ETV Bharat / state

ಶ್ರೀಮಂತಿಕೆ ತೊರೆದು ಜೈನ ದೀಕ್ಷೆಯತ್ತ ಮುಖ ಮಾಡಿದ ಯುವತಿ! - undefined

ಹೆಣ್ಣು ಮಕ್ಕಳು ಬೆಳೆದು ದೊಡ್ಡವರಾದ ಮೇಲೆ ಮದುವೆಯಾಗಿ ಗಂಡನ ಮನೆ ಸೇರಿ ಸುಖ ಸಂಸಾರ ನಡೆಸುವ ಕನಸು ಕಾಣುತ್ತಾರೆ. ಆದ್ರೆ, ಇಲ್ಲೊಬ್ಬ ಯುವತಿಯ ಆಸಕ್ತಿಯೇ ವಿಭಿನ್ನ. ಕೈ ತುಂಬಾ ಸಂಬಳ ತಂದುಕೊಡುವ ಕೆಲಸ, ಶ್ರೀಮಂತಿಕೆ ಎಲ್ಲಾ ಬಿಟ್ಟು, ಲೌಕಿಕ ಸುಖಭೋಗಗಳಿಂದ ದೂರವಿರುವುದಕ್ಕೆ ನಿರ್ಧರಿಸಿದ್ದಾರೆ.

ಜೈನ ಸನ್ಯಾಸ ದೀಕ್ಷೆ ಪಡೆಯುತ್ತಿರುವ ಯುವತಿ
author img

By

Published : Apr 14, 2019, 4:10 PM IST

Updated : Apr 14, 2019, 6:25 PM IST

ದೊಡ್ಡಬಳ್ಳಾಪುರ: ಕಠಿಣ ಸವಾಲುಗಳಿಂದ ಕೂಡಿರುವ ಸನ್ಯಾಸ ದೀಕ್ಷೆ ಪಡೆಯಲು ಸಾಮಾನ್ಯವಾಗಿ ಜನರು ಮನಸ್ಸು ಮಾಡೋದಿಲ್ಲ. ಅದರೆ ದೊಡ್ಡಬಳ್ಳಾಪುರದ ಯುವತಿಗೆ ತನ್ನ 24ನೇ ವಯಸ್ಸಿಗೆ ಲೌಕಿಕ ಜಗತ್ತಿನ ಸುಖಭೋಗಗಳು ಇಷ್ಟವಾಗಿಲ್ಲ. ಆಕೆ ಜೈನದೀಕ್ಷೆ ಪಡೆದು ಭಗವಂತ ಧ್ಯಾನದಲ್ಲಿ ಜೀವನ ಕಳೆಯುವುದಕ್ಕೆ ನಿರ್ಧರಿಸಿದ್ದಾರೆ.

ದೊಡ್ಡಬಳ್ಳಾಪುರದ ಗಾಂಧಿ ನಗರದ ಜೈನ ಕುಟುಂಬದ ಮಗಳು ಗಿರಿಷ್ಮಾ ಮುಕಾಣ ಬಿಬಿಎಂ ವ್ಯಾಸಂಗ ಮಾಡಿರುವ ಯುವತಿ. ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸಕ್ಕೆ ಸೇರಿ, ಕೈ ತುಂಬ ಸಂಬಳ ಪಡೆಯುತ್ತಿದ್ದಾರೆ. ಮದುವೆಯ ವಯಸ್ಸು ಬೇರೆ. ಸುಖ ಸಂಸಾರ ನಡೆಸಬಹುದಿತ್ತು. ಮನೆಯಲ್ಲಿ ಶ್ರೀಮಂತಿಕೆ ಇದ್ದರೂ ಅದರ ವ್ಯಾಮೋಹ ಅವರಿಗಿಲ್ಲ. ಹಾಗಾಗಿ ಜೈನ ಸನ್ಯಾಸ ದೀಕ್ಷೆ ಪಡೆಯಲು ಅವರು ತಯಾರಿ ನಡೆಸಿದ್ದಾರೆ.

