ETV Bharat / state

ಅಯೋಧ್ಯಾ ರಾಮ ಮಂದಿರದ ತಳಪಾಯಕ್ಕೆ ದೇವನಹಳ್ಳಿಯ ಸಾದಹಳ್ಳಿಯಿಂದ ಕಲ್ಲು

author img

By

Published : Oct 25, 2021, 9:04 PM IST

Updated : Oct 25, 2021, 10:18 PM IST

ಅಯೋಧ್ಯಾ ರಾಮಮಂದಿರದ ತಳಪಾಯಕ್ಕೆ ದೇವನಹಳ್ಳಿಯ ಸಾದಹಳ್ಳಿಯಿಂದ ಕಲ್ಲುಗಳನ್ನು ರವಾನೆ ಮಾಡಲಾಗುತ್ತಿದೆ.

Devanahalli sadahalli granite for ayodhya ram mandir foundation
ಅಯೋಧ್ಯೆ ರಾಮ ಮಂದಿರದ ತಳಪಾಯಕ್ಕೆ ದೇವನಹಳ್ಳಿ ಸಾದಹಳ್ಳಿ ಕಲ್ಲು

ದೇವನಹಳ್ಳಿ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದ ತಳಪಾಯಕ್ಕೆ ದೇವನಹಳ್ಳಿಯ ಸಾದಹಳ್ಳಿಯಿಂದ ಕಲ್ಲುಗಳನ್ನು ರವಾನೆ ಮಾಡಲಾಗುತ್ತಿದೆ. ಈ ಹಿನ್ನೆಲೆ ಇಂದು ಅಯೋಧ್ಯೆಯತ್ತ ಹೊರಟ ಕಲ್ಲುಗಳನ್ನ ಹೊತ್ತ ಲಾರಿಗಳಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಸಿರು ನಿಶಾನೆ ತೋರಿಸಿದರು.

ಅಯೋಧ್ಯಾ ರಾಮ ಮಂದಿರದ ತಳಪಾಯಕ್ಕೆ ದೇವನಹಳ್ಳಿ ಸಾದಹಳ್ಳಿ ಕಲ್ಲು

ದೇವಾಲಯ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ವಾದ ವಿವಾದಗಳ ಬಳಿಕ, ಅಯೋಧ್ಯೆಯಲ್ಲಿನ ರಾಮ ಮಂದಿರ ನಿರ್ಮಾಣಕ್ಕೆ ಸುಪ್ರೀಂಕೋರ್ಟ್ ಹಸಿರು ನಿಶಾನೆ ಕೊಟ್ಟಿತು. ಆ ನಂತರ ರಾಮ ಮಂದಿರ ನಿರ್ಮಾಣ ಕಾರ್ಯ ನಡೆಯುತ್ತಿದೆ. ರಾಮಮಂದಿರ ಮಂದಿರದ ತಳಪಾಯಕ್ಕೆ ದೇವನಹಳ್ಳಿಯ ಸಾದಹಳ್ಳಿಯ ಸ್ವಾಮಿ ವಿವೇಕಾನಂದ ಮತ್ತು ಹನುಮಾನ್ ಗ್ರಾನೈಟ್​​ನಿಂದ 10 ಸಾವಿರ ಕಲ್ಲುಗಳನ್ನು ರವಾನೆ ಮಾಡಲಾಗುತ್ತಿದೆ.

ಮೊದಲ ಹಂತದಲ್ಲಿ ಕಲ್ಲುಗಳನ್ನ ಹೊತ್ತ 5 ಲಾರಿಗಳು ಇಂದು ಅಯ್ಯೋಧೆಯತ್ತ ಸಾಗಿವೆ. ಕಾರ್ಯಕ್ರಮದಲ್ಲಿ ಪೇಜಾವರ ಶ್ರೀಗಳು, ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಬಿಡಿಎ ಅಧ್ಯಕ್ಷ ಎಸ್ ಆರ್ ವಿಶ್ವನಾಥ್ ಭಾಗವಹಿಸಿದ್ದರು.

ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರದ ತಳಭಾಗ ಉಸುಕು ಮಣ್ಣಿನಿಂದ ಕೂಡಿದು, ಈ ಉಸುಕು ಮಣ್ಣನ್ನು ತೆಗೆದು ನೆಲವನ್ನು ಗಟ್ಟಿಗೊಳಿಸದ ನಂತರ ಸುಭದ್ರವಾದ ದೇವಾಲಯ ನಿರ್ಮಾಣ ಮಾಡಲಾಗುತ್ತದೆ. ತಳಭಾಗವನ್ನ ಗಟ್ಟಿ ಮಾಡುವ ಕಾರಣಕ್ಕೆ ಸಾದಹಳ್ಳಿಯಿಂದ ಕಲ್ಲುಗಳನ್ನು ರವಾನೆ ಮಾಡಲಾಗುತ್ತಿದೆ.

ದೇವನಹಳ್ಳಿ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದ ತಳಪಾಯಕ್ಕೆ ದೇವನಹಳ್ಳಿಯ ಸಾದಹಳ್ಳಿಯಿಂದ ಕಲ್ಲುಗಳನ್ನು ರವಾನೆ ಮಾಡಲಾಗುತ್ತಿದೆ. ಈ ಹಿನ್ನೆಲೆ ಇಂದು ಅಯೋಧ್ಯೆಯತ್ತ ಹೊರಟ ಕಲ್ಲುಗಳನ್ನ ಹೊತ್ತ ಲಾರಿಗಳಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಸಿರು ನಿಶಾನೆ ತೋರಿಸಿದರು.

ಅಯೋಧ್ಯಾ ರಾಮ ಮಂದಿರದ ತಳಪಾಯಕ್ಕೆ ದೇವನಹಳ್ಳಿ ಸಾದಹಳ್ಳಿ ಕಲ್ಲು

ದೇವಾಲಯ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ವಾದ ವಿವಾದಗಳ ಬಳಿಕ, ಅಯೋಧ್ಯೆಯಲ್ಲಿನ ರಾಮ ಮಂದಿರ ನಿರ್ಮಾಣಕ್ಕೆ ಸುಪ್ರೀಂಕೋರ್ಟ್ ಹಸಿರು ನಿಶಾನೆ ಕೊಟ್ಟಿತು. ಆ ನಂತರ ರಾಮ ಮಂದಿರ ನಿರ್ಮಾಣ ಕಾರ್ಯ ನಡೆಯುತ್ತಿದೆ. ರಾಮಮಂದಿರ ಮಂದಿರದ ತಳಪಾಯಕ್ಕೆ ದೇವನಹಳ್ಳಿಯ ಸಾದಹಳ್ಳಿಯ ಸ್ವಾಮಿ ವಿವೇಕಾನಂದ ಮತ್ತು ಹನುಮಾನ್ ಗ್ರಾನೈಟ್​​ನಿಂದ 10 ಸಾವಿರ ಕಲ್ಲುಗಳನ್ನು ರವಾನೆ ಮಾಡಲಾಗುತ್ತಿದೆ.

ಮೊದಲ ಹಂತದಲ್ಲಿ ಕಲ್ಲುಗಳನ್ನ ಹೊತ್ತ 5 ಲಾರಿಗಳು ಇಂದು ಅಯ್ಯೋಧೆಯತ್ತ ಸಾಗಿವೆ. ಕಾರ್ಯಕ್ರಮದಲ್ಲಿ ಪೇಜಾವರ ಶ್ರೀಗಳು, ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಬಿಡಿಎ ಅಧ್ಯಕ್ಷ ಎಸ್ ಆರ್ ವಿಶ್ವನಾಥ್ ಭಾಗವಹಿಸಿದ್ದರು.

ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರದ ತಳಭಾಗ ಉಸುಕು ಮಣ್ಣಿನಿಂದ ಕೂಡಿದು, ಈ ಉಸುಕು ಮಣ್ಣನ್ನು ತೆಗೆದು ನೆಲವನ್ನು ಗಟ್ಟಿಗೊಳಿಸದ ನಂತರ ಸುಭದ್ರವಾದ ದೇವಾಲಯ ನಿರ್ಮಾಣ ಮಾಡಲಾಗುತ್ತದೆ. ತಳಭಾಗವನ್ನ ಗಟ್ಟಿ ಮಾಡುವ ಕಾರಣಕ್ಕೆ ಸಾದಹಳ್ಳಿಯಿಂದ ಕಲ್ಲುಗಳನ್ನು ರವಾನೆ ಮಾಡಲಾಗುತ್ತಿದೆ.

Last Updated : Oct 25, 2021, 10:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.