ETV Bharat / state

ಅಪಘಾತದಲ್ಲಿ ಅಕ್ಕ-ತಮ್ಮ ಸಾವು: ಅಂತ್ಯಕ್ರಿಯೆ ಮಾಡಿ ಮಾನವೀಯತೆ ಮೆರೆದ ಗ್ರಾಮಸ್ಥರು

ನೀರಿನ ಟ್ಯಾಂಕರ್ ವಾಹನ​ ಡಿಕ್ಕಿ ಹೊಡೆದ ಪರಿಣಾಮ ಬೈಕ್​ನಲ್ಲಿ ತೆರಳುತ್ತಿದ್ದ ಅಕ್ಕ-ತಮ್ಮ ಸಾವನ್ನಪ್ಪಿದ್ದು, ಅವರು ಅನಾಥರಾದ ಕಾರಣ ಗ್ರಾಮಸ್ಥರೇ ಮುಂದೆ ಬಂದು ಶವ ಸಂಸ್ಕಾರ ಮಾಡಿ ಮಾನವೀಯತೆ ಮೆರೆದಿದ್ದಾರೆ.

author img

By

Published : Jun 22, 2019, 11:52 PM IST

Updated : Jun 23, 2019, 12:09 AM IST

ರಸ್ತೆ ಅಪಘಾತದಲ್ಲಿ ಅಕ್ಕ-ತಮ್ಮ ಸಾವು

ಆನೇಕಲ್: ಬೈಕ್​ಗೆ ಟ್ಯಾಂಕರ್​ ಲಾರಿ ಡಿಕ್ಕಿಯಾದ ಪರಿಣಾಮ ಬೈಕ್​ನಲ್ಲಿದ್ದ ಅಕ್ಕ-ತಮ್ಮ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಸರ್ಜಾಪುರ ನೆರಿಗಾ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ರತ್ನಮ್ಮ ಮತ್ತು ಗಿರೀಶ್ ಎಂದು ಗುರುತಿಸಲಾಗಿದ್ದು, ಇವರು ತಮಿಳುನಾಡು ಮೂಲದವರಾಗಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ವಾಸವಿದ್ದರು ಎಂದು ತಿಳಿದು ಬಂದಿದೆ. ಇಬ್ಬರೂ ಆಫೀಸಿಗೆ ಬೈಕ್​ನಲ್ಲಿ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಇನ್ನು ಶವ ಸಂಸ್ಕಾರ ಮಾಡೋದಕ್ಕೆ ಸಂಬಂಧಿಕರು ಇಲ್ಲದ ಕಾರಣ ಊರಿನ ಜನರೇ ಮುಂದೆ ಬಂದು ಶವ ಸಂಸ್ಕಾರ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಅಪಘಾತದಲ್ಲಿ ಅಕ್ಕ-ತಮ್ಮ ಸಾವು

ಆನೇಕಲ್​ ಬಳಿಯ ವರ್ತೂರು ಮುಖ್ಯ ರಸ್ತೆಯ ಗುಂಜೂರುನಿಂದ ಸರ್ಜಾಪುರ ರಸ್ತೆಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಪದೇ ಪದೇ ರಸ್ತೆ ಅಪಘಾತಗಳು ಆಗ್ತಿವೆ. ಹೀಗಾಗಿ ಈ ಮಾರ್ಗವಾಗಿ ಹೋಗೋ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿ ಮಾಡಿದೆ. ಈ ಮಾರ್ಗದಲ್ಲಿ ಲಾರಿಗಳು, ಭಾರಿ ಗಾತ್ರದ ವಾಹನಗಳ ಅಪಘಾತಗಳು ಹೆಚ್ಚಾಗುತ್ತಿವೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಘಟನಾ ಸ್ಥಳಕ್ಕೆ ಡಿವೈಎಸ್ಪಿ ನಂಜುಂಡಗೌಡ ಭೇಟಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಟ್ಯಾಂಕರ್ ಚಾಲಕ ಪರಾರಿಯಾದ್ದು, ಅತನ ಪತ್ತೆಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಈ ಸಂಬಂಧ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆನೇಕಲ್: ಬೈಕ್​ಗೆ ಟ್ಯಾಂಕರ್​ ಲಾರಿ ಡಿಕ್ಕಿಯಾದ ಪರಿಣಾಮ ಬೈಕ್​ನಲ್ಲಿದ್ದ ಅಕ್ಕ-ತಮ್ಮ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಸರ್ಜಾಪುರ ನೆರಿಗಾ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ರತ್ನಮ್ಮ ಮತ್ತು ಗಿರೀಶ್ ಎಂದು ಗುರುತಿಸಲಾಗಿದ್ದು, ಇವರು ತಮಿಳುನಾಡು ಮೂಲದವರಾಗಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ವಾಸವಿದ್ದರು ಎಂದು ತಿಳಿದು ಬಂದಿದೆ. ಇಬ್ಬರೂ ಆಫೀಸಿಗೆ ಬೈಕ್​ನಲ್ಲಿ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಇನ್ನು ಶವ ಸಂಸ್ಕಾರ ಮಾಡೋದಕ್ಕೆ ಸಂಬಂಧಿಕರು ಇಲ್ಲದ ಕಾರಣ ಊರಿನ ಜನರೇ ಮುಂದೆ ಬಂದು ಶವ ಸಂಸ್ಕಾರ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಅಪಘಾತದಲ್ಲಿ ಅಕ್ಕ-ತಮ್ಮ ಸಾವು

