ETV Bharat / sports

ದುಲೀಪ್​ ಟ್ರೋಫಿ ಫೈನಲ್​: ಸ್ಲೆಡ್ಜಿಂಗ್​ ವಿವಾದಕ್ಕೆ ಮೈದಾನದಿಂದ ಹೊರನಡೆದ ಯಶಸ್ವಿ ಜೈಸ್ವಾಲ್

author img

By

Published : Sep 25, 2022, 6:07 PM IST

ದುಲೀಪ್​ ಟ್ರೋಫಿ ಫೈನಲ್​ನಲ್ಲಿ ಸ್ಲೆಡ್ಜಿಂಗ್​ ವಿವಾದ ಉಂಟಾಗಿದೆ. ಪಶ್ಚಿಮ ಮತ್ತು ದಕ್ಷಿಣ ವಲಯ ತಂಡದ ಆಟಗಾರರ ಮಧ್ಯೆ ಮಾತಿನ ಚಕಮಕಿ ನಡೆದು, ಪಶ್ಚಿಮ ವಲಯ ತಂಡದ ಯಶಸ್ವಿ ಜೈಸ್ವಾಲ್​ ಆಟದ ಮಧ್ಯೆ ಮೈದಾನ ತೊರೆದ ಪ್ರಸಂಗವೂ ಜರುಗಿತು.

yashasvi-jaiswal-sent-off-from-field-
ದುಲೀಪ್​ ಟ್ರೋಫಿ ಫೈನಲ್​

ಪಶ್ಚಿಮ ಮತ್ತು ದಕ್ಷಿಣ ವಲಯ ನಡುವಿನ ದುಲೀಪ್ ಟ್ರೋಫಿ ಫೈನಲ್‌ನ ಐದನೇ ದಿನದ ಬೆಳಗಿನ ಸೆಷನ್​ನಲ್ಲಿ ಆಟಗಾರರ ಮಧ್ಯೆ ಸ್ಲೆಡ್ಜಿಂಗ್​ ವಿವಾದ ಉಂಟಾಗಿದೆ. ವಿವಾದ ಇನ್ನಷ್ಟು ಬೆಳೆಯದಂತೆ ಪಶ್ಚಿಮ ವಲಯ ತಂಡದ ನಾಯಕ ಅಜಿಂಕ್ಯ ರಹಾನೆ, ಯುವ ಆಟಗಾರ ಯಶಸ್ವಿ ಜೈಸ್ವಾಲ್ ಅವರನ್ನು ಮೈದಾನದಿಂದ ಹೊರ ಕಳುಹಿಸಿದ ಘಟನೆ ಕೂಡ ನಡೆಯಿತು.

50ನೇ ಓವರ್​ ವೇಳೆ ದಕ್ಷಿಣ ವಲಯದ ಬ್ಯಾಟರ್​ ಟಿ ರವಿತೇಜ ಮತ್ತು ಪಶ್ಚಿಮ ವಲಯದ ಯಶಸ್ವಿ ಜೈಸ್ವಾಲ್​ ಮಧ್ಯೆ ಮಾತು ಬೆಳೆದಿದೆ. ಇಬ್ಬರಿಗೂ ಫೀಲ್ಡ್​ ಅಂಪೈರ್​ಗಳು ಎಚ್ಚರಿಕೆ ನೀಡಿದ್ದರು. ಆದರೂ ಬಿಡದ ಜೈಸ್ವಾಲ್​ ಮತ್ತೆ ಕೆಣಕ್ಕಿದ್ದಾರೆ. ಇದರಿಂದ ರವಿತೇಜ ಈ ಬಗ್ಗೆ ಅಂಪೈರ್​ಗೆ ದೂರಿದ್ದಾರೆ. ಮಧ್ಯಪ್ರವೇಶಿಸಿದ ನಾಯಕ ಅಜಿಂಕ್ಯಾ ರಹಾನೆ ಇಬ್ಬರು ಆಟಗಾರರನ್ನು ಸಮಾಧಾನ ಮಾಡಿದರು.

ಒಂದು ಹಂತದಲ್ಲಿ ಅಜಿಂಕ್ಯಾ ರಹಾನೆ ಮುಂದೆಯೇ ಜೈಸ್ವಾಲ್​ ನಿಂದಿಸಲು ಶುರು ಮಾಡಿದರು. ರಹಾನೆ ಆತನನ್ನು ಸಮಾಧಾನ ಮಾಡಲು ಕರೆದೊಯ್ದರು. ಸ್ವಲ್ಪ ಸಮಯದ ಬಳಿಕ ಅಜಿಂಕ್ಯಾ ರಹಾನೆ, ಯಶಸ್ವಿ ಜೈಸ್ವಾಲ್​ರನ್ನು ಮೈದಾನದಿಂದಲೇ ಹೊರ ಕಳುಹಿಸಿದರು.

