಳ ಮೇಲೆ ಬೆಂಗಳೂರು ನಗರ, ಗ್ರಾಮಾಂತರ. ರಾಮನಗರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಒಬ್ಬಬ್ಬರ ಮೇಲೆ ಐದಕ್ಕು ಹೆಚ್ಚು ಕೇಸ್‌ಗಳಿವೆ. ಅದರಲ್ಲೂ ಗ್ಯಾಂಗ್ ಲೀಡರ್ ಸಂದೀಪ್‌ರೆಡ್ಡಿ ಮೇಲೆ ವಿವಿಧ ಠಾಣೆಗಳಲ್ಲಿ ೨೦ ಕೇಸ್‌ಗಳಿರೋದು ಪೊಲೀಸರಿಗೆ ಪತ್ತೆಯಾಗಿದೆ. ಇನ್ನೂ ಬಂಧಿತರಿಂದ ೮ ಲಕ್ಷ ಎಪ್ಪತ್ತಾರು ಸಾವಿರ ಮೌಲ್ಯದ ಒಂದು ಕಾರು, ಚಿನ್ನದ ಉಂಗುರ, ತಾಳಿ, ಎರಡು ಬೈಕ್‌ಗಳು, ಒಂದು ಲ್ಯಾಪ್ ಟಾಪ್ ಸೇರಿದಂತೆ ನಗದನ್ನ ವಶಕ್ಕೆ ಪಡೆಯಲಾಗಿದೆ..

ಒಟ್ಟಾರೇ ಮದ್ಯರಾತ್ರಿ ಒಂಟಿ ಬೈಕ್‌ಗಳನ್ನೆ ಟಾರ್ಗೆಟ್ ಮಾಡಿಕೊಂಡು ದರೋಡೆಗಿಳಿದಿದ್ದ ಆರೋಪಿಗಳು ಪೊಲೀಸ ಅತಿಥಿಯಾಗಿದ್ದು, ಈ ಗ್ಯಾಂಗ್‌ನ ಇನ್ನಿಬ್ಬರು ಎಸ್ಕೆಪ್ ಹಾಗಿದ್ದಾರೆ. ಹೀಗಾಗಿ ಇಬ್ಬರು ಕತರ್ನಾಕ್ ಕಳ್ಳರನ್ನ ಹಿಡಿಯಲು ಹೀಗಾಗಲೇ ಚನ್ನರಾಯಪಟ್ಟಣ ಪೊಲೀಸರು ಬಲೆ ಬೀಸಿದ್ದಾರೆ. ಇನ್ನೂ ಇಂತಹ ಪ್ರಕರಣಗಳ ಆರೋಪಗಳನ್ನ ಪತ್ತೆ ಹಚ್ಚಿದ ಹಿನ್ನಲೆ ಸ್ಥಳೀಯರು ರಾತ್ರಿ ವೇಳೆಯಲ್ಲಿ ಓಡಾಡಲು ನಿಟ್ಟುಸಿರು ಬಿಡುವಂತಾಗಿದೆ..Body:NoConclusion:No

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.