ETV Bharat / state

Maharaja Trophy: ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ ಗೆದ್ದು ಬೀಗಿದ ಮಂಗಳೂರು ಡ್ರ್ಯಾಗನ್ಸ್: ಬೆಂಗಳೂರಿಗೆ ಸತತ ಆರನೇ ಬಾರಿ ಸೋಲು

author img

By ETV Bharat Karnataka Team

Published : Aug 22, 2023, 11:47 AM IST

Mangalore Dragons win: ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ ಮಂಗಳೂರು ಡ್ರ್ಯಾಗನ್ಸ್ ಗೆಲುವಿನ ನಗೆ ಬೀರಿತು. ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ ತಂಡವು ಸತತ ಆರನೇ ಸೋಲು ಅನುಭವಿಸಿದೆ.

Mangalore Dragons win
ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ ಗೆದ್ದು ಬೀಗಿದ ಮಂಗಳೂರು ಡ್ರ್ಯಾಗನ್ಸ್

ಬೆಂಗಳೂರು: ಪರಸ್ ಆರ್ಯ (5/22) ಅದ್ಭುತ ಬೌಲಿಂಗ್ ನೆರವಿನಿಂದ ಮಂಗಳೂರು ಡ್ರ್ಯಾಗನ್ಸ್ ತಂಡ ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ 31 ರನ್‌ಗಳ ಅಂತರದಲ್ಲಿ ಗೆದ್ದು ಬೀಗಿದೆ. ಬೆಂಗಳೂರು ಬ್ಲಾಸ್ಟರ್ಸ್ ಸತತ ಆರು ಪಂದ್ಯದಲ್ಲಿ ಸೋಲು ಅನುಭವಿಸಿದಂತಾಗಿದೆ. ಪಂದ್ಯಾವಳಿಯಲ್ಲಿ ಮೊದಲ ಐದು ವಿಕೆಟ್ ಕಬಳಿಸಿ ಪರಸ್ ಆರ್ಯ ಮಂಗಳೂರು ಡ್ರಾಗನ್ಸ್ ತಂಡವನ್ನು ಆರಾಮದಾಯಕ ಗೆಲುವಿನತ್ತ ಮುನ್ನಡೆಸಿದರು.

ಬೆಂಗಳೂರು ಬ್ಲಾಸ್ಟರ್ಸ್‌ನ ನಾಯಕ ಮಯಾಂಕ್ ಅಗರ್‌ವಾಲ್ ಟಾಸ್ ಗೆದ್ದು ಮಂಗಳೂರು ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಬ್ಯಾಟಿಂಗ್ ಆರಂಭಿಸಿದ ಮಂಗಳೂರು ಪವರ್‌ಪ್ಲೇನಲ್ಲಿ 46 ರನ್ ಗಳಿಸುವಲ್ಲಿ ಯಶಸ್ವಿಯಾಯಿತು. ಕೆವಿ ಸಿದ್ಧಾರ್ಥ್ (23) ರೋಹನ್ ಪಾಟೀಲ್ (28) ಉತ್ತಮ ಕೊಡುಗೆ ನೀಡಿದರು. ರೋಹನ್ ಪಾಟೀಲ್ 10ನೇ ಓವರ್‌ನಲ್ಲಿ ಚೈನಾಮನ್ ಸರ್ಫರಾಜ್ ಅಶ್ರಫ್‌ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ದರು.

