ETV Bharat / state

ಇಬ್ಬರು ಸಚಿವರನ್ನು ಮಂತ್ರಿ ಮಂಡಲದಿಂದ ಕೈಬಿಡಲು ಕೆ.ಎಸ್.ಈಶ್ವರಪ್ಪ ಒತ್ತಾಯ

author img

By ETV Bharat Karnataka Team

Published : Oct 20, 2023, 6:13 PM IST

ರಾಜ್ಯ ಕಾಂಗ್ರೆಸ್​ ಸರ್ಕಾರದ ವಿರುದ್ಧ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದರು.

Former minister KS Eshwarappa
Former minister KS Eshwarappa
ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ

ಬಾಗಲಕೋಟೆ: ಸಚಿವ ಶರಣಪ್ರಕಾಶ್​ ಪಾಟೀಲ್​ ಅವರನ್ನು ಈ ತಕ್ಷಣದಿಂದಲೇ ಮಂತ್ರಿ ಸ್ಥಾನದಿಂದ‌ ತೆಗೆದು ಹಾಕಬೇಕೆಂದು ಬಿಜೆಪಿ ಹಿರಿಯ ಮುಖಂಡ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಒತ್ತಾಯಿಸಿದ್ದಾರೆ. ಜಿಲ್ಲೆಯ ಐತಿಹಾಸಿಕ ಕೇಂದ್ರ ಬಾದಾಮಿ-ಬನಶಂಕರಿ‌ ದೇವಿಯ ದರ್ಶನಕ್ಕೆ ಶುಕ್ರವಾರ ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಇಬ್ಬರು ಸಚಿವರ ಮೇಲೆ‌ ನೇರ ಆರೋಪ ಬಂದಿದೆ. ಇಬ್ಬರನ್ನೂ ಮಂತ್ರಿ ಮಂಡಲದಿಂದಲೂ ಕೈಬಿಡಬೇಕೆಂದು ಒತ್ತಾಯಿಸಿದರು.

ಶರಣಪ್ರಕಾಶ್ ಪಾಟೀಲ್​ ಹೆಸರು ಬರೆದಿಟ್ಟು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನನ್ನ ಮೇಲೆ ಈ ಹಿಂದೆ ಆರೋಪ ಕೇಳಿ ಬಂದಾಗ ತಕ್ಷಣ ರಾಜೀನಾಮೆ ಕೊಡಿಸಿದಿರಿ. ಈಗ ಶರಣಪ್ರಕಾಶ್ ಪಾಟೀಲ್​ ಅವರನ್ನು ಸಚಿವ ಸಂಪುಟದಲ್ಲಿ ಉಳಿಸಿಕೊಳ್ಳುತ್ತೀರಾ ಎಂದು ಈಶ್ವರಪ್ಪ ಪ್ರಶ್ನಿಸಿದರು. ಬಂಡತನದಲ್ಲಿ ಉಳಿಸಿಕೊಳ್ಳುತ್ತೇವೆ ಅಂದ್ರೆ‌ ನಾನೇನೂ ಮಾಡಲ್ಲ. ಆದರೆ, ರಾಜ್ಯದ ಜನ ನೋಡುತ್ತಿದ್ದಾರೆ. ಮಂತ್ರಿಸ್ಥಾನದಲ್ಲಿ ಉಳಿಸಿಕೊಳ್ಳುವುದು ಸೂಕ್ತವಲ್ಲ, ತಕ್ಷಣ ಮಂತ್ರಿ ಸ್ಥಾನದಿಂದ ತೆಗೆದುಹಾಕಬೇಕು ಎಂದು ಆಗ್ರಹಿಸಿದರು.

