ETV Bharat / state

ನಿರುಪಯುಕ್ತ ವಾಹನಗಳ ಬಿಡಿ ಭಾಗಗಳಿಂದ ಫುಟ್​ಪಾತ್​ನಲ್ಲಿ ಅರಳಿದ ಕನ್ನಡ ಅಕ್ಷರಮಾಲೆ

author img

By

Published : Nov 1, 2021, 9:20 PM IST

ಯಲಹಂಕ ನಗರದ ದೊಡ್ಡಬಳ್ಳಾಪುರ ರಸ್ತೆಯ ಫುಟ್​ಪಾತ್​ನಲ್ಲಿ ನಿರುಪಯುಕ್ತ ವಾಹನಗಳ ಬಿಡಿಭಾಗಗಳಲ್ಲಿ ತಯಾರಾದ ಕನ್ನಡ ವರ್ಣಮಾಲೆಯ ಅಕ್ಷರಗಳು ಝಗಮಗಿಸುತ್ತಿದ್ದು, ಕಣ್ಮನ ಸೆಳೆಯುತ್ತಿವೆ.

Kannada alphabets twinkling in vehicle waste parts
ಫುಟ್​ಪಾತ್​ನಲ್ಲಿ ಅರಳಿದ ಕನ್ನಡ ಅಕ್ಷರಮಾಲೆ

ಯಲಹಂಕ/ಬೆಂಗಳೂರು: ನಿರುಪಯುಕ್ತ ವಾಹನಗಳ ಬಿಡಿಭಾಗಗಳಲ್ಲಿ ಕನ್ನಡ ಅಕ್ಷರಗಳು ಅರಳಿದ್ದು, ಹಗಲಲ್ಲಿ ಲೋಹದ ಅಕ್ಷರಗಳಾಗಿ ಕಾಣುವ ವರ್ಣಮಾಲೆ ರಾತ್ರಿ ವೇಳೆ ದೀಪಾಲಂಕಾರದಿಂದ ವರ್ಣರಂಜಿತವಾಗಿ ಕಾಣುತ್ತದೆ.

ಫುಟ್​ಪಾತ್​ನಲ್ಲಿ ಅರಳಿದ ಕನ್ನಡ ಅಕ್ಷರಮಾಲೆ

ಯಲಹಂಕ ನಗರದ ದೊಡ್ಡಬಳ್ಳಾಪುರ ರಸ್ತೆಯ ಎನ್​ಇಎಸ್​​ ಸರ್ಕಲ್​​ನ ಫುಟ್​ಪಾತ್​​ನಲ್ಲಿ ಕನ್ನಡ ಅಕ್ಷರಮಾಲೆ ಮತ್ತು ಸಂಖ್ಯೆಗಳು ಜನರ ಆಕರ್ಷಣೆ ಕೇಂದ್ರವಾಗಿದೆ.66ನೇ ಕನ್ನಡ ರಾಜ್ಯೋತ್ಸವವನ್ನ ವಿಭಿನ್ನ ಮತ್ತು ವಿಶಿಷ್ಟವಾಗಿ ಆಚರಿಸಲು ಫುಟ್​ಪಾತ್​ನಲ್ಲಿ ನಿರ್ಮಾಣ ಮಾಡಲಾಗಿರುವ ಲೋಹದ ಕನ್ನಡ ಅಕ್ಷರಮಾಲೆಗಳನ್ನ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಉದ್ಘಾಟನೆ ಮಾಡಿದರು.

ಇಲ್ಲಿ ಬಿಬಿಎಂಪಿ ವತಿಯಿಂದ ವಿಶೇಷ ಪಾರ್ಕ್ ನಿರ್ಮಾಣ ಮಾಡಲಾಗಿದೆ. ಇದಕ್ಕಾಗಿ ಸುಮಾರು 70 ಲಕ್ಷ ಹಣ ಖರ್ಚು ಮಾಡಲಾಗಿದೆ. ವಿಶೇಷವಾಗಿ ನಿರುಪಯುಕ್ತ ವಾಹನಗಳ ಬಿಡಿಭಾಗಗಳನ್ನ ಬಳಸಿಕೊಂಡು ಅಕ್ಷರಗಳನ್ನ ಮಾಡಲಾಗಿದೆ. ಫುಟ್​ಪಾತ್​ನ ಬದಿಯಲ್ಲಿ ಸುಸಜ್ಜಿತವಾಗಿ ಜೋಡಿಸಲಾಗಿರುವ ಅಕ್ಷರಮಾಲೆ ಹಗಲಲ್ಲಿ ಕಲಾತ್ಮಕವಾಗಿ ಕಾಣುವ ಅಕ್ಷರಗಳು ರಾತ್ರಿ ವೇಳೆ ದೀಪಾಲಂಕಾರದಿಂದ ಕಂಗಳಿಸುತ್ತಿವೆ.

