ETV Bharat / state

PFI, SDPI ಹುಟ್ಟಿದ್ದೇ ಕಾಂಗ್ರೆಸ್​ನಿಂದ, ಮೊದಲು ಕಾಂಗ್ರೆಸ್​ ಬ್ಯಾನ್​ ಮಾಡಬೇಕು: ಯತ್ನಾಳ

author img

By

Published : Apr 21, 2022, 7:06 PM IST

Updated : Apr 21, 2022, 7:20 PM IST

ಎಸ್‌ಡಿಪಿಐ ಜೊತೆ ಕಾಂಗ್ರೆಸ್ ಬ್ಯಾನ್ ಮಾಡಬೇಕು. ಕೋಮು ಭಾವನೆ ಕೆರಳಿಸುವಂತೆ ಕಾಂಗ್ರೆಸ್​​ ಕೆಲಸ ಮಾಡುತ್ತಿದೆ. ಎಸ್‌ಡಿಪಿಐ ಕಾಂಗ್ರೆಸ್​ನ ಒಂದು ಮರಿ. ಪಿಎಫ್‌ಐ ಮತ್ತು ಎಸ್‌ಡಿಪಿಐ ಹುಟ್ಟಿದ್ದೇ ಕಾಂಗ್ರೆಸ್​ನಿಂದ, ಆರ್​​ಎಸ್​ಎಸ್ ಅಲ್ಲ ಕಾಂಗ್ರೆಸ್​​ನನ್ನೇ ಬ್ಯಾನ್ ಮಾಡಬೇಕು ಎಂದು ಶಾಸಕ ಬಸವಗೌಡ ಪಾಟೀಲ್ ಹೇಳಿದ್ದಾರೆ.

Basavanagowda Patil Yatnal
ಬಸವಗೌಡ ಪಾಟೀಲ್​​ ಯತ್ನಾಳ

ಬಾಗಲಕೋಟೆ: ಮೀಸಲಾತಿ ಹೋರಾಟದಲ್ಲಿ ಸಚಿವ ನಿರಾಣಿ ಅವರಿಗೆ ಕಳಕಳಿ ಇದ್ದರೆ ರಾಜೀನಾಮೆ ನೀಡಲಿ. ನಿರಾಣಿ ಅವರನ್ನು ಯಾವ ಆಧಾರದ ಮೇಲೆ ಮಂತ್ರಿ ಮಾಡಿದ್ದಾರೆ ಗೊತ್ತಲ್ಲ. ಪಂಚಮಸಾಲಿ ಜಾತಿಗೆ ಸಚಿವ ಸ್ಥಾನ ಕೊಡಬೇಕೆಂದು ಮಾಡಿದ್ದಾರೆ. ತಾಕತ್​​ ಇದ್ದರೆ ರಾಜೀನಾಮೆ ಕೊಡಲಿ ನೋಡೋಣ ಎಂದು ವಿಜಯಪುರ ಶಾಸಕ ಬಸವಗೌಡ ಪಾಟೀಲ್​​ ಯತ್ನಾಳ ಸವಾಲೆಸೆದರು.

