ETV Bharat / sports

ಟೆಸ್ಟ್​ ಕ್ರಿಕೆಟ್‌ನಲ್ಲಿ ಗಳಿಸಿದ ಆತ್ಮವಿಶ್ವಾಸವನ್ನ IPL​ನಲ್ಲೂ ಮುಂದುವರಿಸಿಕೊಂಡು ಹೋಗುವೆ : ವಾಷಿಂಗ್ಟನ್ ಸುಂದರ್‌

author img

By

Published : Apr 21, 2021, 5:33 PM IST

ನಾವು ಕಳೆದ ಎರಡು ಸರಣಿಯಲ್ಲಿ ಅತ್ಯುತ್ತಮ ಗುಣಮಟ್ಟವುಳ್ಳ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್​ ತಂಡಗಳ ವಿರುದ್ಧ ಆಡಿದ್ದೇವೆ ಮತ್ತು ಅವರ ವಿರುದ್ಧ ಜಯ ಸಾಧಿಸಿರುವುದು ನನ್ನಲ್ಲಿ ಸಾಕಷ್ಟು ಆತ್ಮವಿಶ್ವಾಸವನ್ನು ಹೆಚ್ಚಿಸಿದೆ..

ವಾಷಿಂಗ್ಟನ್ ಸುಂದರ್​
ವಾಷಿಂಗ್ಟನ್ ಸುಂದರ್​

ಮುಂಬೈ : ಭಾರತದ ಪರ ಟೆಸ್ಟ್​ ಕ್ರಿಕೆಟ್​ ಆಡಿ ಗಳಿಸಿಕೊಂಡಿರುವ ಆತ್ಮ ವಿಶ್ವಾಸವನ್ನ ಪ್ರಸ್ತುತ ನಡೆಯುತ್ತಿರುವ ಐಪಿಎಲ್​ನಲ್ಲೂ ಮುಂದುವರಿಸಿಕೊಂಡು ಹೋಗುವುದಾಗಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಆಲ್​ರೌಂಡರ್​ ವಾಷಿಂಗ್ಟನ್ ಸುಂದರ್ ಹೇಳಿದ್ದಾರೆ.

ಕೇವಲ ನೆಟ್​ ಬೌಲರ್​ ಆಗಿ ಆಸ್ಟ್ರೇಲಿಯಾಗೆ ತೆರಳಿದ್ದ ಸುಂದರ್​ ಗಾಯದಿಂದ ಹೊರಬಂದ ರವೀಂದ್ರ ಜಡೇಜಾ ಜಾಗದಲ್ಲಿ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿ ಮಿಂಚಿದ್ದರು. ಅವರು ಗಬ್ಬಾ ಟೆಸ್ಟ್​ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್​ನಲ್ಲಿ 62 ರನ್ ಮತ್ತು 2ನೇ ಇನ್ನಿಂಗ್ಸ್​ನಲ್ಲಿ 22 ರನ್​ ಸಿಡಿಸಿ ಐತಿಹಾಸಿಕ ಟೆಸ್ಟ್​ ಸರಣಿ ಜಯದಲ್ಲಿ ಪ್ರಮುಖ ಭಾಗವಾಗಿದ್ದರು.

"ಟೆಸ್ಟ್​ ಕ್ರಿಕೆಟ್​ನಲ್ಲಿ ಉತ್ತಮ ಪ್ರದರ್ಶನ ತೋರುವುದರಿಂದ ಖಂಡಿತ ಯಾವುದೇ ಸ್ವರೂಪದ ಕ್ರಿಕೆಟ್​ನಲ್ಲಿ ಕ್ರಿಕೆಟಿಗನಿಗೆ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಕಳೆದ ಕೆಲವು ವರ್ಷಗಳಿಂದ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಭಾರತ ಟೆಸ್ಟ್​ ತಂಡದಲ್ಲಿ ಆಡಲು ಅವಕಾಶ ಪಡೆಯುವುದು ಯಾವುದೇ ಯುವ ಕ್ರಿಕೆಟಿಗನ ಕನಸಾಗಿರುತ್ತದೆ.