ನಂತರ ಬಂದ ಬಿ.ಆರ್. ಶರತ್ (21) ಮತ್ತು ಗೌರವ್ ಧಿಮಾನ್ (11) ರನ್ ಗಳಿಸಿ ಕ್ರಮವಾಗಿ 11 ಮತ್ತು 12 ನೇ ಓವರ್‌ಗಳಲ್ಲಿ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದಾಗ ಮಂಗಳೂರು ಡ್ರಾಗನ್ಸ್ 4 ವಿಕೆಟ್ ನಷ್ಟಕ್ಕೆ 89 ರನ್ ಗಳಿಸಿತ್ತು. ಮಧ್ಯಮ ಕ್ರಮಾಂಕದಲ್ಲಿ ಅನೀಶ್ವರ್ ಗೌತಮ್ (32) ಮತ್ತು ಅನಿರುದ್ಧ ಜೋಶಿ (39) ರನ್‌ಗಳ ಜೊತೆಯಾಟದ ನೆರವಿನಿಂದ ಮಂಗಳೂರು ಡ್ರ್ಯಾಗನ್‌ಗಳು 7 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿದರು. ಬೆಂಗಳೂರು ಬ್ಲಾಸ್ಟರ್ಸ್ ಪರ ಸರ್ಫರಾಜ್ ಅಶ್ರಫ್ (2/21), ಎಲ್.ಆರ್. ಕುಮಾರ್ (2/27) ಮತ್ತು ಟಿ. ಪ್ರದೀಪ್ (2/34) ತಲಾ ಎರಡು ವಿಕೆಟ್ ಪಡೆದು ಮಿಂಚಿದರು.

ಎಡಗೈ ಸ್ಪಿನ್ನರ್ ಪರಸ್ ಆರ್ಯ ಅಬ್ಬರಕ್ಕೆ ಬೆಂಗಳೂರು ತತ್ತರ: ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಬೆಂಗಳೂರು ಬ್ಲಾಸ್ಟರ್ಸ್ ಟೂರ್ನಿಯಲ್ಲಿ ಮತ್ತೊಂದು ಕಳಪೆ ಆರಂಭ ಪಡೆಯಿತು. ಮಂಗಳೂರು ಸ್ಪಿನ್ನರ್ ಆನಂದ್ ದೊಡ್ಡಮನಿ ಎರಡನೇ ಓವರ್‌ನಲ್ಲಿ ಸತತ ಎಸೆತಗಳಲ್ಲಿ ಡಿ. ನಿಶ್ಚಲ್ (9) ಮತ್ತು ಜೆಸ್ವಂತ್ ಆಚಾರ್ಯ (0) ವಿಕೆಟ್‌ಗಳನ್ನು ಪಡೆದರು. ನಂತರ ಬಂದ ಪವನ್ ದೇಶಪಾಂಡೆ (4), ಸೂರಜ್ ಅಹುಜಾ (5) ರನ್‌ಗಳಿಗಷ್ಟೇ ಸೀಮಿತವಾದರು. ಪವರ್ ಪ್ಲೇ ಅಂತ್ಯವಾಗುತ್ತಿದ್ದಂತೆ ಮಯಾಂಕ್ ಅಗರ್ವಾಲ್ (23) ರನ್ ಗಳಿಸಿದ್ದಾಗ ಪರಸ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು.

ಎಡಗೈ ಸ್ಪಿನ್ನರ್ ಪರಸ್ ಆರ್ಯ ಬೆಂಗಳೂರು ಬ್ಯಾಟ್ಸ್‌ಮನ್‌ಗಳನ್ನ ಇನ್ನಿಲ್ಲದಂತೆ ಕಾಡಿದರು. ನಾಲ್ಕು ಎಸೆತಗಳ ಅಂತರದಲ್ಲಿ ಆಶಿಶ್ ಮಹೇಶ್ (11), ರಿಷಿ ಬೋಪಣ್ಣ (0) ಮತ್ತು ಎಲ್‌.ಆರ್. ಕುಮಾರ್ (0) ವಿಕೆಟ್‌ಗಳನ್ನು ಪಡೆದು ಬೆಂಗಳೂರಿಗೆ ಬಿಗ್ ಶಾಕ್ ನೀಡಿದರು. ಆರನೇ ಕ್ರಮಾಂಕದಲ್ಲಿ ಬಂದ ಶುಭಾಂಗ್ ಹೆಗ್ಡೆ 41 ಎಸೆತಗಳಲ್ಲಿ 54* ರನ್ ಗಳಿಸಿ ಅಜೇಯವಾಗುಳಿದರು. ಸರ್ಫರಾಜ್ ಅಶ್ರಫ್ (23) ರನ್‌ ಗಳಿಸಿ ವಿಕೆಟ್ ಒಪ್ಪಿಸಿದರು. ಶುಭಾಂಗ್ ಹೆಗ್ಡೆಯ ಅಜೇಯ ಅರ್ಧಶತಕದ ಹೊರತಾಗಿಯೂ ಮಂಗಳೂರು ಡ್ರಾಗನ್ಸ್ ತಂಡ 31 ರನ್‌ಗಳಿಂದ ಬೆಂಗಳೂರು ಬ್ಲಾಸ್ಟರ್ಸ್ ಅನ್ನು ಸೋಲಿಸಿತು.

