ETV Bharat / state

ಊರಿಗೆ ನುಗ್ಗಿದ ಮೊಸಳೆ ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ ಗ್ರಾಮಸ್ಥರು - ಬಾಗಲಕೋಟೆ ಜಿಲ್ಲೆಯಲ್ಲಿ ಮೊಸಳೆ ಕಾಟ

ಬಾಗಲಕೋಟೆ ಜಿಲ್ಲೆಯ ಕೃಷ್ಣಾ,ಮಲಪ್ರಭಾ, ಘಟಪ್ರಭಾ ನದಿ ತೀರದ ಹಲವಾರು ಗ್ರಾಮಗಳಿಗೆ ಮೊಸಳೆ ಕಾಟ ಶುರುವಾಗಿದೆ. ಪ್ರವಾಹದ ನೀರು ಕಡಿಮೆಯಾಗುತ್ತಿದಂತೆ ಹಿನ್ನೀರಲ್ಲಿ ಮೊಸಳೆಗಳ ಕಾಟ ಹೆಚ್ಚಾಗುತ್ತಿದೆ.

ಊರಿಗೆ ನುಗ್ಗಿದ್ದ ಮೊಸಳೆ ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ ಗ್ರಾಮಸ್ಥರು
author img

By

Published : Oct 27, 2019, 6:36 PM IST

ಬಾಗಲಕೋಟೆ: ಜಿಲ್ಲೆಯ ಹುನಗುಂದ ತಾಲೂಕಿನ ಹಿರೆಮಾಗಿಯಲ್ಲಿ ಮೊಸಳೆಯೊಂದು ಪ್ರತ್ಯಕ್ಷವಾಗಿ ಸ್ಥಳೀಯರಲ್ಲಿ ಆತಂಕ ಮೂಡಿಸಿತ್ತು.

ಈ ಗ್ರಾಮ ಮಲಪ್ರಭಾ ನದಿ ದಂಡೆಯಲ್ಲಿ ಇರುವುದರಿಂದ ಕಳೆದ 3 ತಿಂಗಳಿಂದ ಪ್ರವಾಹಕ್ಕೆ ಸಿಕ್ಕು ಇಲ್ಲಿಯ ಮಂದಿ ನಲುಗಿದ್ದರು. ಈಗ ಬೃಹದಾಕಾರದ ಮೊಸಳೆ ಕಾಣಿಸಿಕೊಂಡು ಭಯ ಹುಟ್ಟಿಸಿತ್ತು. ಗ್ರಾಮದಲ್ಲಿ ಕಳೆದೆರಡು ದಿನಗಳ ಹಿಂದೆ 8 ಅಡಿ ಉದ್ದ ಹಾಗೂ ಒಂದು ಕ್ವಿಂಟಲ್​ಗೂ ಹೆಚ್ಚು ತೂಕದ ಮೊಸಳೆ ಕಾಣಿಸಿಕೊಂಡಿದೆ. ಮೊಸಳೆಯನ್ನು ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸುವ ಮೂಲಕ ಮುಂದಾಗುವ ಅನಾಹುತವನ್ನು ಗ್ರಾಮಸ್ಥರೇ ತಪ್ಪಿಸಿದ್ದಾರೆ.

ಊರಿಗೆ ನುಗ್ಗಿದ್ದ ಮೊಸಳೆ ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ ಗ್ರಾಮಸ್ಥರು

ಇನ್ನೂ ಎರಡು ಮೊಸಳೆಗಳು ಗ್ರಾಮಸ್ಥರ ಕಣ್ಣಿಗೆ ಬಿದ್ದಿದ್ದು, ಅವುಗಳು ಯಾವಾಗ ಗ್ರಾಮಕ್ಕೆ ಬರುತ್ತವೋ ಎಂಬ ಭಯದಲ್ಲಿ ಜನರು ಜೀವನ ಸಾಗಿಸುವಂತಾಗಿದೆ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಪ್ರವಾಹಪೀಡಿತ ನದಿತೀರದ ಗ್ರಾಮಸ್ಥರಿಗೆ ಈಗಾಗಲೇ ಮೊಸಳೆಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದ್ದು, ಕೆಲವೆಡೆ ನಾಮಫಲಕಗಳನ್ನು ಅಳವಡಿಸಲಾಗಿದೆ. ನದಿತೀದಲ್ಲಿ ಒಬ್ಬರೆ ಓಡಾಡದಂತೆ ಸೂಚನೆ ನೀಡಲಾಗಿದೆ ಎಂದರು.

ಬಾಗಲಕೋಟೆ: ಜಿಲ್ಲೆಯ ಹುನಗುಂದ ತಾಲೂಕಿನ ಹಿರೆಮಾಗಿಯಲ್ಲಿ ಮೊಸಳೆಯೊಂದು ಪ್ರತ್ಯಕ್ಷವಾಗಿ ಸ್ಥಳೀಯರಲ್ಲಿ ಆತಂಕ ಮೂಡಿಸಿತ್ತು.

