ETV Bharat / state

ಭೂಮಿಯಲ್ಲಿ ಸಿಕ್ತು ಅನ್ನಪೂರ್ಣೇಶ್ವರಿ ವಿಗ್ರಹ.. ದೇವಿಗೆ ರಾಹುಕಾಲದಲ್ಲೇ ಪೂಜೆ ಸಲ್ಲಿಸಿದ್ರೆ ಇಷ್ಟಾರ್ಥ ಸಿದ್ಧಿ - undefined

ಅತ್ತಿವಟ್ಟಿ ಗ್ರಾಮದ ರಾಮಕೃಷ್ಣಚಾರಿ ಎಂಬುವರಿಗೆ ಅವರ ಜಮೀನನ್ನು ಹದ ಮಾಡುತ್ತಿರುವಾಗ ದೇವಿಯ ವಿಗ್ರಹ ದೊರೆತಿದ್ದು, ಈ ದೇವಿಗೆ ಅವರ ಜಮೀನಿನಲ್ಲೇ ಚಿಕ್ಕ ದೇವಸ್ಥಾನವನ್ನು ನಿರ್ಮಿಸಿ ಪೂಜಿಸುತ್ತಿದ್ದಾರೆ. ಈಗ ಆಕೆ ಎಲ್ಲರ ಇಷ್ಟಾರ್ಥಗಳನ್ನೂ ಪೂರೈಸುವ ದೇವಿಯಾಗಿ ಪ್ರಚಲಿತವಾಗಿದ್ದಾಳೆ.

ಶ್ರೀ ಅಖಿಲಾಂಡ ಕೋಟಿ ಅನ್ನಪೂರ್ಣೇಶ್ವರಿ ದೇವಿ
author img

By

Published : May 28, 2019, 8:36 AM IST

ಬೆಂಗಳೂರು: ಪುಟ್ಟ ಗುಡಿಯಲ್ಲಿ ಅಕ್ಕಿಯಲ್ಲಿಟ್ಟ ಬೆಲ್ಲದಾರತಿಗಳಿಂದ ಆರತಿ ಮಾಡಿಸಿಕೊಂಡು ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುತ್ತಿರುವ ಈ ದೇವಿ ಹೆಸರು ಶ್ರೀ ಅಖಿಲಾಂಡ ಕೋಟಿ ಅನ್ನಪೂರ್ಣೇಶ್ವರಿ. ಅಂದಹಾಗೆ ಈ ದೇವಿ ನೆಲೆಸಿರೋದು ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಕೋಲಾರ ರಸ್ತೆಯ ಅತ್ತಿವಟ್ಟ ಗ್ರಾಮದಲ್ಲಿ.

ಕಳೆದ 20 ವರ್ಷಗಳ ಹಿಂದೆ ಅತ್ತಿವಟ್ಟಿ ಗ್ರಾಮದ ರಾಮಕೃಷ್ಣಚಾರಿ ಎಂಬುವರಿಗೆ ಅವರ ಜಮೀನನ್ನು ಹದ ಮಾಡುತ್ತಿರುವಾಗ ದೇವಿಯ ವಿಗ್ರಹ ಹಾಗೂ ಪೀಠ ದೊರೆತಿದ್ವು. ಇದರಿಂದ ಆಶ್ಚರ್ಯಗೊಂಡ ರಾಮಕೃಷ್ಣಚಾರಿ ಅವರಿಗೆ ದಿಕ್ಕುತೋಚದಂತಾಗಿ ದೇವಿಯ ಮೂರ್ತಿಯನ್ನು ಮನೆಯಲ್ಲೇ ಇಟ್ಟಿದ್ದರು. ತದನಂತರ ಐದು ವರ್ಷಗಳ ಹಿಂದೆ ನಾಗಸಾಧು ಒಬ್ಬರು ಅವರ ಕನಸಿನಲ್ಲಿ ಬಂದು ನಿಮ್ಮ ಭೂಮಿಯಲ್ಲಿ ದೇವಿಗೆ ಒಂದು ದೇವಾಲಯವನ್ನು ಕಟ್ಟಿ ಪೂಜಿಸುವುದರಿಂದ ಎಲ್ಲರಿಗು ಒಳಿತಾಗುತ್ತದೆ ಎಂದು ತಿಳಿಸಿದ್ರಂತೆ. ಹಾಗಾಗಿ ದೇವಿಗೆ ಅತ್ತಿವಟ್ಟ ಗ್ರಾಮದ ಹೊರಭಾಗದಲ್ಲಿರುವ ರಾಮಕೃಷ್ಣಚಾರಿ ಜಮೀನಿನಲ್ಲಿ ಒಂದು ಪುಟ್ಟ ಗುಡಿಯನ್ನು ನಿರ್ಮಿಸಿ ಪೂಜಿಸಿಕೊಂಡು ಬರಲಾಗುತ್ತಿದೆ.