ಸಂಕ್ಷಿಪ್ತ ಸ್ಕೋರ್: ಮಂಗಳೂರು ಡ್ರಾಗನ್ಸ್ - 171-7 (20) ( ಅನಿರುದ್ಧ್ ಜೋಶಿ - 39 (26), ಅನೀಶ್ವರ್ ಗೌತಮ್ - 32 (24), ಸರ್ಫರಾಜ್ ಅಶ್ರಫ್ 2/21, ಎಲ್ ಆರ್ ಕುಮಾರ್ 2/27)

ಬೆಂಗಳೂರು ಬ್ಲಾಸ್ಟರ್ಸ್ - 140-9 (20) (ಶುಭಾಂಗ್ ಹೆಗ್ಡೆ - 54* (41), ಮಯಾಂಕ್ ಅಗರ್ವಾಲ್ - 23 (13), ಸರ್ಫರಾಜ್ ಅಶ್ರಫ್ - 23 (29), ಪರಸ್ ಆರ್ಯ - 5-22, ಆನಂದ್ ದೊಡ್ಡಮನಿ - 2-20)

ಪಂದ್ಯ ಶ್ರೇಷ್ಠ: ಪರಸ್ ಆರ್ಯ, ಫಲಿತಾಂಶ: ಮಂಗಳೂರು ಡ್ರ್ಯಾಗನ್ಸ್ ತಂಡಕ್ಕೆ 31 ರನ್‌ಗಳ ಗೆಲುವು.

ಇದನ್ನೂ ಓದಿ: ಶಿವಮೊಗ್ಗ ಲಯನ್ಸ್ ವಿರುದ್ಧ ಗುಲ್ಬರ್ಗ ಮಿಸ್ಟಿಕ್ಸ್ ಜಯಭೇರಿ; ಶ್ರೇಯಸ್ ಬಳಗಕ್ಕೆ ಹ್ಯಾಟ್ರಿಕ್ ಸೋಲು!

ಬೆಂಗಳೂರು: ಪರಸ್ ಆರ್ಯ (5/22) ಅದ್ಭುತ ಬೌಲಿಂಗ್ ನೆರವಿನಿಂದ ಮಂಗಳೂರು ಡ್ರ್ಯಾಗನ್ಸ್ ತಂಡ ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ 31 ರನ್‌ಗಳ ಅಂತರದಲ್ಲಿ ಗೆದ್ದು ಬೀಗಿದೆ. ಬೆಂಗಳೂರು ಬ್ಲಾಸ್ಟರ್ಸ್ ಸತತ ಆರು ಪಂದ್ಯದಲ್ಲಿ ಸೋಲು ಅನುಭವಿಸಿದಂತಾಗಿದೆ. ಪಂದ್ಯಾವಳಿಯಲ್ಲಿ ಮೊದಲ ಐದು ವಿಕೆಟ್ ಕಬಳಿಸಿ ಪರಸ್ ಆರ್ಯ ಮಂಗಳೂರು ಡ್ರಾಗನ್ಸ್ ತಂಡವನ್ನು ಆರಾಮದಾಯಕ ಗೆಲುವಿನತ್ತ ಮುನ್ನಡೆಸಿದರು.