ಇದೀಗ ನನ್ನ ಜೀವನದಲ್ಲಿ ಅದು ನಿಜವಾಗಿದೆ" ಎಂದು ತಮ್ಮ ಸಂಭ್ರಮ ಹೊರ ಹಾಕಿದ್ದಾರೆ. 21 ವರ್ಷದ ಯುವ ಆಟಗಾರ ಇತ್ತೀಚಿಗೆ ಇಂಗ್ಲೆಂಡ್ ವಿರುದ್ಧ 3-1ರಲ್ಲಿ ಗೆದ್ದ ಟೆಸ್ಟ್​ ತಂಡದಲ್ಲೂ ಭಾರತ ತಂಡದ ಭಾಗವಾಗಿದ್ದರು.

ನಾವು ಕಳೆದ ಎರಡು ಸರಣಿಯಲ್ಲಿ ಅತ್ಯುತ್ತಮ ಗುಣಮಟ್ಟವುಳ್ಳ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್​ ತಂಡಗಳ ವಿರುದ್ಧ ಆಡಿದ್ದೇವೆ ಮತ್ತು ಅವರ ವಿರುದ್ಧ ಜಯ ಸಾಧಿಸಿರುವುದು ನನ್ನಲ್ಲಿ ಸಾಕಷ್ಟು ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.

ಅಲ್ಲದೆ ಎರಡು ಮಹತ್ವದ ಸರಣಿ ವಿಜಯದಿಂದ ನನ್ನಲ್ಲಿ ಹೆಚ್ಚಾಗಿರುವ ಆತ್ಮವಿಶ್ವಾಸವನ್ನು ಈ ಬಾರಿ ಐಪಿಎಲ್​ನಲ್ಲೂ ತೆಗೆದುಕೊಂಡು ಹೋಗಲು ಬಯಸುತ್ತೇನೆ ಎಂದು ತಮಿಳುನಾಡು ಆಲ್​ರೌಂಡರ್​ ತಿಳಿಸಿದ್ದಾರೆ. ಐಪಿಎಲ್​ನಲ್ಲಿ ಆರ್​ಸಿಬಿ ತಂಡ ಸತತ ಮೂರು ಜಯ ಸಾಧಿಸಿ ಅಗ್ರಸ್ಥಾನದಲ್ಲಿದೆ. ಗುರುವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧ ಮುಂಬೈನಲ್ಲಿ ಕಾದಾಡಲಿದೆ.

ಇದನ್ನು ಓದಿ:ನಾಯಕತ್ವದ ರಣತಂತ್ರಗಳನ್ನು ಒಬ್ಬರನ್ನೊಬ್ಬರು ಕಾಪಿ ಮಾಡಿದ ರೋಹಿತ್-ಕೊಹ್ಲಿ!

ಮುಂಬೈ : ಭಾರತದ ಪರ ಟೆಸ್ಟ್​ ಕ್ರಿಕೆಟ್​ ಆಡಿ ಗಳಿಸಿಕೊಂಡಿರುವ ಆತ್ಮ ವಿಶ್ವಾಸವನ್ನ ಪ್ರಸ್ತುತ ನಡೆಯುತ್ತಿರುವ ಐಪಿಎಲ್​ನಲ್ಲೂ ಮುಂದುವರಿಸಿಕೊಂಡು ಹೋಗುವುದಾಗಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಆಲ್​ರೌಂಡರ್​ ವಾಷಿಂಗ್ಟನ್ ಸುಂದರ್ ಹೇಳಿದ್ದಾರೆ.

ಕೇವಲ ನೆಟ್​ ಬೌಲರ್​ ಆಗಿ ಆಸ್ಟ್ರೇಲಿಯಾಗೆ ತೆರಳಿದ್ದ ಸುಂದರ್​ ಗಾಯದಿಂದ ಹೊರಬಂದ ರವೀಂದ್ರ ಜಡೇಜಾ ಜಾಗದಲ್ಲಿ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿ ಮಿಂಚಿದ್ದರು. ಅವರು ಗಬ್ಬಾ ಟೆಸ್ಟ್​ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್​ನಲ್ಲಿ 62 ರನ್ ಮತ್ತು 2ನೇ ಇನ್ನಿಂಗ್ಸ್​ನಲ್ಲಿ 22 ರನ್​ ಸಿಡಿಸಿ ಐತಿಹಾಸಿಕ ಟೆಸ್ಟ್​ ಸರಣಿ ಜಯದಲ್ಲಿ ಪ್ರಮುಖ ಭಾಗವಾಗಿದ್ದರು.

