ETV Bharat / sports

'ಭಾರತ ತಂಡಕ್ಕೆ ಈತನೊಬ್ಬ ಸಾಕು...': ಸಿಡಿಲಮರಿ ಸೂರ್ಯಕುಮಾರ್​ಗೆ ವಿಶ್ವಕ್ರಿಕೆಟ್​ ಬಹುಪರಾಕ್​

author img

By

Published : Jan 8, 2023, 1:24 PM IST

ಶ್ರೀಲಂಕಾ ವಿರುದ್ಧ ಸಿಡಿಲಬ್ಬರದ ಶತಕ ಬಾರಿಸಿದ ಸೂರ್ಯಕುಮಾರ್​ ಯಾದವ್​ರನ್ನು ವಿಶ್ವ ಕ್ರಿಕೆಟ್​, ಅಭಿಮಾನಿಗಳು ವಿಧವಿಧವಾಗಿ ಬಣ್ಣಿಸಿದ್ದಾರೆ. ಸೂರ್ಯನ ಪ್ರಖರ ಬ್ಯಾಟಿಂಗ್​ಗೆ ಲಂಕಾ ಸರಣಿ ಸೋಲೊಪ್ಪಿಕೊಂಡಿತು.

suryakumar-yadavs-batting
ಸೂರ್ಯಕುಮಾರ್​ಗೆ ವಿಶ್ವಕ್ರಿಕೆಟ್​ ಬಹುಪರಾಕ್​

ರಾಜ್​ಕೋಟ್​: ರಾಮಾಯಣದಲ್ಲಿ ಆಂಜನೇಯ ಲಂಕೆಗೆ ಬೆಂಕಿ ಇಟ್ಟರೆ, ರಾಜ್​ಕೋಟ್​ನಲ್ಲಿ ಸೂರ್ಯಕುಮಾರ್​ ಯಾದವ್​ ಶ್ರೀಲಂಕಾ ಕ್ರಿಕೆಟ್​ ತಂಡದ ಕನಸಿಗೆ ಬೆಂಕಿ ಇಟ್ಟರು. ಪ್ರಥಮ ಸರಣಿ ಗೆಲುವಿನ ಉತ್ಸಾಹದಲ್ಲಿದ್ದ ತಂಡವನ್ನು ಏಕಮೇವವಾಗಿ ಧೂಳೀಪಟ ಮಾಡಿದ ಸೂರ್ಯ, ಭಾರತ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟರು. ಭಾರತೀಯನ ಬಿರುಗಾಳಿ ಆಟಕ್ಕೆ ವಿಶ್ವಕ್ರಿಕೆಟ್​ ಬಹುಪರಾಕ್​ ಹೇಳಿದೆ.

ಸರಣಿ ಗೆಲುವಿನ ನಿರ್ಣಾಯಕ ಪಂದ್ಯದಲ್ಲಿ ಕೆಚ್ಚೆದೆಯ ಆಟವಾಡಿದ ಸೂರ್ಯಕುಮಾರ್​ ಯಾದವ್​ 51 ಎಸೆತಗಳಲ್ಲಿ 112 ರನ್​ ಬಾರಿಸಿ ಶತಕ ಸಂಭ್ರಮಾಚರಣೆ ಮಾಡಿದರು. ಇದು ಟಿ20 ಕ್ರಿಕೆಟ್​ನಲ್ಲಿ ಸೂರ್ಯನ ಮೂರನೇ ಶತಕವಾಗಿದೆ. ಭರ್ಜರಿ ಶತಕದ ಬಲದಿಂದ ಭಾರತ ಪಂದ್ಯದಲ್ಲಿ 228 ರನ್​ಗಳ ಬೃಹತ್​ ಮೊತ್ತ ಪೇರಿಸಿತು. ಶ್ರೀಲಂಕಾ 137 ರನ್​ಗೆ ತನ್ನೆಲ್ಲ ವಿಕೆಟ್​ ಕಳೆದುಕೊಂಡು ಗಂಟುಮೂಟೆ ಕಟ್ಟಿ 91 ರನ್​ಗಳ ಸೋಲು ಕಂಡಿತು.