ಬೆಂಗಳೂರು ಬ್ಲಾಸ್ಟರ್ಸ್‌ನ ನಾಯಕ ಮಯಾಂಕ್ ಅಗರ್‌ವಾಲ್ ಟಾಸ್ ಗೆದ್ದು ಮಂಗಳೂರು ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಬ್ಯಾಟಿಂಗ್ ಆರಂಭಿಸಿದ ಮಂಗಳೂರು ಪವರ್‌ಪ್ಲೇನಲ್ಲಿ 46 ರನ್ ಗಳಿಸುವಲ್ಲಿ ಯಶಸ್ವಿಯಾಯಿತು. ಕೆವಿ ಸಿದ್ಧಾರ್ಥ್ (23) ರೋಹನ್ ಪಾಟೀಲ್ (28) ಉತ್ತಮ ಕೊಡುಗೆ ನೀಡಿದರು. ರೋಹನ್ ಪಾಟೀಲ್ 10ನೇ ಓವರ್‌ನಲ್ಲಿ ಚೈನಾಮನ್ ಸರ್ಫರಾಜ್ ಅಶ್ರಫ್‌ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ದರು.

ನಂತರ ಬಂದ ಬಿ.ಆರ್. ಶರತ್ (21) ಮತ್ತು ಗೌರವ್ ಧಿಮಾನ್ (11) ರನ್ ಗಳಿಸಿ ಕ್ರಮವಾಗಿ 11 ಮತ್ತು 12 ನೇ ಓವರ್‌ಗಳಲ್ಲಿ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದಾಗ ಮಂಗಳೂರು ಡ್ರಾಗನ್ಸ್ 4 ವಿಕೆಟ್ ನಷ್ಟಕ್ಕೆ 89 ರನ್ ಗಳಿಸಿತ್ತು. ಮಧ್ಯಮ ಕ್ರಮಾಂಕದಲ್ಲಿ ಅನೀಶ್ವರ್ ಗೌತಮ್ (32) ಮತ್ತು ಅನಿರುದ್ಧ ಜೋಶಿ (39) ರನ್‌ಗಳ ಜೊತೆಯಾಟದ ನೆರವಿನಿಂದ ಮಂಗಳೂರು ಡ್ರ್ಯಾಗನ್‌ಗಳು 7 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿದರು. ಬೆಂಗಳೂರು ಬ್ಲಾಸ್ಟರ್ಸ್ ಪರ ಸರ್ಫರಾಜ್ ಅಶ್ರಫ್ (2/21), ಎಲ್.ಆರ್. ಕುಮಾರ್ (2/27) ಮತ್ತು ಟಿ. ಪ್ರದೀಪ್ (2/34) ತಲಾ ಎರಡು ವಿಕೆಟ್ ಪಡೆದು ಮಿಂಚಿದರು.

ಎಡಗೈ ಸ್ಪಿನ್ನರ್ ಪರಸ್ ಆರ್ಯ ಅಬ್ಬರಕ್ಕೆ ಬೆಂಗಳೂರು ತತ್ತರ: ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಬೆಂಗಳೂರು ಬ್ಲಾಸ್ಟರ್ಸ್ ಟೂರ್ನಿಯಲ್ಲಿ ಮತ್ತೊಂದು ಕಳಪೆ ಆರಂಭ ಪಡೆಯಿತು. ಮಂಗಳೂರು ಸ್ಪಿನ್ನರ್ ಆನಂದ್ ದೊಡ್ಡಮನಿ ಎರಡನೇ ಓವರ್‌ನಲ್ಲಿ ಸತತ ಎಸೆತಗಳಲ್ಲಿ ಡಿ. ನಿಶ್ಚಲ್ (9) ಮತ್ತು ಜೆಸ್ವಂತ್ ಆಚಾರ್ಯ (0) ವಿಕೆಟ್‌ಗಳನ್ನು ಪಡೆದರು. ನಂತರ ಬಂದ ಪವನ್ ದೇಶಪಾಂಡೆ (4), ಸೂರಜ್ ಅಹುಜಾ (5) ರನ್‌ಗಳಿಗಷ್ಟೇ ಸೀಮಿತವಾದರು. ಪವರ್ ಪ್ಲೇ ಅಂತ್ಯವಾಗುತ್ತಿದ್ದಂತೆ ಮಯಾಂಕ್ ಅಗರ್ವಾಲ್ (23) ರನ್ ಗಳಿಸಿದ್ದಾಗ ಪರಸ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು.

