ETV Bharat / state

'ಮಂಗಳೂರಿನ ಗಲಭೆ​ ಪ್ರಕರಣ ಹೈಕೋಟ್೯ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು'

author img

By

Published : Jan 11, 2020, 5:18 PM IST

ಮಂಗಳೂರಿನ ಗೋಲಿಬಾರ್​ ಪ್ರಕರಣವನ್ನು ಹೈಕೋಟ್೯ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ವಿಧಾನ ಪರಿಷತ್​ ವಿರೋಧ ಪಕ್ಷದ ನಾಯಕ ಎಸ್. ಆರ್.ಪಾಟೀಲ್ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

Mangalore Firing case should be investigated by High Court  retired judges
ಎಸ್. ಆರ್.ಪಾಟೀಲ್

ಬಾಗಲಕೋಟೆ: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಂಗಳೂರಿನಲ್ಲಿ ಉಂಟಾದ ಗಲಭೆಯ ಸಿಡಿ ಬಿಡುಗಡೆ ಮಾಡಿದ ಹಿನ್ನೆಲೆ ಹೈಕೋಟ್೯ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ವಿಧಾನ ಪರಿಷತ್​ ವಿರೋಧ ಪಕ್ಷದ ನಾಯಕ ಎಸ್. ಆರ್.ಪಾಟೀಲ್ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಎಸ್. ಆರ್.ಪಾಟೀಲ್

ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಂಗಳೂರಿನ ಗೋಲಿಬಾರ್​ ಮಾಡುವುದು ಅಗತ್ಯವಿರಲಿಲ್ಲ. ವಿನಃಕಾರಣ ಗೋಲಿಬಾರ್ ಮಾಡಿದ್ದಾರೆ. ಈ ಹಿನ್ನೆಲೆ ಜಿಲ್ಲಾಧಿಕಾರಿಗಳ, ಪೊಲೀಸ್ ಇಲಾಖೆಯ ನೇತೃತ್ವದಲ್ಲಿ ತನಿಖೆ ನಡೆಸಬಾರದು. ಏಕೆಂದರೆ ಮುಖ್ಯಮಂತ್ರಿಗಳ ಮೂಗಿನ ತುದಿಯಲ್ಲಿ ಕೆಲಸ ಮಾಡುವ ಅಧಿಕಾರಿಗಳು ಸೂಕ್ತ ತನಿಖೆ ನಡೆಸುವುದಿಲ್ಲ. ಆದ್ದರಿಂದ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.

ಇನ್ನೂ, ಕಾಂಗ್ರೆಸ್​ನಲ್ಲಿ ಎರಡು ಬಣ ಇಲ್ಲ, ಎಲ್ಲರೂ ಒಗ್ಗಟ್ಟಾಗಿದ್ದೇವೆ. ಹೈಕಮಾಂಡ್​ ಯಾರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡುತ್ತಾರೋ ಅದಕ್ಕೆ ಬದ್ಧ ವಿರುವುದಾಗಿ ಅವರು ತಿಳಿಸಿದರು. ಯಾರೂ ಕೂಡ ರಾಜಕೀಯ ಸನ್ಯಾಸಿಗಳಲ್ಲ. ಎಲ್ಲರಿಗೂ ಆಕಾಂಕ್ಷೆ ಇರುವುದು ಸಹಜ. ನಾನು ಇಲ್ಲಿಯವರೆಗೆ ಯಾವುದೇ ಹುದ್ದೆ ಹಿಂದೆ ಬಿದ್ದವನಲ್ಲ. ಪಕ್ಷವೇ ನನ್ನನ್ನು ಗುರುತಿಸಿ ಜವಾಬ್ದಾರಿ ನೀಡಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿದರೂ ಜವಾಬ್ದಾರಿಯಿಂದ ಕೆಲಸ ಮಾಡುತ್ತೇನೆ ಎಂದರು.

ಬಾಗಲಕೋಟೆ: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಂಗಳೂರಿನಲ್ಲಿ ಉಂಟಾದ ಗಲಭೆಯ ಸಿಡಿ ಬಿಡುಗಡೆ ಮಾಡಿದ ಹಿನ್ನೆಲೆ ಹೈಕೋಟ್೯ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ವಿಧಾನ ಪರಿಷತ್​ ವಿರೋಧ ಪಕ್ಷದ ನಾಯಕ ಎಸ್. ಆರ್.ಪಾಟೀಲ್ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಎಸ್. ಆರ್.ಪಾಟೀಲ್

ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಂಗಳೂರಿನ ಗೋಲಿಬಾರ್​ ಮಾಡುವುದು ಅಗತ್ಯವಿರಲಿಲ್ಲ. ವಿನಃಕಾರಣ ಗೋಲಿಬಾರ್ ಮಾಡಿದ್ದಾರೆ. ಈ ಹಿನ್ನೆಲೆ ಜಿಲ್ಲಾಧಿಕಾರಿಗಳ, ಪೊಲೀಸ್ ಇಲಾಖೆಯ ನೇತೃತ್ವದಲ್ಲಿ ತನಿಖೆ ನಡೆಸಬಾರದು. ಏಕೆಂದರೆ ಮುಖ್ಯಮಂತ್ರಿಗಳ ಮೂಗಿನ ತುದಿಯಲ್ಲಿ ಕೆಲಸ ಮಾಡುವ ಅಧಿಕಾರಿಗಳು ಸೂಕ್ತ ತನಿಖೆ ನಡೆಸುವುದಿಲ್ಲ. ಆದ್ದರಿಂದ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.