ಸೂರ್ಯನ ಸಿಡಿಲಬ್ಬರದ ಶತಕ: ದ್ವಿಶತಕ ವೀರ ಇಶಾನ್​ ಕಿಶನ್​ ಬೇಗನೇ ಔಟಾಗಿ ನಿರಾಸೆ ಮೂಡಿಸಿದರು. ಬಳಿಕ ಬಂದ ರಾಹುಲ್​ ತ್ರಿಪಾಠಿ 16 ಎಸೆತಗಳಲ್ಲಿ ಬಿರುಸಿನ ಬ್ಯಾಟ್​ ಮಾಡಿ 35 ರನ್​ ಮಾಡಿದರು. ದೊಡ್ಡ ಹೊಡೆತಕ್ಕೆ ಕೈಹಾಕಿದ ತ್ರಿಪಾಠಿ ಅವರು ಕರುಣಾರತ್ನೆ ಬೌಲಿಂಗ್​ನಲ್ಲಿ ಔಟಾದರು. ಇದಾದ ಬಳಿಕ ಬಂದ ಸೂರ್ಯಕುಮಾರ್​ ಯಾದವ್​ ಪಂದ್ಯದ ದಿಕ್ಕನ್ನೇ ಬದಲಿಸಿದರು. ರಾಜ್​ಕೋಟ್​​ನಲ್ಲಿ ರಾಜನಾಗಿ ಮೆರೆದ ಸೂರ್ಯ ಮೈದಾನದ ಪ್ರತಿ ಮೂಲೆಯಲ್ಲೂ ಚೆಂಡನ್ನು ನುಗ್ಗಿಸಿದರು.

ಶ್ರೀಲಂಕಾದ ಬೌಲರ್‌ಗಳನ್ನು ಮನಸೋಇಚ್ಚೆ ಬೆಂಡೆತ್ತಿದರು. 26 ಎಸೆತಗಳಲ್ಲಿ ಅರ್ಧಶತಕವನ್ನು ಪೂರೈಸಿದ ಸೂರ್ಯಕುಮಾರ್​, ಬಳಿಕ ಬ್ಯಾಟ್​ ಅನ್ನು ಇನ್ನಷ್ಟು ಚಾರ್ಜ್​ ಮಾಡಿ ಮುಂದಿನ 19 ಎಸೆತಗಳಲ್ಲಿ 50 ರನ್​ ಬಾರಿಸಿ ಶತಕದ ಸಂಭ್ರಮಾಚರಣೆ ಮಾಡಿದರು. ಇದು ಭಾರತೀಯರ ಬಿರುಬೀಸಾದ ಬ್ಯಾಟಿಂಗ್​ಗೆ ಸಾಕ್ಷಿಯಾಗಿತ್ತು. ಕೊನೆಯವರೆಗೂ ಅಜೇಯರಾಗಿ ಉಳಿದ ಆಟಗಾರ ಹಲವು ಮನಮೋಹಕ ಸಿಕ್ಸರ್​ಗಳನ್ನು ಸಿಡಿಸಿದರು.

ಸೂರ್ಯಕುಮಾರ್​ ಯಾದವ್​​ರನ್ನು ಕಟ್ಟಿಹಾಕಲು ದಸುನ್​ ಶನಕಾ ಪಡೆ ಏನೆಲ್ಲಾ ಪ್ರಯತ್ನ ಮಾಡಿದರೂ ಫಲ ನೀಡಲಿಲ್ಲ. 9 ಸಿಕ್ಸರ್​, 7 ಬೌಂಡರಿಗಳು ಅಬ್ಬರದ ಆಟಕ್ಕೆ ಲೆಕ್ಕ ಹೇಳುತ್ತಿದ್ದವು. ಕೊನೆಯ ಓವರ್​ನ ಕೊನೆಯ ಎಸೆತಗಳಲ್ಲಿ ಚಾಮಿಕಾ ಕರುಣಾರತ್ನೆಗೆ ಸಿಕ್ಸರ್​, ಬೌಂಡರಿ ಬಾರಿಸುವ ಮೂಲಕ ಇನಿಂಗ್ಸ್​ಗೆ ಅಂತ್ಯ ಹಾಡಿದರು.