ವಿಜಯಪುರ ಶಾಸಕ ಬಸವಗೌಡ ಪಾಟೀಲ್​​ ಯತ್ನಾಳ ಸವಾಲ್

'ಮಂತ್ರಿ ಆಗೋದ್ರಿಂದ ಏನೂ ಸಾಧ್ಯವಿಲ್ಲ': ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಲ್ಲಿ ಪಂಚಮಸಾಲಿ ಸಮುದಾಯಕ್ಕೆ 2 (ಎ) ಮೀಸಲಾತಿ ನೀಡುವಂತೆ ಆಗ್ರಹಿಸಿ ಮತ್ತೆ ನಡೆಸುವ ಹೋರಾಟದ ಬಗ್ಗೆ ಸಭೆ ನಡೆಸಲಾಯಿತು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೀಸಲಾತಿ ನೀಡುವಲ್ಲಿ ವಿಜಯೇಂದ್ರ ಮೂಲಕ ಅಂದಿನ ಸಿಎಂ ಬಿಎಸ್​ವೈಗೆ ನಿರಾಣಿ ಮಿಸ್‌ಗೈಡ್ ಮಾಡಿದ್ದರು. ವಿಜಯೇಂದ್ರ ಮತ್ತು ನಿರಾಣಿ ಎಲ್ಲರೂ ಒಂದೇ, ವಿಜಯೇಂದ್ರ ಇಡೀ ಲಿಂಗಾಯತರ ಮುಖಂಡನಾಗಬೇಕಂತಿದ್ದಾನೆ. ಹೀಗೆಲ್ಲಾ ಮಾಡಿದ್ರೆ ಅವರ ಕೈಯಲ್ಲಿ ಲಿಂಗಾಯತರು ಹೇಗೆ ಉಳಿಯುತ್ತಾರೆ. 70% ಲಿಂಗಾಯತರು ವಿಜಯೇಂದ್ರನ ಲೀಡರ್​​ಶಿಪ್ ಕೈಬಿಟ್ಟಿದ್ದಾರೆ. ಮೀಸಲಾತಿಗಾಗಿ ನಮ್ಮ ಹೋರಾಟ, ಮಂತ್ರಿ ಆಗೋದ್ರಿಂದ ಏನು ಸಾಧ್ಯವಿಲ್ಲ ಎಂದು ಯತ್ನಾಳ ಹೇಳಿದರು.

ಇದನ್ನೂ ಓದಿ: ಕಾಟನ್‌ಪೇಟೆಯಲ್ಲಿ ಅಡಗಿದ್ದ ಹುಬ್ಬಳ್ಳಿ ಗಲಭೆಕೋರರು ಪೊಲೀಸ್ ವಶಕ್ಕೆ

ಇದೇ ಸಮಯದಲ್ಲಿ ಎಸ್‌ಡಿಪಿಐ ಜೊತೆ ಆರ್‌ಎಸ್‌ಎಸ್ ನಿಷೇಧ ಮಾಡಬೇಕೆನ್ನುವ ಎಂ.ಬಿ.ಪಾಟೀಲ್​​ ಹೇಳಿಕೆ ವಿಚಾರ‌ವಾಗಿ ಪ್ರತಿಕ್ರಿಯಿಸಿ, ಎಂ.ಬಿ.ಪಾಟೀಲ್​​ ಯಾಕೋ ಹಾದಿಬಿಟ್ಟು ಮಾತನಾಡುತ್ತಿದ್ದಾರೆ. ಆರ್​ಎಸ್ಎಸ್ ಮತ್ತು ವಿಶ್ವ ಹಿಂದೂ ಪರಿಷತ್ ಬಗ್ಗೆ ಮಾತನಾಡೋಕೆ ಅವರಿಗೆ ನೈತಿಕ ಹಕ್ಕಿಲ್ಲ. ಹಾಗೆ ನೋಡಿದ್ರೆ ಎಸ್‌ಡಿಪಿಐ ಜೊತೆ ಕಾಂಗ್ರೆಸ್ ಬ್ಯಾನ್ ಮಾಡಬೇಕು ಎಂದರು.

ಬಾಗಲಕೋಟೆ: ಮೀಸಲಾತಿ ಹೋರಾಟದಲ್ಲಿ ಸಚಿವ ನಿರಾಣಿ ಅವರಿಗೆ ಕಳಕಳಿ ಇದ್ದರೆ ರಾಜೀನಾಮೆ ನೀಡಲಿ. ನಿರಾಣಿ ಅವರನ್ನು ಯಾವ ಆಧಾರದ ಮೇಲೆ ಮಂತ್ರಿ ಮಾಡಿದ್ದಾರೆ ಗೊತ್ತಲ್ಲ. ಪಂಚಮಸಾಲಿ ಜಾತಿಗೆ ಸಚಿವ ಸ್ಥಾನ ಕೊಡಬೇಕೆಂದು ಮಾಡಿದ್ದಾರೆ. ತಾಕತ್​​ ಇದ್ದರೆ ರಾಜೀನಾಮೆ ಕೊಡಲಿ ನೋಡೋಣ ಎಂದು ವಿಜಯಪುರ ಶಾಸಕ ಬಸವಗೌಡ ಪಾಟೀಲ್​​ ಯತ್ನಾಳ ಸವಾಲೆಸೆದರು.