ನಾಯಕನ ಈ ನಿರ್ಧಾರದಿಂದ ಅಸಮಧಾನಗೊಂಡ ಯಶಸ್ವಿ ಜೈಸ್ವಾಲ್​ ಮೈದಾನ ತೊರೆಯುವಾಗಲೂ ಗೊಣಗುತ್ತಾ ಹೊರ ನಡೆದರು. ಬಳಿಕ ಇನಿಂಗ್ಸ್‌ನ 65ನೇ ಓವರ್‌ನಲ್ಲಿ ಜೈಸ್ವಾಲ್​ರನ್ನು ಮತ್ತೆ ಮೈದಾನಕ್ಕೆ ಕರೆಯಿಸಿಕೊಳ್ಳಲಾಯಿತು.

ಪಶ್ಚಿಮ ವಲಯದ ಬ್ಯಾಟರ್​ ಯಶಸ್ವಿ ಜೈಸ್ವಾಲ್ ಎರಡನೇ ಇನ್ನಿಂಗ್ಸ್‌ನಲ್ಲಿ ಅದ್ಭುತ ದ್ವಿಶತಕವನ್ನು ಸಿಡಿಸಿದ್ದರು. 323 ಎಸೆತಗಳಲ್ಲಿ 263 ರನ್ ಗಳಿಸಿದ್ದರಿಂದ ತಂಡ 4 ವಿಕೆಟ್​ಗೆ 585 ರನ್​ಗಳ ಬೃಹತ್​ ಮೊತ್ತ ಗಳಿಸಿತು. ಇದರಿಂದ ದಕ್ಷಿಣ ವಲಯ ತಂಡ ಟ್ರೋಫಿ ಗೆಲ್ಲಲು 529 ರನ್‌ಗಳ ಗುರಿಯನ್ನು ಮೀರಬೇಕಿದೆ.

ಜೈಸ್ವಾಲ್‌ ದ್ವಿಶತಕ ಸಾಧನೆ ಮಾಡಿದರೆ, ಸರ್ಫರಾಜ್ ಖಾನ್ ಅಜೇಯ 178 ರನ್​ ಗಳಿಸಿದರು. ಅಂತಾರಾಷ್ಟ್ರೀಯ ಟೆಸ್ಟ್​ ಕ್ರಿಕೆಟ್​ನಲ್ಲಿ ವಿಫಲವಾಗಿರುವ ಅಜಿಂಕ್ಯಾ ರಹಾನೆ ಎರಡು ಇನ್ನಿಂಗ್ಸ್‌ಗಳಲ್ಲಿ 8 ಮತ್ತು 15 ಸ್ಕೋರ್‌ ಮಾಡಿ ಇಲ್ಲಿಯೂ ವೈಫಲ್ಯ ಅನುಭವಿಸಿದರು.

ಓದಿ: INDvs AUS 3rd T20: ಗೆದ್ದ ತಂಡಕ್ಕೆ ಸರಣಿ ಗೆಲುವಿನ ಸಿಹಿ.. ಹರ್ಷಲ್​, ಚಹಲ್​ ಮೇಲೆ ಒತ್ತಡ

ಪಶ್ಚಿಮ ಮತ್ತು ದಕ್ಷಿಣ ವಲಯ ನಡುವಿನ ದುಲೀಪ್ ಟ್ರೋಫಿ ಫೈನಲ್‌ನ ಐದನೇ ದಿನದ ಬೆಳಗಿನ ಸೆಷನ್​ನಲ್ಲಿ ಆಟಗಾರರ ಮಧ್ಯೆ ಸ್ಲೆಡ್ಜಿಂಗ್​ ವಿವಾದ ಉಂಟಾಗಿದೆ. ವಿವಾದ ಇನ್ನಷ್ಟು ಬೆಳೆಯದಂತೆ ಪಶ್ಚಿಮ ವಲಯ ತಂಡದ ನಾಯಕ ಅಜಿಂಕ್ಯ ರಹಾನೆ, ಯುವ ಆಟಗಾರ ಯಶಸ್ವಿ ಜೈಸ್ವಾಲ್ ಅವರನ್ನು ಮೈದಾನದಿಂದ ಹೊರ ಕಳುಹಿಸಿದ ಘಟನೆ ಕೂಡ ನಡೆಯಿತು.

