ETV Bharat / sports

Exclusive : ಗಾಯದ ಹೊರತಾಗಿಯೂ ಪದಕ ಗೆಲ್ಲುವುದಕ್ಕೆ ಗಮನ ನೀಡಿದ್ದೆ : ಬಜರಂಗ್ ಪೂನಿಯಾ

author img

By

Published : Aug 10, 2021, 6:20 PM IST

ಚಿನ್ನದ ಪದಕದ ಆಸೆ ಗಾಯದಿಂದ ಕೈತಪ್ಪಿದರೂ ದೇಶಕ್ಕೆ ಕಂಚಿನ ಪದಕ ತಂದುಕೊಟ್ಟ ಬಜರಂಗ್ ಪೂನಿಯಾರನ್ನು ಸ್ಥಳೀಯರು ಮತ್ತು ಕುಟುಂಬಸ್ಥರು ಅದ್ದೂರಿ ಸ್ವಾಗತ ಕೋರಿದರು. ಈ ಸಂದರ್ಭದಲ್ಲಿ ಈಟಿವಿ ಭಾರತದ ಜೊತೆಗೆ ತಮ್ಮ ಗಾಯ ಮತ್ತು ತಮ್ಮ ಯೋಜನೆಗಳನ್ನು ಹಂಚಿಕೊಂಡಿದ್ದಾರೆ..

Bajrang Punia
ಬಜರಂಗ್ ಪೂನಿಯಾ

ಸೋನಿಪತ್ : ಟೋಕಿಯೊ ಒಲಿಂಪಿಕ್ಸ್​ನಲ್ಲಿ 65 ಕೆಜಿ ವಿಭಾಗದ ಕುಸ್ತಿಯಲ್ಲಿ ಸ್ಪರ್ಧಿಸಿದ್ದ ಭಾರತದ ಭರವಸೆಯ ಕುಸ್ತಿಪಟು ಬಜರಂಗ್ ಪೂನಿಯಾ ಗಾಯದ ಕಾರಣ ಸೆಮಿಫೈನಲ್​ನಲ್ಲಿ ಸೋಲು ಕಂಡಿದ್ದರು. ಆದರೆ, ದೇಶಕ್ಕೆ ಪದಕ ತಂದುಕೊಡಬೇಕೆನ್ನುವ ಮನೋಭಾವದಿಂದ ಗಾಯ ಮರೆತು ಪದಕ ಗೆಲ್ಲುವತ್ತ ನನ್ನೆಲ್ಲಾ ಗಮನ ನೀಡಿದ್ದೆ ಎಂದು ಈಟಿವಿ ಭಾರತಕ್ಕೆ ಸ್ಟಾರ್​ ಕುಸ್ತಿಪಟು ತಿಳಿಸಿದ್ದಾರೆ.

"ಇಂಜುರಿ ಕಾರಣದಿಂದ ನಾನು ಸೆಮಿಫೈನಲ್​ನಲ್ಲಿ ಸೋಲು ಕಾಣಬೇಕಾಯಿತು. ಆದರೆ, ಕೊನೆಗೆ ಉಳಿದಿದ್ದು ಕಂಚಿನ ಪದಕದ ಪಂದ್ಯ ಮಾತ್ರ. ಅದಕ್ಕಾಗಿ ನನ್ನ ಸಂಪೂರ್ಣ ಗಮನ ನೀಡಿದೆ. ಇದೀಗ ಗಾಯದಿಂದ ಚೇತರಿಸಿಕೊಳ್ಳುವತ್ತಾ ಗಮನ ನೀಡುತ್ತೇನೆ. ಮುಂದಿನ ವಿಶ್ವ ಚಾಂಪಿಯನ್​ಶಿಪ್​ ಸೇರಿ ಮುಂಬರುವ ಟೂರ್ನಮೆಂಟ್​ಗಳಲ್ಲಿ ಚಿನ್ನದ ಪದಕ ಗೆಲ್ಲಲು ಪ್ರಯತ್ನಿಸುತ್ತೇನೆ" ಎಂದು ಬಜರಂಗ್ ತಿಳಿಸಿದ್ದಾರೆ.

