ದೇವನಹಳ್ಳಿ: ಇಂದು ಭೋಪಾಲ್ಗೆ ಹೊರಟಿದ್ದ ಮಧ್ಯಪ್ರದೇಶ ಶಾಸಕರ ಪೈಕಿ ಐವರು ಶಾಸಕರು ಮತ್ತೆ ವಾಪಸ್ ರಮಾಡ ಹೋಟೆಲ್ಗೆ ಹಿಂದಿರುಗಿದ್ದಾರೆ.
ದೇವನಹಳ್ಳಿ ರೆಸಾರ್ಟ್ಗಳಲ್ಲಿ ತಂಗಿದ್ದ ಮಧ್ಯಪ್ರದೇಶ ಬಂಡಾಯ ಶಾಸಕರ ಇಂದು 10 ಶಾಸಕರು ಮೊದಲ ವಿಶೇಷ ವಿಮಾನದಲ್ಲಿ ಭೂಪಾಲ್ಗೆ ತೆರಳಲು ವ್ಯವಸ್ಥೆ ಮಾಡಲಾಗಿತ್ತು. ನಂತರ 5:00 ಗಂಟೆಗೆ ಎರಡನೇ ವಿಮಾನದಲ್ಲಿ 9 ಜನ ಶಾಸಕರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಪ್ರಯಾಣ ಬೆಳೆಸುತ್ತಾರೆ ಎನ್ನಲಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಎಲ್ಲವೂ ಬದಲಾಗಿದ್ದು, 3 ನೇ ವಿಮಾನದಲ್ಲಿ ತೆರಳಲು ರೆಡಿಯಾಗಿದ್ದ 5 ಜನ ಶಾಸಕರು ಪುನಃ ರಮಾಡ ಹೋಟೆಲ್ ಗೆ ಮರಳಿದ್ದಾರೆ. ಉಳಿದ ಶಾಸಕರು ಏರ್ಪೋರ್ಟ್ನಲ್ಲಿ ಸದ್ಯದ ರಾಜಕೀಯ ಸ್ಥಿತಿಗತಿ ಕುರಿತು ಚರ್ಚಿಸುತ್ತಿದ್ದಾರೆ ಎನ್ನಲಾಗ್ತಿದೆ.
ಭೋಪಾಲ್ನಲ್ಲಿ ಉದ್ವಿಗ್ನ ಪರಿಸ್ಥಿತಿ ಇರುವ ಹಿನ್ನೆಲೆ ಶಾಸಕರು ಅಲ್ಲಿಗೆ ತೆರಳದೇ ಮತ್ತೆ ರಮಾಡ ಹೋಟೆಲ್ಗೆ ವಾಪಸಾಗಲಿದ್ದಾರೆ ಎನ್ನಲಾಗ್ತಿದೆ . ಈ ಹಿನ್ನೆಲೆ ರಮಾಡ ಹೋಟೆಲ್ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.