ETV Bharat / state

55 ಕೋವಿಡ್ ಕೇರ್ ಸೆಂಟರ್, ತಾತ್ಕಾಲಿಕ ಲಸಿಕಾ ಕ್ಯಾಂಪ್​​ ಬಂದ್: ಬಿಬಿಎಂಪಿ ಆಯುಕ್ತ

author img

By

Published : Jul 15, 2021, 3:22 PM IST

ಪ್ರಸ್ತುತ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದ್ದು ಆಸ್ಪತ್ರೆಗೆ ಹಾಗೂ ಸಿಸಿಸಿ ಸೆಂಟರ್​​ಗಳಿಗೆ ದಾಖಲಾಗುವವರ ಪ್ರಮಾಣ ಕಡಿಮೆಯಾಗಿದೆ. ದಿನಕ್ಕೆ 30ಕ್ಕಿಂತಲೂ ಕಡಿಮೆ ಜನರು ಮಾತ್ರ ದಾಖಲಾಗುತ್ತಿದ್ದು, ಎಲ್ಲಾ ಸಿಸಿಸಿ ಕೇಂದ್ರಗಳನ್ನು ಹಳೆಯ ಮಾದರಿಯಲ್ಲಿ ಮುಂದುವರಿಸಲು ಸಾಧ್ಯವಿಲ್ಲ. ಇನ್ನು ನಗರದ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಸಿಗದ ಕಾರಣ ಕೇಂದ್ರಗಳನ್ನು ಮುಚ್ಚಲಾಗುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಮಾಹಿತಿ ನೀಡಿದರು.

BBMP Commissioner Gaurav Gupta
ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ

ಬೆಂಗಳೂರು: ಕೋವಿಡ್ 2ನೇ ಅಲೆ ನಿಯಂತ್ರಣಕ್ಕೆ ನಗರದ ಸುಮಾರು 60 ಕಡೆಗಳಲ್ಲಿ ಟ್ರಯಾಜಿಂಗ್ ಸೆಂಟರ್ ಹಾಗೂ ಕೋವಿಡ್ ಕೇರ್ ಸೆಂಟರ್​​ಗಳನ್ನು ಆರಂಭಿಸಲಾಗಿತ್ತು. ಈ ಪೈಕಿ 30 ಕಡೆಗಳಲ್ಲಿ 10ಕ್ಕಿಂತ ಹೆಚ್ಚು ಬೆಡ್​​ಗಳಿವೆ. ಎಲ್ಲಾ ಸೇರಿ ಸುಮಾರು 3 ಸಾವಿರ ಬೆಡ್​​​ಗಳಿದ್ದವು. ಇದೀಗ 55 ಕೋವಿಡ್ ಕೇರ್​​ ಕೇಂದ್ರಗಳನ್ನು ಬಂದ್ ಮಾಡಿದ್ದು, ಹತ್ತರಲ್ಲಿ ಕೇವಲ 40 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಬಗ್ಗೆ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ಪ್ರಸ್ತುತ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿರುವುದರಿಂದ ಆಸ್ಪತ್ರೆಗೆ ಹಾಗೂ ಸಿಸಿಸಿ ಸೆಂಟರ್​​ಗಳಿಗೆ ದಾಖಲಾಗುವವರ ಪ್ರಮಾಣ ಕಡಿಮೆಯಾಗಿದೆ. ದಿನಕ್ಕೆ 30ಕ್ಕಿಂತಲೂ ಕಡಿಮೆ ಜನರು ಮಾತ್ರ ದಾಖಲಾಗುತ್ತಿದ್ದು, ಎಲ್ಲಾ ಸಿಸಿಸಿ ಕೇಂದ್ರಗಳನ್ನು ಹಳೆಯ ಮಾದರಿಯಲ್ಲಿ ಮುಂದುವರಿಸಲು ಸಾಧ್ಯವಿಲ್ಲ. ಹೀಗಾಗಿ ಆಸ್ಪತ್ರೆಗಳ ಕೋವಿಡ್ ಬೆಡ್​​ಗಳನ್ನು 13 ಸಾವಿರದಿಂದ 5 ಸಾವಿರಕ್ಕೆ ಇಳಿಸಲಾಗಿದೆ. ಮುಂದಿನ ದಿನಗಳಲ್ಲಿ ಇದನ್ನು 1800 ಹಾಸಿಗೆಗಳಿಗೆ ಇಳಿಸುವ ಪ್ರಸ್ತಾವನೆ ಇದೆ. 30 ಸಿಸಿಸಿ ಸೆಂಟರ್​​ಗಳನ್ನು 8ಕ್ಕೆ ಕಡಿಮೆ ಮಾಡಲಾಗುವುದು. 200 ರಿಂದ 300 ಬೆಡ್​​ಗಳನ್ನು ಮುಂದುವರಿಸಿಕೊಂಡು ಹೋಗಲಾಗುವುದು ಎಂದು ತಿಳಿಸಿದರು.

ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ

3ನೇ ಅಲೆಯ ಸಲುವಾಗಿ ಬಂದ್ ಮಾಡಿರುವ ಸಿಸಿಸಿ ಸೆಂಟರ್​​ಗಳನ್ನೇ ಬಳಸಲಾಗುವುದು. ಅಲ್ಲಿರುವ ವ್ಯವಸ್ಥೆ, ಮೂಲಸೌಕರ್ಯ ಹಾಗೇ ಇವೆ. ಪ್ರತಿ ತಿಂಗಳು ಈ ಸಿಸಿಸಿ ಸೆಂಟರ್​​ಗಳ ನಿರ್ವಹಣೆಗೆ ಒಂದಕ್ಕೆ 4 ಲಕ್ಷ ರೂ. ಖರ್ಚಾಗುತ್ತಿದೆ. ಊಟ, ತಿಂಡಿ ವ್ಯವಸ್ಥೆ, ಸ್ವಚ್ಛತೆ ಕಾರ್ಮಿಕರು ಎಲ್ಲವೂ ನಿರ್ವಹಣೆಯಾಗುತ್ತಿದೆ. ಎರಡು ಮೂರು ತಿಂಗಳು ಇದೇ ರೀತಿ ನಿರ್ವಹಣೆಯಾಗಲಿದೆ ಎಂದರು.

ಕೋವಿಡ್​​ 3ನೇ ಅಲೆಗೆ ನಗರದಲ್ಲಿ ತುರ್ತಾಗಿ 1,190 ಬೆಡ್​​ಗಳನ್ನು ಸಜ್ಜುಗೊಳಿಸುವಂತೆ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಬಿಬಿಎಂಪಿಗೆ ಶಿಫಾರಸು ಮಾಡಿದೆ. 17 ಮೆಡಿಕಲ್ ಕಾಲೇಜುಗಳಲ್ಲಿನ ಪಿಐಸಿಯು (ಪಿಡಿಯಾಟ್ರಿಕ್ ಐಸಿಯು), ಹೆಚ್​​ಡಿಯು, ಎನ್​​ಐಸಿಯು ಬೆಡ್​​ಗಳನ್ನು ಹೆಚ್ಚಿಸುವಂತೆ ತಿಳಿಸಿದೆ. ಒಟ್ಟಾರೆ 280 ಪಿಐಸಿಯು, 670 ಹೆಚ್​​ಡಿಯು, 240 ಎನ್​​ಐಸಿಯು ಬೆಡ್​​ಗಳ ನಿಯೋಜನೆಗೆ ಸಮಿತಿ ಶಿಫಾರಸು ಮಾಡಿದೆ.

ನಗರದ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಸಿಗದ ಕಾರಣ ಕೇಂದ್ರಗಳನ್ನೇ ಮುಚ್ಚಲಾಗುತ್ತಿದೆ. ಎರಡು ರೀತಿಯ ಕೇಂದ್ರಗಳಿದ್ದು, ವಾರ್ಡ್ ಮಟ್ಟದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ 45 ವರ್ಷ ಮೇಲ್ಪಟ್ಟವರಿಗೆ ಇಲ್ಲಿ ಲಸಿಕೆ ನೀಡಲಾಗುತ್ತಿದೆ. ಇನ್ನು ಆಯ್ದ ಗುಂಪುಗಳಿಗೆ, 18 ವರ್ಷ ಮೇಲ್ಪಟ್ಟವರಿಗೆ ತಾತ್ಕಾಲಿಕ ಲಸಿಕಾ ಕ್ಯಾಂಪ್ ತೆರೆದು ಲಸಿಕೆ ನೀಡಲಾಗುತ್ತಿದೆ. ಈ ಕ್ಯಾಂಪ್‌ಗಳು ಎಲ್ಲೆಲ್ಲಿ ಅವಶ್ಯಕತೆ ಇದೆ, ಅಲ್ಲಿ ಬಳಸಿ ಬೇರೆ ಕಡೆಗೆ ವರ್ಗಾಯಿಸಲಾಗುತ್ತದೆ.

ವಿದ್ಯಾರ್ಥಿಗಳಿಗೆ ಕಾಲೇಜುಗಳಲ್ಲೇ ವ್ಯವಸ್ಥೆ ಮಾಡಲಾಗಿದೆ. 198 ವಾರ್ಡ್​ಗಳಲ್ಲಿ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಲಸಿಕೆ ಕೇಂದ್ರವನ್ನು ಯಾವ ಕಾರಣಕ್ಕೂ ಮುಚ್ಚುವುದಿಲ್ಲ. ಇನ್ನು ವಿಶೇಷ ಲಸಿಕಾ ಕ್ಯಾಂಪ್​​ಗಳನ್ನು ಲಸಿಕೆ ಲಭ್ಯತೆ ಆಧಾರದಲ್ಲಿ ಮುಂದುವರಿಸಲಾಗುವುದು ಎಂದು ಆಯುಕ್ತ ಗೌರವ್ ಗುಪ್ತಾ ತಿಳಿಸಿದರು.

