ಬಾಗಲಕೋಟೆ: ಪ್ರೀತಿಸಿದ ಹುಡುಗಿ ಕೈಕೊಟ್ಟ ಹಿನ್ನೆಲೆ ಮನನೊಂದ ಯುವಕನೋರ್ವ ವಿದ್ಯುತ್ ಕಂಬಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಗದ್ದನಕೇರಿ ಕ್ರಾಸ್ ಬಳಿ ನಡೆದಿದೆ.
೧೮ ವರ್ಷದ ಚಂದ್ರಶೇಖರ ಮಾದರ ನೇಣಿಗೆ ಶರಣಾಗಿರುವ ಯುವಕ. ಮೃತ ಚಂದ್ರಶೇಖರ ಹುನಗುಂದ ತಾಲೂಕಿನ ತುರಡಗಿ ಗ್ರಾಮದವನು. ಪ್ರೀತಿಸಿದ ಹುಡುಗಿ ಕೈಕೊಟ್ಟಳೆಂದು ನೋಟ್ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ತಿಳಿದುಬಂದಿದೆ. ಇನ್ನು ಚಂದ್ರಶೇಖರ್ ವಿಜಯಪುರದಲ್ಲಿ ಡಿಪ್ಲೊಮಾ ಓದುತ್ತಿದ್ದ.
ಮೃತ ಯುವಕನದ್ದು ಬಡ ಕುಟುಂಬ, ಹಾಗಾಗಿ ಆತನ ತಂದೆ-ತಾಯಿ ದುಡಿಯೋದಕ್ಕಾಗಿ ಗೋವಾಗೆ ಗುಳೆ ಹೋಗಿದ್ದಾರೆ. ಆದ್ರೆ ಇಲ್ಲಿ ಮಗ ಪ್ರೀತಿ, ಪ್ರೇಮ ಅಂತಾ ಜೀವ ಕಳೆದುಕೊಂಡಿದ್ದಾನೆ.
ಸದ್ಯ ಮಗ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ತಿಳಿದ ಬಡ ತಂದೆ-ತಾಯಿ ಗೋವಾದಿಂದ ದೌಡಾಯಿಸುತ್ತಿದ್ದಾರೆ. ಸ್ಥಳಕ್ಕೆ ಬಾಗಲಕೋಟೆ ಗ್ರಾಮೀಣ ಸಿಪಿಐ ಭೇಟಿ ನೀಡಿ, ಪರಿಶೀಲಿಸಿದ್ದಾರೆ. ಕಲಾದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.