ETV Bharat / state

ಬಾಗಲಕೋಟೆ: ಬನಶಂಕರಿ ದೇವಾಲಯಕ್ಕೆ ಸುಧಾ ಮೂರ್ತಿ ಭೇಟಿ

author img

By

Published : May 4, 2022, 9:31 PM IST

ಐತಿಹಾಸಿಕ ಕೇಂದ್ರ ಹಾಗೂ ಧಾರ್ಮಿಕ ಶಕ್ತಿ ಪೀಠವಾದ ಬನಶಂಕರಿ ದೇವಾಲಯಕ್ಕೆ ಇನ್ಫೋಸಿಸ್ ಸಂಸ್ಥೆಯ ಮುಖ್ಯಸ್ಥೆ ಸುಧಾ ಮೂರ್ತಿ ಭೇಟಿ ನೀಡಿ ಸೇವೆ ಸಲ್ಲಿಸಿದರು.

Shri Shakambhari Banashankari Shakti Peetha, Cholachagudda, Badami
ಬಾಗಲಕೋಟೆ: ಬನಶಂಕರಿ ದೇವಾಲಯಕ್ಕೆ ಸುಧಾ ಮೂರ್ತಿ ಭೇಟಿ

ಬಾಗಲಕೋಟೆ: ಐತಿಹಾಸಿಕ ಕೇಂದ್ರ ಹಾಗೂ ಧಾರ್ಮಿಕ ಶಕ್ತಿ ಪೀಠಗಳಲ್ಲಿ ಒಂದಾದ ಬಾದಾಮಿ ಬನಶಂಕರಿ ದೇವಾಲಯಕ್ಕೆ ಇನ್ಫೋಸಿಸ್ ಸಂಸ್ಥೆಯ ಮುಖ್ಯಸ್ಥೆ ಸುಧಾ ಮೂರ್ತಿ ಅವರು ಬುಧವಾರ ಭೇಟಿ ನೀಡಿದ್ದರು. ಸುಮಾರು ಅರ್ಧ ಗಂಟೆಯ ಕಾಲ ಗರ್ಭ ಗುಡಿಯಲ್ಲಿ ಕುಳಿತುಕೊಂಡು ಸುಧಾ ಮೂರ್ತಿ ಅವರು ದೇವಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಸಹೋದರಿಯೊಂದಿಗೆ ಆಗಮಿಸಿದ್ದ ಅವರನ್ನು ಕಂಡು ವಿದ್ಯಾರ್ಥಿಗಳು ಪುಳಕಿತಗೊಂಡರು.

ಈ ವೇಳೆ ಶಿಕ್ಷಕರು ಸುಧಾಮೂರ್ತಿ‌ ಅವರು ಬಂದಿರುವ ಬಗ್ಗೆ ಮಕ್ಕಳಿಗೆ ತಿಳಿಸುತ್ತಲೇ ಸುಧಾಮೂರ್ತಿ ಅವರ ಸರಳತೆ ಕಂಡು ವಿದ್ಯಾರ್ಥಿಗಳು ಅಚ್ಚರಿಗೊಂಡರು. ಇದೇ ಸಮಯದಲ್ಲಿ, ಮಕ್ಕಳ ಜೊತೆ ದೇಗುಲ ಆವರಣದಲ್ಲಿ ಕುಳಿತು ಯೋಗಕ್ಷೇಮ, ಕುಶಲೋಪರಿ ವಿಚಾರಿಸಿದರು. ದೈತ್ಯ ಸಾಫ್ಟ್​ವೇರ್​ ಕಂಪನಿಯ ಮುಖ್ಯಸ್ಥರಾಗಿದ್ದರೂ ತಮ್ಮ ಸರಳತೆಯಿಂದ ಸುಧಾ ಮೂರ್ತಿ ಅವರು ವಿದ್ಯಾರ್ಥಿಗಳ ಗಮನ ಸೆಳೆದರು.

ಬಾಗಲಕೋಟೆ: ಐತಿಹಾಸಿಕ ಕೇಂದ್ರ ಹಾಗೂ ಧಾರ್ಮಿಕ ಶಕ್ತಿ ಪೀಠಗಳಲ್ಲಿ ಒಂದಾದ ಬಾದಾಮಿ ಬನಶಂಕರಿ ದೇವಾಲಯಕ್ಕೆ ಇನ್ಫೋಸಿಸ್ ಸಂಸ್ಥೆಯ ಮುಖ್ಯಸ್ಥೆ ಸುಧಾ ಮೂರ್ತಿ ಅವರು ಬುಧವಾರ ಭೇಟಿ ನೀಡಿದ್ದರು. ಸುಮಾರು ಅರ್ಧ ಗಂಟೆಯ ಕಾಲ ಗರ್ಭ ಗುಡಿಯಲ್ಲಿ ಕುಳಿತುಕೊಂಡು ಸುಧಾ ಮೂರ್ತಿ ಅವರು ದೇವಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಸಹೋದರಿಯೊಂದಿಗೆ ಆಗಮಿಸಿದ್ದ ಅವರನ್ನು ಕಂಡು ವಿದ್ಯಾರ್ಥಿಗಳು ಪುಳಕಿತಗೊಂಡರು.

ಈ ವೇಳೆ ಶಿಕ್ಷಕರು ಸುಧಾಮೂರ್ತಿ‌ ಅವರು ಬಂದಿರುವ ಬಗ್ಗೆ ಮಕ್ಕಳಿಗೆ ತಿಳಿಸುತ್ತಲೇ ಸುಧಾಮೂರ್ತಿ ಅವರ ಸರಳತೆ ಕಂಡು ವಿದ್ಯಾರ್ಥಿಗಳು ಅಚ್ಚರಿಗೊಂಡರು. ಇದೇ ಸಮಯದಲ್ಲಿ, ಮಕ್ಕಳ ಜೊತೆ ದೇಗುಲ ಆವರಣದಲ್ಲಿ ಕುಳಿತು ಯೋಗಕ್ಷೇಮ, ಕುಶಲೋಪರಿ ವಿಚಾರಿಸಿದರು. ದೈತ್ಯ ಸಾಫ್ಟ್​ವೇರ್​ ಕಂಪನಿಯ ಮುಖ್ಯಸ್ಥರಾಗಿದ್ದರೂ ತಮ್ಮ ಸರಳತೆಯಿಂದ ಸುಧಾ ಮೂರ್ತಿ ಅವರು ವಿದ್ಯಾರ್ಥಿಗಳ ಗಮನ ಸೆಳೆದರು.

ಇದನ್ನೂಓದಿ: ಪಿಎಸ್​ಐ ಪರೀಕ್ಷಾ ಹಗರಣದಲ್ಲಿ ಕಾಂಗ್ರೆಸ್​ನಿಂದ ಅಶ್ವತ್ಥ್​ ನಾರಾಯಣ ಟಾರ್ಗೆಟ್​: ಪ್ರತಾಪ್ ಸಿಂಹ

For All Latest Updates

TAGGED:

Bagalkote
ETV Bharat Logo

Copyright © 2024 Ushodaya Enterprises Pvt. Ltd., All Rights Reserved.