ಸೂರ್ಯನ ಪ್ರಖರತೆಗೆ ಅಭಿಮಾನಿಗಳು ಫಿದಾ: ಇನ್ನು, ಸೂರ್ಯಕುಮಾರ್​ ಪ್ರಖರ ಆಟಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಭಾರತ ಕ್ರಿಕೆಟ್​ ತಂಡಕ್ಕೆ ಈತನೊಬ್ಬ ಆಟಗಾರನಿದ್ದರೆ ಸಾಕು ಎಂದು ಗುಣಗಾನ ಮಾಡಿದ್ದಾರೆ. ಬಿರುಗಾಳಿ ಬ್ಯಾಟಿಂಗ್​ ಬಳಿಕ ಸೂರ್ಯಕುಮಾರ್​ ಯಾದವ್​ ಟ್ವಿಟರ್​ನಲ್ಲಿ ಟ್ರೆಂಡ್​ ಸೃಷ್ಟಿಸಿದ್ದರು. ಹಲವು ಆಟಗಾರನ ಹಲವು ಶೈಲಿಯ ಹೊಡೆಯಗಳುಳ್ಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಸೂರ್ಯಕುಮಾರ್​ ಯಾವದ್​ ಭಾರತ ಕ್ರಿಕೆಟ್​ ತಂಡದ ಒನ್​ ಮ್ಯಾನ್​ ಆರ್ಮಿ, ಚುಟುಕು ಮಾದರಿಯ ಕ್ರಿಕೆಟ್​ನ ಜಾದೂಗಾರ. ಬ್ಯಾಟಿಂಗ್​ಗೆ ಇಳಿದರೆ ಮೈದಾನದಲ್ಲಿ ತೂಫಾನ್​ ಏಳಲಿದೆ. ಬ್ಯಾಟಿಂಗ್​ ರಭಸಕ್ಕೆ ಚೆಂಡು ಗಾಳಿಯಲ್ಲೇ ತೇಲಾಡುತ್ತದೆ, ಸೂರ್ಯನಿಗೆ ಎಲ್ಲೆಯೇ ಇಲ್ಲ ಎಂದೆಲ್ಲಾ ಗುಣಗಾನ ಮಾಡಲಾಗಿದೆ.

ವರ್ಷದ ಮೊದಲ, ಒಟ್ಟಾರೆ ಮೂರನೇ ಶತಕ: ಭಾರತ ಈ ವರ್ಷ ತವರು ನೆಲದಲ್ಲಿ ಆಡುತ್ತಿರುವ ಮೊದಲನೇ ಸರಣಿ ಇದಾಗಿದೆ. ಮೊದಲ ಟಿ 20 ಸರಣಿಯಲ್ಲೇ ಸೂರ್ಯಕುಮಾರ್​ ಯಾದವ್​ ಶತಕ ಗಳಿಸಿ, ವರ್ಷದ ಮೊದಲ ಮತ್ತು ವೃತ್ತಿ ಬದುಕಿನ ಮೂರನೇ ಶತಕ ಗಳಿಸಿದರು. ಈ ವರ್ಷ ಶತಕ ಗಳಿಸಿದ ಮೊದಲ ಭಾರತೀಯ ಎಂಬ ಗೌರವಕ್ಕೆ ಪಾತ್ರರಾದರು. ಕಳೆದ ವರ್ಷದಿಂದ ಅತ್ಯದ್ಭುತ ಫಾರ್ಮ್​ನಲ್ಲಿರುವ ಸೂರ್ಯ ಕುಮಾರ್​ ಯಾದವ್​ 833 ಅಂಕಗಳಿಂದ ಐಸಿಸಿ ಟಿ20 ರ್‍ಯಾಂಕಿಂಗ್​ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ: ವರ್ಷದ ಚೊಚ್ಚಲ ಸರಣಿ ಗೆದ್ದ ಭಾರತ: 91 ರನ್​ಗಳ ಬೃಹತ್​ ಮೊತ್ತದ ಗೆಲುವು ಸಾಧಿಸಿ ವಿಕ್ರಮ