ಕನ್ನಡ ಅಕ್ಷರಮಾಲೆ ಕನ್ನಡ ಬರದವರನ್ನು ಮರುಳು ಮಾಡುವಂತಿದೆ, ದೀಪಾಲಂಕಾರಗೊಂಡ ಅಕ್ಷರಗಳು ಕನ್ನಡಿಗರಲ್ಲದವರಲ್ಲೂ ಕನ್ನಡ ಕಲಿಯುವ ಆಸಕ್ತಿ ಕೆರಳಿಸುವಂತಿದೆ ಎಂದು ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಹೇಳಿದ್ರು.

ಯಲಹಂಕ/ಬೆಂಗಳೂರು: ನಿರುಪಯುಕ್ತ ವಾಹನಗಳ ಬಿಡಿಭಾಗಗಳಲ್ಲಿ ಕನ್ನಡ ಅಕ್ಷರಗಳು ಅರಳಿದ್ದು, ಹಗಲಲ್ಲಿ ಲೋಹದ ಅಕ್ಷರಗಳಾಗಿ ಕಾಣುವ ವರ್ಣಮಾಲೆ ರಾತ್ರಿ ವೇಳೆ ದೀಪಾಲಂಕಾರದಿಂದ ವರ್ಣರಂಜಿತವಾಗಿ ಕಾಣುತ್ತದೆ.

ಫುಟ್​ಪಾತ್​ನಲ್ಲಿ ಅರಳಿದ ಕನ್ನಡ ಅಕ್ಷರಮಾಲೆ

ಯಲಹಂಕ ನಗರದ ದೊಡ್ಡಬಳ್ಳಾಪುರ ರಸ್ತೆಯ ಎನ್​ಇಎಸ್​​ ಸರ್ಕಲ್​​ನ ಫುಟ್​ಪಾತ್​​ನಲ್ಲಿ ಕನ್ನಡ ಅಕ್ಷರಮಾಲೆ ಮತ್ತು ಸಂಖ್ಯೆಗಳು ಜನರ ಆಕರ್ಷಣೆ ಕೇಂದ್ರವಾಗಿದೆ.66ನೇ ಕನ್ನಡ ರಾಜ್ಯೋತ್ಸವವನ್ನ ವಿಭಿನ್ನ ಮತ್ತು ವಿಶಿಷ್ಟವಾಗಿ ಆಚರಿಸಲು ಫುಟ್​ಪಾತ್​ನಲ್ಲಿ ನಿರ್ಮಾಣ ಮಾಡಲಾಗಿರುವ ಲೋಹದ ಕನ್ನಡ ಅಕ್ಷರಮಾಲೆಗಳನ್ನ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಉದ್ಘಾಟನೆ ಮಾಡಿದರು.

ಇಲ್ಲಿ ಬಿಬಿಎಂಪಿ ವತಿಯಿಂದ ವಿಶೇಷ ಪಾರ್ಕ್ ನಿರ್ಮಾಣ ಮಾಡಲಾಗಿದೆ. ಇದಕ್ಕಾಗಿ ಸುಮಾರು 70 ಲಕ್ಷ ಹಣ ಖರ್ಚು ಮಾಡಲಾಗಿದೆ. ವಿಶೇಷವಾಗಿ ನಿರುಪಯುಕ್ತ ವಾಹನಗಳ ಬಿಡಿಭಾಗಗಳನ್ನ ಬಳಸಿಕೊಂಡು ಅಕ್ಷರಗಳನ್ನ ಮಾಡಲಾಗಿದೆ. ಫುಟ್​ಪಾತ್​ನ ಬದಿಯಲ್ಲಿ ಸುಸಜ್ಜಿತವಾಗಿ ಜೋಡಿಸಲಾಗಿರುವ ಅಕ್ಷರಮಾಲೆ ಹಗಲಲ್ಲಿ ಕಲಾತ್ಮಕವಾಗಿ ಕಾಣುವ ಅಕ್ಷರಗಳು ರಾತ್ರಿ ವೇಳೆ ದೀಪಾಲಂಕಾರದಿಂದ ಕಂಗಳಿಸುತ್ತಿವೆ.

ಕನ್ನಡ ಅಕ್ಷರಮಾಲೆ ಕನ್ನಡ ಬರದವರನ್ನು ಮರುಳು ಮಾಡುವಂತಿದೆ, ದೀಪಾಲಂಕಾರಗೊಂಡ ಅಕ್ಷರಗಳು ಕನ್ನಡಿಗರಲ್ಲದವರಲ್ಲೂ ಕನ್ನಡ ಕಲಿಯುವ ಆಸಕ್ತಿ ಕೆರಳಿಸುವಂತಿದೆ ಎಂದು ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಹೇಳಿದ್ರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.