ETV Bharat / state

ನಿರಾಶ್ರಿತರ ಕೇಂದ್ರದ ಊಟದಲ್ಲಿ ಹುಳುಗಳು ಪತ್ತೆ: ನೋಡಲ್ ಅಧಿಕಾರಿಗಳಿಗೆ ಸಂತ್ರಸ್ತರಿಂದ ಮುತ್ತಿಗೆ

author img

By

Published : Aug 13, 2019, 1:04 PM IST

ಬಾಗಲಕೋಟೆ ಜಿಲ್ಲೆಯಲ್ಲಿನ ಭೀಕರ ಪ್ರವಾಹದಿಂದ ಸಂತ್ರಸ್ತರಾಗಿರುವ ಜನ ಒಂದೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಈ ವೇಳೆ ಅವರಿಗೆ ನೀಡಿರುವ ಊಟದಲ್ಲಿ ಹುಳುಗಳು ಪತ್ತೆಯಾಗಿವೆ ಎಂಬ ಆರೋಪ ಕೇಳಿಬಂದಿದೆ. ನಿರಾಶ್ರಿತರ ಕೇಂದ್ರದಲ್ಲಿ ಈ ಘಟನೆ ನಡೆದಿದ್ದು, ಆಕ್ರೋಶಿತರಾದ ಜನರು ನೋಡಲ್ ಅಧಿಕಾರಿಗಳಿಗೆ ಮುತ್ತಿಗೆ ಹಾಕಿದ್ದರು.

ನೂಡಲ್ ಅಧಿಕಾರಿಗಳಿಗೆ ಮುತ್ತಿಗೆ ಹಾಕಿದ ಸಂತ್ರಸ್ತರು

ಬಾಗಲಕೋಟೆ: ಜಿಲ್ಲೆಯಲ್ಲಿ ವಿಪರೀತ ಮಳೆಯುಂಟಾಗಿರುವುದರಿಂದ ಸಂತ್ರಸ್ತ ಜನತೆಯನ್ನ ನಿರಾಶ್ರಿತರ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ. ಆದರೆ, ಇಲ್ಲಿ ನೀಡುವ ಊಟದಲ್ಲಿ ಹುಳುಗಳು ಕಂಡುಬಂದಿದ್ದು, ಇದರಿಂದ ಆಕ್ರೋಶಿತರಾದ ಸಂತ್ರಸ್ತರು ನೂಡಲ್ ಅಧಿಕಾರಿಗಳಿಗೆ ಮುತ್ತಿಗೆ ಹಾಕಿ, ಸರಿ ಇಲ್ಲದ ಅನ್ನವನ್ನು ಅಧಿಕಾರಿಗಳಿಗೆ ತಿನ್ನಿಸಿರುವ ಘಟನೆ ಮುಧೋಳ ತಾಲೂಕಿನಲ್ಲಿ ನಡೆದಿದೆ.

ನಿರಾಶ್ರಿತರ ಕೇಂದ್ರದ ಊಟದಲ್ಲಿ ಹುಳುಗಳು.. ಸಂತ್ರಸ್ತರಿಂದ ನೂಡಲ್ ಅಧಿಕಾರಿಗಳಿಗೆ ಮುತ್ತಿಗೆ

ಮುಧೋಳ ತಾಲೂಕಿನ ಮಿರ್ಜಿ ಗ್ರಾಮದ ನಿರಾಶ್ರಿತರ ಕೇಂದ್ರದಲ್ಲಿ ಕಳೆದ ರಾತ್ರಿ ಈ ಘಟನೆ ನಡೆದಿದೆ. ಇದರಿಂದ ಸಂತ್ರಸ್ತರು ಪ್ರತಿಭಟನೆ ನಡೆಸಿದ್ದಾರೆ. ಕಿತ್ತೂರ ಹಾಗೂ ವಿನಾಯಕ ಮಳಲಿ ಎಂಬುವ ಗ್ರಾಮ ಲೆಕ್ಕಾಧಿಕಾರಿಗಳಿಗೆ ತರಾಟೆ ತೆಗೆದುಕೊಂಡಿದ್ದಾರೆ.

ಅಲ್ಲದೇ ಈ ಕುರಿತು ಮಹಿಳೆಯರು ಸಹ ಆಕ್ರೋಶ ವ್ಯಕ್ತಪಡಿಸಿ,ಇಂತಹ ಅನ್ನ ಊಟ ಮಾಡಿದ ನಂತರ ಮಕ್ಕಳಿಗೆ, ವೃದ್ದರಿಗೆ ಏನಾದರೂ ತೊಂದರೆ ಉಂಟಾದರೆ, ನೀವೇ ಜವಾಬ್ದಾರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಬಾಗಲಕೋಟೆ: ಜಿಲ್ಲೆಯಲ್ಲಿ ವಿಪರೀತ ಮಳೆಯುಂಟಾಗಿರುವುದರಿಂದ ಸಂತ್ರಸ್ತ ಜನತೆಯನ್ನ ನಿರಾಶ್ರಿತರ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ. ಆದರೆ, ಇಲ್ಲಿ ನೀಡುವ ಊಟದಲ್ಲಿ ಹುಳುಗಳು ಕಂಡುಬಂದಿದ್ದು, ಇದರಿಂದ ಆಕ್ರೋಶಿತರಾದ ಸಂತ್ರಸ್ತರು ನೂಡಲ್ ಅಧಿಕಾರಿಗಳಿಗೆ ಮುತ್ತಿಗೆ ಹಾಕಿ, ಸರಿ ಇಲ್ಲದ ಅನ್ನವನ್ನು ಅಧಿಕಾರಿಗಳಿಗೆ ತಿನ್ನಿಸಿರುವ ಘಟನೆ ಮುಧೋಳ ತಾಲೂಕಿನಲ್ಲಿ ನಡೆದಿದೆ.

