ETV Bharat / state

ಪ್ರೇಮ ಪ್ರಕರಣಕ್ಕೆ ಜೈಲು ಪಾಲಾದ, ಸಹಾಯಕ್ಕೆ ಬರಲಿಲ್ಲ ಎಂದು ಅಣ್ಣನ ಮಗನ ಕೊಲೆಗೈದ ಪಾಪಿ!

author img

By

Published : Oct 31, 2020, 1:29 AM IST

Updated : Oct 31, 2020, 5:45 AM IST

ಪ್ರೇಮ ಪ್ರಕರಣದಲ್ಲಿ ಅಣ್ಣ ಸಹಾಯ ಮಾಡಲಿಲ್ಲ ಎಂಬ ಕಾರಣದಿಂದಾಗಿ ಆತನ ಮಗನ ಕೊಲೆ ಮಾಡಿರುವ ಪಾಪಿ ತಮ್ಮ ಕೊನೆಗೂ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾನೆ.

Man murder his brother son
Man murder his brother son

ನೆಲಮಂಗಲ: ಪ್ರೇಮ ಪ್ರಕರಣದಲ್ಲಿ ತಾನು ಜೈಲಿಗೆ ಹೋಗುವುದನ್ನ ಅಣ್ಣ ತಪ್ಪಿಸಬಹುದಿತ್ತು. ಆದರೆ ನನಗೆ ಆತ ಸಹಾಯ ಮಾಡಲಿಲ್ಲ ಎಂಬ ದ್ವೇಷದಲ್ಲಿ ಆತನ ಮಗನನ್ನೇ ಕೊಲೆ ಮಾಡಿರುವ ಘಟನೆ ನಡೆದಿದೆ.

Man murder his brother son
ಕೊಲೆಯಾದ ಅಣ್ಣನ ಮಗ ರಿಯಾನ್​

ಅಕ್ಟೋಬರ್​ 22ರಂದು ಈ ಘಟನೆ ದಾನೋಜಿಪಾಳ್ಯದಲ್ಲಿ ನಡೆದಿದ್ದು, ಇಡೀ ನೆಲಮಂಗಲವನ್ನೇ ಬೆಚ್ಚಿ ಬಿಳಿಸಿತ್ತು. ದಾನೋಜಿಪಾಳ್ಯದಲ್ಲಿ ಕಳೆದ 20 ವರ್ಷಗಳಿಂದ ಚಮನ್ ಹಾಗೂ ಆಯಿಷಾ ದಂಪತಿ ವಾಸವಾಗಿದ್ದರು. ಗಾರೆ ಕೆಲಸ ಮಾಡ್ತಿದ್ದ ಇವರಿಗೆ ಎರಡು ಪುಠಾಣಿ ಮಕ್ಕಳಿದ್ದರು.

Man murder his brother son
ನೀರಿನ ಟ್ಯಾಂಕ್​ನಲ್ಲಿ ಬಾಲಕನ ಮೃತದೇಹ ಎಸೆದ ದಾದಾಪೀರ್​

ಅಕ್ಟೋಬರ್​ 22 ರಂದು ಮನೆ ಮುಂದೆ ಆಟವಾಡುತ್ತಿದ್ದ ಗಂಡು ಮಗ ರಿಯಾನ್​ ನಾಪತ್ತೆಯಾಗಿದ್ದನು. ಈ ವೇಳೆ ಪೋಷಕರು ಹುಡುಕಾಟ ನಡೆಸಿದ್ದರೂ, ಅತನ ಸುಳಿವು ಸಿಕ್ಕಿರಲಿಲ್ಲ. ಆದರೆ ಪಕ್ಕದ ಮನೆಯ ನಲ್ಲಿಯಲ್ಲಿ ರಕ್ತ ಮಿಶ್ರಿತ ನೀರು ಬರುತ್ತಿದ್ದಂತೆ ಮನೆಯ ಮೇಲಿನ ಸಿಂಟೆಕ್​ ಟ್ಯಾಂಕ್​ನಲ್ಲಿ ನೋಡಿದಾಗ ಮೃತ ರಿಯಾನ್​ ಶವ ಪತ್ತೆಯಾಗಿತ್ತು.

