ETV Bharat / state

ಕುಡಿತ ಬಿಟ್ಟು ಮನೆ ಸೇರಿದ ಮದ್ಯವರ್ಜನರು: ಧರ್ಮಸ್ಥಳದ ಸಾಮಾಜಿಕ ಕೆಲಸಕ್ಕೆ ಮೆಚ್ಚುಗೆ

author img

By

Published : Nov 2, 2019, 9:21 PM IST

ಹಲವೆಡೆ ಮದ್ಯವರ್ಜನ ಶಿಬಿರಗಳನ್ನು ಖಾಸಗಿಯಾಗಿ ನಡೆಸುತ್ತಿದ್ದು, ಸಾವಿರಾರು ರೂಪಾಯಿಗಳನ್ನು ತೆರಬೇಕಾಗಿದೆ. ಆದರೆ, ಧರ್ಮಸ್ಥಳ ಕ್ಷೇತ್ರ ಈ ಸೇವೆಯನ್ನು ಉಚಿತವಾಗಿ ನೀಡುತ್ತಿರುವುದು ವಿಶೇಷವಾಗಿದೆ. ಈ ಕಾರ್ಯಗಾರವು ಈವರೆಗೂ ಎಲ್ಲಾ ಕಡೆಗಳಲ್ಲೂ ಯಶಸ್ವಿಯಾಗುತ್ತಾ ಬಂದಿದ್ದು, ಬೂದಿಗೆರೆಯಲ್ಲಿಯೂ ಎಲ್ಲರ ಮೆಚ್ಚುಗೆ ಗಳಿಸಿದೆ.

ಕುಡಿತ ಬಿಟ್ಟು ಮನೆ ಸೇರಿದ ಮದ್ಯವರ್ಜನರು: ಧರ್ಮಸ್ಥಳದ ಸಾಮಾಜಿಕ ಕೆಲಸಕ್ಕೆ ಮೆಚ್ಚುಗೆ

ಬೆಂಗಳೂರು: ಕುಡಿತದ ದಾಸರನ್ನ ಮದ್ಯ ಮುಕ್ತರನ್ನಾಗಿ ಮಾಡುವ ಕೆಲಸವನ್ನ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನಾ ಟ್ರಸ್ಟ್ ನಿರಂತರ ಮಾಡುತ್ತಲೇ ಬಂದಿದೆ. ಸದ್ಯ ಇದೇ ನಿಟ್ಟಿನಲ್ಲಿ ದೇವನಹಳ್ಳಿಯ ಬೂದಿಗೆರೆಯಲ್ಲಿ ಮದ್ಯವರ್ಜನ ಶಿಬಿರ ಆಯೋಜನೆ ಮಾಡಿ ನೂರಾರು ಕುಟುಂಬಗಳಿಗೆ ದಾರಿ ದೀಪವಾಗಿದೆ.

ಕುಡಿತ ಬಿಟ್ಟು ಸಂತಸದಿಂದ ಮನೆ ಸೇರಿದ ಮದ್ಯವರ್ಜನರು

ದೇವನಹಳ್ಳಿ ತಾಲೂಕು ಬೂದಿಗೆರೆ ಗ್ರಾಮದ ಸಂಸ್ಕೃತಿ ಕನ್ವೆನ್ಷನ್ ಹಾಲ್​ನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ವತಿಯಿಂದ 1423ನೇ ಮದ್ಯವರ್ಜನ ಶಿಬಿರವನ್ನು ಆಯೋಜನೆ ಮಾಡಲಾಗಿತ್ತು. ಶಿಬಿರದಲ್ಲಿ ಒಟ್ಟು 56 ಮಂದಿ ಮದ್ಯ ವ್ಯಸನಿಗಳು ಭಾಗವಹಿಸಿದ್ದರು. ಒಂದು ವಾರಗಳ ಕಾಲ ನಡೆದ ಶಿಬಿರದಲ್ಲಿ ದೇವನಹಳ್ಳಿ ತಾಲೂಕು ಸೇರಿದಂತೆ ಸುತ್ತಮುತ್ತಲಿನ ತಾಲೂಕು, ಜಿಲ್ಲೆಗಳಿಂದಲೂ ಕುಡಿತಕ್ಕೆ ದಾಸರಾಗಿದ್ದ ಹಲವಾರು ಮಂದಿ ಬಂದು ಕುಡಿತದ ಚಟದಿಂದ ಮುಕ್ತರಾದರು.