ನಿರಾಶ್ರಿತರ ಕೇಂದ್ರದ ಊಟದಲ್ಲಿ ಹುಳುಗಳು.. ಸಂತ್ರಸ್ತರಿಂದ ನೂಡಲ್ ಅಧಿಕಾರಿಗಳಿಗೆ ಮುತ್ತಿಗೆ

ಮುಧೋಳ ತಾಲೂಕಿನ ಮಿರ್ಜಿ ಗ್ರಾಮದ ನಿರಾಶ್ರಿತರ ಕೇಂದ್ರದಲ್ಲಿ ಕಳೆದ ರಾತ್ರಿ ಈ ಘಟನೆ ನಡೆದಿದೆ. ಇದರಿಂದ ಸಂತ್ರಸ್ತರು ಪ್ರತಿಭಟನೆ ನಡೆಸಿದ್ದಾರೆ. ಕಿತ್ತೂರ ಹಾಗೂ ವಿನಾಯಕ ಮಳಲಿ ಎಂಬುವ ಗ್ರಾಮ ಲೆಕ್ಕಾಧಿಕಾರಿಗಳಿಗೆ ತರಾಟೆ ತೆಗೆದುಕೊಂಡಿದ್ದಾರೆ.

ಅಲ್ಲದೇ ಈ ಕುರಿತು ಮಹಿಳೆಯರು ಸಹ ಆಕ್ರೋಶ ವ್ಯಕ್ತಪಡಿಸಿ,ಇಂತಹ ಅನ್ನ ಊಟ ಮಾಡಿದ ನಂತರ ಮಕ್ಕಳಿಗೆ, ವೃದ್ದರಿಗೆ ಏನಾದರೂ ತೊಂದರೆ ಉಂಟಾದರೆ, ನೀವೇ ಜವಾಬ್ದಾರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

Intro:AnchorBody:ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನಲ್ಲಿ ಘಟಪ್ರಭಾ ನದಿ ಪ್ರವಾಹ ದಿಂದ ಸಂತ್ರಸ್ಥರಾದ ಜನತೆ ನಿರಾಶ್ರಿತರ ಕೇಂದ್ರದಲ್ಲಿ ಸ್ಥಳಾಂತರ ಮಾಡಲಾಗಿದೆ.ಇಂತಹ ಕೇಂದ್ರದಲ್ಲಿ ಬಿಸಿ ಊಟ ಅನ್ನ ಹಾಗೂ ಹುಳ ಇರುವ ಆಹಾರ ಧಾನ್ಯಗಳಿಂದ ಊಟ ನೀಡಲಾಗುತ್ತಿದೆ ಎಂದು ಆರೋಪಿಸಿ ಸಂತ್ರಸ್ಥರು ನೂಡಲ್ ಅಧಿಕಾರಿಗಳಿಗೆ ಮುತ್ತಿಗೆ ಹಾಕಿ,ಸರಿ ಇಲ್ಲದ ಅನ್ನವನ್ನು ಅಧಿಕಾರಿಗಳಿಗೆ ತಿನ್ನಿಸಿದ್ದಾರೆ.ಮುಧೋಳ ತಾಲೂಕಿನ ಮಿರ್ಜಿ ಗ್ರಾಮದ ನಿರಾಶ್ರಿತರ ಕೇಂದ್ರದಲ್ಲಿ ಕಳೆದ ರಾತ್ರಿ ಈ ಘಟನೆ ಜರುಗಿದ್ದು,ಸಂತ್ರಸ್ಥರು ಪ್ರತಿಭಟನೆ ನಡೆಸಿದ್ದಾರೆ.ಕಿತ್ತೂರ ಹಾಗೂ ವಿನಾಯಕ ಮಳಲಿ ಎಂಬುವ ಗ್ರಾಮ ಲೆಕ್ಕಾಧಿಕಾರಿಗಳಿಗೆ ತರಾಟೆ ತೆಗೆದುಕೊಂಡಿದ್ದರು. ಮಹಿಳೆಯರು ಸಹ ಆಕ್ರೋಶ ವ್ಯಕ್ತಪಡಿಸಿ,ಇಂತಹ ಅನ್ನ ಊಟ ಮಾಡಿದ ನಂತರ ಮಕ್ಕಳಿಗೆ, ವೃದ್ದರಿಗೆ ಏನಾದರೂ ತೊಂದರೆ ಉಂಟಾದರೆ, ನೀವೇ ಜವಾಬ್ದಾರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.Conclusion:ಈ ಟಿವಿ,ಭಾರತ,ಬಾಗಲಕೋಟೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.