ETV Bharat / sports

ಸೂಕ್ತ ಅವಕಾಶ ಸಿಕ್ಕಾಗಲೆಲ್ಲ ಭಾರತದ ಬ್ಯಾಟಿಂಗ್​ ಕ್ರಮಾಂಕ ಬದಲಾಗುತ್ತದೆ: ರೋಹಿತ್​ ಶರ್ಮಾ

author img

By

Published : Jul 28, 2023, 1:44 PM IST

ಭಾರತ ಮತ್ತು ವೆಸ್ಟ್​ ಇಂಡೀಸ್​ ನಡುವಿನ ಮೊದಲ ಪಂದ್ಯದ ಬಗ್ಗೆ ನಾಯಕ ರೋಹಿತ್​ ಶರ್ಮಾ ಪ್ರತಿಕ್ರಿಯೆ ನೀಡಿದ್ದಾರೆ.

ರೋಹಿತ್​ ಶರ್ಮಾ
ರೋಹಿತ್​ ಶರ್ಮಾ

ಬ್ರಿಡ್ಜ್​ಟೌನ್​: ಭಾರತ ಮತ್ತು ವೆಸ್ಟ್​ ಇಂಡೀಸ್​ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಭಾರತ 5 ವಿಕೆಟ್​ಗಳ ಗೆಲುವು ಸಾಧಿಸಿದೆ. 114 ರನ್​ಗಳ ಗುರಿ ಪಡೆದಿದ್ದ ರೋಹಿತ್​ ಪಡೆ 5 ವಿಕೆಟ್​ ನಷ್ಟಕ್ಕೆ ಗುರಿ ತಲುಪಿ ಗೆಲುವಿನ ನಗೆ ಬೀರಿತು. ಪಂದ್ಯದಲ್ಲಿ ಎರಡೂ ತಂಡಗಳ ಸ್ಪಿನ್ನರ್​ಗಳು ಒಟ್ಟು 10 ವಿಕೆಟ್​ಗಳನ್ನು ಉರುಳಿಸಿದ್ದಾರೆ. ಪಂದ್ಯದ ಬಳಿಕ ಮಾತನಾಡಿದ ನಾಯಕ ರೋಹಿತ್​ ಶರ್ಮಾ, "ಕೆನ್ಸಿಂಗ್ಟನ್ ಓವಲ್ ಮೈದಾನದ ಪಿಚ್​ ಹದಗೆಡುತ್ತದೆ ಎಂದು ನಾನು ನಿರೀಕ್ಷಿಸಿರಲಿಲ್ಲ. ಪಿಚ್​ ವೇಗದ ಬೌಲರ್​ಗಿಂತಲು ಸ್ಪಿನ್ನರ್​ಗಳಿಗೆ ಸಹಾಯವಾಗಿತ್ತು. ಇದರ ಲಾಭ ಪಡೆದ ನಮ್ಮ ಬೌಲರ್​ಗಳು ಉತ್ತಮ ಬೌಲಿಂಗ್​ ದಾಳಿ ನಡೆಸಿದರು ಎಂದು ಹೇಳಿದರು.

ಬ್ಯಾಟಿಂಗ್​ ಕ್ರಮಾಂಕ ಬದಲಾವಣೆ ಬಗ್ಗೆ ಮಾತನಾಡಿ, ಯುವ ಬ್ಯಾಟರ್​ಗಳಿಗೆ ಅವಕಾಶ ಮಾಡಿಕೊಡಲು ಬದಲಾವಣೆ ಮಾಡಲಾಗಿತ್ತು. ಭವಿಷ್ಯದಲ್ಲಿ ಅವಕಾಶ ಸಿಕ್ಕಾಗೆಲ್ಲ ಇಂತಹ ಬದಲವಣೆಗಳನ್ನು ತಂಡದಲ್ಲಿ ಕಾಣಬಹುದು ಎಂದರು.

  • " class="align-text-top noRightClick twitterSection" data="">

ನಿನ್ನೆಯ ಪಂದ್ಯದಲ್ಲಿ ನಾಯಕ ರೋಹಿತ್​ ಶರ್ಮಾ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದು, ಅಜೇಯರಾಗಿ ತಂಡವನ್ನು ಗೆಲುವಿನ ದಡ ಸೇರಿಸಿದರು. 7ನೇ ಕ್ರಮಾಂಕದ ಬ್ಯಾಟಿಂಗ್​ ಬಗ್ಗೆ ಪ್ರತಿಕ್ರಿಯೆ ನೀಡಿ, ನಾನು ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದಾಗ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ಮಾಡಿದ್ದೆ. ಇಂದು ಗತಿಸಿದ ಆ ದಿನಗಳು ಮತ್ತೆ ನೆನೆಪಿಗೆ ಬಂದವು ಎಂದು ತಿಳಿಸಿದರು.