10 ವಯಸ್ಸಿನಲ್ಲಿಯೇ ಸನ್ಯಾಸದತ್ತ ಒಲವು ತೋರಿದ್ದ ಗಿರಿಷ್ಮಾ ಮುಕಾಣ, ಚಿನ್ನಾಭರಣ ವ್ಯಾಪಾರ ಮಾಡುವ ಮನೆತನದ ಯುವತಿ. ಈ ಕುಟುಂಬದ ನಾಲ್ವರು ಮಕ್ಕಳಲ್ಲಿ ಈಕೆಯೇ ಕಿರಿಯ ಮಗಳು. ಶ್ರಿಮಂತಿಕೆ ತುಂಬಿರುವ ಮನೆಯಲ್ಲಿ ಈಕೆಯ ಸಹೋದರಿಯರು ಮದುವೆಯಾಗಿ ಗಂಡನ ಮನೆ ಸೇರಿ ಸುಖಸಂಸಾರ ನಡೆಸುತ್ತಿದ್ದಾರೆ. ಸಹೋದರ ಕೂಡಾ ಮದುವೆಯಾಗಿ ಸುಖೀ ಜೀವನ ನಡೆಸುತ್ತಿದ್ದಾರೆ. ಅದರೆ ಸಾಂಸಾರಿಕ ಜೀವನದ ಬಗ್ಗೆ ಗಿರಿಷ್ಮಾಗೆ ಬಾಲ್ಯದಿಂದಲೂ ಆಸಕ್ತಿ ಕಡಿಮೆ ಇತ್ತು.

ಜೈನ ಸನ್ಯಾಸ ದೀಕ್ಷೆ ಪಡೆಯುತ್ತಿರುವ ಯುವತಿ

ಪ್ರತಿವರ್ಷ ನಗರಕ್ಕೆ ಬರುತ್ತಿದ್ದ ಜೈನ ಗುರುಗಳ ಪ್ರವಚನ ಕೇಳಿ ಪ್ರಭಾವಿತಳಾದ ಈಕೆ ಸನ್ಯಾಸ ದೀಕ್ಷೆ ಪಡೆಯುವ ತೀರ್ಮಾನಕ್ಕೆ ಬಂದರು. ಜೈನ ಮುನಿಗಳಂತೆ ರಾತ್ರಿ ಊಟ ಮಾಡದಿರುವುದು, ಊಟದಲ್ಲಿ ಈರುಳ್ಳಿ, ಬೆಳ್ಳುಳಿ ಸೇವನೆ ಮಾಡದಿರುವುದು, ಸ್ನಾನ ಮಾಡದಿರೋದು, ಪ್ರವಚನಗಳ ಪುಸ್ತಕ ಓದುವುದವನ್ನು ಈಕೆ ಬೆಳೆಸಿಕೊಂಡಿದ್ದಾರೆ.

ಈಕೆಯ ಜನ್ಮ ಜಾತಕದಲ್ಲೂ ಈ ಯುವತಿ ದೊಡ್ಡವಳಾದ ಮೇಲೆ ಸನ್ಯಾಸ ದೀಕ್ಷೆ ಪಡೆಯುವ ವಿಚಾರವಿದೆಯಂತೆ. ಮನೆಯಲ್ಲಿ ಸನ್ಯಾಸಿಯಂತೆ ಇದ್ದ ಮಗಳನ್ನು ನೋಡಿ ಮನೆಯವರಿಗೆ ಕೊಂಚ ಆತಂಕ ಉಂಟಾಗಿತ್ತು. ಪೋಷಕರು ಮಗಳ ಮನವೊಲಿಕೆಗೆ ಪ್ರಯತ್ನ ಪಟ್ಟರೂ ಪ್ರಯೋಜನವಾಗಲಿಲ್ಲ. ಸನ್ಯಾಸ ಲೋಕದಲ್ಲಿ ಮುಳುಗಿ ಹೋಗಿದ್ದ ಗಿರಿಷ್ಮಾ, ಮನೆಯರ ಮಾತು ಒ ಪ್ಪಲೇ ಇಲ್ಲ. ಅಂತಿಮವಾಗಿ ಮಗಳ ಸಂತೋಷವೇ ನಮ್ಮ ಸಂತೋಷವೆಂದು ತಿಳಿದ ಪೋಷಕರು ಮಗಳನ್ನು ಜೈನ ಭಾಗವತಿ ದೀಕ್ಷೆ ಪಡೆಯಲು ಕಳುಹಿಸುತ್ತಿದ್ದಾರೆ.