ಏನಿದು ಘಟನೆ!?

ಊರಿನಲ್ಲಿ ನಡೆದ ಪ್ರೇಮ ಪ್ರಕರಣಕ್ಕೆ ತನಗೆ ಅಣ್ಣ ಬೆಂಬಲ ನೀಡಲಿಲ್ಲ ಎಂದು ತಮ್ಮ ಈ ಕೃತ್ಯವೆಸಗಿದ್ದನು. ಚಮನ್​ ಜತೆ ದಾದಾಪೀರ್​ ಗಾರೆ ಕೆಲಸ ಮಾಡ್ತಿದ್ದನು. ಈ ವೇಳೆ ಆತ ಬೇರೆ ಜಾತಿ ಹುಡುಗಿ ಜತೆ ಪ್ರೇಮದ ಬಲೆಯಲ್ಲಿ ಬಿದ್ದಿದ್ದನು.

Man murder his brother son
ಕೊಲೆ ಆರೋಪಿ ದಾದಾಪೀರ್​

ಹರಪನಹಳ್ಳಿಗೆ ಹೋಗಿದ್ದ ವೇಳೆ ಹುಡುಗಿ ಮನೆಯವರಿಗೂ ದಾದಾಪೀರ್ ಕುಟುಂಬಕ್ಕೂ ಜಗಳವಾಗಿತ್ತು. ಈ ವೇಳೆ ಹುಡುಗಿ ಮನೆಯವರು ಈತನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು ಮಾಡಿದ್ದರು .ಹೀಗಾಗಿ ಆತ ಜೈಲುಪಾಲಾಗಿದ್ದನು. ಈ ವೇಳೆ ಚಮನ್​ ಆತನ ಸಹಾಯಕ್ಕೆ ಬಂದಿರಲಿಲ್ಲ.

ಅಣ್ಣನ ಮಗನ ಕೊಲೆಗೈದ ಪಾಪಿ

15 ದಿನಗಳ ನಂತರ ಜೈಲಿನಿಂದ ಹೊರಬಂದಿರುವ ದಾದಾಪೀರ್​, ರಿಯಾನ್​ನನ್ನ ಕೊಲೆ ಮಾಡಿ, ಮನೆಯ ಮೇಲಿಂದ ನೀರಿನ ಟ್ಯಾಂಕ್​ನೊಳಗೆ ಎಸೆದು ಪರಾರಿಯಾಗಿದ್ದನು.

ಪ್ರಕರಣ ಬೇಧಿಸಿದ ಪೊಲೀಸರು

ನೆಲಮಂಗಳ ನಗರ ಪೊಲೀಸ್ ಠಾಣೆಯಲ್ಲಿ ರಿಯಾನ್​ ಕೊಲೆ ಪ್ರಕರಣ ದಾಖಲಾಗಿತ್ತು. ಎಸ್ಪಿ ರವಿ. ಡಿ ಚೆನ್ನಣ್ಣನವರ ಮಾರ್ಗದರ್ಶನದಲ್ಲಿ ಇನ್ಸ್​ಪೆಕ್ಟರ್​ ಶಿವಣ್ಣ, ಪಿಎಸ್ಐ ಸುರೇಶ್​, ಪೇದೆಗಳಾದ ನರೇಶ್​, ಬಸವರಾಜ್​ ಪ್ರತ್ಯೇಕ ತಂಡ ರಚನೆ ಮಾಡಿ ಆರೋಪಿಗಾಗಿ ಬಲೆ ಬೀಸಿದ್ದರು.