ಹಲವೆಡೆ ಮದ್ಯವರ್ಜನ ಶಿಬಿರಗಳನ್ನು ಖಾಸಗಿಯಾಗಿ ನಡೆಸುತ್ತಿದ್ದು, ಸಾವಿರಾರು ರೂಪಾಯಿಗಳನ್ನು ತೆರಬೇಕಾಗಿದೆ. ಆದರೆ, ಧರ್ಮಸ್ಥಳ ಕ್ಷೇತ್ರ ಈ ಸೇವೆಯನ್ನು ಉಚಿತವಾಗಿ ನೀಡುತ್ತಿರುವುದು ವಿಶೇಷವಾಗಿದೆ. ಈ ಕಾರ್ಯಗಾರವು ಈವರೆಗೂ ಎಲ್ಲಾ ಕಡೆಗಳಲ್ಲೂ ಯಶಸ್ವಿಯಾಗುತ್ತಾ ಬಂದಿದ್ದು, ಬೂದಿಗೆರೆಯಲ್ಲಿಯೂ ಎಲ್ಲರ ಮೆಚ್ಚುಗೆ ಗಳಿಸಿದೆ.

ಶಿಬಿರದ ಮತ್ತೊಂದು ವಿಶೇಷತೆ ಅಂದ್ರೆ ಕುಡಿತದಿಂದ ಮುಕ್ತಿ ಪಡೆಯಲು ಇಲ್ಲಿಗೆ ಬಂದಂತ ಶಿಬಿರಾರ್ಥಿಗಳು ಬಿಳಿ ಸಮವಸ್ತ್ರ ಧರಿಸಿ ಇನ್ಮುಂದೆ ಕುಡಿತವನ್ನು ಬಿಟ್ಟು ಶಾಂತಿಯಿಂದ ಜೀವನ ನಡೆಸುತ್ತೇವೆ ಎಂದು ಪ್ರತಿಜ್ಞೆ ಮಾಡಿದ್ರು.

ಬೆಂಗಳೂರು: ಕುಡಿತದ ದಾಸರನ್ನ ಮದ್ಯ ಮುಕ್ತರನ್ನಾಗಿ ಮಾಡುವ ಕೆಲಸವನ್ನ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನಾ ಟ್ರಸ್ಟ್ ನಿರಂತರ ಮಾಡುತ್ತಲೇ ಬಂದಿದೆ. ಸದ್ಯ ಇದೇ ನಿಟ್ಟಿನಲ್ಲಿ ದೇವನಹಳ್ಳಿಯ ಬೂದಿಗೆರೆಯಲ್ಲಿ ಮದ್ಯವರ್ಜನ ಶಿಬಿರ ಆಯೋಜನೆ ಮಾಡಿ ನೂರಾರು ಕುಟುಂಬಗಳಿಗೆ ದಾರಿ ದೀಪವಾಗಿದೆ.

ಕುಡಿತ ಬಿಟ್ಟು ಸಂತಸದಿಂದ ಮನೆ ಸೇರಿದ ಮದ್ಯವರ್ಜನರು

ದೇವನಹಳ್ಳಿ ತಾಲೂಕು ಬೂದಿಗೆರೆ ಗ್ರಾಮದ ಸಂಸ್ಕೃತಿ ಕನ್ವೆನ್ಷನ್ ಹಾಲ್​ನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ವತಿಯಿಂದ 1423ನೇ ಮದ್ಯವರ್ಜನ ಶಿಬಿರವನ್ನು ಆಯೋಜನೆ ಮಾಡಲಾಗಿತ್ತು. ಶಿಬಿರದಲ್ಲಿ ಒಟ್ಟು 56 ಮಂದಿ ಮದ್ಯ ವ್ಯಸನಿಗಳು ಭಾಗವಹಿಸಿದ್ದರು. ಒಂದು ವಾರಗಳ ಕಾಲ ನಡೆದ ಶಿಬಿರದಲ್ಲಿ ದೇವನಹಳ್ಳಿ ತಾಲೂಕು ಸೇರಿದಂತೆ ಸುತ್ತಮುತ್ತಲಿನ ತಾಲೂಕು, ಜಿಲ್ಲೆಗಳಿಂದಲೂ ಕುಡಿತಕ್ಕೆ ದಾಸರಾಗಿದ್ದ ಹಲವಾರು ಮಂದಿ ಬಂದು ಕುಡಿತದ ಚಟದಿಂದ ಮುಕ್ತರಾದರು.