ಶ್ರೀ ಅಖಿಲಾಂಡ ಕೋಟಿ ಅನ್ನಪೂರ್ಣೇಶ್ವರಿ ದೇವಿ

ಆರೋಗ್ಯ, ಮದುವೆ, ಸಂತಾನ ಇತ್ಯಾದಿ ಸಮಸ್ಯೆಗಳಿಗೆ ಪರಿಹಾರ ಹುಡುಕಿಕೊಂಡು ಬರುವ ಭಕ್ತರ ಇಷ್ಟಾರ್ಥಗಳನ್ನು ದೇವಿ ನೆರೆವೇರಿಸುವುದರಿಂದ ದೇವಿಯ ಮಹಿಮೆ ಹೊರ ರಾಜ್ಯಗಳಿಗೂ ಹಬ್ಬಿದೆ. ಬೆಂಗಳೂರು ನಗರ, ಗ್ರಾಮಾಂತರ, ಕೋಲಾರ, ಮಾಲೂರು ಸೇರಿ ರಾಜ್ಯದ ವಿವಿಧ ಪ್ರದೇಶಗಳಿಂದಷ್ಟೇ ಅಲ್ಲದೆ ನೆರೆಯ ತಮಿಳುನಾಡು, ಆಂಧ್ರದ ಭಕ್ತರು ಇಲ್ಲಿಗೆ ಬರಲು ಪ್ರಾರಂಭಿಸಿದ್ದಾರೆ.

ಈ ದೇವಿಗೆ ಪ್ರತಿ ಶುಕ್ರವಾರದಂದು ಭಕ್ತರು ಇಲ್ಲಿಗೆ ಭೇಟಿ ನೀಡಿ ಒಂದು ತಟ್ಟೆಯಲ್ಲಿ ಮೂರು ಹಿಡಿ ಅಕ್ಕಿ ಹಾಕಿಕೊಂಡು ಎರಡು ಅಚ್ಚುಬೆಲ್ಲದಲ್ಲಿ ತುಪ್ಪದ ದೀಪ ಮಾಡಿ ರಾಹುಕಾಲದಲ್ಲಿ ತಾಯಿಗೆ ಹರಕೆ ಹೊತ್ತುಕೊಂಡು, ಆರತಿ ಮಾಡಿದರೆ ಭಕ್ತರ ಕೋರಿಕೆಗಳು ನೆರವೇರುತ್ತವೆ ಎಂಬುದು ಇಲ್ಲಿಗೆ ಬರುವ ಭಕ್ತರ ನಂಬಿಕೆ.

ಬೆಂಗಳೂರು: ಪುಟ್ಟ ಗುಡಿಯಲ್ಲಿ ಅಕ್ಕಿಯಲ್ಲಿಟ್ಟ ಬೆಲ್ಲದಾರತಿಗಳಿಂದ ಆರತಿ ಮಾಡಿಸಿಕೊಂಡು ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುತ್ತಿರುವ ಈ ದೇವಿ ಹೆಸರು ಶ್ರೀ ಅಖಿಲಾಂಡ ಕೋಟಿ ಅನ್ನಪೂರ್ಣೇಶ್ವರಿ. ಅಂದಹಾಗೆ ಈ ದೇವಿ ನೆಲೆಸಿರೋದು ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಕೋಲಾರ ರಸ್ತೆಯ ಅತ್ತಿವಟ್ಟ ಗ್ರಾಮದಲ್ಲಿ.

