ETV Bharat / state

ಬಾದಾಮಿಯಲ್ಲಿ ಭಾರೀ ಮಳೆ: ಅಕ್ಕತಂಗಿ ಫಾಲ್ಸ್​ ನೋಡಲು ಪ್ರವಾಸಿಗರ ದಂಡು

ಮಳೆ ಹಿನ್ನೆಲೆ ಐತಿಹಾಸಿಕ ಸ್ಥಳ ಬಾದಾಮಿಯ ಅಕ್ಕತಂಗಿಯರ ಫಾಲ್ಸ್ ನಲ್ಲಿ ನೀರಿನ ಹರಿವು ಹೆಚ್ಚಾಗಿದ್ದು,ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ.

author img

By

Published : Jun 23, 2019, 11:31 PM IST

ಬಾದಾಮಿಯಲ್ಲಿ ಭಾರೀ ಮಳೆ

ಬಾಗಲಕೋಟೆ : ಜಿಲ್ಲೆಯಾದ್ಯಂತ ಭಾರಿ ಮಳೆಯಾಗಿದ್ದು, ಐತಿಹಾಸಿಕ ಸ್ಥಳ ಬಾದಾಮಿಯ ಅಕ್ಕತಂಗಿಯರ ಫಾಲ್ಸ್ ನಲ್ಲಿ ನೀರು ಮೈದುಂಬಿ ಹರಿಯುತ್ತಿದ್ದು,ಸ್ಥಳೀಯರನ್ನು ,ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ಬಾದಾಮಿಯಲ್ಲಿ ಭಾರೀ ಮಳೆ

ಕಳೆದ ಮೂರು ವರ್ಷದಿಂದ ಈ ಫಾಲ್ಸ್ ನಲ್ಲಿ ನೀರು ಬೀಳದೆ,ಅಗಸ್ತ್ಯ ತೀರ್ಥ ಹೊಂಡವು ಸಂಪೂರ್ಣ ಬತ್ತಿ ಹೋಗಿತ್ತು.ಈಗ ಜೋರಾಗಿ ಮಳೆ ಬಂದ ಹಿನ್ನೆಲೆಯಲ್ಲಿ ಬೆಟ್ಟದ ಮೇಲಿಂದ ಫಾಲ್ಸ್ ಮೂಲಕ ನೀರು ಹರಿಯುತ್ತಿದ್ದು,ಭಾರಿ ಪ್ರಮಾಣದಲ್ಲಿ ನೀರು ಅಗಸ್ತ್ಯ ತೀರ್ಥ ಹೊಂಡಕ್ಕೆ ಸೇರುತ್ತಿದೆ.ಇದನ್ನು ನೋಡಲು ಜನ ಮುಗಿದು ಮುಗಿ ಬೀಳುತ್ತಿದ್ದಾರೆ.ಭೂತನಾಥ ದೇವಾಲಯ ಮುಂದೆ ಕೂಡ ನೀರು ಹರಿಯುತ್ತಿದೆ.

ಇನ್ನೂ ಜಿಲ್ಲೆಯ ಕೆಲವು ಭಾಗಗಳಲ್ಲಿ ಭಾರಿ ಮಳೆಯಿಂದಾಗಿ ಸಾಕಷ್ಟು ಹಾನಿಯುಂಟಾಗಿದೆ. ಬಾಗಲಕೋಟೆ ಸಮೀಪ ಸೀಮೆಕೇರಿ ಗ್ರಾಮದಲ್ಲಿ ಮಳೆ ನೀರು ಮನೆಗೆ ನುಗ್ಗಿ ತೊಂದರೆ ಉಂಟಾಗಿದೆ.

ಬಾಗಲಕೋಟೆ : ಜಿಲ್ಲೆಯಾದ್ಯಂತ ಭಾರಿ ಮಳೆಯಾಗಿದ್ದು, ಐತಿಹಾಸಿಕ ಸ್ಥಳ ಬಾದಾಮಿಯ ಅಕ್ಕತಂಗಿಯರ ಫಾಲ್ಸ್ ನಲ್ಲಿ ನೀರು ಮೈದುಂಬಿ ಹರಿಯುತ್ತಿದ್ದು,ಸ್ಥಳೀಯರನ್ನು ,ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ಬಾದಾಮಿಯಲ್ಲಿ ಭಾರೀ ಮಳೆ

ಕಳೆದ ಮೂರು ವರ್ಷದಿಂದ ಈ ಫಾಲ್ಸ್ ನಲ್ಲಿ ನೀರು ಬೀಳದೆ,ಅಗಸ್ತ್ಯ ತೀರ್ಥ ಹೊಂಡವು ಸಂಪೂರ್ಣ ಬತ್ತಿ ಹೋಗಿತ್ತು.ಈಗ ಜೋರಾಗಿ ಮಳೆ ಬಂದ ಹಿನ್ನೆಲೆಯಲ್ಲಿ ಬೆಟ್ಟದ ಮೇಲಿಂದ ಫಾಲ್ಸ್ ಮೂಲಕ ನೀರು ಹರಿಯುತ್ತಿದ್ದು,ಭಾರಿ ಪ್ರಮಾಣದಲ್ಲಿ ನೀರು ಅಗಸ್ತ್ಯ ತೀರ್ಥ ಹೊಂಡಕ್ಕೆ ಸೇರುತ್ತಿದೆ.ಇದನ್ನು ನೋಡಲು ಜನ ಮುಗಿದು ಮುಗಿ ಬೀಳುತ್ತಿದ್ದಾರೆ.ಭೂತನಾಥ ದೇವಾಲಯ ಮುಂದೆ ಕೂಡ ನೀರು ಹರಿಯುತ್ತಿದೆ.

ಇನ್ನೂ ಜಿಲ್ಲೆಯ ಕೆಲವು ಭಾಗಗಳಲ್ಲಿ ಭಾರಿ ಮಳೆಯಿಂದಾಗಿ ಸಾಕಷ್ಟು ಹಾನಿಯುಂಟಾಗಿದೆ. ಬಾಗಲಕೋಟೆ ಸಮೀಪ ಸೀಮೆಕೇರಿ ಗ್ರಾಮದಲ್ಲಿ ಮಳೆ ನೀರು ಮನೆಗೆ ನುಗ್ಗಿ ತೊಂದರೆ ಉಂಟಾಗಿದೆ.

Intro:AnchorBody:ಬಾಗಲಕೋಟೆ ಜಿಲ್ಲೆದ್ಯಂತ
ಸಂಜೆ ಸುರಿದ ಭಾರಿ ಮಳೆಯಿಂದ ರೈತ ಮೊಗದಲ್ಲಿ ಹರ್ಷ ಮೂಡಿಸಿದ್ದರೆ, ಕೆಲವಡೆ ಮಳೆಯ ನೀರು ನುಗ್ಗಿ ಮನೆಗಳಿಗೆ ಹಾನಿ ಉಂಟಾಗಿದೆ.ಐತಿಹಾಸಿಕ ಸ್ಥಳ ಬಾದಾಮಿ ಯಲ್ಲಿ ಅಕ್ಕತಂಗಿಯರ ಫಾಲ್ಸ್ ದಲ್ಲಿ ನೀರು ಹರಿಯುತ್ತಿದ್ದು,ಸ್ಥಳೀಯರನ್ನು ಆಕರ್ಷಣೆ ಗೊಂಡಿದೆ.ಕಳೆದ ಮೂರು ವರ್ಷದಿಂದ ಈ ಫಾಲ್ಸ್ ದಲ್ಲಿ ನೀರು ಬೀಳದೆ,ಅಗಸ್ತ್ಯ ತೀರ್ಥ ಹೊಂಡವು ಸಂಪೂರ್ಣ ಬತ್ತಿ ಹೋಗಿತ್ತು.ಬೇಸಿಗೆಯ ಸಮಯದಲ್ಲಿ ಐತಿಹಾಸಿಕ ಸ್ಮಾರಕಗಳ ಚಾಲುಕ್ಯರ ಗುಹಾಲಯ ಮುಂದೆ ಇರುವ ಅಗಸ್ತ್ಯ ತೀರ್ಥ ದಲ್ಲಿ ನೀರು ಬತ್ತಿ ಹೋಗಿ ಪ್ರವಾಸಿಗರು ಹಾಗೂ ಸ್ಥಳೀಯರು ಪರದಾಡುವಂತಾಗಿದೆ.ಈಗ ಜೋರಾಗಿ ಮಳೆ ಬಂದ ಹಿನ್ನೆಲೆಯಲ್ಲಿ ಬೆಟ್ಟದ ಮೇಲೆ ನಿಂದ ಫಾಲ್ಸ್ ಮೂಲಕ ನೀರು ಹರಿಯುತ್ತಿದ್ದು,ಭಾರಿ ಪ್ರಮಾಣದಲ್ಲಿ ನೀರು ಅಗಸ್ತ್ಯ ತೀರ್ಥ ಹೊಂಡಕ್ಕೆ ಸೇರುತ್ತಿದೆ.ಇದನ್ನು ನೋಡಲು ಜನ ಮುಗಿದು ಮುಗಿ ಬೀಳುತ್ತಿದ್ದಾರೆ.ಹಲವು ದಿನಗಳಿಂದ ಮಳೆ ಇಲ್ಲದೆ ಕಂಗಲಾಗಿದ್ದ ಜನತೆಗೆ ಈಗ ಅಬ್ಬರ ಮಳೆಯಿಂದ ಸಂತಸ ಮೂಡಿಸಿದೆ ಭೂತನಾಥ ದೇವಾಲಯ ಮುಂದೆ ನೀರು ಹರಿಯುತ್ತಿದೆ.ಕಳೆದ ಮೂರು,ನಾಲ್ಕು ವರ್ಷಗಳಿಂದ ಈ ಅಕ್ಕತಂಗಿಯರ ಫಾಲ್ಸ್ ದಿಂದ‌ ನೀರು ಬೀಳುವುದೇ ನೋಡಿದ್ದಿಲ್ಲ.ಈಗ ನೋಡಲು ಜನ ಬರುತ್ತಿದ್ದಾರೆ.ಜಿಲ್ಲೆದ್ಯಂತ ಮುಂಗಾರು ಮಳೆ ಚನ್ನಾಗಿ ಆಗಿದ್ದು,ಬಾಗಲಕೋಟೆ ಸಮೀಪ ಸಿಮೇಕೇರಿ ಗ್ರಾಮದಲ್ಲಿ ಮಳೆಯ ನೀರು ಮನೆಗೆ ನುಗ್ಗಿ ತೊಂದರೆ ಉಂಟಾಗಿದೆ. ಭಾರಿ ಮಳೆಯಿಂದಾಗಿ ಬಿತ್ತನೆ ಮಾಡಿದ ರೈತ ಮೊಗದಲ್ಲಿ ಹರ್ಷ ಮೂಡಿಸಿದೆ..Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.