ಛತ್ತೀಸ್​ಘಡದಲ್ಲಿ ಸನ್ಯಾಸ ದೀಕ್ಷೆ ಪಡೆಯಲಿರುವ ಗಿರಿಷ್ಮಾ

ಛತ್ತಿಸ್​ಘಡದಲ್ಲಿರುವ ಆಚಾರ್ಯ ಶ್ರೀವಿಜಯರಾಜ್ಮುಮ್ಯಾರಸ ಗುರುಗಳ ಸಮ್ಮುಖದಲ್ಲಿ, ಇದೇ ತಿಂಗಳ ಏಪ್ರಿಲ್ 26 ರಂದು ಗಿರಿಷ್ಮಾ ಸನ್ಯಾಸ ದೀಕ್ಷೆ ಪಡೆಯಲ್ಲಿದ್ದಾರೆ. ಅಲ್ಲಿಂದ ಅವರ ಜೀವನ ಪದ್ಧತಿ ಸಂಪೂರ್ಣವಾಗಿ ಬದಲಾಗುತ್ತದೆ. ಮೊಬೈಲ್ ಬಳಸುವಂತಿಲ್ಲ. ಕಾಲ್ನಡಿಗೆಯಲ್ಲಿಯೇ ಜೀವನ ಪೂರ್ತಿ ಸಂಚಾರ ನಡೆಸಬೇಕು. ಸದಾ ಬಿಳಿ ವಸ್ತ್ರವನ್ನು ಧರಿಸಬೇಕು. ಸೂರ್ಯಾಸ್ತದ ನಂತರ ಆಹಾರ ಸೇವನೆ ಮಾಡುವಂತಿಲ್ಲ. ಭಿಕ್ಷೆ ಆಹಾರಪದ್ಧತಿಯನ್ನು ಅವರು ಅನುಸರಿಲೇಬೇಕು. ಇಂತಹ ಕಠಿಣ ಮಾರ್ಗವನ್ನು ಗಿರಿಷ್ಮಾ ಆಯ್ಕೆ ಮಾಡಿಕೊಂಡಿದ್ದಾರೆ.

ದೊಡ್ಡಬಳ್ಳಾಪುರ: ಕಠಿಣ ಸವಾಲುಗಳಿಂದ ಕೂಡಿರುವ ಸನ್ಯಾಸ ದೀಕ್ಷೆ ಪಡೆಯಲು ಸಾಮಾನ್ಯವಾಗಿ ಜನರು ಮನಸ್ಸು ಮಾಡೋದಿಲ್ಲ. ಅದರೆ ದೊಡ್ಡಬಳ್ಳಾಪುರದ ಯುವತಿಗೆ ತನ್ನ 24ನೇ ವಯಸ್ಸಿಗೆ ಲೌಕಿಕ ಜಗತ್ತಿನ ಸುಖಭೋಗಗಳು ಇಷ್ಟವಾಗಿಲ್ಲ. ಆಕೆ ಜೈನದೀಕ್ಷೆ ಪಡೆದು ಭಗವಂತ ಧ್ಯಾನದಲ್ಲಿ ಜೀವನ ಕಳೆಯುವುದಕ್ಕೆ ನಿರ್ಧರಿಸಿದ್ದಾರೆ.