ಇದನ್ನೂ ಓದಿ: ಉದ್ಯೋಗ ಯೋಜನೆ ಮೂಲಕ ಲಕ್ಷ ಕೌಶಲಯುತ ಕಾರ್ಮಿಕರ ಸೃಷ್ಟಿಸುವ ಗುರಿ: ಸಿಎಂ ಘೋಷಣೆ

ಬೆಂಗಳೂರು: ಕೋವಿಡ್ 2ನೇ ಅಲೆ ನಿಯಂತ್ರಣಕ್ಕೆ ನಗರದ ಸುಮಾರು 60 ಕಡೆಗಳಲ್ಲಿ ಟ್ರಯಾಜಿಂಗ್ ಸೆಂಟರ್ ಹಾಗೂ ಕೋವಿಡ್ ಕೇರ್ ಸೆಂಟರ್​​ಗಳನ್ನು ಆರಂಭಿಸಲಾಗಿತ್ತು. ಈ ಪೈಕಿ 30 ಕಡೆಗಳಲ್ಲಿ 10ಕ್ಕಿಂತ ಹೆಚ್ಚು ಬೆಡ್​​ಗಳಿವೆ. ಎಲ್ಲಾ ಸೇರಿ ಸುಮಾರು 3 ಸಾವಿರ ಬೆಡ್​​​ಗಳಿದ್ದವು. ಇದೀಗ 55 ಕೋವಿಡ್ ಕೇರ್​​ ಕೇಂದ್ರಗಳನ್ನು ಬಂದ್ ಮಾಡಿದ್ದು, ಹತ್ತರಲ್ಲಿ ಕೇವಲ 40 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಬಗ್ಗೆ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ಪ್ರಸ್ತುತ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿರುವುದರಿಂದ ಆಸ್ಪತ್ರೆಗೆ ಹಾಗೂ ಸಿಸಿಸಿ ಸೆಂಟರ್​​ಗಳಿಗೆ ದಾಖಲಾಗುವವರ ಪ್ರಮಾಣ ಕಡಿಮೆಯಾಗಿದೆ. ದಿನಕ್ಕೆ 30ಕ್ಕಿಂತಲೂ ಕಡಿಮೆ ಜನರು ಮಾತ್ರ ದಾಖಲಾಗುತ್ತಿದ್ದು, ಎಲ್ಲಾ ಸಿಸಿಸಿ ಕೇಂದ್ರಗಳನ್ನು ಹಳೆಯ ಮಾದರಿಯಲ್ಲಿ ಮುಂದುವರಿಸಲು ಸಾಧ್ಯವಿಲ್ಲ. ಹೀಗಾಗಿ ಆಸ್ಪತ್ರೆಗಳ ಕೋವಿಡ್ ಬೆಡ್​​ಗಳನ್ನು 13 ಸಾವಿರದಿಂದ 5 ಸಾವಿರಕ್ಕೆ ಇಳಿಸಲಾಗಿದೆ. ಮುಂದಿನ ದಿನಗಳಲ್ಲಿ ಇದನ್ನು 1800 ಹಾಸಿಗೆಗಳಿಗೆ ಇಳಿಸುವ ಪ್ರಸ್ತಾವನೆ ಇದೆ. 30 ಸಿಸಿಸಿ ಸೆಂಟರ್​​ಗಳನ್ನು 8ಕ್ಕೆ ಕಡಿಮೆ ಮಾಡಲಾಗುವುದು. 200 ರಿಂದ 300 ಬೆಡ್​​ಗಳನ್ನು ಮುಂದುವರಿಸಿಕೊಂಡು ಹೋಗಲಾಗುವುದು ಎಂದು ತಿಳಿಸಿದರು.

ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ

3ನೇ ಅಲೆಯ ಸಲುವಾಗಿ ಬಂದ್ ಮಾಡಿರುವ ಸಿಸಿಸಿ ಸೆಂಟರ್​​ಗಳನ್ನೇ ಬಳಸಲಾಗುವುದು. ಅಲ್ಲಿರುವ ವ್ಯವಸ್ಥೆ, ಮೂಲಸೌಕರ್ಯ ಹಾಗೇ ಇವೆ. ಪ್ರತಿ ತಿಂಗಳು ಈ ಸಿಸಿಸಿ ಸೆಂಟರ್​​ಗಳ ನಿರ್ವಹಣೆಗೆ ಒಂದಕ್ಕೆ 4 ಲಕ್ಷ ರೂ. ಖರ್ಚಾಗುತ್ತಿದೆ. ಊಟ, ತಿಂಡಿ ವ್ಯವಸ್ಥೆ, ಸ್ವಚ್ಛತೆ ಕಾರ್ಮಿಕರು ಎಲ್ಲವೂ ನಿರ್ವಹಣೆಯಾಗುತ್ತಿದೆ. ಎರಡು ಮೂರು ತಿಂಗಳು ಇದೇ ರೀತಿ ನಿರ್ವಹಣೆಯಾಗಲಿದೆ ಎಂದರು.

ಕೋವಿಡ್​​ 3ನೇ ಅಲೆಗೆ ನಗರದಲ್ಲಿ ತುರ್ತಾಗಿ 1,190 ಬೆಡ್​​ಗಳನ್ನು ಸಜ್ಜುಗೊಳಿಸುವಂತೆ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಬಿಬಿಎಂಪಿಗೆ ಶಿಫಾರಸು ಮಾಡಿದೆ. 17 ಮೆಡಿಕಲ್ ಕಾಲೇಜುಗಳಲ್ಲಿನ ಪಿಐಸಿಯು (ಪಿಡಿಯಾಟ್ರಿಕ್ ಐಸಿಯು), ಹೆಚ್​​ಡಿಯು, ಎನ್​​ಐಸಿಯು ಬೆಡ್​​ಗಳನ್ನು ಹೆಚ್ಚಿಸುವಂತೆ ತಿಳಿಸಿದೆ. ಒಟ್ಟಾರೆ 280 ಪಿಐಸಿಯು, 670 ಹೆಚ್​​ಡಿಯು, 240 ಎನ್​​ಐಸಿಯು ಬೆಡ್​​ಗಳ ನಿಯೋಜನೆಗೆ ಸಮಿತಿ ಶಿಫಾರಸು ಮಾಡಿದೆ.

ನಗರದ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಸಿಗದ ಕಾರಣ ಕೇಂದ್ರಗಳನ್ನೇ ಮುಚ್ಚಲಾಗುತ್ತಿದೆ. ಎರಡು ರೀತಿಯ ಕೇಂದ್ರಗಳಿದ್ದು, ವಾರ್ಡ್ ಮಟ್ಟದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ 45 ವರ್ಷ ಮೇಲ್ಪಟ್ಟವರಿಗೆ ಇಲ್ಲಿ ಲಸಿಕೆ ನೀಡಲಾಗುತ್ತಿದೆ. ಇನ್ನು ಆಯ್ದ ಗುಂಪುಗಳಿಗೆ, 18 ವರ್ಷ ಮೇಲ್ಪಟ್ಟವರಿಗೆ ತಾತ್ಕಾಲಿಕ ಲಸಿಕಾ ಕ್ಯಾಂಪ್ ತೆರೆದು ಲಸಿಕೆ ನೀಡಲಾಗುತ್ತಿದೆ. ಈ ಕ್ಯಾಂಪ್‌ಗಳು ಎಲ್ಲೆಲ್ಲಿ ಅವಶ್ಯಕತೆ ಇದೆ, ಅಲ್ಲಿ ಬಳಸಿ ಬೇರೆ ಕಡೆಗೆ ವರ್ಗಾಯಿಸಲಾಗುತ್ತದೆ.

ವಿದ್ಯಾರ್ಥಿಗಳಿಗೆ ಕಾಲೇಜುಗಳಲ್ಲೇ ವ್ಯವಸ್ಥೆ ಮಾಡಲಾಗಿದೆ. 198 ವಾರ್ಡ್​ಗಳಲ್ಲಿ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಲಸಿಕೆ ಕೇಂದ್ರವನ್ನು ಯಾವ ಕಾರಣಕ್ಕೂ ಮುಚ್ಚುವುದಿಲ್ಲ. ಇನ್ನು ವಿಶೇಷ ಲಸಿಕಾ ಕ್ಯಾಂಪ್​​ಗಳನ್ನು ಲಸಿಕೆ ಲಭ್ಯತೆ ಆಧಾರದಲ್ಲಿ ಮುಂದುವರಿಸಲಾಗುವುದು ಎಂದು ಆಯುಕ್ತ ಗೌರವ್ ಗುಪ್ತಾ ತಿಳಿಸಿದರು.

ಇದನ್ನೂ ಓದಿ: ಉದ್ಯೋಗ ಯೋಜನೆ ಮೂಲಕ ಲಕ್ಷ ಕೌಶಲಯುತ ಕಾರ್ಮಿಕರ ಸೃಷ್ಟಿಸುವ ಗುರಿ: ಸಿಎಂ ಘೋಷಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.