ಕಂಚಿನ ಪದಕ ಗೆದ್ದ ಬಜರಂಗ್ ಪೂನಿಯಾ ಸಂದರ್ಶನ

ಬಜರಂಗ್ ಪೂನಿಯಾ ಕಂಚಿನ ಪದಕ ಪಂದ್ಯದಲ್ಲಿ ಕಜಕಸ್ತಾನದ ದೌಲತ್​ ನಿಯಜ್ಬೆಕೋವ್ ವಿರುದ್ಧ 8-0 ಅಂತರದಿಂದ ಗೆಲುವು ಸಾಧಿಸಿ ಕಂಚಿನ ಪದಕ ಗೆದ್ದಿದ್ದರು. ಮೊದಲಾರ್ಧದಲ್ಲಿ 2-0ಯಲ್ಲಿ ಮುನ್ನಡೆ ಸಾಧಿಸಿದ ಪೂನಿಯಾ ದ್ವಿತಿಯಾರ್ಧದಲ್ಲಿ ಕಜಕಸ್ತಾನದ ಕುಸ್ತಿಪಟುವಿನ ಮೇಲೆ ಸಂಪೂರ್ಣ ಪ್ರಾಬಲ್ಯ ಸಾಧಿಸಿ ಭಾರತಕ್ಕೆ 6ನೇ ಪದಕ ತಂದುಕೊಟ್ಟರು. ಕೊನೆಯ ಮೂರು ನಿಮಿಷಗಳಲ್ಲಿ ಎದುರಾಳಿಯ ವಿರುದ್ಧ ಯಾವುದೇ ತಪ್ಪುಗಳನ್ನೆಸೆಯದ ಪೂನಿಯಾ 6 ಅಂಕ ಸಂಪಾದಿಸಿ ಪದಕ ಪಡೆದು ಇತಿಹಾಸ ನಿರ್ಮಿಸಿದ್ದರು.

ಚಿನ್ನದ ಪದಕದ ಆಸೆ ಗಾಯದಿಂದ ಕೈತಪ್ಪಿದರೂ ದೇಶಕ್ಕೆ ಕಂಚಿನ ಪದಕ ತಂದುಕೊಟ್ಟ ಬಜರಂಗ್ ಪೂನಿಯಾರನ್ನು ಸ್ಥಳೀಯರು ಮತ್ತು ಕುಟುಂಬಸ್ಥರು ಅದ್ದೂರಿ ಸ್ವಾಗತ ಕೋರಿದರು. ಈ ಸಂದರ್ಭದಲ್ಲಿ ಈಟಿವಿ ಭಾರತದ ಜೊತೆಗೆ ತಮ್ಮ ಗಾಯ ಮತ್ತು ತಮ್ಮ ಯೋಜನೆಗಳನ್ನು ಹಂಚಿಕೊಂಡಿದ್ದಾರೆ.

ಇದನ್ನು ಓದಿ : ಚಿನ್ನ ಗೆದ್ದ ನೀರಜ್​ಗೆ 50 ಲಕ್ಷ, ಬಜರಂಗ್​ಗೆ 10 ಲಕ್ಷ ಬಹುಮಾನ ಘೋಷಿಸಿದ ಲವ್ಲಿ ಪ್ರೊಫೆಷನಲ್ ಯುನಿವರ್ಸಿಟಿ

ಸೋನಿಪತ್ : ಟೋಕಿಯೊ ಒಲಿಂಪಿಕ್ಸ್​ನಲ್ಲಿ 65 ಕೆಜಿ ವಿಭಾಗದ ಕುಸ್ತಿಯಲ್ಲಿ ಸ್ಪರ್ಧಿಸಿದ್ದ ಭಾರತದ ಭರವಸೆಯ ಕುಸ್ತಿಪಟು ಬಜರಂಗ್ ಪೂನಿಯಾ ಗಾಯದ ಕಾರಣ ಸೆಮಿಫೈನಲ್​ನಲ್ಲಿ ಸೋಲು ಕಂಡಿದ್ದರು. ಆದರೆ, ದೇಶಕ್ಕೆ ಪದಕ ತಂದುಕೊಡಬೇಕೆನ್ನುವ ಮನೋಭಾವದಿಂದ ಗಾಯ ಮರೆತು ಪದಕ ಗೆಲ್ಲುವತ್ತ ನನ್ನೆಲ್ಲಾ ಗಮನ ನೀಡಿದ್ದೆ ಎಂದು ಈಟಿವಿ ಭಾರತಕ್ಕೆ ಸ್ಟಾರ್​ ಕುಸ್ತಿಪಟು ತಿಳಿಸಿದ್ದಾರೆ.