ಕಳೆದ 20 ವರ್ಷಗಳ ಹಿಂದೆ ಅತ್ತಿವಟ್ಟಿ ಗ್ರಾಮದ ರಾಮಕೃಷ್ಣಚಾರಿ ಎಂಬುವರಿಗೆ ಅವರ ಜಮೀನನ್ನು ಹದ ಮಾಡುತ್ತಿರುವಾಗ ದೇವಿಯ ವಿಗ್ರಹ ಹಾಗೂ ಪೀಠ ದೊರೆತಿದ್ವು. ಇದರಿಂದ ಆಶ್ಚರ್ಯಗೊಂಡ ರಾಮಕೃಷ್ಣಚಾರಿ ಅವರಿಗೆ ದಿಕ್ಕುತೋಚದಂತಾಗಿ ದೇವಿಯ ಮೂರ್ತಿಯನ್ನು ಮನೆಯಲ್ಲೇ ಇಟ್ಟಿದ್ದರು. ತದನಂತರ ಐದು ವರ್ಷಗಳ ಹಿಂದೆ ನಾಗಸಾಧು ಒಬ್ಬರು ಅವರ ಕನಸಿನಲ್ಲಿ ಬಂದು ನಿಮ್ಮ ಭೂಮಿಯಲ್ಲಿ ದೇವಿಗೆ ಒಂದು ದೇವಾಲಯವನ್ನು ಕಟ್ಟಿ ಪೂಜಿಸುವುದರಿಂದ ಎಲ್ಲರಿಗು ಒಳಿತಾಗುತ್ತದೆ ಎಂದು ತಿಳಿಸಿದ್ರಂತೆ. ಹಾಗಾಗಿ ದೇವಿಗೆ ಅತ್ತಿವಟ್ಟ ಗ್ರಾಮದ ಹೊರಭಾಗದಲ್ಲಿರುವ ರಾಮಕೃಷ್ಣಚಾರಿ ಜಮೀನಿನಲ್ಲಿ ಒಂದು ಪುಟ್ಟ ಗುಡಿಯನ್ನು ನಿರ್ಮಿಸಿ ಪೂಜಿಸಿಕೊಂಡು ಬರಲಾಗುತ್ತಿದೆ.

ಶ್ರೀ ಅಖಿಲಾಂಡ ಕೋಟಿ ಅನ್ನಪೂರ್ಣೇಶ್ವರಿ ದೇವಿ

ಆರೋಗ್ಯ, ಮದುವೆ, ಸಂತಾನ ಇತ್ಯಾದಿ ಸಮಸ್ಯೆಗಳಿಗೆ ಪರಿಹಾರ ಹುಡುಕಿಕೊಂಡು ಬರುವ ಭಕ್ತರ ಇಷ್ಟಾರ್ಥಗಳನ್ನು ದೇವಿ ನೆರೆವೇರಿಸುವುದರಿಂದ ದೇವಿಯ ಮಹಿಮೆ ಹೊರ ರಾಜ್ಯಗಳಿಗೂ ಹಬ್ಬಿದೆ. ಬೆಂಗಳೂರು ನಗರ, ಗ್ರಾಮಾಂತರ, ಕೋಲಾರ, ಮಾಲೂರು ಸೇರಿ ರಾಜ್ಯದ ವಿವಿಧ ಪ್ರದೇಶಗಳಿಂದಷ್ಟೇ ಅಲ್ಲದೆ ನೆರೆಯ ತಮಿಳುನಾಡು, ಆಂಧ್ರದ ಭಕ್ತರು ಇಲ್ಲಿಗೆ ಬರಲು ಪ್ರಾರಂಭಿಸಿದ್ದಾರೆ.

ಈ ದೇವಿಗೆ ಪ್ರತಿ ಶುಕ್ರವಾರದಂದು ಭಕ್ತರು ಇಲ್ಲಿಗೆ ಭೇಟಿ ನೀಡಿ ಒಂದು ತಟ್ಟೆಯಲ್ಲಿ ಮೂರು ಹಿಡಿ ಅಕ್ಕಿ ಹಾಕಿಕೊಂಡು ಎರಡು ಅಚ್ಚುಬೆಲ್ಲದಲ್ಲಿ ತುಪ್ಪದ ದೀಪ ಮಾಡಿ ರಾಹುಕಾಲದಲ್ಲಿ ತಾಯಿಗೆ ಹರಕೆ ಹೊತ್ತುಕೊಂಡು, ಆರತಿ ಮಾಡಿದರೆ ಭಕ್ತರ ಕೋರಿಕೆಗಳು ನೆರವೇರುತ್ತವೆ ಎಂಬುದು ಇಲ್ಲಿಗೆ ಬರುವ ಭಕ್ತರ ನಂಬಿಕೆ.