ಆದಾಯ ಮೀರಿ ಆಸ್ತಿ ಗಳಿಕೆ ಆರೋಪದಲ್ಲಿ ಉಪ ಮುಖ್ಯಮಂತ್ರಿಯೂ ಆಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಸಿಬಿಐ ದಾಖಲಿಸಿರುವ ಎಫ್‌ಐಆರ್ ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ. ಪ್ರಕರಣ ತನಿಖೆಗೆ ಈ ಹಿಂದೆ ನೀಡಿದ್ದ ತಡೆಯಾಜ್ಞೆ ತೆರವುಗೊಳಿಸಿ ಆದೇಶಿಸಿದೆ. ಮೂರು ತಿಂಗಳಲ್ಲಿ ವರದಿ ನೀಡುವಂತೆಯೂ ಹೇಳಿದೆ. ಆದೇಶ ಬಂದ ಬಳಿಕ ಡಿಸಿಎಂ ಮತ್ತೊಮ್ಮೆ ಜೈಲಿಗೆ ಹೋಗುವುದು ಖಾತ್ರಿ ಅಂತಾ ಹೇಳಿಕೆ ನೀಡಿದ್ದೆವು. ಇದಕ್ಕೆ ಸಹೋದರಿ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಈ ಪ್ರಕರಣವನ್ನು ನಿಭಾಯಿಸೋದು ಡಿಸಿಎಂಗೆ ಗೊತ್ತಿದೆ, ಯಾವುದೇ ಕಾರಣಕ್ಕೂ ಜೈಲಿಗೆ ಹೋಗಲ್ಲ. ಅವರ ಪರ ನ್ಯಾಯ ಸಿಗುತ್ತೆ ಅಂತ ಹೇಳಿದ್ದಾರೆ. ಈಶ್ವರಪ್ಪ ಜಡ್ಜ್ ಅಲ್ಲ, ಜಡ್ಜ್ ಹೇಳಿದ್ರೆ ನಾನು ಜೈಲಿಗೆ ಹೋಗುವುದಾಗಿ ಡಿ.ಕೆ.ಶಿವಕುಮಾರ್​ ಹೇಳಿದ್ದಾರೆ. ಹಾಗಾದ್ರೆ ಲಕ್ಷ್ಮೀ ಹೆಬ್ಬಾಳ್ಕರ್ ಜಡ್ಜಾ ಎಂದು ಈಶ್ವರಪ್ಪ ಕೇಳಿದರು.

ಸಿಬಿಐ ಎಲ್ಲವನ್ನೂ ಬಹಿರಂಗ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಕ್ಷಣವೇ ಡಿ.ಕೆ.ಶಿವಕುಮಾರ್​ ಅವರನ್ನು ಡಿಸಿಎಂ ಸ್ಥಾನದಿಂದ ಅಷ್ಟೇ ಅಲ್ಲ, ಮಂತ್ರಿ ಮಂಡಲದಿಂದಲೂ ಕೈಬಿಡಬೇಕು ಎಂದರು.

ವರ್ಗಾವಣೆ ದಂಧೆ ಬಗ್ಗೆ ಮಾತನಾಡಿ, ಈ ಸರ್ಕಾರ ಬಹಳ ದಿನ ಇರಲ್ಲ ಅಂತ ಈ ಹಿಂದೆಯೇ ಹೇಳಿದ್ದೆ. ಒಬ್ಬ ಅಜಿತ್ ಪವಾರ್ ಕರ್ನಾಟಕದಲ್ಲಿಯೂ ಹುಟ್ಟಬಹುದು ಅಂದಿದ್ದೆ. ಈಗ ಆ ಅಜಿತ್ ಪವಾರ್ ಯಾರಿರಬಹುದು? ಎಂದು ನೀವೇ ಊಹಿಸಿಕೊಳ್ಳಿ ಎಂದು ಪರೋಕ್ಷವಾಗಿ ಸತೀಶ್ ಜಾರಕಿಹೊಳಿ ಅವರ ಹೆಸರು ತೇಲಿಬಿಟ್ಟರು. ಶಾಸಕರಿಗೆ ಹಣ ಕೇಳಬೇಡಿ ಅಂತ ಸಿಎಂ ಹೇಳಿದ್ದಾರೆ. ಶಾಸಕರು ಕ್ಷೇತ್ರದ ಜನರಿಗೆ ಮಣ್ಣು ತಿನ್ನಿಸಬೇಕಾ? ಓಟು ಕೊಟ್ಟು ಗೆಲ್ಲಿಸಿದ್ದು ಇದಕ್ಕೇನಾ ಎಂದು ಇದೇ ವೇಳೆ ಪ್ರಶ್ನಿಸಿದರು.