ವೇಗಿ ಮುಖೇಶ್​ ಕುಮಾರ್​ ಬಗ್ಗೆ ಮಾತನಾಡಿ, "ಮುಖೇಶ್ ಅದ್ಭುತ ಆಟಗಾರ, ವೇಗದಲ್ಲಿ ಚೆಂಡನ್ನು ಸ್ವಿಂಗ್ ಮಾಡುವ ಸಾಮರ್ಥ್ಯ ಹೊಂದಿರುವ ಬೌಲರ್​. ದೇಶಿಯ ಕ್ರಿಕೆಟ್​ನಲ್ಲಿ ಮುಖೇಶ್​ ಹೆಚ್ಚಾಗಿ ಬೌಲಿಂಗ್ ಮಾಡಿದ್ದು ನಾನು ನೋಡಿರಲಿಲ್ಲ. ಆದರೆ ಚೊಚ್ಚಲ ಏಕದಿನ ಪಂದ್ಯದಲ್ಲಿ ಉತ್ತಮ ಸ್ವಿಂಗ್​ನೊಂದಿಗೆ ವಿಕೆಟ್​ ಪಡೆದರು" ಎಂದು ಅಭಿನಂದಿಸಿದರು. ಕಠಿಣ ಸಂದರ್ಭಗಳನ್ನು ಸರಿಯಾಗಿ ನಿಭಾಯಿಸಲು ಸರಿಯಾದ ಬೌಲಿಂಗ್ ಮುಖ್ಯ. ನಮ್ಮ ಬೌಲರ್​ಗಳು ಆ ಕೆಲಸವನ್ನು ಅದ್ಭುತವಾಗಿ ಮಾಡಿದ್ದಾರೆ. ಉಳಿದಂತೆ ಇಶಾನ್ ಕೂಡ ಉತ್ತಮ ಬ್ಯಾಟಿಂಗ್​ ಮಾಡಿದರು ಎಂದು ಮೆಚ್ಚಿದರು.

ವೆಸ್ಟ್ ಇಂಡೀಸ್ ನಾಯಕ ಶಾಯ್ ಹೋಪ್ ಮಾತನಾಡಿ, "ನಾವು ಯೋಜನೆ ರೂಪಿಸಿದಂತೆ ಬ್ಯಾಟಿಂಗ್​ ಮಾಡುವಲ್ಲಿ ವಿಫಲವಾದೆವು. ಈ ರೀತಿಯ ಕಠಿಣ ಪಿಚ್‌ಗಳಲ್ಲಿ ನಾವು ಸ್ಕೋರ್ ಮಾಡಲು ಸರಿಯಾದ ಯೋಜನೆಗಳನ್ನು ರೂಪಿಸಬೇಕಿದೆ" ಎಂದರು.

ಇದನ್ನೂ ಓದಿ: West Indies vs India, 1st ODI: ಮೊದಲ ಏಕದಿನ ಪಂದ್ಯದಲ್ಲಿ ವೆಸ್ಟ್​ ಇಂಡೀಸ್​ ಮಣಿಸಿದ ಭಾರತ

ಬ್ರಿಡ್ಜ್​ಟೌನ್​: ಭಾರತ ಮತ್ತು ವೆಸ್ಟ್​ ಇಂಡೀಸ್​ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಭಾರತ 5 ವಿಕೆಟ್​ಗಳ ಗೆಲುವು ಸಾಧಿಸಿದೆ. 114 ರನ್​ಗಳ ಗುರಿ ಪಡೆದಿದ್ದ ರೋಹಿತ್​ ಪಡೆ 5 ವಿಕೆಟ್​ ನಷ್ಟಕ್ಕೆ ಗುರಿ ತಲುಪಿ ಗೆಲುವಿನ ನಗೆ ಬೀರಿತು. ಪಂದ್ಯದಲ್ಲಿ ಎರಡೂ ತಂಡಗಳ ಸ್ಪಿನ್ನರ್​ಗಳು ಒಟ್ಟು 10 ವಿಕೆಟ್​ಗಳನ್ನು ಉರುಳಿಸಿದ್ದಾರೆ. ಪಂದ್ಯದ ಬಳಿಕ ಮಾತನಾಡಿದ ನಾಯಕ ರೋಹಿತ್​ ಶರ್ಮಾ, "ಕೆನ್ಸಿಂಗ್ಟನ್ ಓವಲ್ ಮೈದಾನದ ಪಿಚ್​ ಹದಗೆಡುತ್ತದೆ ಎಂದು ನಾನು ನಿರೀಕ್ಷಿಸಿರಲಿಲ್ಲ. ಪಿಚ್​ ವೇಗದ ಬೌಲರ್​ಗಿಂತಲು ಸ್ಪಿನ್ನರ್​ಗಳಿಗೆ ಸಹಾಯವಾಗಿತ್ತು. ಇದರ ಲಾಭ ಪಡೆದ ನಮ್ಮ ಬೌಲರ್​ಗಳು ಉತ್ತಮ ಬೌಲಿಂಗ್​ ದಾಳಿ ನಡೆಸಿದರು ಎಂದು ಹೇಳಿದರು.