ದೊಡ್ಡಬಳ್ಳಾಪುರದ ಗಾಂಧಿ ನಗರದ ಜೈನ ಕುಟುಂಬದ ಮಗಳು ಗಿರಿಷ್ಮಾ ಮುಕಾಣ ಬಿಬಿಎಂ ವ್ಯಾಸಂಗ ಮಾಡಿರುವ ಯುವತಿ. ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸಕ್ಕೆ ಸೇರಿ, ಕೈ ತುಂಬ ಸಂಬಳ ಪಡೆಯುತ್ತಿದ್ದಾರೆ. ಮದುವೆಯ ವಯಸ್ಸು ಬೇರೆ. ಸುಖ ಸಂಸಾರ ನಡೆಸಬಹುದಿತ್ತು. ಮನೆಯಲ್ಲಿ ಶ್ರೀಮಂತಿಕೆ ಇದ್ದರೂ ಅದರ ವ್ಯಾಮೋಹ ಅವರಿಗಿಲ್ಲ. ಹಾಗಾಗಿ ಜೈನ ಸನ್ಯಾಸ ದೀಕ್ಷೆ ಪಡೆಯಲು ಅವರು ತಯಾರಿ ನಡೆಸಿದ್ದಾರೆ.

10 ವಯಸ್ಸಿನಲ್ಲಿಯೇ ಸನ್ಯಾಸದತ್ತ ಒಲವು ತೋರಿದ್ದ ಗಿರಿಷ್ಮಾ ಮುಕಾಣ, ಚಿನ್ನಾಭರಣ ವ್ಯಾಪಾರ ಮಾಡುವ ಮನೆತನದ ಯುವತಿ. ಈ ಕುಟುಂಬದ ನಾಲ್ವರು ಮಕ್ಕಳಲ್ಲಿ ಈಕೆಯೇ ಕಿರಿಯ ಮಗಳು. ಶ್ರಿಮಂತಿಕೆ ತುಂಬಿರುವ ಮನೆಯಲ್ಲಿ ಈಕೆಯ ಸಹೋದರಿಯರು ಮದುವೆಯಾಗಿ ಗಂಡನ ಮನೆ ಸೇರಿ ಸುಖಸಂಸಾರ ನಡೆಸುತ್ತಿದ್ದಾರೆ. ಸಹೋದರ ಕೂಡಾ ಮದುವೆಯಾಗಿ ಸುಖೀ ಜೀವನ ನಡೆಸುತ್ತಿದ್ದಾರೆ. ಅದರೆ ಸಾಂಸಾರಿಕ ಜೀವನದ ಬಗ್ಗೆ ಗಿರಿಷ್ಮಾಗೆ ಬಾಲ್ಯದಿಂದಲೂ ಆಸಕ್ತಿ ಕಡಿಮೆ ಇತ್ತು.

ಜೈನ ಸನ್ಯಾಸ ದೀಕ್ಷೆ ಪಡೆಯುತ್ತಿರುವ ಯುವತಿ

ಪ್ರತಿವರ್ಷ ನಗರಕ್ಕೆ ಬರುತ್ತಿದ್ದ ಜೈನ ಗುರುಗಳ ಪ್ರವಚನ ಕೇಳಿ ಪ್ರಭಾವಿತಳಾದ ಈಕೆ ಸನ್ಯಾಸ ದೀಕ್ಷೆ ಪಡೆಯುವ ತೀರ್ಮಾನಕ್ಕೆ ಬಂದರು. ಜೈನ ಮುನಿಗಳಂತೆ ರಾತ್ರಿ ಊಟ ಮಾಡದಿರುವುದು, ಊಟದಲ್ಲಿ ಈರುಳ್ಳಿ, ಬೆಳ್ಳುಳಿ ಸೇವನೆ ಮಾಡದಿರುವುದು, ಸ್ನಾನ ಮಾಡದಿರೋದು, ಪ್ರವಚನಗಳ ಪುಸ್ತಕ ಓದುವುದವನ್ನು ಈಕೆ ಬೆಳೆಸಿಕೊಂಡಿದ್ದಾರೆ.