ಈ ಗ್ರಾಮ ಮಲಪ್ರಭಾ ನದಿ ದಂಡೆಯಲ್ಲಿ ಇರುವುದರಿಂದ ಕಳೆದ 3 ತಿಂಗಳಿಂದ ಪ್ರವಾಹಕ್ಕೆ ಸಿಕ್ಕು ಇಲ್ಲಿಯ ಮಂದಿ ನಲುಗಿದ್ದರು. ಈಗ ಬೃಹದಾಕಾರದ ಮೊಸಳೆ ಕಾಣಿಸಿಕೊಂಡು ಭಯ ಹುಟ್ಟಿಸಿತ್ತು. ಗ್ರಾಮದಲ್ಲಿ ಕಳೆದೆರಡು ದಿನಗಳ ಹಿಂದೆ 8 ಅಡಿ ಉದ್ದ ಹಾಗೂ ಒಂದು ಕ್ವಿಂಟಲ್​ಗೂ ಹೆಚ್ಚು ತೂಕದ ಮೊಸಳೆ ಕಾಣಿಸಿಕೊಂಡಿದೆ. ಮೊಸಳೆಯನ್ನು ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸುವ ಮೂಲಕ ಮುಂದಾಗುವ ಅನಾಹುತವನ್ನು ಗ್ರಾಮಸ್ಥರೇ ತಪ್ಪಿಸಿದ್ದಾರೆ.

ಊರಿಗೆ ನುಗ್ಗಿದ್ದ ಮೊಸಳೆ ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ ಗ್ರಾಮಸ್ಥರು

ಇನ್ನೂ ಎರಡು ಮೊಸಳೆಗಳು ಗ್ರಾಮಸ್ಥರ ಕಣ್ಣಿಗೆ ಬಿದ್ದಿದ್ದು, ಅವುಗಳು ಯಾವಾಗ ಗ್ರಾಮಕ್ಕೆ ಬರುತ್ತವೋ ಎಂಬ ಭಯದಲ್ಲಿ ಜನರು ಜೀವನ ಸಾಗಿಸುವಂತಾಗಿದೆ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಪ್ರವಾಹಪೀಡಿತ ನದಿತೀರದ ಗ್ರಾಮಸ್ಥರಿಗೆ ಈಗಾಗಲೇ ಮೊಸಳೆಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದ್ದು, ಕೆಲವೆಡೆ ನಾಮಫಲಕಗಳನ್ನು ಅಳವಡಿಸಲಾಗಿದೆ. ನದಿತೀದಲ್ಲಿ ಒಬ್ಬರೆ ಓಡಾಡದಂತೆ ಸೂಚನೆ ನೀಡಲಾಗಿದೆ ಎಂದರು.