ಇದನ್ನೂ ಓದಿ: ಶೇ.90ರಷ್ಟು ತನಿಖೆ ಮುಗಿದಿದೆ ಎಂದು ಸಿಬಿಐ ಹೇಳಿದೆ, ಆದ್ರೆ ನನ್ನ ವಿಚಾರಣೆಗೆ ಯಾವ ಅಧಿಕಾರಿಯೂ ಬಂದಿಲ್ಲ : ಡಿಸಿಎಂ ಡಿ.ಕೆ.ಶಿವಕುಮಾರ್

ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ

ಬಾಗಲಕೋಟೆ: ಸಚಿವ ಶರಣಪ್ರಕಾಶ್​ ಪಾಟೀಲ್​ ಅವರನ್ನು ಈ ತಕ್ಷಣದಿಂದಲೇ ಮಂತ್ರಿ ಸ್ಥಾನದಿಂದ‌ ತೆಗೆದು ಹಾಕಬೇಕೆಂದು ಬಿಜೆಪಿ ಹಿರಿಯ ಮುಖಂಡ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಒತ್ತಾಯಿಸಿದ್ದಾರೆ. ಜಿಲ್ಲೆಯ ಐತಿಹಾಸಿಕ ಕೇಂದ್ರ ಬಾದಾಮಿ-ಬನಶಂಕರಿ‌ ದೇವಿಯ ದರ್ಶನಕ್ಕೆ ಶುಕ್ರವಾರ ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಇಬ್ಬರು ಸಚಿವರ ಮೇಲೆ‌ ನೇರ ಆರೋಪ ಬಂದಿದೆ. ಇಬ್ಬರನ್ನೂ ಮಂತ್ರಿ ಮಂಡಲದಿಂದಲೂ ಕೈಬಿಡಬೇಕೆಂದು ಒತ್ತಾಯಿಸಿದರು.

ಶರಣಪ್ರಕಾಶ್ ಪಾಟೀಲ್​ ಹೆಸರು ಬರೆದಿಟ್ಟು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನನ್ನ ಮೇಲೆ ಈ ಹಿಂದೆ ಆರೋಪ ಕೇಳಿ ಬಂದಾಗ ತಕ್ಷಣ ರಾಜೀನಾಮೆ ಕೊಡಿಸಿದಿರಿ. ಈಗ ಶರಣಪ್ರಕಾಶ್ ಪಾಟೀಲ್​ ಅವರನ್ನು ಸಚಿವ ಸಂಪುಟದಲ್ಲಿ ಉಳಿಸಿಕೊಳ್ಳುತ್ತೀರಾ ಎಂದು ಈಶ್ವರಪ್ಪ ಪ್ರಶ್ನಿಸಿದರು. ಬಂಡತನದಲ್ಲಿ ಉಳಿಸಿಕೊಳ್ಳುತ್ತೇವೆ ಅಂದ್ರೆ‌ ನಾನೇನೂ ಮಾಡಲ್ಲ. ಆದರೆ, ರಾಜ್ಯದ ಜನ ನೋಡುತ್ತಿದ್ದಾರೆ. ಮಂತ್ರಿಸ್ಥಾನದಲ್ಲಿ ಉಳಿಸಿಕೊಳ್ಳುವುದು ಸೂಕ್ತವಲ್ಲ, ತಕ್ಷಣ ಮಂತ್ರಿ ಸ್ಥಾನದಿಂದ ತೆಗೆದುಹಾಕಬೇಕು ಎಂದು ಆಗ್ರಹಿಸಿದರು.