ಕೊಲೆ ಮಾಡಿದ ದಿನ ಆರೋಪಿ ದಾದಾಪೀರ್​ ಕೇವಲ 150 ರೂಪಾಯಿಗೆ ತನ್ನ ಮೊಬೈಲ್​ ಮಾರಿಕೊಂಡು, ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದನು. ಆತ ನಗರದ ಕೆ.ಆರ್. ಮಾರ್ಕೆಟ್, ಮೆಜೆಸ್ಟಿಕ್, ಯಶವಂತಪುರ ಸೇರಿದಂತೆ ವಿವಿಧೆಡೆ ಅಲೆದಾಡಿದ್ದನು. ಈ ಮಾಹಿತಿ ಮೇರೆಗೆ ಇದೀಗ ಪೊಲೀಸರು ಆತನ ಬಂಧನ ಮಾಡಿದ್ದಾರೆ.

ನೆಲಮಂಗಲ: ಪ್ರೇಮ ಪ್ರಕರಣದಲ್ಲಿ ತಾನು ಜೈಲಿಗೆ ಹೋಗುವುದನ್ನ ಅಣ್ಣ ತಪ್ಪಿಸಬಹುದಿತ್ತು. ಆದರೆ ನನಗೆ ಆತ ಸಹಾಯ ಮಾಡಲಿಲ್ಲ ಎಂಬ ದ್ವೇಷದಲ್ಲಿ ಆತನ ಮಗನನ್ನೇ ಕೊಲೆ ಮಾಡಿರುವ ಘಟನೆ ನಡೆದಿದೆ.

Man murder his brother son
ಕೊಲೆಯಾದ ಅಣ್ಣನ ಮಗ ರಿಯಾನ್​

ಅಕ್ಟೋಬರ್​ 22ರಂದು ಈ ಘಟನೆ ದಾನೋಜಿಪಾಳ್ಯದಲ್ಲಿ ನಡೆದಿದ್ದು, ಇಡೀ ನೆಲಮಂಗಲವನ್ನೇ ಬೆಚ್ಚಿ ಬಿಳಿಸಿತ್ತು. ದಾನೋಜಿಪಾಳ್ಯದಲ್ಲಿ ಕಳೆದ 20 ವರ್ಷಗಳಿಂದ ಚಮನ್ ಹಾಗೂ ಆಯಿಷಾ ದಂಪತಿ ವಾಸವಾಗಿದ್ದರು. ಗಾರೆ ಕೆಲಸ ಮಾಡ್ತಿದ್ದ ಇವರಿಗೆ ಎರಡು ಪುಠಾಣಿ ಮಕ್ಕಳಿದ್ದರು.

Man murder his brother son
ನೀರಿನ ಟ್ಯಾಂಕ್​ನಲ್ಲಿ ಬಾಲಕನ ಮೃತದೇಹ ಎಸೆದ ದಾದಾಪೀರ್​

ಅಕ್ಟೋಬರ್​ 22 ರಂದು ಮನೆ ಮುಂದೆ ಆಟವಾಡುತ್ತಿದ್ದ ಗಂಡು ಮಗ ರಿಯಾನ್​ ನಾಪತ್ತೆಯಾಗಿದ್ದನು. ಈ ವೇಳೆ ಪೋಷಕರು ಹುಡುಕಾಟ ನಡೆಸಿದ್ದರೂ, ಅತನ ಸುಳಿವು ಸಿಕ್ಕಿರಲಿಲ್ಲ. ಆದರೆ ಪಕ್ಕದ ಮನೆಯ ನಲ್ಲಿಯಲ್ಲಿ ರಕ್ತ ಮಿಶ್ರಿತ ನೀರು ಬರುತ್ತಿದ್ದಂತೆ ಮನೆಯ ಮೇಲಿನ ಸಿಂಟೆಕ್​ ಟ್ಯಾಂಕ್​ನಲ್ಲಿ ನೋಡಿದಾಗ ಮೃತ ರಿಯಾನ್​ ಶವ ಪತ್ತೆಯಾಗಿತ್ತು.

ಏನಿದು ಘಟನೆ!?

