ETV Bharat / state

ಹೊಸಕೋಟೆಯಲ್ಲಿ ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ: ಶರತ್​ ಬಚ್ಚೇಗೌಡ ವಿರುದ್ಧ ಎಂಟಿಬಿ ಆರೋಪ ​

author img

By

Published : Nov 27, 2019, 12:55 PM IST

Updated : Nov 27, 2019, 1:28 PM IST

ಉಪಚುನಾವಣೆಯ ಕಣ ದಿನೇ ದಿನೇ ರಂಗೇರುತ್ತಿದ್ದು, ಹೊಸಕೋಟೆ ಕ್ಷೇತ್ರದ ಎಂಟಿಬಿ ನಾಗರಾಜ್​​ ಬೆಂಬಲಿಗರಾದ ಮಂಜುನಾಥ್​​ ಎಂಬುವರ ಮೇಲೆ ಹಲ್ಲೆ ನಡೆದಿದ್ದು, ಶರತ್​​ ಬಚ್ಚೇಗೌಡ ಕಡೆಯವರೇ ಈ ಕೃತ್ಯ ಎಸಗಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್​ ಆರೋಪಿಸಿದ್ದಾರೆ.

Attack on BJP worker
ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ

ಹೊಸಕೋಟೆ: ಜಿದ್ದಾಜಿದ್ದಿ ಕಣವಾಗಿರುವ ಹೊಸಕೋಟೆ ಕ್ಷೇತ್ರದ ಖಾಜಿ ಹೊಸಹಳ್ಳಿಯಲ್ಲಿ ಎರಡು ಗುಂಪುಗಳ ನಡುವೆ ಕಳೆದ ರಾತ್ರಿ ಮಾರಾಮಾರಿ ನಡೆದಿದೆ.

ಘಟನೆಯಲ್ಲಿ ಗ್ರಾಮದ ಬಿಜೆಪಿ ಕಾರ್ಯಕರ್ತ ಮಂಜುನಾಥ್ ಎಂಬಾತ ಗಾಯಗೊಂಡಿದ್ದು, ಆತನನ್ನು ಹೊಸಕೋಟೆ ಸರ್ಕಾರಿ ಆಸ್ವತ್ರೆಗೆ ದಾಖಲಿಸಲಾಗಿದೆ. ಪಕ್ಷೇತರ ಅಭ್ಯರ್ಥಿ ಶರತ್ ಬೆಂಬಲಿಗರು ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ತಿರುಮಶೆಟ್ಟಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಮಾರಾಮಾರಿ ಹಿನ್ನೆಲೆ ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಶರತ್​ ಬಚ್ಚೇಗೌಡ ವಿರುದ್ಧ ಎಂಟಿಬಿ ಆರೋಪ ​

ಆಸ್ಪತ್ರೆಗೆ ಎಂಟಿಬಿ ಭೇಟಿ:

ಇನ್ನು, ಆಸ್ಪತ್ರೆಗೆ ಭೇಟಿ ನೀಡಿದ್ದ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್​ ಅವರು ಹಲ್ಲೆಯಿಂದ ಗಾಯಗೊಂಡಿರುವ ಕಾರ್ಯಕರ್ತನ ಯೋಗಕ್ಷೇಮ ವಿಚಾರಿಸಿದರು.

ಬಳಿಕ ಮಾತನಾಡಿದ ಅವರು, ನನ್ನ ಜೊತೆ ಇದ್ದ ಕಾಂಗ್ರೆಸ್ ಕಾರ್ಯಕರ್ತರು ಈಗ ಬಿಜೆಪಿಯಲ್ಲಿ ನನ್ನ ಪರ ಪ್ರಚಾರ ಮಾಡುತ್ತಿದ್ದಾರೆ. ಆಗ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡರ ಏಳೆಂಟು ಜನ ಬೆಂಬಲಿಗರು ಸೇರಿ ಗಲಾಟೆ ಮಾಡಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದರು.

