ETV Bharat / state

ಪಡಿತರ ವಿತರಣಾ ಕೇಂದ್ರದಲ್ಲಿ ಮೋಸ: ಆಹಾರ ಇಲಾಖೆ ಅಧಿಕಾರಿಗಳಿಂದ ದಾಳಿ

author img

By

Published : Oct 21, 2022, 4:58 PM IST

ಪಡಿತರ ವಿತರಣಾ ಕೇಂದ್ರದಲ್ಲಿ ಅಕ್ಕಿ, ರಾಗಿ ಮತ್ತು ಗೋಧಿ ವಿತರಣೆ ಮಾಡುವ ವೇಳೆ ತೂಕದಲ್ಲಿ ಮೋಸ ಮಾಡುತ್ತಿರುವ ಬಗ್ಗೆ ಆಹಾರ ಇಲಾಖೆಗೆ ದೂರು ಬಂದಿತ್ತು.

Ration Distribution Center in Doddaballapur
ಪಡಿತರ ವಿತರಣಾ ಕೇಂದ್ರದಲ್ಲಿ ಮೋಸ

ದೊಡ್ಡಬಳ್ಳಾಪುರ: ನಗರದ ಟಿಎಪಿಎಂಸಿ ಆವರಣದಲ್ಲಿರುವ ಪಡಿತರ ವಿತರಣಾ ಕೇಂದ್ರ ನಂ.75 ರ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ಸೇಲ್ಸ್​​​ಮ್ಯಾನ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.

ಪ್ರತಿ ತಿಂಗಳು ಅಕ್ಕಿ, ರಾಗಿ ಮತ್ತು ಗೋಧಿ ವಿತರಣೆ ಮಾಡುವಾಗ ತೂಕದಲ್ಲಿ ಮೋಸ ಮಾಡುತ್ತಿರುವ ಬಗ್ಗೆ ಇಲಾಖೆಗೆ ಆನ್ ಲೈನ್ ಮೂಲಕ, ಕಳೆದ ತಿಂಗಳ 23 ರಂದು ಸಾರ್ವಜನಿಕರು ದೂರು ನೀಡಿದ್ದರು. ಈ ದೂರಿನ‌ ಆಧಾರದ ಮೇಲೆ ಆಹಾರ ಇಲಾಖೆಯ ಲೀಗಲ್ ಫುಡ್ ಇನ್​ಸ್ಪೆಕ್ಟರ್ ಎಸ್. ಟಿ ವೆಂಕಟೇಶ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

ದಾಳಿಯ ಸಂದರ್ಭದಲ್ಲಿ ಪಡಿತರ ವಿತರಣಾ ಕೇಂದ್ರದ ಆವರಣದಲ್ಲಿ ಸಾರ್ವಜನಿಕರಿಗೆ ವಿತರಿಸಿದ ಅಕ್ಕಿ ಮತ್ತು ರಾಗಿ ಮರು ತೂಕ ಮಾಡಿದಾಗ 1 ರಿಂದ 1.5 ಕೆ.ಜಿ ವ್ಯತ್ಯಾಸ ಕಂಡುಬಂದಿದೆ. ಹೀಗಾಗಿ ಸೇಲ್ಸ್​​​ಮ್ಯಾನ್ ವಿರುದ್ಧ ಕಾನೂನು ಕ್ರಮಕ್ಕೆ ಲೀಗಲ್ ಫುಡ್ ಇನ್​ಸ್ಪೆಕ್ಟರ್ ಎಸ್ ಟಿ ವೆಂಕಟೇಶ್ ಸೂಚಿಸಿದ್ದಾರೆ.

ಇದನ್ನೂ ಓದಿ: ಪಡಿತರ ಚೀಟಿಯಲ್ಲಿ ಏಸುವಿನ ಫೋಟೋ: ರಾಮನಗರದಲ್ಲಿ ಹಿಂದೂ ಸಂಘಟನೆಗಳ ಆಕ್ರೋಶ

ಕಳೆದ ಬಾರಿ ಪಡಿತರ ಕೇಂದ್ರದ ವಿರುದ್ಧ ದೂರು‌ ಬಂದಾಗಲೂ ದಾಳಿ ನಡೆಸಿದ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರು. ಆದರೆ ಆಹಾರ ಇಲಾಖೆಗೆ ಮತ್ತೆ ದೂರು ಬಂದಿತ್ತು.

ದೊಡ್ಡಬಳ್ಳಾಪುರ: ನಗರದ ಟಿಎಪಿಎಂಸಿ ಆವರಣದಲ್ಲಿರುವ ಪಡಿತರ ವಿತರಣಾ ಕೇಂದ್ರ ನಂ.75 ರ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ಸೇಲ್ಸ್​​​ಮ್ಯಾನ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.

ಪ್ರತಿ ತಿಂಗಳು ಅಕ್ಕಿ, ರಾಗಿ ಮತ್ತು ಗೋಧಿ ವಿತರಣೆ ಮಾಡುವಾಗ ತೂಕದಲ್ಲಿ ಮೋಸ ಮಾಡುತ್ತಿರುವ ಬಗ್ಗೆ ಇಲಾಖೆಗೆ ಆನ್ ಲೈನ್ ಮೂಲಕ, ಕಳೆದ ತಿಂಗಳ 23 ರಂದು ಸಾರ್ವಜನಿಕರು ದೂರು ನೀಡಿದ್ದರು. ಈ ದೂರಿನ‌ ಆಧಾರದ ಮೇಲೆ ಆಹಾರ ಇಲಾಖೆಯ ಲೀಗಲ್ ಫುಡ್ ಇನ್​ಸ್ಪೆಕ್ಟರ್ ಎಸ್. ಟಿ ವೆಂಕಟೇಶ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

ದಾಳಿಯ ಸಂದರ್ಭದಲ್ಲಿ ಪಡಿತರ ವಿತರಣಾ ಕೇಂದ್ರದ ಆವರಣದಲ್ಲಿ ಸಾರ್ವಜನಿಕರಿಗೆ ವಿತರಿಸಿದ ಅಕ್ಕಿ ಮತ್ತು ರಾಗಿ ಮರು ತೂಕ ಮಾಡಿದಾಗ 1 ರಿಂದ 1.5 ಕೆ.ಜಿ ವ್ಯತ್ಯಾಸ ಕಂಡುಬಂದಿದೆ. ಹೀಗಾಗಿ ಸೇಲ್ಸ್​​​ಮ್ಯಾನ್ ವಿರುದ್ಧ ಕಾನೂನು ಕ್ರಮಕ್ಕೆ ಲೀಗಲ್ ಫುಡ್ ಇನ್​ಸ್ಪೆಕ್ಟರ್ ಎಸ್ ಟಿ ವೆಂಕಟೇಶ್ ಸೂಚಿಸಿದ್ದಾರೆ.

ಇದನ್ನೂ ಓದಿ: ಪಡಿತರ ಚೀಟಿಯಲ್ಲಿ ಏಸುವಿನ ಫೋಟೋ: ರಾಮನಗರದಲ್ಲಿ ಹಿಂದೂ ಸಂಘಟನೆಗಳ ಆಕ್ರೋಶ

ಕಳೆದ ಬಾರಿ ಪಡಿತರ ಕೇಂದ್ರದ ವಿರುದ್ಧ ದೂರು‌ ಬಂದಾಗಲೂ ದಾಳಿ ನಡೆಸಿದ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರು. ಆದರೆ ಆಹಾರ ಇಲಾಖೆಗೆ ಮತ್ತೆ ದೂರು ಬಂದಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.