ಬ್ಯಾಟಿಂಗ್​ ಕ್ರಮಾಂಕ ಬದಲಾವಣೆ ಬಗ್ಗೆ ಮಾತನಾಡಿ, ಯುವ ಬ್ಯಾಟರ್​ಗಳಿಗೆ ಅವಕಾಶ ಮಾಡಿಕೊಡಲು ಬದಲಾವಣೆ ಮಾಡಲಾಗಿತ್ತು. ಭವಿಷ್ಯದಲ್ಲಿ ಅವಕಾಶ ಸಿಕ್ಕಾಗೆಲ್ಲ ಇಂತಹ ಬದಲವಣೆಗಳನ್ನು ತಂಡದಲ್ಲಿ ಕಾಣಬಹುದು ಎಂದರು.

  • " class="align-text-top noRightClick twitterSection" data="">

ನಿನ್ನೆಯ ಪಂದ್ಯದಲ್ಲಿ ನಾಯಕ ರೋಹಿತ್​ ಶರ್ಮಾ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದು, ಅಜೇಯರಾಗಿ ತಂಡವನ್ನು ಗೆಲುವಿನ ದಡ ಸೇರಿಸಿದರು. 7ನೇ ಕ್ರಮಾಂಕದ ಬ್ಯಾಟಿಂಗ್​ ಬಗ್ಗೆ ಪ್ರತಿಕ್ರಿಯೆ ನೀಡಿ, ನಾನು ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದಾಗ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ಮಾಡಿದ್ದೆ. ಇಂದು ಗತಿಸಿದ ಆ ದಿನಗಳು ಮತ್ತೆ ನೆನೆಪಿಗೆ ಬಂದವು ಎಂದು ತಿಳಿಸಿದರು.

ವೇಗಿ ಮುಖೇಶ್​ ಕುಮಾರ್​ ಬಗ್ಗೆ ಮಾತನಾಡಿ, "ಮುಖೇಶ್ ಅದ್ಭುತ ಆಟಗಾರ, ವೇಗದಲ್ಲಿ ಚೆಂಡನ್ನು ಸ್ವಿಂಗ್ ಮಾಡುವ ಸಾಮರ್ಥ್ಯ ಹೊಂದಿರುವ ಬೌಲರ್​. ದೇಶಿಯ ಕ್ರಿಕೆಟ್​ನಲ್ಲಿ ಮುಖೇಶ್​ ಹೆಚ್ಚಾಗಿ ಬೌಲಿಂಗ್ ಮಾಡಿದ್ದು ನಾನು ನೋಡಿರಲಿಲ್ಲ. ಆದರೆ ಚೊಚ್ಚಲ ಏಕದಿನ ಪಂದ್ಯದಲ್ಲಿ ಉತ್ತಮ ಸ್ವಿಂಗ್​ನೊಂದಿಗೆ ವಿಕೆಟ್​ ಪಡೆದರು" ಎಂದು ಅಭಿನಂದಿಸಿದರು. ಕಠಿಣ ಸಂದರ್ಭಗಳನ್ನು ಸರಿಯಾಗಿ ನಿಭಾಯಿಸಲು ಸರಿಯಾದ ಬೌಲಿಂಗ್ ಮುಖ್ಯ. ನಮ್ಮ ಬೌಲರ್​ಗಳು ಆ ಕೆಲಸವನ್ನು ಅದ್ಭುತವಾಗಿ ಮಾಡಿದ್ದಾರೆ. ಉಳಿದಂತೆ ಇಶಾನ್ ಕೂಡ ಉತ್ತಮ ಬ್ಯಾಟಿಂಗ್​ ಮಾಡಿದರು ಎಂದು ಮೆಚ್ಚಿದರು.

ವೆಸ್ಟ್ ಇಂಡೀಸ್ ನಾಯಕ ಶಾಯ್ ಹೋಪ್ ಮಾತನಾಡಿ, "ನಾವು ಯೋಜನೆ ರೂಪಿಸಿದಂತೆ ಬ್ಯಾಟಿಂಗ್​ ಮಾಡುವಲ್ಲಿ ವಿಫಲವಾದೆವು. ಈ ರೀತಿಯ ಕಠಿಣ ಪಿಚ್‌ಗಳಲ್ಲಿ ನಾವು ಸ್ಕೋರ್ ಮಾಡಲು ಸರಿಯಾದ ಯೋಜನೆಗಳನ್ನು ರೂಪಿಸಬೇಕಿದೆ" ಎಂದರು.

ಇದನ್ನೂ ಓದಿ: West Indies vs India, 1st ODI: ಮೊದಲ ಏಕದಿನ ಪಂದ್ಯದಲ್ಲಿ ವೆಸ್ಟ್​ ಇಂಡೀಸ್​ ಮಣಿಸಿದ ಭಾರತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.