ರಾಜ್​ಕೋಟ್​: ರಾಮಾಯಣದಲ್ಲಿ ಆಂಜನೇಯ ಲಂಕೆಗೆ ಬೆಂಕಿ ಇಟ್ಟರೆ, ರಾಜ್​ಕೋಟ್​ನಲ್ಲಿ ಸೂರ್ಯಕುಮಾರ್​ ಯಾದವ್​ ಶ್ರೀಲಂಕಾ ಕ್ರಿಕೆಟ್​ ತಂಡದ ಕನಸಿಗೆ ಬೆಂಕಿ ಇಟ್ಟರು. ಪ್ರಥಮ ಸರಣಿ ಗೆಲುವಿನ ಉತ್ಸಾಹದಲ್ಲಿದ್ದ ತಂಡವನ್ನು ಏಕಮೇವವಾಗಿ ಧೂಳೀಪಟ ಮಾಡಿದ ಸೂರ್ಯ, ಭಾರತ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟರು. ಭಾರತೀಯನ ಬಿರುಗಾಳಿ ಆಟಕ್ಕೆ ವಿಶ್ವಕ್ರಿಕೆಟ್​ ಬಹುಪರಾಕ್​ ಹೇಳಿದೆ.

ಸರಣಿ ಗೆಲುವಿನ ನಿರ್ಣಾಯಕ ಪಂದ್ಯದಲ್ಲಿ ಕೆಚ್ಚೆದೆಯ ಆಟವಾಡಿದ ಸೂರ್ಯಕುಮಾರ್​ ಯಾದವ್​ 51 ಎಸೆತಗಳಲ್ಲಿ 112 ರನ್​ ಬಾರಿಸಿ ಶತಕ ಸಂಭ್ರಮಾಚರಣೆ ಮಾಡಿದರು. ಇದು ಟಿ20 ಕ್ರಿಕೆಟ್​ನಲ್ಲಿ ಸೂರ್ಯನ ಮೂರನೇ ಶತಕವಾಗಿದೆ. ಭರ್ಜರಿ ಶತಕದ ಬಲದಿಂದ ಭಾರತ ಪಂದ್ಯದಲ್ಲಿ 228 ರನ್​ಗಳ ಬೃಹತ್​ ಮೊತ್ತ ಪೇರಿಸಿತು. ಶ್ರೀಲಂಕಾ 137 ರನ್​ಗೆ ತನ್ನೆಲ್ಲ ವಿಕೆಟ್​ ಕಳೆದುಕೊಂಡು ಗಂಟುಮೂಟೆ ಕಟ್ಟಿ 91 ರನ್​ಗಳ ಸೋಲು ಕಂಡಿತು.

