ETV Bharat / sports

ಸೀನಿಯರ್ಸ್​ ಬಾಡಿ ಮಸಾಜ್​ ಮಾಡಲು ಕಿರುಕುಳ ನೀಡುತ್ತಿದ್ದರು: ದ್ಯುತಿ ಚಾಂದ್​

author img

By

Published : Jul 4, 2022, 1:00 PM IST

ಒಲಿಂಪಿಯನ್​ ಓಟಗಾರ್ತಿ ದ್ಯುತಿ ಚಾಂದ್​ ತಾವು ಕ್ರೀಡಾ ವಸತಿ ನಿಲಯಲ್ಲಿದ್ದಾಗ ಸೀನಿಯರ್ಸ್​ಗಳಿಂದ ರ‍್ಯಾಗಿಂಗ್​ಗೆ ಒಳಗಾಗಿದ್ದರ ಬಗ್ಗೆ ಹೇಳಿಕೊಂಡಿದ್ದಾರೆ.

ಸೀನಿಯರ್ಸ್​ ಬಾಡಿ ಮಸಾಜ್​ ಮಾಡಲು ಕಿರುಕುಳ ನೀಡುತ್ತಿದ್ದರು: ದ್ಯುತಿ ಚಾಂದ್​
ಸೀನಿಯರ್ಸ್​ ಬಾಡಿ ಮಸಾಜ್​ ಮಾಡಲು ಕಿರುಕುಳ ನೀಡುತ್ತಿದ್ದರು: ದ್ಯುತಿ ಚಾಂದ್​

ಭುವನೇಶ್ವರ್: ಇಲ್ಲಿನ ಕ್ರೀಡಾ ಹಾಸ್ಟೆಲ್​ನಲ್ಲಿ ವಿದ್ಯಾರ್ಥಿನಿಯೊಬ್ಬಳು ಸೀನಿಯರ್ಸ್​ಗಳ ರ‍್ಯಾಗಿಂಗ್​ಗೆ ಬೇಸತ್ತು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಆತಂಕಕ್ಕೀಡು ಮಾಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಒಲಿಂಪಿಯನ್​ ಓಟಗಾರ್ತಿ ದ್ಯುತಿ ಚಾಂದ್​, "ನಾನು ಕೂಡ ಹಾಸ್ಟೆಲ್​ನಲ್ಲಿ ಕಿರುಕುಳಕ್ಕೆ ಒಳಗಾಗಿದ್ದೆ. ಹಿರಿಯರು ನನಗೆ ಬಾಡಿ ಮಸಾಜ್​ ಮಾಡಲು ಒತ್ತಾಯಿಸುತ್ತಿದ್ದರು" ಎಂದು ಆಪಾದಿಸಿದ್ದಾರೆ.

"2006-08ರಲ್ಲಿ ಭುವನೇಶ್ವರ್‌ನ ಸ್ಪೋರ್ಟ್ಸ್ ಹಾಸ್ಟೆಲ್‌ನಲ್ಲಿದ್ದಾಗ ಹಿರಿಯರ ರ‍್ಯಾಗಿಂಗ್‌ಗೆ ಒಳಗಾಗಿದ್ದೆ. ಸೀನಿಯರ್ಸ್​ ನನಗೆ ಅವರ ಬಟ್ಟೆಗಳನ್ನು ತೊಳೆಯಲು ಮತ್ತು ಬಾಡಿ ಮಸಾಜ್​ ಮಾಡಲು ಆದೇಶಿಸುತ್ತಿದ್ದರು. ಇದನ್ನು ಮಾಡದಿದ್ದರೆ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದರು" ಎಂದು ತಿಳಿಸಿದ್ದಾರೆ.

"ನನ್ನ ಬಡತನದ ಬಗ್ಗೆಯೂ ಹೀಯಾಳಿಸುತ್ತಿದ್ದ ಅವರ ವಿರುದ್ಧ ವಸತಿನಿಲಯದ ಅಧಿಕಾರಿಗಳಿಗೆ ದೂರು ನೀಡಿದರೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿರಲಿಲ್ಲ. ಅಲ್ಲದೇ, ನನ್ನನ್ನೇ ಈ ಕುರಿತು ನಿಂದಿಸಲಾಗುತ್ತಿತ್ತು. ಇದು ನನ್ನನ್ನು ಮಾನಸಿಕವಾಗಿ ಘಾಸಿಗೊಳಿಸಿತ್ತು. ಆ ಸಮಯದಲ್ಲಿ ನಾನು ಅಸಹಾಯಕಳಾಗಿದ್ದೆ" ಎಂದು ಒಲಿಂಪಿಯನ್ ರನ್ನರ್​ ಬೇಸರದಿಂದ ನುಡಿದರು.

ಭುವನೇಶ್ವರದ ಮಹಿಳಾ ಕ್ರೀಡಾ ವಸತಿನಿಲಯದಲ್ಲಿ(ಬಿಜೆಬಿ) 19 ವರ್ಷದ ಯುವತಿಯೊಬ್ಬಳು ತನ್ನ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳದಲ್ಲಿ ಪೊಲೀಸರಿಗೆ ಆತ್ಮಹತ್ಯೆ ಪತ್ರ ದೊರೆತಿದ್ದು, ಕಾಲೇಜಿನ ಮೂವರು ಸೀನಿಯರ್ಸ್​ ತನಗೆ ರ‍್ಯಾಗಿಂಗ್​ ಮಾಡಿ ಮಾನಸಿಕವಾಗಿ ಹಿಂಸಿಸುತ್ತಿದ್ದರು ಎಂದು ಬರೆದುಕೊಂಡಿದ್ದಾಳೆ.

