ETV Bharat / state

ರಾಜ್ಯೋತ್ಸವ ಪುರಸ್ಕೃತ ಡಾಕ್ಟರ್​ಗೆ ಸ್ವಗ್ರಾಮದಲ್ಲಿ ಅದ್ಧೂರಿ ಮೆರವಣಿಗೆ - Rajyotsava honored Doctor Aanjanappa

ಸಾವಿರಾರು ಆಪರೇಷನ್​​ ಮಾಡಿ ದಾಖಲೆ ಬರೆದ ಖ್ಯಾತ ಸರ್ಜನ್ ಡಾ. ಆಂಜನಪ್ಪರವರಿಗೆ ರಾಜ್ಯೋತ್ಸವ ಪ್ರಶಸ್ತಿ ದೊರೆತ ಹಿನ್ನೆಲೆ, ಸ್ವಗ್ರಾಮದಲ್ಲಿ ಊರಿನವರಿಂದ ಅದ್ಧೂರಿ ಸ್ವಾಗತ ದೊರೆಯಿತು.

ರಾಜ್ಯೋತ್ಸವ ಪುರಸ್ಕೃತ ಡಾಕ್ಟರ್ ಗೆ ಅದ್ಧೂರಿ ಸ್ವಾಗತ
author img

By

Published : Nov 23, 2019, 9:37 PM IST

ದೊಡ್ಡಬಳ್ಳಾಪುರ : ಒಂದೇ ರಾತ್ರಿ 10 ಜನರಿಗೆ ಆಪರೇಷನ್ ಮಾಡಿ ದಾಖಲೆ ಬರೆದ ಖ್ಯಾತ ಸರ್ಜನ್ ಡಾ. ಆಂಜನಪ್ಪರವರಿಗೆ ರಾಜ್ಯೋತ್ಸವ ಪುರಸ್ಕಾರ ಸಿಕ್ಕ ಹಿನ್ನೆಲೆ, ಗ್ರಾಮದ ಹೆಮ್ಮೆಯ ಪುತ್ರನಿಗೆ ಸ್ವಂತ ಊರಿನ ಜನತೆ ಅದ್ಧೂರಿ ಮೆರವಣಿಗೆ ಮಾಡಿ ಅಭಿನಂದನೆ ಸಲ್ಲಿಸಿದರು.

ರಾಜ್ಯೋತ್ಸವ ಪುರಸ್ಕೃತ ಡಾಕ್ಟರ್ ಗೆ ಅದ್ಧೂರಿ ಸ್ವಾಗತ

ಕಾರ್ಯಕ್ರಮದ ಹಿನ್ನೆಲೆ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡ ತುಮಕೂರು ಗ್ರಾಮ ಕನ್ನಡಹಬ್ಬಕ್ಕೆ ಸಿದ್ಧಗೊಂಡಂತಿತ್ತು. ಗ್ರಾಮದ ಮೂಲೆ ಮೂಲೆಯಲ್ಲೂ ಕನ್ನಡದ ಬಾವುಟ ಹಾರಾಡುತ್ತಿದ್ದವು. ರಾಜ್ಯದಲ್ಲಿ ತಮ್ಮೂರಿನ ಕೀರ್ತಿ ಬೆಳುಗುವಂತೆ ಮಾಡಿದ ಡಾಕ್ಟರ್​​ನ್ನು ಅಶ್ವರೂಢ ಅಲಂಕೃತ ವಾಹನದ ಮೂಲಕ ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯಲ್ಲಿ ಶಾಲಾ ಮಕ್ಕಳು, ಗ್ರಾಮಸ್ಥರು ಹೆಜ್ಜೆಹಾಕಿದರು. ಮೆರವಣಿಗೆಯಲ್ಲಿ ಸಾಗಿದ ವೀರೆಗಾಸೆ ಕುಣಿತ ಎಲ್ಲರನ್ನು ಆಕರ್ಷಿಸಿತು. ಗ್ರಾಮಸ್ಥರಿಂದ ಅಭಿನಂದನೆ ಸ್ವೀಕರಿಸಿದ ಡಾ. ಆಂಜನಪ್ಪ, ಗ್ರಾಮದ ಜನರ ಪ್ರೀತಿ ಗೌರವಕ್ಕೆ ತಲೆಬಾಗಿ, ಸುತ್ತಮುತ್ತಲಿನ ಗ್ರಾಮಸ್ಥರಿಗೆ ನೆರವಾಗಲು ಆಸ್ಪತ್ರೆ ಕಟ್ಪಿಸುವುದಾಗಿ ಹೇಳಿದರು.

