ETV Bharat / sports

ಭಾರತ ಫುಟ್​ಬಾಲ್​ ತಂಡದ ನಾಯಕ ಸುನಿಲ್​ ಚೆಟ್ರಿ ಹುಟ್ಟುಹಬ್ಬಕ್ಕೆ ಕ್ರೀಡಾ ಸಚಿವರಿಂದ ಭರ್ಜರಿ ಗಿಫ್ಟ್​

author img

By

Published : Aug 3, 2020, 7:31 PM IST

ಭಾರತದಲ್ಲಿ ಕ್ರಿಕೆಟ್​ಗೆ ನೀಡುವ ಮನ್ನಣೆಯನ್ನು ಫುಟ್​ಬಾಲ್​ಗೂ ನೀಡಿದರೆ ವಿಶ್ವಮಟ್ಟದಲ್ಲಿ ಭಾರತ ತನ್ನ ಸಾಮರ್ಥ್ಯ ತೋರಲಿದೆ ಎಂದು ಸಾಕಷ್ಟು ವರ್ಷಗಳಿಂದ ಹೇಳುತ್ತಿರುವ ಚೆಟ್ರಿ ಮಾತಿಗೆ ಕ್ರೀಡಾ ಸಚಿವಾ ಬೆಂಬಲ ಸೂಚಿಸಿದ್ದು ಭಾರತದಾದ್ಯಂತ ಫುಟ್​ಬಾಲ್​ಗೆ ಸಮರ್ಥವಾಗಿರುವ ಯುವ ಆಟಗಾರರನ್ನು ಗುರುತಿಸಲು ಯೋಜನೆಯೊಂದನ್ನು ಜಾರಿಗೆ ತುರುವುದಾಗಿ ಘೋಷಿಸಿದ್ದಾರೆ.

ಸುನಿಲ್​ ಚೆಟ್ರಿ ಬರ್ತಡೇ
ಸುನಿಲ್​ ಚೆಟ್ರಿ ಬರ್ತಡೇ

ನವದೆಹಲಿ: ಭಾರತ ಫುಟ್​ಬಾಲ್​ ತಂಡದ ನಾಯಕ ಸುನಿಲ್​ ಚೆಟ್ರಿ ಸೋಮವಾರ 36ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಕೇಂದ್ರ ಕ್ರೀಡಾ ಸಚಿವಾ ಕಿರಣ್​ ರಿಜಿಜು ಅವರಿಗೆ ಭರ್ಜರಿ ಉಡುಗೊರೆ ನೀಡಿದ್ದಾರೆ.

ಭಾರತದಲ್ಲಿ ಕ್ರಿಕೆಟ್​ಗೆ ನೀಡುವ ಮನ್ನಣೆಯನ್ನು ಫುಟ್​ಬಾಲ್​ಗೂ ನೀಡಿದರೆ ವಿಶ್ವಮಟ್ಟದಲ್ಲಿ ಭಾರತ ತನ್ನ ಸಾಮರ್ಥ್ಯ ತೋರಲಿದೆ ಎಂದು ಸಾಕಷ್ಟು ವರ್ಷಗಳಿಂದ ಹೇಳುತ್ತಿರುವ ಚೆಟ್ರಿ ಮಾತಿಗೆ ಕ್ರೀಡಾ ಸಚಿವಾ ಬೆಂಬಲ ಸೂಚಿಸಿದ್ದು ಭಾರತದಾದ್ಯಂತ ಫುಟ್​ಬಾಲ್​ಗೆ ಸಮರ್ಥವಾಗಿರುವ ಯುವ ಆಟಗಾರರನ್ನು ಗುರುತಿಸಲು ಯೋಜನೆಯೊಂದನ್ನು ಜಾರಿಗೆ ತುರುವುದಾಗಿ ಘೋಷಿಸಿದ್ದಾರೆ.