Intro:ಭೂಮಿಯಲ್ಲಿ ಸಿಕ್ಕ ಅನ್ನಪೂರ್ಣೇಶ್ವರಿ ದೇವಿಗೆ ರಾಹುಕಾಲದಲ್ಲಿ ಪೂಜೆ ಸಲ್ಲಿಸುವುದರಿಂದ ಇಷ್ಟಾರ್ಥಗಳು ಸಿದ್ದಿ.

ನಾವು ಭೂ ಮಂಡಳದಲ್ಲಿ ಅದೇಷ್ಟೇ ದೇವರುಗಳನ್ನು ನೋಡಿದ್ದೇವೆ. ನಾವು ಕಾಣುವ ಒಂದೊಂದು ದೇವರಲ್ಲು ಒಂದೊಂದು ರೀತಿಯ ಶಕ್ತಿ, ಪವಾಡಗಳು ಇರುತ್ತವೆ. ಅದೇ ರೀತಿ ಕೆಲ ದಶಕಗಳ ಹಿಂದೆ ಭೂಮಿಯಲ್ಲಿ ದೊರೆತ ದೇವಿಯ ವಿಗ್ರಹವೊಂದು ಭಕ್ತರ ಇಷ್ಟಾರ್ಥಗಳನ್ನು ಇಡೇರಿಸುವ ಮೂಲಕ ಎಲ್ಲರ ಆರಾದ್ಯ ದೈವವಾಗಿದೆ.


ಹೀಗೆ ಪುಟ್ಟ ಗುಡಿಯಲ್ಲಿ ಅಕ್ಕಿಯಲ್ಲಿಟ್ಟ ಬೆಲ್ಲದಾರತಿಗಳಿಂದ ಆರತಿ ಮಾಡಿಸಿಕೊಂಡು ಭಕ್ತರ ಇಷ್ಟಾರ್ಥಗಳನ್ನು ನೇರವೇರಿಸುತ್ತಿರುವ ಈ ಹೆಸರು ಶ್ರೀ ಅಖಿಲಾಂಡ ಕೋಟಿ ಅನ್ನಪೂರ್ಣೇಶ್ವರಿ ದೇವಿ. ಅಂದಹಾಗೆ ಈ ದೇವಿ ನೆಲೆಸಿರೋದು ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಕೋಲಾರ ರಸ್ತೆಯ ಅತ್ತಿವಟ್ಟ ಗ್ರಾಮದಲ್ಲಿ. ಈ ತಾಯಿಯ ವಿಗ್ರಹ ಕಳೆದ 20 ವರ್ಷಗಳ ಹಿಂದೆ ಅತ್ತಿವಟ್ಟ ಗ್ರಾಮದ ರಾಮಕೃಷ್ಟಾ ಚಾರಿ ಎಂಬುವರಿಗೆ ಅವರ ಜಮೀನನ್ನು ಹದ ಮಾಡುತ್ತಿರುವಾಗ ದೇವಿಯ ವಿಗ್ರಹ ಹಾಗೂ ಪೀಠ ಎರಡು ಪ್ರತ್ಯೇಕವಾಗಿ ದೊರೆತಿವೆ. ಇದರಿಂದ ಆಶ್ಚರ್ಯಗೊಂಡ ರಾಮಕೃಷ್ಣಚಾರಿ ರವರಿಗೆ ದಿಕ್ಕುತೋಚದೆ ಹೊಲದಲ್ಲಿ ಸಿಕ್ಕ ಈ ಅನ್ನಪೂರ್ಣೇಶ್ವರಿ ದೇವಿಯ ಮೂರ್ತಿಯನ್ನು ಕಳೆದ 15 ವರ್ಷಗಳಿಂದ ಮನೆಯಲ್ಲಿಯೆ ಇರಿಸಿಕೊಂಡು ತದನಂತರ ಐದು ವರ್ಷಗಳ ಹಿಂದೆ ನಾಗಸಾದು ಒಬ್ಬರು ಅವರ ಕನಸಿನಲ್ಲಿ ಬಂದು ನಿಮ್ಮ ಭೂಮಿಯಲ್ಲಿ ದೇವಿಗೆ ಒಂದು ವದೇವಾಲಯನ್ನು ಕಟ್ಟಿ ಪೂಜಿಸುವುದರಿಂದ ಎಲ್ಲರಿಗು ಒಳಿತಾಗುತ್ತದೆ ಎಂದು ತಿಳಿಸಿದ್ದರಿಂದ ಕಳೆದ ಐದು ವರ್ಷಗಳ ಹಿಂದೆ ಶ್ರೀ ಅಖಿಲಾಂಡ ಕೋಟಿ ಅನ್ನಪೂರ್ಣೇಶ್ವರಿ ದೇವಿಗೆ ಅತ್ತಿವಟ್ಟ ಗ್ರಾಮದ ಹೊರಭಾಗದಲ್ಲಿರುವ ರಾಮಕೃಷ್ಣಪ್ಪರವರ ಜಮೀನಿನಲ್ಲಿ ಒಂದು ಪುಟ್ಟ ಗುಡಿಯನ್ನು ನಿರ್ಮಿಸಿ ಪೂಜಿಸಿಕೊಂಡು ಬರಲಾಗುತ್ತಿದೆ.