ಎಡಗೈ ಸ್ಪಿನ್ನರ್ ಪರಸ್ ಆರ್ಯ ಬೆಂಗಳೂರು ಬ್ಯಾಟ್ಸ್‌ಮನ್‌ಗಳನ್ನ ಇನ್ನಿಲ್ಲದಂತೆ ಕಾಡಿದರು. ನಾಲ್ಕು ಎಸೆತಗಳ ಅಂತರದಲ್ಲಿ ಆಶಿಶ್ ಮಹೇಶ್ (11), ರಿಷಿ ಬೋಪಣ್ಣ (0) ಮತ್ತು ಎಲ್‌.ಆರ್. ಕುಮಾರ್ (0) ವಿಕೆಟ್‌ಗಳನ್ನು ಪಡೆದು ಬೆಂಗಳೂರಿಗೆ ಬಿಗ್ ಶಾಕ್ ನೀಡಿದರು. ಆರನೇ ಕ್ರಮಾಂಕದಲ್ಲಿ ಬಂದ ಶುಭಾಂಗ್ ಹೆಗ್ಡೆ 41 ಎಸೆತಗಳಲ್ಲಿ 54* ರನ್ ಗಳಿಸಿ ಅಜೇಯವಾಗುಳಿದರು. ಸರ್ಫರಾಜ್ ಅಶ್ರಫ್ (23) ರನ್‌ ಗಳಿಸಿ ವಿಕೆಟ್ ಒಪ್ಪಿಸಿದರು. ಶುಭಾಂಗ್ ಹೆಗ್ಡೆಯ ಅಜೇಯ ಅರ್ಧಶತಕದ ಹೊರತಾಗಿಯೂ ಮಂಗಳೂರು ಡ್ರಾಗನ್ಸ್ ತಂಡ 31 ರನ್‌ಗಳಿಂದ ಬೆಂಗಳೂರು ಬ್ಲಾಸ್ಟರ್ಸ್ ಅನ್ನು ಸೋಲಿಸಿತು.

ಸಂಕ್ಷಿಪ್ತ ಸ್ಕೋರ್: ಮಂಗಳೂರು ಡ್ರಾಗನ್ಸ್ - 171-7 (20) ( ಅನಿರುದ್ಧ್ ಜೋಶಿ - 39 (26), ಅನೀಶ್ವರ್ ಗೌತಮ್ - 32 (24), ಸರ್ಫರಾಜ್ ಅಶ್ರಫ್ 2/21, ಎಲ್ ಆರ್ ಕುಮಾರ್ 2/27)

ಬೆಂಗಳೂರು ಬ್ಲಾಸ್ಟರ್ಸ್ - 140-9 (20) (ಶುಭಾಂಗ್ ಹೆಗ್ಡೆ - 54* (41), ಮಯಾಂಕ್ ಅಗರ್ವಾಲ್ - 23 (13), ಸರ್ಫರಾಜ್ ಅಶ್ರಫ್ - 23 (29), ಪರಸ್ ಆರ್ಯ - 5-22, ಆನಂದ್ ದೊಡ್ಡಮನಿ - 2-20)

ಪಂದ್ಯ ಶ್ರೇಷ್ಠ: ಪರಸ್ ಆರ್ಯ, ಫಲಿತಾಂಶ: ಮಂಗಳೂರು ಡ್ರ್ಯಾಗನ್ಸ್ ತಂಡಕ್ಕೆ 31 ರನ್‌ಗಳ ಗೆಲುವು.

ಇದನ್ನೂ ಓದಿ: ಶಿವಮೊಗ್ಗ ಲಯನ್ಸ್ ವಿರುದ್ಧ ಗುಲ್ಬರ್ಗ ಮಿಸ್ಟಿಕ್ಸ್ ಜಯಭೇರಿ; ಶ್ರೇಯಸ್ ಬಳಗಕ್ಕೆ ಹ್ಯಾಟ್ರಿಕ್ ಸೋಲು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.