ಸೂರ್ಯನ ಸಿಡಿಲಬ್ಬರದ ಶತಕ: ದ್ವಿಶತಕ ವೀರ ಇಶಾನ್​ ಕಿಶನ್​ ಬೇಗನೇ ಔಟಾಗಿ ನಿರಾಸೆ ಮೂಡಿಸಿದರು. ಬಳಿಕ ಬಂದ ರಾಹುಲ್​ ತ್ರಿಪಾಠಿ 16 ಎಸೆತಗಳಲ್ಲಿ ಬಿರುಸಿನ ಬ್ಯಾಟ್​ ಮಾಡಿ 35 ರನ್​ ಮಾಡಿದರು. ದೊಡ್ಡ ಹೊಡೆತಕ್ಕೆ ಕೈಹಾಕಿದ ತ್ರಿಪಾಠಿ ಅವರು ಕರುಣಾರತ್ನೆ ಬೌಲಿಂಗ್​ನಲ್ಲಿ ಔಟಾದರು. ಇದಾದ ಬಳಿಕ ಬಂದ ಸೂರ್ಯಕುಮಾರ್​ ಯಾದವ್​ ಪಂದ್ಯದ ದಿಕ್ಕನ್ನೇ ಬದಲಿಸಿದರು. ರಾಜ್​ಕೋಟ್​​ನಲ್ಲಿ ರಾಜನಾಗಿ ಮೆರೆದ ಸೂರ್ಯ ಮೈದಾನದ ಪ್ರತಿ ಮೂಲೆಯಲ್ಲೂ ಚೆಂಡನ್ನು ನುಗ್ಗಿಸಿದರು.

ಶ್ರೀಲಂಕಾದ ಬೌಲರ್‌ಗಳನ್ನು ಮನಸೋಇಚ್ಚೆ ಬೆಂಡೆತ್ತಿದರು. 26 ಎಸೆತಗಳಲ್ಲಿ ಅರ್ಧಶತಕವನ್ನು ಪೂರೈಸಿದ ಸೂರ್ಯಕುಮಾರ್​, ಬಳಿಕ ಬ್ಯಾಟ್​ ಅನ್ನು ಇನ್ನಷ್ಟು ಚಾರ್ಜ್​ ಮಾಡಿ ಮುಂದಿನ 19 ಎಸೆತಗಳಲ್ಲಿ 50 ರನ್​ ಬಾರಿಸಿ ಶತಕದ ಸಂಭ್ರಮಾಚರಣೆ ಮಾಡಿದರು. ಇದು ಭಾರತೀಯರ ಬಿರುಬೀಸಾದ ಬ್ಯಾಟಿಂಗ್​ಗೆ ಸಾಕ್ಷಿಯಾಗಿತ್ತು. ಕೊನೆಯವರೆಗೂ ಅಜೇಯರಾಗಿ ಉಳಿದ ಆಟಗಾರ ಹಲವು ಮನಮೋಹಕ ಸಿಕ್ಸರ್​ಗಳನ್ನು ಸಿಡಿಸಿದರು.

ಸೂರ್ಯಕುಮಾರ್​ ಯಾದವ್​​ರನ್ನು ಕಟ್ಟಿಹಾಕಲು ದಸುನ್​ ಶನಕಾ ಪಡೆ ಏನೆಲ್ಲಾ ಪ್ರಯತ್ನ ಮಾಡಿದರೂ ಫಲ ನೀಡಲಿಲ್ಲ. 9 ಸಿಕ್ಸರ್​, 7 ಬೌಂಡರಿಗಳು ಅಬ್ಬರದ ಆಟಕ್ಕೆ ಲೆಕ್ಕ ಹೇಳುತ್ತಿದ್ದವು. ಕೊನೆಯ ಓವರ್​ನ ಕೊನೆಯ ಎಸೆತಗಳಲ್ಲಿ ಚಾಮಿಕಾ ಕರುಣಾರತ್ನೆಗೆ ಸಿಕ್ಸರ್​, ಬೌಂಡರಿ ಬಾರಿಸುವ ಮೂಲಕ ಇನಿಂಗ್ಸ್​ಗೆ ಅಂತ್ಯ ಹಾಡಿದರು.