Body:ರಾಮಕೃಷ್ಣಪ್ಪನವರಿಗೆ ನಾಗಸಾದು ಒಬ್ಬರು ಹೇಳಿದಂತೆ ಅವರ ಜಮೀನಿನಲ್ಲಿ ವಿಗ್ರಹ ಸಿಕ್ಕಿದ್ದಂತ ಸ್ಥಳದ ಪಕ್ಕದಲ್ಲೆ ರಾಮಕೃಷ್ಣಚಾರಿ ರವರ ಮಗ ಶ್ರೀಕಂಠಚಾರಿ ರವರು ದೇವಾಲಯ ನಿರ್ಮಿಸಿದ ಮೇಲೆ ಅವರ ಕುಟುಂಬ ಆರ್ಥಿಕವಾಗಿ ಸದೃಡಗೊಂಡಿದ್ದು, ದೇವಿಯ ಮಹಿಮೆ ದಿನಕಳೆದಂತೆ ಎಲ್ಲೆಡೆ ಪಸರಿಸಿದ ಮೇಲೆ ಅಖಿಲಾಂಡ ಕೋಟಿ ಅನ್ನಪೂರ್ಣೇಶ್ವರಿ ದೇವಿಯ ದರ್ಶನ ಪಡೆಯಲು ಭಕ್ತರು ಬರಲು ಪ್ರಾರಂಭಿಸಿದರು. ಹೀಗೆ ಆರೋಗ್ಯ, ಮದುವೆ, ಸಂತಾನ ಇತ್ಯಾದಿ ಸಮಸ್ಯೆಗಳಿಗೆ ಪರಿಹಾರ ಹುಡುಕಿಕೊಂಡು ಬರುವ ಭಕ್ತರ ಇಷ್ಟಾರ್ಥಗಳನ್ನು ದೇವಿ ನೆರೆವೇರಿಸುವುದರಿಂದ ದೇವಿಯ ಮಹಿಮೆ ಹೊರ ರಾಜ್ಯಗಳಿಗು ಹಬ್ಬಿದ್ದು, ಬೆಂಗಳೂರು ನಗರ, ಗ್ರಾಮಾಂತರ, ಕೋಲಾರ, ಮಾಲೂರು ಸೇರಿದಂತೆ ರಾಜ್ಯದ ವಿವಿಧ ಪ್ರದೇಶಗಳಿಂದಷ್ಟೇ ಅಲ್ಲದೆ ನೆರೆಯ ತಮಿಳುನಾಡು, ಆಂದ್ರ ಪ್ರದೇಶದ ಭಕ್ತರು ಇಲ್ಲಿಗೆ ಬರಲು ಪ್ರರಂಭಿಸಿದ್ದಾರೆ.