ಆನೇಕಲ್​ ಬಳಿಯ ವರ್ತೂರು ಮುಖ್ಯ ರಸ್ತೆಯ ಗುಂಜೂರುನಿಂದ ಸರ್ಜಾಪುರ ರಸ್ತೆಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಪದೇ ಪದೇ ರಸ್ತೆ ಅಪಘಾತಗಳು ಆಗ್ತಿವೆ. ಹೀಗಾಗಿ ಈ ಮಾರ್ಗವಾಗಿ ಹೋಗೋ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿ ಮಾಡಿದೆ. ಈ ಮಾರ್ಗದಲ್ಲಿ ಲಾರಿಗಳು, ಭಾರಿ ಗಾತ್ರದ ವಾಹನಗಳ ಅಪಘಾತಗಳು ಹೆಚ್ಚಾಗುತ್ತಿವೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಘಟನಾ ಸ್ಥಳಕ್ಕೆ ಡಿವೈಎಸ್ಪಿ ನಂಜುಂಡಗೌಡ ಭೇಟಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಟ್ಯಾಂಕರ್ ಚಾಲಕ ಪರಾರಿಯಾದ್ದು, ಅತನ ಪತ್ತೆಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಈ ಸಂಬಂಧ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:KN_BNG_ANKL_02_22_ACCIDENT_S_MUNIRAJU_KA10020
ರಸ್ತೆ ಅಪಘಾತದಲ್ಲಿ ಅಕ್ಕ ತಮ್ಮ ಸಾವು.
ಆನೇಕಲ್,
ಅವರಿಬ್ಬರು ಅಪ್ಪಅಮ್ಮ ಇಲ್ಲದ ಅನಾಥ ಅಣ್ಣತಂಗಿಯರು ಇಬ್ಬರು ಇಂದು ಮುಂಜಾನೆ ಕೆಲಸಕ್ಕೆಂದು ಮನೆಯಿಂದ ಆಫೀಸಿಗೆ ಬೈಕ್ ನಲ್ಲಿ ಹೊರೆಟಿದ್ದರು. ರಸ್ತೆಯಲ್ಲಿ ತೆರಳುವಾಗ ಅತಿ ವೇಗವಾಗಿ ಬಂದ ನೀರಿನ ಟ್ಯಾಂಕರ್ ಬೈಕ್ಗೆ ಡಿಕ್ಕಿ ಹೊಡೆದಿದೆ.. ..ಡಿಕ್ಕಿ ರಭಸಕ್ಕೆ ಇಬ್ಬರು ಸ್ಥಳದಲ್ಲೆ ಮೃತಪಟ್ಟಿದ್ದು, ಆಫೀಸ್ಗೆ ಹೋಗಬೇಕಾಗಿದ್ದ ಇಬ್ಬರು ಯಮಲೋಕಕ್ಕೆ ಹಾರಿದ್ದಾರೆ.. ಅದರಲ್ಲೂ ಶವಸಂಸ್ಕಾರ ಮಾಡೋದಕ್ಕೆ ಸಂಬಂಧಿಕರು ಇಲ್ಲದ ಕಾರಣಕ್ಕೆ ಊರಿನ ಗ್ರಾಮಸ್ಥರೆ ಮುಂದೆ ಬಂದು ಶವಸಂಸ್ಕಾರ ಮಾಡಿ ಮಾನವೀಯತೆ ಮೆರೆದಿದ್ದಾರೆ. ಅಷ್ಟಕ್ಕೂ ಈ ಹೃದಯವಿದ್ರಾವಕ ಘಟನೆ ನಡೆದಿದ್ದಾದರೂ ಎಲ್ಲಿ ಅಂತೀರಾ. ಈ ಸ್ಟೋರಿ ನೋಡಿ.
ಬೈಟ್1: ಯೋಗೀಶ್ , ಪಂಚಾಯ್ತಿ ಅಧ್ಯಕ್ಷ.

.