ಇನ್ನು, ಕಳೆದ ವಾರವೇ ಗ್ರಾಮಕ್ಕೆ ನಾನು ಭೇಟಿ ನೀಡಿದ್ದ ವೇಳೆ ಪಟಾಕಿ ಹಚ್ಚುವ ವಿಷಯದಲ್ಲಿ ಗಲಾಟೆ ಮಾಡಿದ್ದರು. ಈ ಬಗ್ಗೆ ಪೊಲೀಸರಿಗೂ ಮಾಹಿತಿ ನೀಡಿದ್ದೆ. ಚುನಾವಣೆ ಸಂದರ್ಭದಲ್ಲಿ ಗಲಾಟೆ ಬೇಡ ಎಂದು ರಾಜಿ ಮಾಡಿಸಿದ್ದರು. ಗ್ರಾಮದಲ್ಲಿ ಬಿಜೆಪಿ ಪರ ಪ್ರಚಾರ ಮಾಡಬೇಡಿ ಎಂದು ಕಲ್ಲು ಮತ್ತು ರಾಡ್ ನಿಂದ ರಾತ್ರಿ ಹಲ್ಲೆ ನಡೆಸಿದ್ದಾರೆ. ಗಾಯಾಳುವಿಗೆ ತಲೆ ಹಾಗು ಕೈಗೆ ಪೆಟ್ಟು ಬಿದ್ದಿದೆ. ಬಚ್ಚೇಗೌಡರು ಕಳೆದ 30 ವರ್ಷಗಳಲ್ಲಿ ಬೆದರಿಕೆ, ಹಲ್ಲೆಯಂತಹ ಧಮ್ಕಿಯಿಂದಲೇ ರಾಜಕೀಯ ಜೀವನ ಕಳೆದಿದ್ದಾರೆ. ಈಗ ಬಚ್ಚೇಗೌಡರ ಮಗ ಶರತ್ ಹಾಗೂ ಅವರ ಕಾರ್ಯಕರ್ತರು ಈ ಸಂಸ್ಕೃತಿ ಮುಂದುವರಿಸಿದ್ದಾರೆ ಎಂದು ಎಂಟಿಬಿ ವಾಗ್ದಾಳಿ ನಡೆಸಿದರು.

ಹೊಸಕೋಟೆ: ಜಿದ್ದಾಜಿದ್ದಿ ಕಣವಾಗಿರುವ ಹೊಸಕೋಟೆ ಕ್ಷೇತ್ರದ ಖಾಜಿ ಹೊಸಹಳ್ಳಿಯಲ್ಲಿ ಎರಡು ಗುಂಪುಗಳ ನಡುವೆ ಕಳೆದ ರಾತ್ರಿ ಮಾರಾಮಾರಿ ನಡೆದಿದೆ.

ಘಟನೆಯಲ್ಲಿ ಗ್ರಾಮದ ಬಿಜೆಪಿ ಕಾರ್ಯಕರ್ತ ಮಂಜುನಾಥ್ ಎಂಬಾತ ಗಾಯಗೊಂಡಿದ್ದು, ಆತನನ್ನು ಹೊಸಕೋಟೆ ಸರ್ಕಾರಿ ಆಸ್ವತ್ರೆಗೆ ದಾಖಲಿಸಲಾಗಿದೆ. ಪಕ್ಷೇತರ ಅಭ್ಯರ್ಥಿ ಶರತ್ ಬೆಂಬಲಿಗರು ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ತಿರುಮಶೆಟ್ಟಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಮಾರಾಮಾರಿ ಹಿನ್ನೆಲೆ ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಶರತ್​ ಬಚ್ಚೇಗೌಡ ವಿರುದ್ಧ ಎಂಟಿಬಿ ಆರೋಪ ​

ಆಸ್ಪತ್ರೆಗೆ ಎಂಟಿಬಿ ಭೇಟಿ:

ಇನ್ನು, ಆಸ್ಪತ್ರೆಗೆ ಭೇಟಿ ನೀಡಿದ್ದ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್​ ಅವರು ಹಲ್ಲೆಯಿಂದ ಗಾಯಗೊಂಡಿರುವ ಕಾರ್ಯಕರ್ತನ ಯೋಗಕ್ಷೇಮ ವಿಚಾರಿಸಿದರು.

ಬಳಿಕ ಮಾತನಾಡಿದ ಅವರು, ನನ್ನ ಜೊತೆ ಇದ್ದ ಕಾಂಗ್ರೆಸ್ ಕಾರ್ಯಕರ್ತರು ಈಗ ಬಿಜೆಪಿಯಲ್ಲಿ ನನ್ನ ಪರ ಪ್ರಚಾರ ಮಾಡುತ್ತಿದ್ದಾರೆ. ಆಗ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡರ ಏಳೆಂಟು ಜನ ಬೆಂಬಲಿಗರು ಸೇರಿ ಗಲಾಟೆ ಮಾಡಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದರು.

