ETV Bharat / sports

ಕೊರೊನ ವೈರಸ್​ ಭೀತಿ: ಒಲಿಂಪಿಕ್ಸ್ ಟೆಸ್ಟ್​ ಇವೆಂಟ್​ಗೆ ಭಾರತದ ಶೂಟರ್ಸ್​ ಕಳುಹಿಸದಿರಲು ನಿರ್ಧಾರ

author img

By

Published : Feb 27, 2020, 7:56 PM IST

ಭಾರತ ತಂಡದ ಶೂಟರ್​ಗಳು ಏಪ್ರಿಲ್​ 16ರಿಂದ 26ರವರೆಗೆ ನಡೆಯಲಿರುವ ಒಲಿಂಪಿಕ್​​ ಶೂಟಿಂಗ್​ ಟೆಸ್ಟ್​ ಇವೆಂಟ್​ನಲ್ಲಿ ಪಾಲ್ಗೊಳ್ಳಲು ಟೋಕಿಯೋಗೆ ಪ್ರಯಾಣಿಸಬೇಕಿತ್ತು. ಆದರೆ, ವಿಶ್ವದೆಲ್ಲೆಡೆ ಭಯಭೀತಗೊಳಿಸಿರುವ ಕೊರೊನ ವೈರಸ್​ಗೆ ಹೆದರಿ ಅಲ್ಲಿಗೆ ಭಾರತದ ಶೂಟರ್​ಗಳನ್ನು ಕಳುಹಿಸದಿರಲು ಎನ್​ಆರ್​ಎಐ ನಿರ್ಧರಿಸಿದೆ.

ರಾಷ್ಟ್ರೀಯ ರೈಫಲ್​ ಅಸೋಸಿಯೇಷನ್
ರಾಷ್ಟ್ರೀಯ ರೈಫಲ್​ ಅಸೋಸಿಯೇಷನ್

ನವದೆಹಲಿ: ಕರೋನ ವೈರಸ್​ ಭೀತಿಯಿಂದ ಮುಂದಿನ ತಿಂಗಳು ನಡೆಯಲಿರುವ ರೈಫಲ್ಸ್​ ಒಲಿಂಪಿಕ್ಸ್​ ಟೆಸ್ಟ್​ಗೆ ಭಾರತ ತಂಡವನ್ನು ಕಳುಹಿಸದಿರಲು ಭಾರತದ ರಾಷ್ಟ್ರೀಯ ರೈಫಲ್​ ಅಸೋಸಿಯೇಷನ್​ ನಿರ್ಧರಿಸಿದೆ.

ಭಾರತ ತಂಡದ ಶೂಟರ್​ಗಳು ಏಪ್ರಿಲ್​ 16ರಿಂದ 26ರವರೆಗೆ ನಡೆಯಲಿರುವ ಒಲಿಂಪಿಕ್ಸ್​ ಶೂಟಿಂಗ್​ ಟೆಸ್ಟ್​ ಇವೆಂಟ್​ನಲ್ಲಿ ಪಾಲ್ಗೊಳ್ಳಲು ದಕ್ಷಿಣ ಕೊರಿಯಾ ಪ್ರಯಾಣಿಸಬೇಕಿತ್ತು. ಆದರೆ ವಿಶ್ವದೆಲ್ಲೆಡೆ ಭಯಭೀತಗೊಳಿಸಿರುವ ಕೊರೊನ ವೈರಸ್​ಗೆ ಹೆದರಿ ಅಲ್ಲಿಗೆ ಭಾರತದ ಶೂಟರ್​ಗಳನ್ನು ಕಳುಹಿಸದಿರಲು ಎನ್​ಆರ್​ಎಐ ನಿರ್ಧರಿಸಿದೆ.

ಮೊದಲಿಗೆ ಈ ಟೆಸ್ಟ್​ ಇವೆಂಟ್​ಗೆ ಸಂಬಂಧಿಸಿದಂತೆ ನಾವು ನಮ್ಮ ತಂಡವನ್ನು ಆಯ್ಕೆ ಮಾಡಿದ್ದೇವೆ. ಆದರೆ, ನಾನು ನಮ್ಮ ಮಕ್ಕಳನ್ನು ಯಾವುದೇ ಅಪಾಯಕ್ಕೆ ತಳ್ಳುವುದಕ್ಕೆ ಹೋಗುವುದಿಲ್ಲ. ಒಂದು ವೇಳೆ, ನಮಗೆ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ​​(ಐಒಎ) ಅಥವಾ ಅಂತಾರಾಷ್ಟ್ರೀಯ ಒಲಿಂಪಿಕ್​ ಒಕ್ಕೂಟದಿಂದ ಯಾವುದೇ ಸಲಹೆ ಪಡೆದರೂ ಅಥವಾ ನಮ್ಮ ಮೌಲ್ಯಮಾಪನದ ದೃಷ್ಟಿಯಿಂದ ಹೋಗಬೇಕು ಎನಿಸಿದರೂ ಅದೊಂದು ಬೆದರಿಕೆ ಎಂದೇ ನಾನು ಭಾವಿಸುತ್ತೇನೆ ಎಂದು" ಎನ್​ಆರ್​ಐ ಅಧ್ಯಕ್ಷ ರಣೀಂದರ್ ಸಿಂಗ್​ ಮಾಧ್ಯಮಕ್ಕೆ ತಿಳಿಸಿದ್ದಾರೆ.