Body:
ಬೈಟ್1: ಯೋಗೀಶ್ , ಪಂಚಾಯ್ತಿ ಅಧ್ಯಕ್ಷ.
ವಾ.ಓ. ಹೀಗೆ ಫೋಟೊದಲ್ಲಿ ಕಾಣುತ್ತಿರುವವರು ರತ್ನಮ್ಮ ಮತ್ತು ಗಿರೀಶ್ ಅಂತ. ತಮಿಳುನಾಡಿನಿಂದ ಬಂದು ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಸರ್ಜಾಪುರ ನೆರಿಗಾ ಗ್ರಾಮದಲ್ಲಿ ವಾಸವಾಗಿದ್ದರು...ಇಂದು ಬೆಳಿಗ್ಗೆ ಈ ಅಣ್ಣತಂಗಿಗೆ ಜವರಾಯ ರಸ್ತೆಯಲ್ಲಿ ಕಾದುಕುಳಿತಿದ್ದ ಅನ್ಸುತ್ತೆ , ಬೈಕ್ ನಲ್ಲಿ ಕೆಲಸಕ್ಕೆಂದು ಅಪೀಸಿಗೆ ತೆರಳುತ್ತಿದ್ದ ಇಬ್ಬರು ಅಪಘಾತದಲ್ಲಿ ಬಲಿಯಾಗಿದ್ದಾರೆ . ರತ್ನಮ್ಮ ಮತ್ತು ಗಿರೀಶ್ ಒಂದೇ ಬೈಕ್ ನಲ್ಲಿ ನೆರಿಗಾ ಗ್ರಾಮದಿಂದ ಗುಂಜೂರು ಕಡೆಗೆ ಹೋಗುವಾಗ ಮುಂಜಾನೆ 5:30 ಸಮಯದಲ್ಲಿ ಟ್ಯಾಂಕರ್ ಲಾರಿ ಬೈಕ್ ಡಿಕ್ಕಿ ಹೊಡೆದಿದೆ... ಡಿಕ್ಕಿಯ ರಭಸಕ್ಕೆ ಇಬ್ಬರು ಸಾವನಪ್ಪಿದ್ದಾರೆ.. ಇನ್ನು ಮೃತರ ಸಂಬಂಧಿಕರ ಇಲ್ಲದ ಕಾರಣಕ್ಕೆ ಪಂಚಾಯಿತಿ ಸದಸ್ಯರು ಊರಿನ ಗ್ರಾಮಸ್ಥರು ಹಣ ಸಂಗ್ರಹ ಮಾಡಿ ಶವಸಂಸ್ಕಾರ ಮಾಡಿ ಮಾನವೀಯತೆ ಮರೆತಿದ್ದಾರೆ.
ಬೈಟ್2: ಮಂಜುನಾಥ್, ಸ್ಥಳೀಯ.
ವಾ.. ಇನ್ನೂ 5.30 ಸಮಯದಲ್ಲಿ ರಸ್ತೆ ಅಪಘಾತ ಸಂಭವಿಸಿದ್ದು.. ಟ್ಯಾಂಕರ್ ನ ಚಾಲಕ ನಿದ್ರೆಯ ಮಂಪರಿನಲ್ಲಿ ಗಾಡಿ ಚಲಿಸುತ್ತಿದ್ದೇ ಈ ದುರಂತಕ್ಕೆ ಕಾರಣ ಅಂತ ಪೊಲೀಸರು ಶಂಕಿಸಿದ್ದಾರೆ. ವರ್ತೂರು ಮುಖ್ಯರಸ್ತೆಯ ಗುಂಜೂರು ನಿಂದ ಸರ್ಜಾಪುರ ರಸ್ತೆಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಪದೇ ಪದೇ ರಸ್ತೆ ಅಪಘಾತಗಳು ಆಗ್ತಿದೆ. ಹೀಗಾಗಿ ಮಾರ್ಗವಾಗಿ ಚಲಿಸುವ ಸಾರ್ವಜನಿಕರು ಆತಂಕ ಸೃಷ್ಟಿ ಮಾಡಿದೆ.. ಅದರಲ್ಲೂ ಪೊಲೀಸರ ಕಣ್ತಪ್ಪಿಸಿ ಬರುವ ಈ ಮಾರ್ಗದಲ್ಲಿ ಲಾರಿಗಳು ಭಾರಿ ಗಾತ್ರದ ವಾಹನಗಳು ಅಪಘಾತಗಳು ಆಗ್ತಿರೋದು ಎಂದು ಊರಿನ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು... .

Conclusion: ಘಟನಾ ಸ್ಥಳಕ್ಕೆ ಡಿವೈಎಸ್ಪಿ ನಂಜುಂಡಗೌಡ ಭೇಟಿ ಮಾಡಿ ಸ್ಥಳ ಪರಿಶೀಲನೆ ಮಾಡಿದರು ,ರಸ್ತೆ ಅಫಘಾತ ಮಾಡಿದ ಟ್ಯಾಕರ್ ಚಾಲಕ ಪರಾರಿಯಾಗಿದ್ದ ಅತನ ಪತ್ತೆಗಾಗಿ ಹುಡುಕಾಟ ನಡೆಸಿದ್ದು,
ಈ ಸಂಭಂಧ ಸರ್ಜಾಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ...
ವಾ.ಓ. ಒಟ್ಟಾರೆ ಕೆಲಸಕ್ಕೆಂದು ತರೆಳಿದ್ದ ಅಣ್ಣ ತಂಗಿ ಇಬ್ಬರು ವಿಧಿಯಾಟಕ್ಕೆ ಬಲಿಯಾಗಿ ಮಸಣ ಸೇರಿದ್ದು ಮಾತ್ರ ನಿಜಕ್ಕೂ ದುರ್ದೈವ .

Last Updated : Jun 23, 2019, 12:09 AM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.