ಸೂರ್ಯನ ಪ್ರಖರತೆಗೆ ಅಭಿಮಾನಿಗಳು ಫಿದಾ: ಇನ್ನು, ಸೂರ್ಯಕುಮಾರ್​ ಪ್ರಖರ ಆಟಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಭಾರತ ಕ್ರಿಕೆಟ್​ ತಂಡಕ್ಕೆ ಈತನೊಬ್ಬ ಆಟಗಾರನಿದ್ದರೆ ಸಾಕು ಎಂದು ಗುಣಗಾನ ಮಾಡಿದ್ದಾರೆ. ಬಿರುಗಾಳಿ ಬ್ಯಾಟಿಂಗ್​ ಬಳಿಕ ಸೂರ್ಯಕುಮಾರ್​ ಯಾದವ್​ ಟ್ವಿಟರ್​ನಲ್ಲಿ ಟ್ರೆಂಡ್​ ಸೃಷ್ಟಿಸಿದ್ದರು. ಹಲವು ಆಟಗಾರನ ಹಲವು ಶೈಲಿಯ ಹೊಡೆಯಗಳುಳ್ಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಸೂರ್ಯಕುಮಾರ್​ ಯಾವದ್​ ಭಾರತ ಕ್ರಿಕೆಟ್​ ತಂಡದ ಒನ್​ ಮ್ಯಾನ್​ ಆರ್ಮಿ, ಚುಟುಕು ಮಾದರಿಯ ಕ್ರಿಕೆಟ್​ನ ಜಾದೂಗಾರ. ಬ್ಯಾಟಿಂಗ್​ಗೆ ಇಳಿದರೆ ಮೈದಾನದಲ್ಲಿ ತೂಫಾನ್​ ಏಳಲಿದೆ. ಬ್ಯಾಟಿಂಗ್​ ರಭಸಕ್ಕೆ ಚೆಂಡು ಗಾಳಿಯಲ್ಲೇ ತೇಲಾಡುತ್ತದೆ, ಸೂರ್ಯನಿಗೆ ಎಲ್ಲೆಯೇ ಇಲ್ಲ ಎಂದೆಲ್ಲಾ ಗುಣಗಾನ ಮಾಡಲಾಗಿದೆ.

ವರ್ಷದ ಮೊದಲ, ಒಟ್ಟಾರೆ ಮೂರನೇ ಶತಕ: ಭಾರತ ಈ ವರ್ಷ ತವರು ನೆಲದಲ್ಲಿ ಆಡುತ್ತಿರುವ ಮೊದಲನೇ ಸರಣಿ ಇದಾಗಿದೆ. ಮೊದಲ ಟಿ 20 ಸರಣಿಯಲ್ಲೇ ಸೂರ್ಯಕುಮಾರ್​ ಯಾದವ್​ ಶತಕ ಗಳಿಸಿ, ವರ್ಷದ ಮೊದಲ ಮತ್ತು ವೃತ್ತಿ ಬದುಕಿನ ಮೂರನೇ ಶತಕ ಗಳಿಸಿದರು. ಈ ವರ್ಷ ಶತಕ ಗಳಿಸಿದ ಮೊದಲ ಭಾರತೀಯ ಎಂಬ ಗೌರವಕ್ಕೆ ಪಾತ್ರರಾದರು. ಕಳೆದ ವರ್ಷದಿಂದ ಅತ್ಯದ್ಭುತ ಫಾರ್ಮ್​ನಲ್ಲಿರುವ ಸೂರ್ಯ ಕುಮಾರ್​ ಯಾದವ್​ 833 ಅಂಕಗಳಿಂದ ಐಸಿಸಿ ಟಿ20 ರ್‍ಯಾಂಕಿಂಗ್​ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ: ವರ್ಷದ ಚೊಚ್ಚಲ ಸರಣಿ ಗೆದ್ದ ಭಾರತ: 91 ರನ್​ಗಳ ಬೃಹತ್​ ಮೊತ್ತದ ಗೆಲುವು ಸಾಧಿಸಿ ವಿಕ್ರಮ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.