ಈಕೆಯ ಜನ್ಮ ಜಾತಕದಲ್ಲೂ ಈ ಯುವತಿ ದೊಡ್ಡವಳಾದ ಮೇಲೆ ಸನ್ಯಾಸ ದೀಕ್ಷೆ ಪಡೆಯುವ ವಿಚಾರವಿದೆಯಂತೆ. ಮನೆಯಲ್ಲಿ ಸನ್ಯಾಸಿಯಂತೆ ಇದ್ದ ಮಗಳನ್ನು ನೋಡಿ ಮನೆಯವರಿಗೆ ಕೊಂಚ ಆತಂಕ ಉಂಟಾಗಿತ್ತು. ಪೋಷಕರು ಮಗಳ ಮನವೊಲಿಕೆಗೆ ಪ್ರಯತ್ನ ಪಟ್ಟರೂ ಪ್ರಯೋಜನವಾಗಲಿಲ್ಲ. ಸನ್ಯಾಸ ಲೋಕದಲ್ಲಿ ಮುಳುಗಿ ಹೋಗಿದ್ದ ಗಿರಿಷ್ಮಾ, ಮನೆಯರ ಮಾತು ಒ ಪ್ಪಲೇ ಇಲ್ಲ. ಅಂತಿಮವಾಗಿ ಮಗಳ ಸಂತೋಷವೇ ನಮ್ಮ ಸಂತೋಷವೆಂದು ತಿಳಿದ ಪೋಷಕರು ಮಗಳನ್ನು ಜೈನ ಭಾಗವತಿ ದೀಕ್ಷೆ ಪಡೆಯಲು ಕಳುಹಿಸುತ್ತಿದ್ದಾರೆ.

ಛತ್ತೀಸ್​ಘಡದಲ್ಲಿ ಸನ್ಯಾಸ ದೀಕ್ಷೆ ಪಡೆಯಲಿರುವ ಗಿರಿಷ್ಮಾ

ಛತ್ತಿಸ್​ಘಡದಲ್ಲಿರುವ ಆಚಾರ್ಯ ಶ್ರೀವಿಜಯರಾಜ್ಮುಮ್ಯಾರಸ ಗುರುಗಳ ಸಮ್ಮುಖದಲ್ಲಿ, ಇದೇ ತಿಂಗಳ ಏಪ್ರಿಲ್ 26 ರಂದು ಗಿರಿಷ್ಮಾ ಸನ್ಯಾಸ ದೀಕ್ಷೆ ಪಡೆಯಲ್ಲಿದ್ದಾರೆ. ಅಲ್ಲಿಂದ ಅವರ ಜೀವನ ಪದ್ಧತಿ ಸಂಪೂರ್ಣವಾಗಿ ಬದಲಾಗುತ್ತದೆ. ಮೊಬೈಲ್ ಬಳಸುವಂತಿಲ್ಲ. ಕಾಲ್ನಡಿಗೆಯಲ್ಲಿಯೇ ಜೀವನ ಪೂರ್ತಿ ಸಂಚಾರ ನಡೆಸಬೇಕು. ಸದಾ ಬಿಳಿ ವಸ್ತ್ರವನ್ನು ಧರಿಸಬೇಕು. ಸೂರ್ಯಾಸ್ತದ ನಂತರ ಆಹಾರ ಸೇವನೆ ಮಾಡುವಂತಿಲ್ಲ. ಭಿಕ್ಷೆ ಆಹಾರಪದ್ಧತಿಯನ್ನು ಅವರು ಅನುಸರಿಲೇಬೇಕು. ಇಂತಹ ಕಠಿಣ ಮಾರ್ಗವನ್ನು ಗಿರಿಷ್ಮಾ ಆಯ್ಕೆ ಮಾಡಿಕೊಂಡಿದ್ದಾರೆ.