ದೆಹಲಿ ಫುಟ್​ಬಾಲ್​ ಅಸೋಸಿಯೇಸನ್ ಆಯೋಗದಲ್ಲಿ ನಡೆದ ಆನ್​ಲೈನ್​ ಸಂವಾದದ ವೇಳೆ ಖೇಲೋ ಇಂಡಿಯಾ ಯೋಜನೆಯ ಅಡಿಯಲ್ಲಿ ದೇಶದಾಧ್ಯಂತ 12 ವರ್ಷದೊಳಗಿನ ಫುಟ್​ಬಾಲ್​ ಪ್ರೆತಿಭೆಗಳನ್ನು ಗುರುತಿಸಲಾಗುವುದು ಎಂದು ತಿಳಿಸಿದ್ದಾರೆ.

ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ ಸಹಯೋಗದೊಂದಿಗೆ ಎಸ್‌ಎಐ ಯೋಜನೆಯನ್ನು ಜಾರಿಗೊಳಿಸಲಾಗುವುದು ಮತ್ತು ಗೋಲ್ಡನ್ (ಬೇಬಿ) ಲೀಗ್‌ಗಳನ್ನು ಭಾರತದಾದ್ಯಂತ ಆಡಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ.

"ದೆಹಲಿಯಲ್ಲಿ ಫುಟ್ಬಾಲ್ ಸಂಸ್ಥೆಯ ಮೂಲಸೌಕರ್ಯವನ್ನು ಸುಧಾರಿಸಲು ನಾನು ಲೆಫ್ಟಿನೆಂಟ್ ಜನರಲ್ ಮತ್ತು ದೆಹಲಿಯ ಮುಖ್ಯಮಂತ್ರಿಯೊಂದಿಗೆ ಸಭೆ ನಡೆಸುತ್ತೇನೆ, ಭಾರತವನ್ನು ವಿಶ್ವಶಕ್ತಿಯನ್ನಾಗಿ ಮಾಡಲು ಫುಟ್ಬಾಲ್ ಸಂಸ್ಕೃತಿ ಅವಶ್ಯಕವಾಗಿದೆ " ಎಂದು ರಿಜಿಜು ಹೇಳಿದ್ದಾರೆ.

ಕಿರಣ್​ ರಿಜಿಜು ಅವರ ಈ ನಿರ್ಧಾರವನ್ನು ಚೆಟ್ರಿ ಸ್ವಾಗತಿಸಿದ್ದಾರೆ. "ಒಂದು ವೇಳೆ ಪ್ರತಿ ಪ್ರತಿಭೆಯನ್ನು ಗುರುತಿಸಿ ಚೆನ್ನಾಗಿ ಪೋಷಿಸಿದರೆ ಭಾರತೀಯ ಫುಟ್‌ಬಾಲ್‌ನ ಅರ್ಧದಷ್ಟು ಸಮಸ್ಯೆ ಬಗೆಹರಿಯುತ್ತದೆ. ನಾನು ಕೇಳಬಹುದಾದ ಅತ್ಯುತ್ತಮ ಹುಟ್ಟುಹಬ್ಬದ ಉಡುಗೊರೆ ಇದು ”ಎಂದು ಚೆಟ್ರಿ ಸಂತಸ ವ್ಯಕ್ತಪಡಿಸಿದ್ದಾರೆ.

ನವದೆಹಲಿ: ಭಾರತ ಫುಟ್​ಬಾಲ್​ ತಂಡದ ನಾಯಕ ಸುನಿಲ್​ ಚೆಟ್ರಿ ಸೋಮವಾರ 36ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಕೇಂದ್ರ ಕ್ರೀಡಾ ಸಚಿವಾ ಕಿರಣ್​ ರಿಜಿಜು ಅವರಿಗೆ ಭರ್ಜರಿ ಉಡುಗೊರೆ ನೀಡಿದ್ದಾರೆ.