"ಇಂಜುರಿ ಕಾರಣದಿಂದ ನಾನು ಸೆಮಿಫೈನಲ್​ನಲ್ಲಿ ಸೋಲು ಕಾಣಬೇಕಾಯಿತು. ಆದರೆ, ಕೊನೆಗೆ ಉಳಿದಿದ್ದು ಕಂಚಿನ ಪದಕದ ಪಂದ್ಯ ಮಾತ್ರ. ಅದಕ್ಕಾಗಿ ನನ್ನ ಸಂಪೂರ್ಣ ಗಮನ ನೀಡಿದೆ. ಇದೀಗ ಗಾಯದಿಂದ ಚೇತರಿಸಿಕೊಳ್ಳುವತ್ತಾ ಗಮನ ನೀಡುತ್ತೇನೆ. ಮುಂದಿನ ವಿಶ್ವ ಚಾಂಪಿಯನ್​ಶಿಪ್​ ಸೇರಿ ಮುಂಬರುವ ಟೂರ್ನಮೆಂಟ್​ಗಳಲ್ಲಿ ಚಿನ್ನದ ಪದಕ ಗೆಲ್ಲಲು ಪ್ರಯತ್ನಿಸುತ್ತೇನೆ" ಎಂದು ಬಜರಂಗ್ ತಿಳಿಸಿದ್ದಾರೆ.

ಕಂಚಿನ ಪದಕ ಗೆದ್ದ ಬಜರಂಗ್ ಪೂನಿಯಾ ಸಂದರ್ಶನ

ಬಜರಂಗ್ ಪೂನಿಯಾ ಕಂಚಿನ ಪದಕ ಪಂದ್ಯದಲ್ಲಿ ಕಜಕಸ್ತಾನದ ದೌಲತ್​ ನಿಯಜ್ಬೆಕೋವ್ ವಿರುದ್ಧ 8-0 ಅಂತರದಿಂದ ಗೆಲುವು ಸಾಧಿಸಿ ಕಂಚಿನ ಪದಕ ಗೆದ್ದಿದ್ದರು. ಮೊದಲಾರ್ಧದಲ್ಲಿ 2-0ಯಲ್ಲಿ ಮುನ್ನಡೆ ಸಾಧಿಸಿದ ಪೂನಿಯಾ ದ್ವಿತಿಯಾರ್ಧದಲ್ಲಿ ಕಜಕಸ್ತಾನದ ಕುಸ್ತಿಪಟುವಿನ ಮೇಲೆ ಸಂಪೂರ್ಣ ಪ್ರಾಬಲ್ಯ ಸಾಧಿಸಿ ಭಾರತಕ್ಕೆ 6ನೇ ಪದಕ ತಂದುಕೊಟ್ಟರು. ಕೊನೆಯ ಮೂರು ನಿಮಿಷಗಳಲ್ಲಿ ಎದುರಾಳಿಯ ವಿರುದ್ಧ ಯಾವುದೇ ತಪ್ಪುಗಳನ್ನೆಸೆಯದ ಪೂನಿಯಾ 6 ಅಂಕ ಸಂಪಾದಿಸಿ ಪದಕ ಪಡೆದು ಇತಿಹಾಸ ನಿರ್ಮಿಸಿದ್ದರು.

ಚಿನ್ನದ ಪದಕದ ಆಸೆ ಗಾಯದಿಂದ ಕೈತಪ್ಪಿದರೂ ದೇಶಕ್ಕೆ ಕಂಚಿನ ಪದಕ ತಂದುಕೊಟ್ಟ ಬಜರಂಗ್ ಪೂನಿಯಾರನ್ನು ಸ್ಥಳೀಯರು ಮತ್ತು ಕುಟುಂಬಸ್ಥರು ಅದ್ದೂರಿ ಸ್ವಾಗತ ಕೋರಿದರು. ಈ ಸಂದರ್ಭದಲ್ಲಿ ಈಟಿವಿ ಭಾರತದ ಜೊತೆಗೆ ತಮ್ಮ ಗಾಯ ಮತ್ತು ತಮ್ಮ ಯೋಜನೆಗಳನ್ನು ಹಂಚಿಕೊಂಡಿದ್ದಾರೆ.

ಇದನ್ನು ಓದಿ : ಚಿನ್ನ ಗೆದ್ದ ನೀರಜ್​ಗೆ 50 ಲಕ್ಷ, ಬಜರಂಗ್​ಗೆ 10 ಲಕ್ಷ ಬಹುಮಾನ ಘೋಷಿಸಿದ ಲವ್ಲಿ ಪ್ರೊಫೆಷನಲ್ ಯುನಿವರ್ಸಿಟಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.