ETV Bharat / sports

ನನ್ನ ಮೇಲೆ ಭರವಸೆ ಇಟ್ಟಿದ್ದಕ್ಕಾಗಿ ಧನ್ಯವಾದ: ಅರ್ಶದೀಪ್​ ಸಿಂಗ್​​ - ETV Bharath Kannada news

ಪಂದ್ಯದ ಮೂರು ಓವರ್​​ನಲ್ಲಿ ದುಬಾರಿ ಆಗಿದ್ದರೂ, ಕೊನೆಯ ಓವರ್​ನಲ್ಲಿ ಅವಕಾಶ ಕೊಟ್ಟಿದ್ದಕ್ಕಾಗಿ ಅರ್ಶದೀಪ್​ ಸಿಂಗ್​​​ ಟೀಮ್​ ಮ್ಯಾನೇಜ್​ಮೆಂಟ್​ಗೆ ಧನ್ಯವಾದ ತಿಳಿಸಿದ್ದಾರೆ. ​

Arshdeep Singh
Arshdeep Singh
author img

By ETV Bharat Karnataka Team

Published : Dec 4, 2023, 10:40 PM IST

ಬೆಂಗಳೂರು: ಇಲ್ಲಿನ ಎಂ. ಚಿನ್ನಸ್ವಾಮಿ ಮೈದಾನದಲ್ಲಿ ಭಾನುವಾರ ರಾತ್ರಿ ರೋಚಕ ಓವರ್​ನ ಪಂದ್ಯವೊಂದು ನಡೆದದ್ದು ಕ್ರಿಕೆಟ್​ ಅಭಿಮಾನಿಗಳಿಗೆ ಗೊತ್ತೇ ಇದೆ. ಪಂದ್ಯದ ಮೊದಲ ಓವರ್ ಹಾಗೇ ಮಿಕ್ಕೆರಡು ಓವರ್​ಗಳನ್ನು ದಾರಾಳ ರನ್​ ಕೊಟ್ಟಿದ್ದ ಅರ್ಶದೀಪ್​ ಸಿಂಗ್​​ ಕೊನೆಯ ಓವರ್ ಮಾಡಲು ಬಂದಾಗ ಪಂದ್ಯ ಗೆಲುವು ದೂರ ಎಂಬಂತಾಗಿತ್ತು.

ಆದರೆ ಅರ್ಶದೀಪ್​ ಕೇವಲ 3 ರನ್​ ಕೊಟ್ಟು ಪಂದ್ಯವನ್ನು 6 ರನ್​ನಿಂದ ಗೆಲ್ಲಿಸಿದ್ದರು. ಪಂದ್ಯದ ನಂತರ ಮಾತನಾಡಿದ ಅವರು ಮೂರು ಓವರ್​ನಲ್ಲಿ ಕಳಪೆ ಬೌಲಿಂಗ್​ ಪ್ರದರ್ಶನ ನೀಡಿದ್ದಾಗಿ ಒಪ್ಪಿಕೊಂಡದ್ದಲ್ಲದೇ, ಹೀಗಿದ್ದರೂ ಕಡೆಯ ಓವರ್​ನಲ್ಲಿ ತಿದ್ದಿಕೊಳ್ಳಲು ಅವಕಾಶ ಕೊಟ್ಟ ಟೀಮ್​ ಮ್ಯಾನೇಜ್​ಮೆಂಟ್​ಗೆ ಧನ್ಯವಾದ ಹೇಳಿದ್ದಾರೆ.

ನಿನ್ನೆ ನಡೆದ ಪಂದ್ಯದಲ್ಲಿ ಟಾಸ್​ ಸೋತು ಭಾರತ ಮೊದಲು ಬ್ಯಾಟ್​ ಮಾಡಿತ್ತು. 8 ವಿಕೆಟ್​ ಕಳೆದುