ಬಾಗಲಕೋಟೆ : ವಿಪಕ್ಷ ನಾಯಕ ಸಿದ್ದರಾಮಯ್ಯ ಬಾದಾಮಿ ಕ್ಷೇತ್ರದಲ್ಲಿ ಬೆಂಬಲಿಗರು, ಆಪ್ತರು ಸಾರ್ವಜನಿಕರಿಗೆ ಜೋಳ, ಹುರುಳಿ ಹಾಗೂ ಮಾಸ್ಕ್, ಸಾಬೂನುಗಳನ್ನು ವಿತರಿಸಿದರು.
![Congress leaders at Bagalkot](https://etvbharatimages.akamaized.net/etvbharat/prod-images/kn-bgk-05-xcm-help-av-script-7202182_09042020185109_0904f_1586438469_116.jpg)
ಕೊರೊನಾ ಭೀತಿಯಿಂದ ಕಂಗೆಟ್ಟ ಬಾಗಲಕೋಟೆ ಕ್ಷೇತ್ರದ ಜನರಿಗೆ ಕಾಂಗ್ರೆಸ್ ಮುಖಂಡರು ನಿತ್ಯ ಸಹಾಯ ನೀಡುತ್ತಿದ್ದಾರೆ. ಅವಶ್ಯಕ ವಸ್ತುಗಳನ್ನು ವದಗಿಸುತ್ತಿದ್ದಾರೆ. ಸಿದ್ದರಾಮಯ್ಯ ಅಭಿಮಾನಿ ಬಳಗದ ವತಿಯಿಂದ ಇಲ್ಲಿನ ಕೆರೂರ ನಗರದಲ್ಲಿ ಪ್ರತಿ ಮನೆಗೂ 2 ಕೆಜಿ ಜೋಳ, ಅರ್ಧ ಕೆಜಿ ಹುರುಳಿ, ಸಾಬೂನು ಹಾಗೂ ಎರಡು ಮಾಸ್ಕ್ಗಳನ್ನು ವಿತರಿಸಿದರು.
ಕಾಂಗ್ರೆಸ್ ಪಕ್ಷದ ಮುಖಂಡರಾದ ಎನ್ ಬಿ ಬನ್ನೂರ, ಡಾ.ಎಂ ಜಿ ಕಿತ್ತಲಿ, ಬಿ ಬಿ ಸೊಳಿಕೇರಿ, ಪಟ್ಟಣ ಪಂಚಾಯತ್ ಸದಸ್ಯರಾದ ಯಾಸೀನ್ ಖಾಜಿ, ರಾಜು ಚೋರಗಸ್ತಿ, ವಿಠ್ಠಲ ಗೌಡರ, ಮಲ್ಲಪ್ಪ ಹಡಪದ, ಸುರೇಶ ಪೂಜಾರಿ ಹಾಗೂ ಬಸವರಾಜ ಇದ್ದರು.