Intro:24ನೇ ವಯಸ್ಸಿಗೆ ಜೈನಾ ಸನ್ಯಾಸಿಯ ದೀಕ್ಷೆ ಪಡೆದ ಯುವತಿ
ದೊಡ್ಡಬಳ್ಳಾಪುರ ಯುವತಿಯ ಜೈನಾ ಭಾಗವತಿ ದೀಕ್ಷಾ ಮಹೋತ್ಸವ
Body:ದೊಡ್ಡಬಳ್ಳಾಪುರ : ಹೆಣ್ಣು ಮಕ್ಕಳು ಬೆಳೆದು ದೊಡ್ಡವರಾದ ಮೇಲೆ ಮದುವೆ ಮಾಡಿ ಗಂಡನ ಮನೆಗೆ ಕಳಿಸೋಕ್ಕೆ ಹೆತ್ತವರು ಇಷ್ಟ ಪಡ್ತಾರೆ. ಅದೇ ಮಗಳು ಸನ್ಸಾಸ ದಿಕ್ಷೆ ಪಡೆದು ಮಠ ಸೇರೊಕ್ಕೆ ಯಾವ ಹೆತ್ತವರು ಇಷ್ಟ ಪಡೋದಿಲ್ಲ. ಜೊತೆಗೆ ಕಷ್ಟಗಳ ಸರಮಾಲೆಯಾಗಿರುವ ಸನ್ಸಾಸ ದಿಕ್ಷೆಯನ್ನು ಯಾರು ಸಹ ಪಡೆಯಲು ಮನಸ್ಸು ಮಾಡೋಡಿಲ್ಲ ಅದರೆ ದೊಡ್ಡಬಳ್ಳಾಪುರ ಯುವತಿ ತನ್ನ 24ನೇ ವಯಸ್ಸಿನಲ್ಲಿ ಸನ್ಸಾಸ ದೀಕ್ಷೆ ಪಡೆಯಲು ಸಜ್ಜಾಗಿದ್ದಾರೆ.

ದೊಡ್ಡಬಳ್ಳಾಪುರದ ಗಾಂಧಿ ನಗರದ ಶ್ರೀಮಂತರ ಜೈನಾ ಕುಟುಂಬದ ಮಗಳು ಗಿರಿಷ್ಮಾ ಮುಕಾಣ, ಬಿಬಿಎಂ ವ್ಯಾಸಂಗ ಮಾಡಿರುವ ಯುವತಿ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸಕ್ಕೆ ಸೇರಿ ಕೈ ತುಂಬ ಸಂಬಳ. ಮದುವೆಯಾಗಿ ಸುಖ ಸಂಸಾರ ನಡೆಸ ಬಹುದಿತ್ತು. ಮನೆಯಲ್ಲಿ ಶ್ರೀಮಂತಿಕೆ ಇದ್ದರು ಶ್ರೀಮಂತಿಕೆಯ ವ್ಯಾಮೋಹ ಇಲ್ಲದ ಈಕೆ ಜೈನಾ ಸನ್ಸಾಸಿ ದೀಕ್ಷೆ ಪಡೆಯಲು ತಯಾರಿ ನಡೆಸಿದ್ದಾರೆ. ಇದೇ ತಿಂಗಳ ಎಪ್ರಿಲ್ 26 ರಂದು ಛತ್ತಿಸ್ ಘಡದಲ್ಲಿ ಗುರುಗಳ ಸಮ್ಮುಖದಲ್ಲಿ ಸನ್ಸಾಸ ದೀಕ್ಷೆಯನ್ನು ಪಡೆಯಲ್ಲಿದ್ದಾರೆ.