ಪ್ರತಿ ಶುಕ್ರವಾರ ಬೆಳಗ್ಗೆ 10;30 ಕ್ಕೆ ರಾಹುಕಾಲದಲ್ಲಿ ದೇವಿಗೆ ಹಾರತಿ ಮಾಡುವುದರಿಂದ ಇಷ್ಟಾರ್ಥಗಳು ಸಿದ್ದಿ ಭಕ್ತರು ಈ ದೇವಿಯ ದೇವಾಲಯವನ್ನು ಹುಡುಕಿಕೊಂಡು ಬರಲು ದೇವಿಯ ಪವಾಡ ಎಂದರೆ ಅದು ತಪ್ಪಾಗಲಾರದು. ಇನ್ನು ಈ ದೇವಿಗೆ ಪ್ರತಿ ಶುಕ್ರವಾರದಂದು
ಭಕ್ತರುಗಳು ಇಲ್ಲಿಗೆ ಭೇಟಿ ನೀಡಿ ಒಂದು ತಟ್ಟೆಯಲ್ಲಿ ಮೂರು ಇಡಿ ಅಕ್ಕಿ ಹಾಕಿಕೊಂಡು ಎರಡು ಅಚ್ಚುಬೆಲ್ಲದಲ್ಲಿ ತುಪ್ಪದ ದೀಪ ಮಾಡಿ ರಾಹುಕಾಲದಲ್ಲಿ ಅಂದರೆ ಬೆಳಗ್ಗೆ 10;30 ಕ್ಕೆ ತಾಯಿಗೆ ಹರಕೆ ಹೊತ್ತಿಕೊಂಡರೆ ಆರತಿ ಮಾಡಿದರೆ ಭಕ್ತರ ಕೋರಿಕೆಗಳು ನೆರವೇರುತ್ತವೆ ಎಂಬುದು ಇಲ್ಲಿನ ಮತ್ತೊಂದು ವಿಶೇಷ. ಸಾಮಾನ್ಯವಾಗಿ ಯಾವುದೆ ದೇವಾಲಯಗಳಲ್ಲಿ ಪೂಜೆ ಪುನಸ್ಕಾರ ಸೇರಿದಂತೆ ಯಾವುದೆ ಶುಭ ಸಮಾರಂಭಗಳನ್ನು ರಾಹುಕಾಲದಲ್ಲಿ ಮಾಡುವುದಿಲ್ಲ. ಆದರೆ ಇಲ್ಲಿನ ಅಖಿಲಾಂಡ ಶ್ರೀ ಅನ್ನಪೂರ್ಣೆಶ್ವರಿ ದೇವಿಗೆ ಭಕ್ತರು ಪೂಜೆ ಸಲ್ಲಿಸಿ ಆರತಿ ಬೆಳಗುವುದು ಮಾತ್ರ ರಾಹುಕಾಲದಲ್ಲಿ. ಅದುವೆ ಶುಕ್ರವಾರದಂದು ಮಾತ್ರ. ರಾಹುಕಾಲದಲ್ಲಿ ಪೂಜೆ ಸಲ್ಲಿಸಿದರೆ ದೇವಿ ಭಕ್ತರ ಬೇಡಿಕೆಗಳನ್ನು ನೆರವೇರಿಸಿಕೊಂಡು ಬರುತ್ತಿರುವುದು ಈ ದೇವಿಯ ಪವಾಡ ಎಂದು ಹೇಳಬಹುದು.

Conclusion:ಇದರಿಂದಲೆ ಏನೊ ದಿನದಿಂದ ದಿನಕ್ಕೆ ಈ ದೇವಲಯಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದು, ಮದುವೆ, ಸಂತಾನ, ಆರೋಗ್ಯ, ಉದ್ಯೋಗ, ರೈತರು ಸಹ ಕೃಷಿ ಬೆಳೆಗಳು ಚೆನ್ನಾಗಿ ಪಸಲನ್ನು ನೀಡಲೆಂದು ದೇವಿಗೆ ಹರಕೆ ಹೊತ್ತುಕೊಂಡು ಬರುವವರ ಸಂಖ್ಯೆ ಹೆಚ್ಚಾಗುತ್ತಿದ್ದು ಈ ತಾಯಿ ಕರ್ನಾಟಕ, ತಮಿಳುನಾಡು, ಆಂದ್ರ ಪ್ರದೇಶ ರಾಜ್ಯಗಳ ಜನರ ಆರಾಧ್ಯ ದೈವವಾಗಿದ್ದಾಳೆ. ಇಲ್ಲಿಗೆ ಬರುವ ಒಬ್ಬೊಬ್ಬ ಭಕ್ತರು ಒಂದೊಂದು ಹರಕೆ ಇಟ್ಟಿಕೊಂಡು ಬರುವಂತೆ ಇದೇ ಗ್ರಾಮದ ರೈತನೊಬ್ಬ ತಮ್ಮ ಭೂಮಿಯಲ್ಲಿ ಯಾವುದೆ ಬೆಲೆ ಇಟ್ಟರು ಪಸಲು ಸಿಗುತ್ತಿಲ್ಲದ ಕಾರಣ ಅನ್ನಪೂಣೇಶ್ವರಿ ಸನ್ನಿದಿಗೆ ಬಂದ ಮೇಲೆ ಎಲ್ಲಾ ಬೆಳೆಗಳು ಚೆನ್ನಾಗಿ ಆಗುವುದರಿಂದ ಆರ್ಥಿಕವಾಗಿ ಸದೃಡಹೊಂದಲು ಸಾದ್ಯವಾಯಿತೆಂದು ತಿಳಿಸುತ್ತಾನೆ.