ಇನ್ನು, ಕಳೆದ ವಾರವೇ ಗ್ರಾಮಕ್ಕೆ ನಾನು ಭೇಟಿ ನೀಡಿದ್ದ ವೇಳೆ ಪಟಾಕಿ ಹಚ್ಚುವ ವಿಷಯದಲ್ಲಿ ಗಲಾಟೆ ಮಾಡಿದ್ದರು. ಈ ಬಗ್ಗೆ ಪೊಲೀಸರಿಗೂ ಮಾಹಿತಿ ನೀಡಿದ್ದೆ. ಚುನಾವಣೆ ಸಂದರ್ಭದಲ್ಲಿ ಗಲಾಟೆ ಬೇಡ ಎಂದು ರಾಜಿ ಮಾಡಿಸಿದ್ದರು. ಗ್ರಾಮದಲ್ಲಿ ಬಿಜೆಪಿ ಪರ ಪ್ರಚಾರ ಮಾಡಬೇಡಿ ಎಂದು ಕಲ್ಲು ಮತ್ತು ರಾಡ್ ನಿಂದ ರಾತ್ರಿ ಹಲ್ಲೆ ನಡೆಸಿದ್ದಾರೆ. ಗಾಯಾಳುವಿಗೆ ತಲೆ ಹಾಗು ಕೈಗೆ ಪೆಟ್ಟು ಬಿದ್ದಿದೆ. ಬಚ್ಚೇಗೌಡರು ಕಳೆದ 30 ವರ್ಷಗಳಲ್ಲಿ ಬೆದರಿಕೆ, ಹಲ್ಲೆಯಂತಹ ಧಮ್ಕಿಯಿಂದಲೇ ರಾಜಕೀಯ ಜೀವನ ಕಳೆದಿದ್ದಾರೆ. ಈಗ ಬಚ್ಚೇಗೌಡರ ಮಗ ಶರತ್ ಹಾಗೂ ಅವರ ಕಾರ್ಯಕರ್ತರು ಈ ಸಂಸ್ಕೃತಿ ಮುಂದುವರಿಸಿದ್ದಾರೆ ಎಂದು ಎಂಟಿಬಿ ವಾಗ್ದಾಳಿ ನಡೆಸಿದರು.

Intro:

ರಾಜಕೀಯ ವೈಷಮ್ಯ ಹಿನ್ನೆಲೆ.

ಎರಡು ಗುಂಪುಗಳ ನಡುವೆ ಮಾರಾಮಾರಿ.

ಹೊಸಕೋಟೆ ತಾಲೂಕಿನ ಖಾಜಿ‌ ಹೊಸಹಳ್ಳಿಯಲ್ಲಿ ಘಟನೆ.

ಕಳೆದ ರಾತ್ರಿ ನಡೆದಿರೂ ಘಟನೆ.

ಘಟನೆಯಲ್ಲಿ ಗ್ರಾಮದ ಬಿಜೆಪಿ ಕಾರ್ಯಕರ್ತ ಮಂಜುನಾಥ್ ಎಂಬುವರಿಗೆ ಗಾಯ.

ಹೊಸಕೋಟೆ ಸರ್ಕಾರಿ ಆಸ್ವತ್ರೆಗೆ ದಾಖಲು ಚಿಕಿತ್ಸೆ.

ಪಕ್ಷೇತರ ಅಭ್ಯರ್ಥಿ ಶರತ್ ಬೆಂಬಲಿಗರಿ‌ಂದ ಹಲ್ಲೆ ಆರೋಪ.

ತಿರುಮಶೆಟ್ಟಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.

ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್.

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಖಾಜಿ ಹೊಸಹಳ್ಳಿ ಗ್ರಾಮ.Body:ಹೊಸಕೋಟೆ: ಹೊಸಕೋಟೆ ಉಪ ಕದನದಲ್ಲಿ ಶುರುವಾದ ವಾರ್

ಕಾಂಗ್ರೆಸ್ ಕಾರ್ಯಕರ್ತರಿಂದ ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ.

ಹೊಸಕೋಟೆ ಕ್ಷೇತ್ರದ ಮಾಕನಹಳ್ಳಿ ಸಮೀಪದ ಖಾಜಿಹೊಸಹಳ್ಳಿ ಗ್ರಾಮದಲ್ಲಿ ಘಟನೆ.

ಮಂಜುನಾಥ ಹಲ್ಲೆಗೊಳಗಾದ ವ್ಯಕ್ತಿ.

ಹಲ್ಲೆಗೊಳಗಾದ ಮಂಜುನಾಥ ಮೊದಲು ಕಾಂಗ್ರೆಸ್ ಪಕ್ಷದಲ್ಲಿದ್ದು, ಇದೀಗ ಎಂಟಿಬಿ ಬೆಂಬಲಿಗರಾಗಿ ಬಿಜೆಪಿ ಸೇರಿರುವುದಕ್ಕೆ ಹಲ್ಲೆ.