50ನೇ ಓವರ್​ ವೇಳೆ ದಕ್ಷಿಣ ವಲಯದ ಬ್ಯಾಟರ್​ ಟಿ ರವಿತೇಜ ಮತ್ತು ಪಶ್ಚಿಮ ವಲಯದ ಯಶಸ್ವಿ ಜೈಸ್ವಾಲ್​ ಮಧ್ಯೆ ಮಾತು ಬೆಳೆದಿದೆ. ಇಬ್ಬರಿಗೂ ಫೀಲ್ಡ್​ ಅಂಪೈರ್​ಗಳು ಎಚ್ಚರಿಕೆ ನೀಡಿದ್ದರು. ಆದರೂ ಬಿಡದ ಜೈಸ್ವಾಲ್​ ಮತ್ತೆ ಕೆಣಕ್ಕಿದ್ದಾರೆ. ಇದರಿಂದ ರವಿತೇಜ ಈ ಬಗ್ಗೆ ಅಂಪೈರ್​ಗೆ ದೂರಿದ್ದಾರೆ. ಮಧ್ಯಪ್ರವೇಶಿಸಿದ ನಾಯಕ ಅಜಿಂಕ್ಯಾ ರಹಾನೆ ಇಬ್ಬರು ಆಟಗಾರರನ್ನು ಸಮಾಧಾನ ಮಾಡಿದರು.

ಒಂದು ಹಂತದಲ್ಲಿ ಅಜಿಂಕ್ಯಾ ರಹಾನೆ ಮುಂದೆಯೇ ಜೈಸ್ವಾಲ್​ ನಿಂದಿಸಲು ಶುರು ಮಾಡಿದರು. ರಹಾನೆ ಆತನನ್ನು ಸಮಾಧಾನ ಮಾಡಲು ಕರೆದೊಯ್ದರು. ಸ್ವಲ್ಪ ಸಮಯದ ಬಳಿಕ ಅಜಿಂಕ್ಯಾ ರಹಾನೆ, ಯಶಸ್ವಿ ಜೈಸ್ವಾಲ್​ರನ್ನು ಮೈದಾನದಿಂದಲೇ ಹೊರ ಕಳುಹಿಸಿದರು.

ನಾಯಕನ ಈ ನಿರ್ಧಾರದಿಂದ ಅಸಮಧಾನಗೊಂಡ ಯಶಸ್ವಿ ಜೈಸ್ವಾಲ್​ ಮೈದಾನ ತೊರೆಯುವಾಗಲೂ ಗೊಣಗುತ್ತಾ ಹೊರ ನಡೆದರು. ಬಳಿಕ ಇನಿಂಗ್ಸ್‌ನ 65ನೇ ಓವರ್‌ನಲ್ಲಿ ಜೈಸ್ವಾಲ್​ರನ್ನು ಮತ್ತೆ ಮೈದಾನಕ್ಕೆ ಕರೆಯಿಸಿಕೊಳ್ಳಲಾಯಿತು.

ಪಶ್ಚಿಮ ವಲಯದ ಬ್ಯಾಟರ್​ ಯಶಸ್ವಿ ಜೈಸ್ವಾಲ್ ಎರಡನೇ ಇನ್ನಿಂಗ್ಸ್‌ನಲ್ಲಿ ಅದ್ಭುತ ದ್ವಿಶತಕವನ್ನು ಸಿಡಿಸಿದ್ದರು. 323 ಎಸೆತಗಳಲ್ಲಿ 263 ರನ್ ಗಳಿಸಿದ್ದರಿಂದ ತಂಡ 4 ವಿಕೆಟ್​ಗೆ 585 ರನ್​ಗಳ ಬೃಹತ್​ ಮೊತ್ತ ಗಳಿಸಿತು. ಇದರಿಂದ ದಕ್ಷಿಣ ವಲಯ ತಂಡ ಟ್ರೋಫಿ ಗೆಲ್ಲಲು 529 ರನ್‌ಗಳ ಗುರಿಯನ್ನು ಮೀರಬೇಕಿದೆ.

ಜೈಸ್ವಾಲ್‌ ದ್ವಿಶತಕ ಸಾಧನೆ ಮಾಡಿದರೆ, ಸರ್ಫರಾಜ್ ಖಾನ್ ಅಜೇಯ 178 ರನ್​ ಗಳಿಸಿದರು. ಅಂತಾರಾಷ್ಟ್ರೀಯ ಟೆಸ್ಟ್​ ಕ್ರಿಕೆಟ್​ನಲ್ಲಿ ವಿಫಲವಾಗಿರುವ ಅಜಿಂಕ್ಯಾ ರಹಾನೆ ಎರಡು ಇನ್ನಿಂಗ್ಸ್‌ಗಳಲ್ಲಿ 8 ಮತ್ತು 15 ಸ್ಕೋರ್‌ ಮಾಡಿ ಇಲ್ಲಿಯೂ ವೈಫಲ್ಯ ಅನುಭವಿಸಿದರು.

ಓದಿ: INDvs AUS 3rd T20: ಗೆದ್ದ ತಂಡಕ್ಕೆ ಸರಣಿ ಗೆಲುವಿನ ಸಿಹಿ.. ಹರ್ಷಲ್​, ಚಹಲ್​ ಮೇಲೆ ಒತ್ತಡ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.