ತಮಿಳುನಾಡಿನ ಹೊಸೂರಿನ ಯುವಕನೊಬ್ಬ ಮದುವೆಯಾಗಲು ವಧುವನ್ನು ಹುಡುಕಲು ಪ್ರಾರಂಭಿಸಿ ಮೂರು ನಾಲ್ಕು ವರ್ಷಗಳು ಕಳೆದರು ಹೆಣ್ಣು ಸಿಗದಿದ್ದಾಗ ಈ ಅನ್ನಪೂರ್ಣೇಶ್ವರಿ ದೇವಿಯ ದೇವಾಲಯಕ್ಕೆ ಹೋಗಿ ಬೆಲ್ಲದ ಆರತಿ ಮಾಡುವುದರಿಂದ ನಿನಗೆ ಹೆಣ್ಣು ಸಿಗುತ್ತದೆ ಎಂದು ತಿಳಿಸಿದ್ದಕ್ಕೆ ಆ ಯುವಕ ಇಲ್ಲಿಗೆ ಬಂದಮೇಲೆ ಆತನಿಗೆ ಮದುವೆ ನಿಶ್ಚಯವಾಗಿ ಮದುವೆ ಜರುಗಿದ್ದರಿಂದ ಪ್ರತಿವಾರ ದೇವಾಲಯಕ್ಕೆ ಬಂದು ದೇವಿಗೆ ಪೂಜೆ ಸಲ್ಲಿಸಿ ಹೋಗುತ್ತಾನೆ. ಹೀಗೆ ಹಲವಾರು ಭಕ್ತರಿಗೆ ಹಲವು ರೀತಿಯ ಸಮಸ್ಯೆಗಳಿದ್ದು ಅನ್ನಪೂರ್ಣೇಶ್ವರಿ ದೇವಿಯು ಇಲ್ಲಿಗೆ ಬರುವ ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುತ್ತಿರುವುದರಿಂದ ದಿನ ಕಳೆದಂತೆ ಈ ಕ್ಷೇತ್ರ ಅಭಿವೃದ್ದಿ ಹೊಂದುತ್ತಿದೆ. ಹೀಗೆ ಇಲ್ಲಿಗೆ ಬಂದ ಎಲ್ಲಾ ಭಕ್ತರ ಬೇಡಿಕೆಗಳು ನೆರವೇರುವುದರಿಂದ ಆ ಭಕ್ತರು ಮತ್ತಷ್ಟು ಜನರಿಗೆ ತಾಯಿ ಅನ್ನಪೂರ್ಣೇಶ್ವರಿ ತಾಯಿಯ ಮಹಿಮೆಯನ್ನು ತಿಳಿಸುವುದರಿಂದ ಇಲ್ಲಿಗೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದು ಶ್ರೀ ಅಖಿಲಾಂಡ ಅನ್ನಪೂರ್ಣೇಶ್ವರಿ ದೇವಿಯ ಮಹಿಮೆ ರಾಜ್ಯಗಳ ಗಡಿಯನ್ನು ದಾಟುತ್ತಿದ್ದು ಮುಂದಿನ ದಿನಗಳಲ್ಲಿ ದೊಡ್ಡ ದೈವ ಕ್ಷೇತ್ರವಾಗಿ ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸಲಿ.


ಧರ್ಮರಾಜು ಎಂ ಕೆಆರ್ ಪುರ.



ಬೈಟ್: ನಾರಾಯಣ್ ಭಕ್ತ

ಬೈಟ್:ಗ್ರಾಮಸ್ಥರು.

ಬೈಟ್: ಶ್ರೀಕಂಠಚಾರಿ, ದೇವಾಲಯ ಧರ್ಮದರ್ಶಿ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.