ಆದಾಯ ಮೀರಿ ಆಸ್ತಿ ಗಳಿಕೆ ಆರೋಪದಲ್ಲಿ ಉಪ ಮುಖ್ಯಮಂತ್ರಿಯೂ ಆಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಸಿಬಿಐ ದಾಖಲಿಸಿರುವ ಎಫ್‌ಐಆರ್ ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ. ಪ್ರಕರಣ ತನಿಖೆಗೆ ಈ ಹಿಂದೆ ನೀಡಿದ್ದ ತಡೆಯಾಜ್ಞೆ ತೆರವುಗೊಳಿಸಿ ಆದೇಶಿಸಿದೆ. ಮೂರು ತಿಂಗಳಲ್ಲಿ ವರದಿ ನೀಡುವಂತೆಯೂ ಹೇಳಿದೆ. ಆದೇಶ ಬಂದ ಬಳಿಕ ಡಿಸಿಎಂ ಮತ್ತೊಮ್ಮೆ ಜೈಲಿಗೆ ಹೋಗುವುದು ಖಾತ್ರಿ ಅಂತಾ ಹೇಳಿಕೆ ನೀಡಿದ್ದೆವು. ಇದಕ್ಕೆ ಸಹೋದರಿ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಈ ಪ್ರಕರಣವನ್ನು ನಿಭಾಯಿಸೋದು ಡಿಸಿಎಂಗೆ ಗೊತ್ತಿದೆ, ಯಾವುದೇ ಕಾರಣಕ್ಕೂ ಜೈಲಿಗೆ ಹೋಗಲ್ಲ. ಅವರ ಪರ ನ್ಯಾಯ ಸಿಗುತ್ತೆ ಅಂತ ಹೇಳಿದ್ದಾರೆ. ಈಶ್ವರಪ್ಪ ಜಡ್ಜ್ ಅಲ್ಲ, ಜಡ್ಜ್ ಹೇಳಿದ್ರೆ ನಾನು ಜೈಲಿಗೆ ಹೋಗುವುದಾಗಿ ಡಿ.ಕೆ.ಶಿವಕುಮಾರ್​ ಹೇಳಿದ್ದಾರೆ. ಹಾಗಾದ್ರೆ ಲಕ್ಷ್ಮೀ ಹೆಬ್ಬಾಳ್ಕರ್ ಜಡ್ಜಾ ಎಂದು ಈಶ್ವರಪ್ಪ ಕೇಳಿದರು.

ಸಿಬಿಐ ಎಲ್ಲವನ್ನೂ ಬಹಿರಂಗ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಕ್ಷಣವೇ ಡಿ.ಕೆ.ಶಿವಕುಮಾರ್​ ಅವರನ್ನು ಡಿಸಿಎಂ ಸ್ಥಾನದಿಂದ ಅಷ್ಟೇ ಅಲ್ಲ, ಮಂತ್ರಿ ಮಂಡಲದಿಂದಲೂ ಕೈಬಿಡಬೇಕು ಎಂದರು.

ವರ್ಗಾವಣೆ ದಂಧೆ ಬಗ್ಗೆ ಮಾತನಾಡಿ, ಈ ಸರ್ಕಾರ ಬಹಳ ದಿನ ಇರಲ್ಲ ಅಂತ ಈ ಹಿಂದೆಯೇ ಹೇಳಿದ್ದೆ. ಒಬ್ಬ ಅಜಿತ್ ಪವಾರ್ ಕರ್ನಾಟಕದಲ್ಲಿಯೂ ಹುಟ್ಟಬಹುದು ಅಂದಿದ್ದೆ. ಈಗ ಆ ಅಜಿತ್ ಪವಾರ್ ಯಾರಿರಬಹುದು? ಎಂದು ನೀವೇ ಊಹಿಸಿಕೊಳ್ಳಿ ಎಂದು ಪರೋಕ್ಷವಾಗಿ ಸತೀಶ್ ಜಾರಕಿಹೊಳಿ ಅವರ ಹೆಸರು ತೇಲಿಬಿಟ್ಟರು. ಶಾಸಕರಿಗೆ ಹಣ ಕೇಳಬೇಡಿ ಅಂತ ಸಿಎಂ ಹೇಳಿದ್ದಾರೆ. ಶಾಸಕರು ಕ್ಷೇತ್ರದ ಜನರಿಗೆ ಮಣ್ಣು ತಿನ್ನಿಸಬೇಕಾ? ಓಟು ಕೊಟ್ಟು ಗೆಲ್ಲಿಸಿದ್ದು ಇದಕ್ಕೇನಾ ಎಂದು ಇದೇ ವೇಳೆ ಪ್ರಶ್ನಿಸಿದರು.

ಇದನ್ನೂ ಓದಿ: ಶೇ.90ರಷ್ಟು ತನಿಖೆ ಮುಗಿದಿದೆ ಎಂದು ಸಿಬಿಐ ಹೇಳಿದೆ, ಆದ್ರೆ ನನ್ನ ವಿಚಾರಣೆಗೆ ಯಾವ ಅಧಿಕಾರಿಯೂ ಬಂದಿಲ್ಲ : ಡಿಸಿಎಂ ಡಿ.ಕೆ.ಶಿವಕುಮಾರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.