ನಾನು ಯಾರೊಬ್ಬರನ್ನು ಅಪಾಯಕ್ಕೆ ತಳ್ಳುವುದಿಲ್ಲ, ಒಂದು ವೇಳೆ, ನಾವು ಅಲ್ಲಿಗೆ ತೆರಳಿದರೆ ಯಾರಿಗಾದರೂ ಕೊರೊನ ವೈರಸ್​ಗೆ ತುತ್ತಾಗುವ ಅವಕಾಶವಿರುತ್ತದೆ. ನಾವು ಟೆಸ್ಟ್​ಗೆ ತೆರಳದಿದ್ದರೆ ಹಣ ಕಳೆದುಕೊಂಡರೂ ಚಿಂತೆಯಿಲ್ಲ. ನಮ್ಮ ಶೂಟರ್​ಗಳನ್ನು ತರಬೇತಿಗಾಗಿ ವಿದೇಶಕ್ಕೆ ಕಳಿಸುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ನವದೆಹಲಿ: ಕರೋನ ವೈರಸ್​ ಭೀತಿಯಿಂದ ಮುಂದಿನ ತಿಂಗಳು ನಡೆಯಲಿರುವ ರೈಫಲ್ಸ್​ ಒಲಿಂಪಿಕ್ಸ್​ ಟೆಸ್ಟ್​ಗೆ ಭಾರತ ತಂಡವನ್ನು ಕಳುಹಿಸದಿರಲು ಭಾರತದ ರಾಷ್ಟ್ರೀಯ ರೈಫಲ್​ ಅಸೋಸಿಯೇಷನ್​ ನಿರ್ಧರಿಸಿದೆ.

ಭಾರತ ತಂಡದ ಶೂಟರ್​ಗಳು ಏಪ್ರಿಲ್​ 16ರಿಂದ 26ರವರೆಗೆ ನಡೆಯಲಿರುವ ಒಲಿಂಪಿಕ್ಸ್​ ಶೂಟಿಂಗ್​ ಟೆಸ್ಟ್​ ಇವೆಂಟ್​ನಲ್ಲಿ ಪಾಲ್ಗೊಳ್ಳಲು ದಕ್ಷಿಣ ಕೊರಿಯಾ ಪ್ರಯಾಣಿಸಬೇಕಿತ್ತು. ಆದರೆ ವಿಶ್ವದೆಲ್ಲೆಡೆ ಭಯಭೀತಗೊಳಿಸಿರುವ ಕೊರೊನ ವೈರಸ್​ಗೆ ಹೆದರಿ ಅಲ್ಲಿಗೆ ಭಾರತದ ಶೂಟರ್​ಗಳನ್ನು ಕಳುಹಿಸದಿರಲು ಎನ್​ಆರ್​ಎಐ ನಿರ್ಧರಿಸಿದೆ.

ಮೊದಲಿಗೆ ಈ ಟೆಸ್ಟ್​ ಇವೆಂಟ್​ಗೆ ಸಂಬಂಧಿಸಿದಂತೆ ನಾವು ನಮ್ಮ ತಂಡವನ್ನು ಆಯ್ಕೆ ಮಾಡಿದ್ದೇವೆ. ಆದರೆ, ನಾನು ನಮ್ಮ ಮಕ್ಕಳನ್ನು ಯಾವುದೇ ಅಪಾಯಕ್ಕೆ ತಳ್ಳುವುದಕ್ಕೆ ಹೋಗುವುದಿಲ್ಲ. ಒಂದು ವೇಳೆ, ನಮಗೆ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ​​(ಐಒಎ) ಅಥವಾ ಅಂತಾರಾಷ್ಟ್ರೀಯ ಒಲಿಂಪಿಕ್​ ಒಕ್ಕೂಟದಿಂದ ಯಾವುದೇ ಸಲಹೆ ಪಡೆದರೂ ಅಥವಾ ನಮ್ಮ ಮೌಲ್ಯಮಾಪನದ ದೃಷ್ಟಿಯಿಂದ ಹೋಗಬೇಕು ಎನಿಸಿದರೂ ಅದೊಂದು ಬೆದರಿಕೆ ಎಂದೇ ನಾನು ಭಾವಿಸುತ್ತೇನೆ ಎಂದು" ಎನ್​ಆರ್​ಐ ಅಧ್ಯಕ್ಷ ರಣೀಂದರ್ ಸಿಂಗ್​ ಮಾಧ್ಯಮಕ್ಕೆ ತಿಳಿಸಿದ್ದಾರೆ.

ನಾನು ಯಾರೊಬ್ಬರನ್ನು ಅಪಾಯಕ್ಕೆ ತಳ್ಳುವುದಿಲ್ಲ, ಒಂದು ವೇಳೆ, ನಾವು ಅಲ್ಲಿಗೆ ತೆರಳಿದರೆ ಯಾರಿಗಾದರೂ ಕೊರೊನ ವೈರಸ್​ಗೆ ತುತ್ತಾಗುವ ಅವಕಾಶವಿರುತ್ತದೆ. ನಾವು ಟೆಸ್ಟ್​ಗೆ ತೆರಳದಿದ್ದರೆ ಹಣ ಕಳೆದುಕೊಂಡರೂ ಚಿಂತೆಯಿಲ್ಲ. ನಮ್ಮ ಶೂಟರ್​ಗಳನ್ನು ತರಬೇತಿಗಾಗಿ ವಿದೇಶಕ್ಕೆ ಕಳಿಸುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.