ಉದರ ಸರ್ಜನ್ ಆಗಿ ಖ್ಯಾತಿಗಳಿಸಿರುವ ಡಾ.ಆಂಜನಪ್ಪ, ಸಾವಿರಾರು ಅಪರೇಷನ್ ಮಾಡಿದ್ದಾರೆ. ತಮ್ಮದೇ ಊರಿನ 150 ಜನರಿಗೆ ಅಪರೇಷನ್ ಮಾಡಿ ಮರುಜನ್ಮ ನೀಡಿದ್ದಾರೆ. 1987 ರಲ್ಲಿ ಬೋರಿಂಗ್ ಆಸ್ಪತ್ರೆಯಲ್ಲಿ ಒಂದೇ ರಾತ್ರಿ 10 ಜನರಿಗೆ ಅಪರೇಷನ್ ಮಾಡಿದ ಖ್ಯಾತಿ ಅವರಿಗಿದೆ. ಮಹಿಳೆಯೊಬ್ಬರ ಹೊಟ್ಟೆಯಿಂದ ಆಪರೇಷನ್ ಮೂಲಕ 23 ಕೆಜಿ ಟ್ಯೂಮರ್ ತೆಗೆದ ದಾಖಲೆ ಸಹ ಅವರ ಹೆಸರಲ್ಲಿದೆ.

ದೊಡ್ಡಬಳ್ಳಾಪುರ : ಒಂದೇ ರಾತ್ರಿ 10 ಜನರಿಗೆ ಆಪರೇಷನ್ ಮಾಡಿ ದಾಖಲೆ ಬರೆದ ಖ್ಯಾತ ಸರ್ಜನ್ ಡಾ. ಆಂಜನಪ್ಪರವರಿಗೆ ರಾಜ್ಯೋತ್ಸವ ಪುರಸ್ಕಾರ ಸಿಕ್ಕ ಹಿನ್ನೆಲೆ, ಗ್ರಾಮದ ಹೆಮ್ಮೆಯ ಪುತ್ರನಿಗೆ ಸ್ವಂತ ಊರಿನ ಜನತೆ ಅದ್ಧೂರಿ ಮೆರವಣಿಗೆ ಮಾಡಿ ಅಭಿನಂದನೆ ಸಲ್ಲಿಸಿದರು.

ರಾಜ್ಯೋತ್ಸವ ಪುರಸ್ಕೃತ ಡಾಕ್ಟರ್ ಗೆ ಅದ್ಧೂರಿ ಸ್ವಾಗತ

ಕಾರ್ಯಕ್ರಮದ ಹಿನ್ನೆಲೆ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡ ತುಮಕೂರು ಗ್ರಾಮ ಕನ್ನಡಹಬ್ಬಕ್ಕೆ ಸಿದ್ಧಗೊಂಡಂತಿತ್ತು. ಗ್ರಾಮದ ಮೂಲೆ ಮೂಲೆಯಲ್ಲೂ ಕನ್ನಡದ ಬಾವುಟ ಹಾರಾಡುತ್ತಿದ್ದವು. ರಾಜ್ಯದಲ್ಲಿ ತಮ್ಮೂರಿನ ಕೀರ್ತಿ ಬೆಳುಗುವಂತೆ ಮಾಡಿದ ಡಾಕ್ಟರ್​​ನ್ನು ಅಶ್ವರೂಢ ಅಲಂಕೃತ ವಾಹನದ ಮೂಲಕ ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯಲ್ಲಿ ಶಾಲಾ ಮಕ್ಕಳು, ಗ್ರಾಮಸ್ಥರು ಹೆಜ್ಜೆಹಾಕಿದರು. ಮೆರವಣಿಗೆಯಲ್ಲಿ ಸಾಗಿದ ವೀರೆಗಾಸೆ ಕುಣಿತ ಎಲ್ಲರನ್ನು ಆಕರ್ಷಿಸಿತು. ಗ್ರಾಮಸ್ಥರಿಂದ ಅಭಿನಂದನೆ ಸ್ವೀಕರಿಸಿದ ಡಾ. ಆಂಜನಪ್ಪ, ಗ್ರಾಮದ ಜನರ ಪ್ರೀತಿ ಗೌರವಕ್ಕೆ ತಲೆಬಾಗಿ, ಸುತ್ತಮುತ್ತಲಿನ ಗ್ರಾಮಸ್ಥರಿಗೆ ನೆರವಾಗಲು ಆಸ್ಪತ್ರೆ ಕಟ್ಪಿಸುವುದಾಗಿ ಹೇಳಿದರು.