10 ವಯಸ್ಸಿನಲ್ಲಿಯೇ ಸನ್ಸಾಸದತ್ತ ಒಲವು
ಗಿರಿಷ್ಮಾ ಮುಕಾಣ ಚಿನ್ನಾಭರಣ ವ್ಯಾಪಾರ ಮಾಡುವ ಮನೆತನದ ಯುವತಿ. ನಾಲ್ಕು ಮಕ್ಕಳಲ್ಲಿ ಈಕೆಯೇ ಕಿರಿಯ ಮಗಳು. ಮನೆಯಲ್ಲಿ ಶ್ರಿಮಂತಿಕೆಯೇ ತುಂಬಿತ್ತು. ಆಕೆಯ ಸೋಹದರಿಯರು ಮದುವೆಯಾಗಿ ಗಂಡನ ಮನೆ ಸೇರಿ ಸಂಸಾರಸ್ಥರಾಗಿದ್ರು. ಸಹೋದರ ಸಹ ಮದುವೆಯಾಗಿ ಸುಖಿ ಜೀವನ ನಡೆಸುತ್ತಿದ್ದ. ಅದರೆ ಸಂಸಾರಿಕ ಜೀವನದ ಬಗ್ಗೆ ಮೊದಲಿನಿಂದ್ಲು ವ್ಯಾಮೋಹ ಬೆಳಸಿ ಕೊಳ್ಳೋದ ಗಿರಿಷ್ಮಾ ತನ್ನ ಹತ್ತನೇ ವಯಸ್ಸಿನಿಂದಲೇ ಸನ್ಸಾಸ ಜೀವನದ ಬಗ್ಗೆ ಒಲವು ಬೆಳಸಿಕೊಂಡಕು. ಪ್ರತಿವರ್ಷ ನಗರಕ್ಕೆ ಬರುತ್ತಿದ್ದ ಗುರುಗಳ ಪ್ರವಚನ ಕೇಳಿ ಅವರಂತೆಯೇ ತಾನು ಸಹ ಸನ್ಸಾಸ ದೀಕ್ಷೆ ಪಡೆಯುವ ತಿರ್ಮಾನಕ್ಕೆ ಬಂದ್ರು . ಸನ್ಸಾಸಿಗಳಂತೆ ರಾತ್ರಿ ಊಟ ಮಾಡದಿರುವುದು, ಊಟದಲ್ಲಿ ಈರುಳ್ಳಿ ಬೆಳ್ಳುಳಿ ಸೇವನೆ ಮಾಡೋದಿರೋದು, ಸ್ನಾನ ಮಾಡದಿರೋದು. ಪ್ರವಚನಗಳ ಪುಸ್ತಕ ಓದೋದನ್ನ ಮುಂದುವರೆಸಿದರು.

ಆಕೆಯ ಜಾತಕದಲ್ಲಿ ಬರೆಯಲಾಗಿತ್ತು ಸನ್ಯಾಸ ಜೀವನ
ಮನೆಯಲ್ಲಿ ಸನ್ಸಾಸಿಯಂತೆ ಇದ್ದ ಮಗಳನ್ನು ನೋಡಿ ಭಯವಾಗಿತ್ತು ಮನೆಯವರಿಗೆ, ಆಕೆ ಏಲ್ಲಿ ಸನ್ಸಾಸಿಯೇ ಆಗಿ ಬೀಡುತ್ತಾಳೋ ಅನ್ನೋ ಅತಂಕದಲ್ಲಿಯೇ ಇದ್ರು. ಮನೆಯರು ಆಕೆಗೆ ಬುದ್ದಿಯನ್ನು ಹೇಳಿದ್ರು. ಅದಾಗಲೇ ಸನ್ಯಾಸಿ ಲೋಕದಲ್ಲಿ ಮುಳುಗಿ ಹೋಗಿದ್ದ ಗಿರಿಷ್ಮಾ ಮನೆಯರ ಮಾತಿಗೆ ಸೋಲುವ ಸ್ಥಿತಿಯಲ್ಲಿ ಇರಲಿಲ್ಲ. ಆಕೆಯ ತಾಯಿ ಇಂದಿರಾ ದೇವಿ ಮಗಳ ಜಾತಕವನ್ನ ಜ್ಯೋತಿಷಿಗಳಿಗೆ ತೋರಿಸಿದ್ದಾರೆ ಅವರು ಸಹ ಆಕೆ ಸನ್ಸಾಸಿ ಆಗುವುದ್ದಾಗಿ ಹೇಳಿದ್ರು. ಆಕೆಯನ್ನು ಸಂತೋಷದಿಂದ ಕಳುಹಿಸಿ ಕೋಡಿಯೆಂದು ಜ್ಯೋತಿಷಿಗಳು ಸಹ ಹೇಳಿದ್ರು. ಕೊನೆಗೆ ಮಗಳು ಸಂತೋಷವೇ ನಮ್ಮ ಸಂತೋಷವೆಂದು ತಿಳಿದ ಮನೆಯವರು ಮಗಳನ್ನು ಜೈನಾ ಭಾಗವತಿ ದೀಕ್ಷೆ ಪಡೆಯಲು ಕಳಿಸುತ್ತಿದ್ದಾರೆ.