ಇದನ್ನೂ ಓದಿ: 'ಅಗ್ನಿಪಥ' ಪ್ರಶ್ನಿಸಿ ಸುಪ್ರೀಂಕೋರ್ಟ್​ಗೆ ಪಿಐಎಲ್​: ಮುಂದಿನ ವಾರ ವಿಚಾರಣೆ

ಭುವನೇಶ್ವರ್: ಇಲ್ಲಿನ ಕ್ರೀಡಾ ಹಾಸ್ಟೆಲ್​ನಲ್ಲಿ ವಿದ್ಯಾರ್ಥಿನಿಯೊಬ್ಬಳು ಸೀನಿಯರ್ಸ್​ಗಳ ರ‍್ಯಾಗಿಂಗ್​ಗೆ ಬೇಸತ್ತು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಆತಂಕಕ್ಕೀಡು ಮಾಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಒಲಿಂಪಿಯನ್​ ಓಟಗಾರ್ತಿ ದ್ಯುತಿ ಚಾಂದ್​, "ನಾನು ಕೂಡ ಹಾಸ್ಟೆಲ್​ನಲ್ಲಿ ಕಿರುಕುಳಕ್ಕೆ ಒಳಗಾಗಿದ್ದೆ. ಹಿರಿಯರು ನನಗೆ ಬಾಡಿ ಮಸಾಜ್​ ಮಾಡಲು ಒತ್ತಾಯಿಸುತ್ತಿದ್ದರು" ಎಂದು ಆಪಾದಿಸಿದ್ದಾರೆ.

"2006-08ರಲ್ಲಿ ಭುವನೇಶ್ವರ್‌ನ ಸ್ಪೋರ್ಟ್ಸ್ ಹಾಸ್ಟೆಲ್‌ನಲ್ಲಿದ್ದಾಗ ಹಿರಿಯರ ರ‍್ಯಾಗಿಂಗ್‌ಗೆ ಒಳಗಾಗಿದ್ದೆ. ಸೀನಿಯರ್ಸ್​ ನನಗೆ ಅವರ ಬಟ್ಟೆಗಳನ್ನು ತೊಳೆಯಲು ಮತ್ತು ಬಾಡಿ ಮಸಾಜ್​ ಮಾಡಲು ಆದೇಶಿಸುತ್ತಿದ್ದರು. ಇದನ್ನು ಮಾಡದಿದ್ದರೆ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದರು" ಎಂದು ತಿಳಿಸಿದ್ದಾರೆ.

"ನನ್ನ ಬಡತನದ ಬಗ್ಗೆಯೂ ಹೀಯಾಳಿಸುತ್ತಿದ್ದ ಅವರ ವಿರುದ್ಧ ವಸತಿನಿಲಯದ ಅಧಿಕಾರಿಗಳಿಗೆ ದೂರು ನೀಡಿದರೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿರಲಿಲ್ಲ. ಅಲ್ಲದೇ, ನನ್ನನ್ನೇ ಈ ಕುರಿತು ನಿಂದಿಸಲಾಗುತ್ತಿತ್ತು. ಇದು ನನ್ನನ್ನು ಮಾನಸಿಕವಾಗಿ ಘಾಸಿಗೊಳಿಸಿತ್ತು. ಆ ಸಮಯದಲ್ಲಿ ನಾನು ಅಸಹಾಯಕಳಾಗಿದ್ದೆ" ಎಂದು ಒಲಿಂಪಿಯನ್ ರನ್ನರ್​ ಬೇಸರದಿಂದ ನುಡಿದರು.

ಭುವನೇಶ್ವರದ ಮಹಿಳಾ ಕ್ರೀಡಾ ವಸತಿನಿಲಯದಲ್ಲಿ(ಬಿಜೆಬಿ) 19 ವರ್ಷದ ಯುವತಿಯೊಬ್ಬಳು ತನ್ನ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳದಲ್ಲಿ ಪೊಲೀಸರಿಗೆ ಆತ್ಮಹತ್ಯೆ ಪತ್ರ ದೊರೆತಿದ್ದು, ಕಾಲೇಜಿನ ಮೂವರು ಸೀನಿಯರ್ಸ್​ ತನಗೆ ರ‍್ಯಾಗಿಂಗ್​ ಮಾಡಿ ಮಾನಸಿಕವಾಗಿ ಹಿಂಸಿಸುತ್ತಿದ್ದರು ಎಂದು ಬರೆದುಕೊಂಡಿದ್ದಾಳೆ.

ಇದನ್ನೂ ಓದಿ: 'ಅಗ್ನಿಪಥ' ಪ್ರಶ್ನಿಸಿ ಸುಪ್ರೀಂಕೋರ್ಟ್​ಗೆ ಪಿಐಎಲ್​: ಮುಂದಿನ ವಾರ ವಿಚಾರಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.