ಹಲವೆಡೆ ಮದ್ಯವರ್ಜನ ಶಿಬಿರಗಳನ್ನು ಖಾಸಗಿಯಾಗಿ ನಡೆಸುತ್ತಿದ್ದು, ಸಾವಿರಾರು ರೂಪಾಯಿಗಳನ್ನು ತೆರಬೇಕಾಗಿದೆ. ಆದರೆ, ಧರ್ಮಸ್ಥಳ ಕ್ಷೇತ್ರ ಈ ಸೇವೆಯನ್ನು ಉಚಿತವಾಗಿ ನೀಡುತ್ತಿರುವುದು ವಿಶೇಷವಾಗಿದೆ. ಈ ಕಾರ್ಯಗಾರವು ಈವರೆಗೂ ಎಲ್ಲಾ ಕಡೆಗಳಲ್ಲೂ ಯಶಸ್ವಿಯಾಗುತ್ತಾ ಬಂದಿದ್ದು, ಬೂದಿಗೆರೆಯಲ್ಲಿಯೂ ಎಲ್ಲರ ಮೆಚ್ಚುಗೆ ಗಳಿಸಿದೆ.

ಶಿಬಿರದ ಮತ್ತೊಂದು ವಿಶೇಷತೆ ಅಂದ್ರೆ ಕುಡಿತದಿಂದ ಮುಕ್ತಿ ಪಡೆಯಲು ಇಲ್ಲಿಗೆ ಬಂದಂತ ಶಿಬಿರಾರ್ಥಿಗಳು ಬಿಳಿ ಸಮವಸ್ತ್ರ ಧರಿಸಿ ಇನ್ಮುಂದೆ ಕುಡಿತವನ್ನು ಬಿಟ್ಟು ಶಾಂತಿಯಿಂದ ಜೀವನ ನಡೆಸುತ್ತೇವೆ ಎಂದು ಪ್ರತಿಜ್ಞೆ ಮಾಡಿದ್ರು.

Intro:KN_BNG_02_02_shibira_Ambarish_7203301
Slug: ಕುಡಿತ ಬಿಟ್ಟು ಸಂತೋಷದಿಂದ‌ ಮನೆ ಸೇರಿದ ಮದ್ಯವರ್ಜನರು
ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನ ಟ್ರಸ್ಟ್ ನಿಂದ ಸಾಮಾಜಿಕ ಕೆಲಸಕ್ಕೆ ಮೆಚ್ಚುಗೆ

ಬೆಂಗಳೂರು: ಈಗಿನ ಕಾಲದಲ್ಲಿ ಮದ್ಯಪಾನ ಒಂದು ಚಾಳಿಯಾಗಿ ಬದಲಾಗಿದೆ.. ಪ್ರತಿ ಊರಿನಲ್ಲೂ ಕುಡಿತಕ್ಕೆ ದಾಸರಾಗಿ ಹಲವಾರು ಜನರು ತಮ್ಮ ಸಾಂಸಾರಿಕ ಜೀವನದ ಸುಖವನ್ನು ಕಳೆದುಕೊಳ್ಳುತ್ತಿದ್ದಾರೆ.. ಇದರಿಂದ ಕುಟುಂಬದಲ್ಲಿ ಜಗಳವಾಗಿ ಸಂಸಾರ ಒಡೆದು ಜೀವನವೇ ಸರ್ವನಾಶ ಮಾಡಿಕೊಳ್ಳುತ್ತಿರುವವರನ್ನು ಕಡಿತದಿಂದ ಬಿಡಿಸಿ ಉತ್ತಮ ಜೀವನ ರೂಪಿಸಿಕೊಳ್ಳುವಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನಾ ಟ್ರಸ್ಟ್ ಮಾಡುತ್ತ ಬಂದಿದೆ.. ಇದೇ ರೀತಿ ದೇವನಹಳ್ಳಿಯ ಬೂದಿಗೆರೆಯಲ್ಲಿ ಶಿಬಿರ ಆಯೋಜನೆ ಮಾಡಿ ನೂರಾರು ಕುಟುಂಬಗಳಿಗೆ ದಾರಿ ದೀಪವಾಗಿದೆ..