ಛತ್ತಿಸ್ ಘಡದಲ್ಲಿ ಸನ್ಸಾಸ ದೀಕ್ಷೆ ಪಡೆಯುವ ಗಿರಿಷ್ಮಾ
ಛತ್ತಿಸ್ ಘಡದಲ್ಲಿರುವ ಆಚಾರ್ಯ ಶ್ರೀವಿಜಯರಾಜ್ಮುಮ್ಯಾರಸ ಗುರುಗಳ ಸಮ್ಮುಖದಲ್ಲಿ ಇದೇ ತಿಂಗಳ ಎಪ್ರಿಲ್ 26 ರಂದು ಸನ್ಸಾಸ ದೀಕ್ಷೆಯನ್ನು ಪಡೆಯಲ್ಲಿದ್ದಾರೆ. ಅಲ್ಲಿಂದ ಅವರ ಜೀವನ ಪದ್ದತಿ ಸಂಪೂರ್ಣವಾಗಿ ಬದಲಾಗುತ್ತದೆ. ಮೊಬೈಲ್ ಬಳಸುವಂತ್ತಿಲ್ಲ. ಎಲ್ಲಿಗೆ ಹೋದ್ರು ಕಾಲ್ನಡಿಗೆಯಲ್ಲಿಯೇ ಹೋಗ ಬೇಕು. ಸದಾ ಬಿಳಿ ವಸ್ತ್ರವನ್ನು ಧರಿಸ ಬೇಕು. ಸೂರ್ಯಾಸ್ತದ ನಂತರ ಆಹಾರ ಸೇವನೆ ಮಾಡುವಂತ್ತಿಲ್ಲ, ಭೀಕ್ಷಾಟನೆ ಮೂಲಕ ಆಹಾರವನ್ನು ಪಡೆಯ ಬೇಕು. ಇಂತಹ ಕಠಿಣ ಮಾರ್ಗವನ್ನು ಗಿರೀಷ್ಮಾ ಆಯ್ಕೆ ಮಾಡಿಕೊಂಡಿದ್ದಾರೆ. ಸನ್ಸಾಸಿ ದೀಕ್ಷೆ ಪಡೆದ ನಂತರ ಜೀವ ಸೇವೆ ಮಾಡುವುದ್ದಾಗಿ ಹೇಳುವ ಗಿರಿಷ್ಮಾ ಕಡಿಮೆ ನೀರು ಬಳಸೋದು. ಪ್ರಾಣಿ ಪಕ್ಷಿಗಳಿಗೆ ಹಿಂಸೆ ನೀಡದಿರುವುದು . ಬಟ್ಟೆ ಒಗೆಯದೇ ಇರೋದು ಹೀಗೆ ಸನ್ಸಾಸ ಜೀವನ ನಡೆವುದ್ದಾಗಿ ಹೇಳುತ್ತಾರೆ.
Conclusion:
Last Updated : Apr 14, 2019, 6:25 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.