ವಿಜಯಪುರ ಶಾಸಕ ಬಸವಗೌಡ ಪಾಟೀಲ್​​ ಯತ್ನಾಳ ಸವಾಲ್

'ಮಂತ್ರಿ ಆಗೋದ್ರಿಂದ ಏನೂ ಸಾಧ್ಯವಿಲ್ಲ': ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಲ್ಲಿ ಪಂಚಮಸಾಲಿ ಸಮುದಾಯಕ್ಕೆ 2 (ಎ) ಮೀಸಲಾತಿ ನೀಡುವಂತೆ ಆಗ್ರಹಿಸಿ ಮತ್ತೆ ನಡೆಸುವ ಹೋರಾಟದ ಬಗ್ಗೆ ಸಭೆ ನಡೆಸಲಾಯಿತು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೀಸಲಾತಿ ನೀಡುವಲ್ಲಿ ವಿಜಯೇಂದ್ರ ಮೂಲಕ ಅಂದಿನ ಸಿಎಂ ಬಿಎಸ್​ವೈಗೆ ನಿರಾಣಿ ಮಿಸ್‌ಗೈಡ್ ಮಾಡಿದ್ದರು. ವಿಜಯೇಂದ್ರ ಮತ್ತು ನಿರಾಣಿ ಎಲ್ಲರೂ ಒಂದೇ, ವಿಜಯೇಂದ್ರ ಇಡೀ ಲಿಂಗಾಯತರ ಮುಖಂಡನಾಗಬೇಕಂತಿದ್ದಾನೆ. ಹೀಗೆಲ್ಲಾ ಮಾಡಿದ್ರೆ ಅವರ ಕೈಯಲ್ಲಿ ಲಿಂಗಾಯತರು ಹೇಗೆ ಉಳಿಯುತ್ತಾರೆ. 70% ಲಿಂಗಾಯತರು ವಿಜಯೇಂದ್ರನ ಲೀಡರ್​​ಶಿಪ್ ಕೈಬಿಟ್ಟಿದ್ದಾರೆ. ಮೀಸಲಾತಿಗಾಗಿ ನಮ್ಮ ಹೋರಾಟ, ಮಂತ್ರಿ ಆಗೋದ್ರಿಂದ ಏನು ಸಾಧ್ಯವಿಲ್ಲ ಎಂದು ಯತ್ನಾಳ ಹೇಳಿದರು.

ಇದನ್ನೂ ಓದಿ: ಕಾಟನ್‌ಪೇಟೆಯಲ್ಲಿ ಅಡಗಿದ್ದ ಹುಬ್ಬಳ್ಳಿ ಗಲಭೆಕೋರರು ಪೊಲೀಸ್ ವಶಕ್ಕೆ

ಇದೇ ಸಮಯದಲ್ಲಿ ಎಸ್‌ಡಿಪಿಐ ಜೊತೆ ಆರ್‌ಎಸ್‌ಎಸ್ ನಿಷೇಧ ಮಾಡಬೇಕೆನ್ನುವ ಎಂ.ಬಿ.ಪಾಟೀಲ್​​ ಹೇಳಿಕೆ ವಿಚಾರ‌ವಾಗಿ ಪ್ರತಿಕ್ರಿಯಿಸಿ, ಎಂ.ಬಿ.ಪಾಟೀಲ್​​ ಯಾಕೋ ಹಾದಿಬಿಟ್ಟು ಮಾತನಾಡುತ್ತಿದ್ದಾರೆ. ಆರ್​ಎಸ್ಎಸ್ ಮತ್ತು ವಿಶ್ವ ಹಿಂದೂ ಪರಿಷತ್ ಬಗ್ಗೆ ಮಾತನಾಡೋಕೆ ಅವರಿಗೆ ನೈತಿಕ ಹಕ್ಕಿಲ್ಲ. ಹಾಗೆ ನೋಡಿದ್ರೆ ಎಸ್‌ಡಿಪಿಐ ಜೊತೆ ಕಾಂಗ್ರೆಸ್ ಬ್ಯಾನ್ ಮಾಡಬೇಕು ಎಂದರು.

Last Updated : Apr 21, 2022, 7:20 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.