ಊರಿನಲ್ಲಿ ನಡೆದ ಪ್ರೇಮ ಪ್ರಕರಣಕ್ಕೆ ತನಗೆ ಅಣ್ಣ ಬೆಂಬಲ ನೀಡಲಿಲ್ಲ ಎಂದು ತಮ್ಮ ಈ ಕೃತ್ಯವೆಸಗಿದ್ದನು. ಚಮನ್​ ಜತೆ ದಾದಾಪೀರ್​ ಗಾರೆ ಕೆಲಸ ಮಾಡ್ತಿದ್ದನು. ಈ ವೇಳೆ ಆತ ಬೇರೆ ಜಾತಿ ಹುಡುಗಿ ಜತೆ ಪ್ರೇಮದ ಬಲೆಯಲ್ಲಿ ಬಿದ್ದಿದ್ದನು.

Man murder his brother son
ಕೊಲೆ ಆರೋಪಿ ದಾದಾಪೀರ್​

ಹರಪನಹಳ್ಳಿಗೆ ಹೋಗಿದ್ದ ವೇಳೆ ಹುಡುಗಿ ಮನೆಯವರಿಗೂ ದಾದಾಪೀರ್ ಕುಟುಂಬಕ್ಕೂ ಜಗಳವಾಗಿತ್ತು. ಈ ವೇಳೆ ಹುಡುಗಿ ಮನೆಯವರು ಈತನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು ಮಾಡಿದ್ದರು .ಹೀಗಾಗಿ ಆತ ಜೈಲುಪಾಲಾಗಿದ್ದನು. ಈ ವೇಳೆ ಚಮನ್​ ಆತನ ಸಹಾಯಕ್ಕೆ ಬಂದಿರಲಿಲ್ಲ.

ಅಣ್ಣನ ಮಗನ ಕೊಲೆಗೈದ ಪಾಪಿ

15 ದಿನಗಳ ನಂತರ ಜೈಲಿನಿಂದ ಹೊರಬಂದಿರುವ ದಾದಾಪೀರ್​, ರಿಯಾನ್​ನನ್ನ ಕೊಲೆ ಮಾಡಿ, ಮನೆಯ ಮೇಲಿಂದ ನೀರಿನ ಟ್ಯಾಂಕ್​ನೊಳಗೆ ಎಸೆದು ಪರಾರಿಯಾಗಿದ್ದನು.

ಪ್ರಕರಣ ಬೇಧಿಸಿದ ಪೊಲೀಸರು

ನೆಲಮಂಗಳ ನಗರ ಪೊಲೀಸ್ ಠಾಣೆಯಲ್ಲಿ ರಿಯಾನ್​ ಕೊಲೆ ಪ್ರಕರಣ ದಾಖಲಾಗಿತ್ತು. ಎಸ್ಪಿ ರವಿ. ಡಿ ಚೆನ್ನಣ್ಣನವರ ಮಾರ್ಗದರ್ಶನದಲ್ಲಿ ಇನ್ಸ್​ಪೆಕ್ಟರ್​ ಶಿವಣ್ಣ, ಪಿಎಸ್ಐ ಸುರೇಶ್​, ಪೇದೆಗಳಾದ ನರೇಶ್​, ಬಸವರಾಜ್​ ಪ್ರತ್ಯೇಕ ತಂಡ ರಚನೆ ಮಾಡಿ ಆರೋಪಿಗಾಗಿ ಬಲೆ ಬೀಸಿದ್ದರು.

ಕೊಲೆ ಮಾಡಿದ ದಿನ ಆರೋಪಿ ದಾದಾಪೀರ್​ ಕೇವಲ 150 ರೂಪಾಯಿಗೆ ತನ್ನ ಮೊಬೈಲ್​ ಮಾರಿಕೊಂಡು, ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದನು. ಆತ ನಗರದ ಕೆ.ಆರ್. ಮಾರ್ಕೆಟ್, ಮೆಜೆಸ್ಟಿಕ್, ಯಶವಂತಪುರ ಸೇರಿದಂತೆ ವಿವಿಧೆಡೆ ಅಲೆದಾಡಿದ್ದನು. ಈ ಮಾಹಿತಿ ಮೇರೆಗೆ ಇದೀಗ ಪೊಲೀಸರು ಆತನ ಬಂಧನ ಮಾಡಿದ್ದಾರೆ.

Last Updated : Oct 31, 2020, 5:45 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.