ಭಾರತದಲ್ಲಿ ಕ್ರಿಕೆಟ್​ಗೆ ನೀಡುವ ಮನ್ನಣೆಯನ್ನು ಫುಟ್​ಬಾಲ್​ಗೂ ನೀಡಿದರೆ ವಿಶ್ವಮಟ್ಟದಲ್ಲಿ ಭಾರತ ತನ್ನ ಸಾಮರ್ಥ್ಯ ತೋರಲಿದೆ ಎಂದು ಸಾಕಷ್ಟು ವರ್ಷಗಳಿಂದ ಹೇಳುತ್ತಿರುವ ಚೆಟ್ರಿ ಮಾತಿಗೆ ಕ್ರೀಡಾ ಸಚಿವಾ ಬೆಂಬಲ ಸೂಚಿಸಿದ್ದು ಭಾರತದಾದ್ಯಂತ ಫುಟ್​ಬಾಲ್​ಗೆ ಸಮರ್ಥವಾಗಿರುವ ಯುವ ಆಟಗಾರರನ್ನು ಗುರುತಿಸಲು ಯೋಜನೆಯೊಂದನ್ನು ಜಾರಿಗೆ ತುರುವುದಾಗಿ ಘೋಷಿಸಿದ್ದಾರೆ.

ದೆಹಲಿ ಫುಟ್​ಬಾಲ್​ ಅಸೋಸಿಯೇಸನ್ ಆಯೋಗದಲ್ಲಿ ನಡೆದ ಆನ್​ಲೈನ್​ ಸಂವಾದದ ವೇಳೆ ಖೇಲೋ ಇಂಡಿಯಾ ಯೋಜನೆಯ ಅಡಿಯಲ್ಲಿ ದೇಶದಾಧ್ಯಂತ 12 ವರ್ಷದೊಳಗಿನ ಫುಟ್​ಬಾಲ್​ ಪ್ರೆತಿಭೆಗಳನ್ನು ಗುರುತಿಸಲಾಗುವುದು ಎಂದು ತಿಳಿಸಿದ್ದಾರೆ.

ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ ಸಹಯೋಗದೊಂದಿಗೆ ಎಸ್‌ಎಐ ಯೋಜನೆಯನ್ನು ಜಾರಿಗೊಳಿಸಲಾಗುವುದು ಮತ್ತು ಗೋಲ್ಡನ್ (ಬೇಬಿ) ಲೀಗ್‌ಗಳನ್ನು ಭಾರತದಾದ್ಯಂತ ಆಡಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ.

"ದೆಹಲಿಯಲ್ಲಿ ಫುಟ್ಬಾಲ್ ಸಂಸ್ಥೆಯ ಮೂಲಸೌಕರ್ಯವನ್ನು ಸುಧಾರಿಸಲು ನಾನು ಲೆಫ್ಟಿನೆಂಟ್ ಜನರಲ್ ಮತ್ತು ದೆಹಲಿಯ ಮುಖ್ಯಮಂತ್ರಿಯೊಂದಿಗೆ ಸಭೆ ನಡೆಸುತ್ತೇನೆ, ಭಾರತವನ್ನು ವಿಶ್ವಶಕ್ತಿಯನ್ನಾಗಿ ಮಾಡಲು ಫುಟ್ಬಾಲ್ ಸಂಸ್ಕೃತಿ ಅವಶ್ಯಕವಾಗಿದೆ " ಎಂದು ರಿಜಿಜು ಹೇಳಿದ್ದಾರೆ.

ಕಿರಣ್​ ರಿಜಿಜು ಅವರ ಈ ನಿರ್ಧಾರವನ್ನು ಚೆಟ್ರಿ ಸ್ವಾಗತಿಸಿದ್ದಾರೆ. "ಒಂದು ವೇಳೆ ಪ್ರತಿ ಪ್ರತಿಭೆಯನ್ನು ಗುರುತಿಸಿ ಚೆನ್ನಾಗಿ ಪೋಷಿಸಿದರೆ ಭಾರತೀಯ ಫುಟ್‌ಬಾಲ್‌ನ ಅರ್ಧದಷ್ಟು ಸಮಸ್ಯೆ ಬಗೆಹರಿಯುತ್ತದೆ. ನಾನು ಕೇಳಬಹುದಾದ ಅತ್ಯುತ್ತಮ ಹುಟ್ಟುಹಬ್ಬದ ಉಡುಗೊರೆ ಇದು ”ಎಂದು ಚೆಟ್ರಿ ಸಂತಸ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.