ಉದರ ಸರ್ಜನ್ ಆಗಿ ಖ್ಯಾತಿಗಳಿಸಿರುವ ಡಾ.ಆಂಜನಪ್ಪ, ಸಾವಿರಾರು ಅಪರೇಷನ್ ಮಾಡಿದ್ದಾರೆ. ತಮ್ಮದೇ ಊರಿನ 150 ಜನರಿಗೆ ಅಪರೇಷನ್ ಮಾಡಿ ಮರುಜನ್ಮ ನೀಡಿದ್ದಾರೆ. 1987 ರಲ್ಲಿ ಬೋರಿಂಗ್ ಆಸ್ಪತ್ರೆಯಲ್ಲಿ ಒಂದೇ ರಾತ್ರಿ 10 ಜನರಿಗೆ ಅಪರೇಷನ್ ಮಾಡಿದ ಖ್ಯಾತಿ ಅವರಿಗಿದೆ. ಮಹಿಳೆಯೊಬ್ಬರ ಹೊಟ್ಟೆಯಿಂದ ಆಪರೇಷನ್ ಮೂಲಕ 23 ಕೆಜಿ ಟ್ಯೂಮರ್ ತೆಗೆದ ದಾಖಲೆ ಸಹ ಅವರ ಹೆಸರಲ್ಲಿದೆ.

Intro:ರಾಜ್ಯೋತ್ಸವ ಪುರಸ್ಕೃತ ಡಾಕ್ಟರ್ ಗೆ ಸ್ವಗ್ರಾಮದಲ್ಲಿ ಅದ್ಧೂರಿ ಮೆರವಣಿಗೆ

ಒಂದೇ ದಿನ 10 ಜನರಿಗೆ ಅಪರೇಷನ್ ನಡೆಸಿದ ಖ್ಯಾತ ಸರ್ಜನ್
Body:ದೊಡ್ಡಬಳ್ಳಾಪುರ : ಸಾಮಾನ್ಯ ಕೃಷಿ ಕುಟುಂಬದಲ್ಲಿ ಹುಟ್ಪಿದ ಹುಡುಗ ಎಸ್ಸೆಸ್ಸೆಲ್ಸಿ ಯಲ್ಲಿ ಪ್ರಥಮ ಸ್ಥಾನ ಪಡೆದು ಸರ್ಕಾರಿ ಮೆಡಿಕಲ್ ಕಾಲೇಜ್ ನಲ್ಲಿ ಎಂಬಿಬಿಎಸ್ ರೈತನ ತಮ್ಮ ವೈದ್ಯ ಸೇವೆಯಲ್ಲಿ ಸಾವಿರಾರು ಅಪರೇಷನ್ ಮಾಡಿ ಬಡ ರೋಗಿಗಳ ಪ್ರಾಣ ಉಳಿಸಿದ್ದಾರೆ. ಒಂದೇ ರಾತ್ರಿ 10 ಜನರಿಗೆ ಆಪರೇಷನ್ ಮಾಡಿದ ದಾಖಲೆ ಸಹ ಅವರ ಹೆಸರಲ್ಲಿದೆ. ಖ್ಯಾತ ಸರ್ಜನ್ ಡಾ. ಆಂಜನಪ್ಪರವರಿಗೆ ರಾಜ್ಯೋತ್ಸವ ಪುರಸ್ಕರ ಸಿಕ್ಕಿದೆ. ಗ್ರಾಮದ ಹೆಮ್ಮೆಯ ಪುತ್ರನಿಗೆ ಅದ್ಧೂರಿ ಮೆರವಣಿಗೆ ಮಾಡಿ ಅಭಿಗನಂದನೆ ಸಲ್ಲಿಸಿದ್ದರು.

ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡತುಮಕೂರು ಗ್ರಾಮದಲ್ಲಿ ಇಂದು ಕನ್ನಡ ಹಬ್ಬ.. ಗ್ರಾಮದ ಮೂಲೆ ಮೂಲೆಯಲ್ಲೂ ಕನ್ನಡದ ಬಾವುಟ ಹಾರಾಡುತ್ತಿದ್ದವು..ಅದಕ್ಕೆ ಕಾರಣವಾಗಿದ್ದು ಗ್ರಾಮದ ಹೆಮ್ಮೆಯ ಪುತ್ರ ಡಾ.ಆಂಜನಪ್ಷರವರಿಗೆ ರಾಜ್ಯ ಸರ್ಕಾರದ ರಾಜ್ಯೋತ್ಸವ ಪುರಸ್ಕಾರ ಸಿಕ್ಕಿದೆ..ರಾಜ್ಯದಲ್ಲಿ ತಮ್ಮೂರಿನ ಕೀರ್ತಿ ಬೆಳುಗುವಂತೆ ಮಾಡಿದ ಡಾಕ್ಟರ್ ಗೆ ಅಭಿನಂದನಾ ಕಾರ್ಯಕ್ರಮ ಅಯೋಜನೆ ಮಾಡಲಾಗಿತ್ತು. ಅಶ್ವರೂಢ ಅಲಂಕೃತ ವಾಹನದಲ್ಲಿ ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು.ಮೆರವಣಿಗೆಯಲ್ಲಿ ಶಾಲಾ ಮಕ್ಕಳು . ಗ್ರಾಮಸ್ಥರು ಹೆಜ್ಜೆಹಾಕಿದ್ದರು ಮೆರವಣಿಗೆಯಲ್ಲಿ ಸಾಗಿದ ವೀರೆಗಾಸೆ ಕುಣಿತ ಎಲ್ಲರನ್ನು ಆಕರ್ಷಿಸಿತು. ಗ್ರಾಮಸ್ಥರಿಂದ ಅಭಿನಂದನೆ ಸ್ವೀಕರಿಸಿ ಡಾ. ಆಂಜನಪ್ಪರ ಪ್ರೀತಿ ಗೌರವಕ್ಕೆ ತಲೆಬಾಗಿ ಸುತ್ತಮುತ್ತಲಿನ ಗ್ರಾಮಸ್ಥರಿಗೆ ನೇರವಾಗಲು ಆಸ್ಪತ್ರೆ ಕಟ್ಪಿಸುವುದ್ದಾಗಿ ಹೇಳಿದರು.

01a-ಬೈಟ್ : ಡಾ. ಆಂಜನಪ್ಪ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು.

ಗ್ರಾಮದಲ್ಲಿನ ಬಡ ರೋಗಿಗಳಿಗೆ ಡಾ. ಆಂಜನಪ್ಪ ಮಾಡಿದ ಸಹಾಯ ಅದರ ಪ್ರತಿಫಲವಾಗಿ ಗ್ರಾಮಸ್ಥರೇಲ್ಲ ಸೇರಿ ಅಭಿನಂದನಾ ಸಮಾರಂಭ ಅಯೋಜಸಿದ್ದರು. ಉದರ ಸರ್ಜನ್ ಅಂತಾನೇ ಖ್ಯಾತಿಗಳಿಸಿರುವ ಡಾ.ಆಂಜನಪ್ಪ ಸಾವಿರಾರು ಅಪರೇಷನ್ ಮಾಡಿದ್ದಾರೆ ತಮ್ಮದೇ ಊರಿನ 150 ಜನರಿಗೆ ಅಪರೇಷನ್ ಮಾಡಿ ಮರುಜನ್ಮ ನೀಡಿದ್ದಾರೆ. 1987 ರಲ್ಲಿ ಬೋರಿಂಗ್ ಆಸ್ಪತ್ರೆಯಲ್ಲಿ ಒಂದೇ ರಾತ್ರಿ 10 ಜನರಿಗೆ ಅಪರೇಷನ್ ಮಾಡಿದ ಖ್ಯಾತಿ ಅವರಿಗಿದೆ. ಮಹಿಳೆಯೊಬ್ಬರ ಹೊಟ್ಪೆಯಿಂದ ಆಪರೇಷನ್ ಮೂಲಕ 23 ಕೆಜಿ ಟ್ಯೂಮರ್ ತೆಗೆದ ದಾಖಲೆ ಸಹ ಅವರ ಹೆಸರಲ್ಲಿದೆ.

01b- ಬೈಟ್ : ನಾಗರಾಜ್ , ಡಾ. ಆಂಜನಪ್ಪ ಸ್ನೇಹಿತರು.

ಕನ್ನಡ ಮಾಧ್ಯಮದಲ್ಲಿ ಓದಿದ ಡಾಕ್ಟರ್ ಆಂಜನಪ್ಪ ದೇಶ ವಿದೇಶಗಳಲ್ಲಿ ಉಪನ್ಯಾಸ ನೀಡುವಷ್ಟು ಖ್ಯಾತಿ ಗಳಿಸಿದ್ದಾರೆ. ಬಡ ರೋಗಿಗಳ ಸೇವಾನಿರತ ಡಾ.ಆಂಜನಪ್ಪರವರಿಗೆ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿದ್ದು ಗ್ರಾಮಸ್ಥರ ಗರ್ವ ಪಡುವಂತೆ ಮಾಡಿತು.
Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.