ಇನ್ನೂ, ಕಾಂಗ್ರೆಸ್​ನಲ್ಲಿ ಎರಡು ಬಣ ಇಲ್ಲ, ಎಲ್ಲರೂ ಒಗ್ಗಟ್ಟಾಗಿದ್ದೇವೆ. ಹೈಕಮಾಂಡ್​ ಯಾರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡುತ್ತಾರೋ ಅದಕ್ಕೆ ಬದ್ಧ ವಿರುವುದಾಗಿ ಅವರು ತಿಳಿಸಿದರು. ಯಾರೂ ಕೂಡ ರಾಜಕೀಯ ಸನ್ಯಾಸಿಗಳಲ್ಲ. ಎಲ್ಲರಿಗೂ ಆಕಾಂಕ್ಷೆ ಇರುವುದು ಸಹಜ. ನಾನು ಇಲ್ಲಿಯವರೆಗೆ ಯಾವುದೇ ಹುದ್ದೆ ಹಿಂದೆ ಬಿದ್ದವನಲ್ಲ. ಪಕ್ಷವೇ ನನ್ನನ್ನು ಗುರುತಿಸಿ ಜವಾಬ್ದಾರಿ ನೀಡಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿದರೂ ಜವಾಬ್ದಾರಿಯಿಂದ ಕೆಲಸ ಮಾಡುತ್ತೇನೆ ಎಂದರು.

Intro:Anchor


Body:ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಂಗಳೂರಿನಲ್ಲಿ ಉಂಟಾದ ಗಲಭೆಯ ಸಿಡಿ ಬಿಡುಗಡೆ ಮಾಡಿದ ಹಿನ್ನೆಲೆ ಹೈ ಕೋಟ್೯ದ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾದ ಎಸ್. ಆರ್.ಪಾಟೀಲ್ ಸರ್ಕಾರ ಕ್ಕೆ ಆಗ್ರಹಿಸಿದ್ದಾರೆ.
ಅವರು ಬಾಗಲಕೋಟೆ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ, ಮಂಗಳೂರಿನ ಪೊಲೀಸ್ ಫೈರಿಂಗ್ ಮಾಡುವುದು ಅಗತ್ಯ ಇದ್ದಿಲ್ಲ.ವಿನಾಕಾರಣ ಫೈರಿಂಗ್ ಮಾಡಿದ್ದಾರೆ.ಈ ಹಿನ್ನೆಲೆ ಜಿಲ್ಲಾಧಿಕಾರಿಗಳ,ಪೋಲಿಸ್ ಇಲಾಖೆಯ ನೇತೃತ್ವದಲ್ಲಿ ತನಿಖೆ ನಡೆಸಿಬಾರದು,ಏಕೆಂದರೆ ಮುಖ್ಯಮಂತ್ರಿ ಗಳ ಮೂಗಿನ ತುದಿಯಲ್ಲಿ ಕೆಲಸ ಮಾಡುವ ಅಧಿಕಾರಿಗಳು ಸೂಕ್ತ ತನಿಖೆ ನಡೆಸುವುದಿಲ್ಲ.ಆದ್ದರಿಂದ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ ಅವರು,ಮೃತ ಪಟ್ಟವರ ಮನೆಗೆ ಹೋಗಿ ಸ್ವಾಂತನ ಹೇಳಲು ಪೋಲಿಸ್ ನಮ್ಮಗೆ ಬಿಡಲಾರದಕ್ಕೆ ಇದೇ ಕಾರಣ ಇರಬಹುದು ಎಂದರು.ಇದೇ ಸಮಯದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಎರಡು ಬಣ ಇಲ್ಲ ಎಲ್ಲರೂ ಒಗ್ಗಟಾಗಿದೆ.ಹೈಕಮಾಂಡ ಯಾರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡುತ್ತಾರೆ ಅದಕ್ಕೆ ಬದ್ದವಿರುವುದಾಗಿ ತಿಳಿಸಿ,ರಾಜಕೀಯ ಯಾರೂ ಸನ್ಯಾಸಿಗಳಲ್ಲ ಎಲ್ಲರಿಗೂ ಆಕಾಂಕ್ಷೆ ಇರುವುದು ಎಂದು ಮಾರ್ಮಿಕವಾಗಿ ನುಡಿದರು.ನೀವು ಆಕಾಂಕ್ಷಿ ಆಗಿದ್ದೀರಾ..ಎಂಬ ಪ್ರಶ್ನೆ ನಾನು ಇಲ್ಲಿಯವರೆಗೆ ಯಾವುದೇ ಹುದ್ದೆ ಹಿಂದೆ ಬಿದ್ದವನಲ್ಲ,ಪಕ್ಷವೇ ನನಗೆ ಗುರುತಿಸಿ ಜವಾಬ್ದಾರಿ ನೀಡಿದೆ.ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿದರೂ ಜವಾಬ್ದಾರಿ ಯಿಂದ ಕೆಲಸ ಮಾಡುತ್ತೇನೆ ಎಂದರು.ಇದೇ ಸಮಯದಲ್ಲಿ ವೀರಶೈವ ಲಿಂಗಾಯತ ರಿಗೆ ಪ್ರತಿಶತ 16 ರಷ್ಟು ಮೀಸಲಾತಿ ನೀಡುವುದಕ್ಕೆ ನನ್ನ ಬೆಂಬಲ ಇದೆ ಎಂದು ಸ್ಪಷ್ಟ ಪಡಿಸಿದರು..

ಬೈಟ್-- ಎಸ್.ಆರ್.ಪಾಟೀಲ್ ( ವಿರೋಧ‌ ಪಕ್ಷದ ನಾಯಕ)


Conclusion:ಈ ಟಿ ವಿ,ಭಾರತ,ಬಾಗಲಕೋಟೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.