"ಟೆಸ್ಟ್​ ಕ್ರಿಕೆಟ್​ನಲ್ಲಿ ಉತ್ತಮ ಪ್ರದರ್ಶನ ತೋರುವುದರಿಂದ ಖಂಡಿತ ಯಾವುದೇ ಸ್ವರೂಪದ ಕ್ರಿಕೆಟ್​ನಲ್ಲಿ ಕ್ರಿಕೆಟಿಗನಿಗೆ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಕಳೆದ ಕೆಲವು ವರ್ಷಗಳಿಂದ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಭಾರತ ಟೆಸ್ಟ್​ ತಂಡದಲ್ಲಿ ಆಡಲು ಅವಕಾಶ ಪಡೆಯುವುದು ಯಾವುದೇ ಯುವ ಕ್ರಿಕೆಟಿಗನ ಕನಸಾಗಿರುತ್ತದೆ.

ಇದೀಗ ನನ್ನ ಜೀವನದಲ್ಲಿ ಅದು ನಿಜವಾಗಿದೆ" ಎಂದು ತಮ್ಮ ಸಂಭ್ರಮ ಹೊರ ಹಾಕಿದ್ದಾರೆ. 21 ವರ್ಷದ ಯುವ ಆಟಗಾರ ಇತ್ತೀಚಿಗೆ ಇಂಗ್ಲೆಂಡ್ ವಿರುದ್ಧ 3-1ರಲ್ಲಿ ಗೆದ್ದ ಟೆಸ್ಟ್​ ತಂಡದಲ್ಲೂ ಭಾರತ ತಂಡದ ಭಾಗವಾಗಿದ್ದರು.

ನಾವು ಕಳೆದ ಎರಡು ಸರಣಿಯಲ್ಲಿ ಅತ್ಯುತ್ತಮ ಗುಣಮಟ್ಟವುಳ್ಳ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್​ ತಂಡಗಳ ವಿರುದ್ಧ ಆಡಿದ್ದೇವೆ ಮತ್ತು ಅವರ ವಿರುದ್ಧ ಜಯ ಸಾಧಿಸಿರುವುದು ನನ್ನಲ್ಲಿ ಸಾಕಷ್ಟು ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.

ಅಲ್ಲದೆ ಎರಡು ಮಹತ್ವದ ಸರಣಿ ವಿಜಯದಿಂದ ನನ್ನಲ್ಲಿ ಹೆಚ್ಚಾಗಿರುವ ಆತ್ಮವಿಶ್ವಾಸವನ್ನು ಈ ಬಾರಿ ಐಪಿಎಲ್​ನಲ್ಲೂ ತೆಗೆದುಕೊಂಡು ಹೋಗಲು ಬಯಸುತ್ತೇನೆ ಎಂದು ತಮಿಳುನಾಡು ಆಲ್​ರೌಂಡರ್​ ತಿಳಿಸಿದ್ದಾರೆ. ಐಪಿಎಲ್​ನಲ್ಲಿ ಆರ್​ಸಿಬಿ ತಂಡ ಸತತ ಮೂರು ಜಯ ಸಾಧಿಸಿ ಅಗ್ರಸ್ಥಾನದಲ್ಲಿದೆ. ಗುರುವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧ ಮುಂಬೈನಲ್ಲಿ ಕಾದಾಡಲಿದೆ.

ಇದನ್ನು ಓದಿ:ನಾಯಕತ್ವದ ರಣತಂತ್ರಗಳನ್ನು ಒಬ್ಬರನ್ನೊಬ್ಬರು ಕಾಪಿ ಮಾಡಿದ ರೋಹಿತ್-ಕೊಹ್ಲಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.