Intro:AnchorBody:ಬಾಗಲಕೋಟೆ-- ಜಿಲ್ಲೆಯ
ಹುನಗುಂದ ತಾಲ್ಲೂಕಿನ ಹಿರೆಮಾಗಿ ಗ್ರಾಮದಲ್ಲಿ ಅಗಷ್ಟ್ ನಿಂದ ಸೆಪ್ಟೆಂಬರ್ ಅಕ್ಟೋಬರ್‌ನಲ್ಲಿ ಬಂದ ಪ್ರವಾಹದಿಂದ ಮೂರು ಬಾರಿ ಜಲಾವೃತವಾಗಿತ್ತು.ಜನರು ಮನೆ ಬಿಟ್ಟು ಆಚೆಗೆ ಬಾರದ ರೀತಿಯಲ್ಲಿ ಗ್ರಾಮ ನಡುಗಡ್ಡೆಯಾಗಿತ್ತು.ಆದರೆ ಸದ್ಯ ಪ್ರವಾಹ ತೊಲಗಿದೆ..ಪ್ರವಾಹ ಇಲ್ಲ ಬಿಡು ಎಂದು ನಿಟ್ಟುಸಿರು ಬಿಡುವಷ್ಟರಲ್ಲಿ ಗ್ರಾಮಕ್ಕೆ ಮೊಸಳೆ ಕಾಟ ಶುರುವಾಗಿದೆ.ಮಲಪ್ರಭಾ ನದಿ ದಂಡೆಯಲ್ಲಿ ಈ ಗ್ರಾಮವಿದ್ದು ,ಗ್ರಾಮದಲ್ಲಿ ಕಳೆದ ಎರಡು ದಿನಗಳ ಹಿಂದೆ ರಾತ್ರಿ ಸಮಯದಲ್ಲಿ ಎಂಟು ಅಡಿ ಉದ್ದ ಹಾಗೂ ಒಂದು ಕ್ವಿಂಟಲ್ ಗೂ ಹೆಚ್ಚು ತೂಕದ ಮೊಸಳೆ ಬಂದಿದೆ.ಗ್ರಾಮಕ್ಕೆ ಬಂದ ಮೊಸಳೆ ಗ್ರಾಮದಲ್ಲಿ ಸಾಕಷ್ಟು ಭೀತಿ ಹುಟ್ಟಿಸಿದೆ.ಮೊಸಳೆ ಇನ್ನೇನು ಅನಾಹುತ ಮಾಡಬಹುದು ಎಂದು ಅರಿತ ಗ್ರಾಮಸ್ಥರೆಲ್ಲರೂ ಸೇರಿ‌ ಮೊಸಳೆಯನ್ನು ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.ಗ್ರಾಮಕ್ಕೆ ಮೊಸಳೆ ನುಗ್ಗುತ್ತಿರೋದರಿಂದ ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.ಮಹಿಳೆಯರು ‌ಮಕ್ಕಳು ಗ್ರಾಮದಲ್ಲಿ ಹಾಗೂ ಹೊಲಕ್ಕೆ ಹೋಗಲು ಭಯಪಡುವಂತಾಗಿದೆ.
ಹಿರೆಮಾಗಿ ಗ್ರಾಮದಲ್ಲಿ ಪ್ರವಾಹದ ನಂತರವೇ ಒಟ್ಟು ಮೂರು ಮೊಸಳೆಗಳು ಕಾಣಿಸಿಕೊಂಡಿವೆ..ಮಲಪ್ರಭಾ ನದಿತೀರದ ಈ ಗ್ರಾಮಸ್ಥರು ಪ್ರತಿ ಬಾರಿ ಪ್ರವಾಹ ಬಂದಾಗಲೂ ಮುಳುಗಡೆಯಾಗಿ ಸಂಕಷ್ಟಕ್ಕೀಡಾಗುತ್ತಾರೆ.ಈ ಬಾರಿ ಮೂರು ಬಾರಿ ಪ್ರವಾಹಕ್ಕೆ ಈಡಾದ ಈ ಗ್ರಾಮಸ್ಥರಿಗೆ ಈಗ ಜಲಚರಪ್ರಾಣಿಗಳ ಕಾಟ ಶುರುವಾಗಿದೆ.ಹಾವು ಚೇಳು ಮನೆಗಳನ್ನು ಸೇರುತ್ತಿವೆ.ಮೊಸಳೆಗಳು ಗ್ರಾಮಕ್ಕೆ ಬರುತ್ತಿದ್ದು,ಮೊಸಳೆ ಭೀತಿ ಎದುರಾಗಿದೆ.ಸದ್ಯ ಒಂದು ಮೊಸಳೆಯನ್ನು ಗ್ರಾಮಸ್ಥರು ಹಿಡಿದು ಅರಣ್ಯಾಧಿಕಾರಿಗಳಿಗೆ ಒಪ್ಪಿಸಿದ್ದಾರೆ.ಆದರೆ ಇನ್ನು ಎರಡು ಮೊಸಳೆಗಳನ್ನು ಗ್ರಾಮಸ್ಥರು ಕಂಡಿದ್ದು ಅವುಗಳು ಯಾವಾಗ ಗ್ರಾಮಕ್ಕೆ ನುಗ್ಗುತ್ತವೋ ಏನು ಅಪಾಯ ಮಾಡುತ್ತವೋ ಎಂಬ ಭೀತಿ ಎದುರಾಗಿದೆ.ಇನ್ನು ಇದೊಂದೆ ಗ್ರಾಮವಲ್ಲದೇ ಕೃಷ್ಣಾ,ಮಲಪ್ರಭಾ, ಘಟಪ್ರಭಾ ನದಿ ತೀರದ ಹಲವಾರು ಗ್ರಾಮಗಳಿಗೆ ಮೊಸಳೆಗಳ ಕಾಟ ಶುರುವಾಗಿದೆ.ಪ್ರವಾಹದ ನೀರು ಕಡಿಮೆಯಾಗುತ್ತಿದ್ದಂತೆ ಹಿನ್ನೀರಲ್ಲಿ ಮೊಸಳೆಗಳ ಕಾಟ ಹೆಚ್ಚಾಗುತ್ತಿದೆ.ಇನ್ನು ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಪ್ರವಾಹ ಪೀಡಿತ ನದಿತೀದರ ಗ್ರಾಮಸ್ಥರಿಗೆ ಈಗಾಗಲೇ ಮೊಸಳೆಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.ಕೆಲ ಕಡೆ ನಾಮಫಲಕಗಳನ್ನು ಅಳವಡಿಸಲಾಗಿದೆ.ನದಿತೀದಲ್ಲಿ ಒಬ್ಬೊಬ್ಬರಾಗಿ ಓಡಾಡದಂತೆ ಸೂಚನೆ ನೀಡಲಾಗಿದೆ. ದನಕರುಗಳನ್ನು ಕೂಡ ನದಿ ಪಾತ್ರದಲ್ಲಿ ಬಿಡದಿರಲು ತಿಳಿಸಲಾಗಿದೆ.ಜೊತೆಗೆ ನದಿ ತೀರದ ಗ್ರಾಮಸ್ಥರು ಕೂಡ ಮೊಸಳೆಗಳ ಬಗ್ಗೆ ಎಚ್ಚರಿಕೆಯಿಂದಿರಲು ಮನವಿ ಮಾಡಿದ್ದಾರೆConclusion:ಈ ಟಿವಿ,ಭಾರತ,ಬಾಗಲಕೋಟೆ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.