ಯೆಸ್, ಶ್ರೀ ಕ್ಷೇತ್ರ ಧರ್ಮಸ್ಥಳ ವತಿಯಿಂದ ಬೂದಿಗೆರೆಯಲ್ಲಿ ೧೪೨೩ ಮದ್ಯವರ್ಜನ ಶಿಬಿರವನ್ನು ಆಯೋಜನೆ ಮಾಡಲಾಗಿತ್ತು.. ಈ ಶಿಬಿರದಲ್ಲಿ ಒಟ್ಟು ೫೬ ಮಂದಿ ಭಾಗವಹಿಸಿದ್ದರು. ದೇವನಹಳ್ಳಿ ತಾಲ್ಲೂಕು ಬೂದಿಗೆರೆ ಗ್ರಾಮದ ಸಂಸ್ಕೃತಿ ಕನ್ವೆನ್ಷನ್ ಹಾಲ್ ನಲ್ಲಿ ಶಿಬಿರ ಆಯೋಜಿಸಲಾಗಿತ್ತು. ಈ ಶಿಬಿರವು ಒಂದು ವಾರಗಳ ಕಾಲ ನಡೆಯಿತು. ಶಿಬಿರದಲ್ಲಿ ದೇವನಹಳ್ಳಿ ತಾಲ್ಲೂಕು ಸೇರಿದಂತೆ ಸುತ್ತಮುತ್ತಲಿನ ತಾಲೂಕು ಜಿಲ್ಲೆಗಳಿಂದಲು ಕುಡಿತಕ್ಕೆ ದಾಸರಾಗಿದ್ದ ಹತ್ತಾರು ಜನರು ಬಂದು ಕುಡಿತದ ಚಟದಿಂದ ಮುಕ್ತರಾದ್ರು..

ಮದ್ಯವರ್ಜನ ಶಿಬಿರಗಳು ಕೆಲವರು ಖಾಸಗಿಯಾಗಿ ನಡೆಸುತ್ತಿದ್ದು, ಮದ್ಯವ್ಯಸನ ಬಿಡಿಸಲು ಸಾವಿರಾರು ರೂಪಾಯಿಗಳನ್ನು ತೆತ್ತಬೇಕಾಗಿದೆ.. ಆದರೆ ಧರ್ಮಸ್ಥಳ ಕ್ಷೇತ್ರದ ವತಿಯಿಂದ ಉಚಿತವಾಗಿ ಕುಡಿತವನ್ನು ಬಿಡಿಸುತ್ತಿರುವುದು ವಿಶೇಷವಾಗಿದೆ. ಈ ಕಾರ್ಯಗಾರವು ಎಲ್ಲಾ ಕಡೆಗಳಲ್ಲೂ ಯಶಸ್ವಿಯಾಗುತ್ತ ಬಂದಿದ್ದು, ಬೂದಿಗೆರೆಯಲ್ಲಿಯೂ ಶಿಬಿರ ಯಸಶ್ವಿಯಾಗಿ ಎಲ್ಲರ ಮೆಚ್ಚುಗೆ ಗಳಿಸಿದೆ..

ಇಲ್ಲಿ ಮತ್ತೊಂದು ವಿಶೇಷ ಅಂದರೆ ಇಲ್ಲಿಗೆ ಬಂದಂತಹ ಕುಡಿತಕ್ಕೆ ತುತ್ತಾದವರೆಲ್ಲಾ ಕುಡಿತವನ್ನು ಬಿಟ್ಟು ಉತ್ತಮ ಜೀವನ ನಡೆಸುತ್ತೇವೆ ಎಂದು ಪ್ರತಿಜ್ಞೆ ಮಾಡಿದ್ರು.. ಅಲ್ಲದೇ ಎಲ್ಲರೂ ಬಿಳಿ ಸಮವಸ್ತ್ರ ಧರಿಸಿ ಇನ್ಮುಂದೆ ಕುಡಿತದಿಂದ ದೂರವಿರುತ್ತೇವೆ.. ಎಲ್ಲರೂ ಶಾಂತಿಯಿಂದ ಜೀವನ ನಡೆಸುತ್ತೇವೆ ಎಂದು ಪ್ರತಿಜ್ಞೆ ಮಾಡಿದ್ರು.. Body:NoConclusion:No
ETV Bharat Logo

Copyright © 2024 Ushodaya Enterprises Pvt. Ltd., All Rights Reserved.