ಹಲ್ಲೆಗೊಳಗಾದ ಮಂಜುನಾಥ ಹೊಸಕೋಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ

ತಿರುಮಲಶೆಟ್ಟಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣConclusion:ಹೊಸಕೋಟೆ.

ಹಲ್ಲೆಗೊಳಗಾಗಿದ್ದ ಕಾರ್ಯಕರ್ತನನ್ನು ಭೇಟಿ ಮಾಡಿದ ಬಳಿಕ ಎಂಟಿಬಿ ನಾಗರಾಜ್ ಹೇಳಿಕೆ.

ನನ್ನ ಜೊತೆ ಇದ್ದ ಕಾಂಗ್ರೆಸ್ ಕಾರ್ಯಕರ್ತರು ಈಗ ಬಿಜೆಪಿಯಲ್ಲಿ ನನ್ನ ಪರ ಪ್ರಚಾರ ಮಾಡುತ್ತಿದ್ದರು.

ಆಗ ಶರತ್ ಬಚ್ಚೇಗೌಡರ ಏಳೆಂಟು ಜನ ಬೆಂಬಲಿಗರು ಸೇರಿ ಗಲಾಟೆ ಮಾಡಿ ಹಲ್ಲೆ ಮಾಡಿದ್ದಾರೆ.

ಕಳೆದ ವಾರವೇ ಗ್ರಾಮಕ್ಕೆ ನಾನು ಭೇಟಿ ನೀಡುವಾಗ ಪಟಾಕಿ ಹಚ್ಚುವ ವಿಷಯದಲ್ಲಿ ಹಲ್ಲೆ ಗಲಾಟೆ ಮಾಡಿದ್ದರು.

ಈ ಬಗ್ಗೆ ಪೋಲಿಸರಿಗೂ ಮಾಹಿತಿ ನೀಡಿದ್ದೆ ಆಗ ಚುನಾವಣೆ ಸಂಧರ್ಭದಲ್ಲಿ ಗಲಾಟೆ ಬೇಡ ಎಂದು ರಾಜಿ ಮಾಡಿದ್ದರು.

ಗ್ರಾಮದಲ್ಲಿ ಬಿಜೆಪಿ ಪರ ಪ್ರಚಾರ ಮಾಡಬೇಡಿ ಎಂದು ಕಲ್ಲು ಮತ್ತು ರಾಡ್ ನಿಂದ ರಾತ್ರಿ ಹಲ್ಲೆ ನಡೆಸಿದ್ದಾರೆ...

ಗಾಯಾಳುವನ್ನು ಭೇಟಿಯಾಗಿ ಬಂದೆ ತಲೆ ಹಾಗು ಕೈಗೆ ಪೆಟ್ಟು ಬಿದ್ದಿದೆ.

ಬಚ್ಚೇಗೌಡರು ಮೂವತ್ತು ವರ್ಷ ಬೆದರಿಸಿ ಹಲ್ಲೆ ಮಾಡಿ ಧಮ್ಕಿ ಹಾಕಿ ರಾಜಕೀಯ ಜೀವನವನ್ನು ಕಳೆದಿದ್ದಾರೆ.

ಈಗ ಬಚ್ಚೇಗೌಡ ಮಗ ಶರತ್ ಬಚ್ಚೇಗೌಡ ಹಾಗು ಕಾರ್ಯಕರ್ತರು ಪ್ರಾರಂಭ ಮಾಡಿದ್ದಾರೆ.

ಚುನಾವಣೆ ಸಂಧರ್ಭದಲ್ಲಿ ಯಾವಾಗಲೂ ಪ್ರಾರಂಭವಾಗುವ ಹಾಗೆ ಈ ಬಾರಿಯೂ ಸಹ ಪ್ರಾರಂಭವಾಗಿದೆ.

ಮತದಾರರೇ ಇದಕ್ಕೆಲ್ಲ ಚುನಾವಣೆಯಲ್ಲಿ ಉತ್ತರ ಕೊಡುತ್ತಾರೆ.

ಪ್ರಕರಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ನಡೆಸಿದ ಬಳಿಕ ಪರಾರಿಯಾಗಿದ್ದಾರೆ.

ಹೊಸಕೋಟೆ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಳುವನ್ನು ಭೇಟಿ ಮಾಡಿದ ಬಳಿಕ ಹೇಳಿಕೆ ನೀಡಿದ ಎಂಟಿಬಿ ನಾಗರಾಜ್.
Last Updated : Nov 27, 2019, 1:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.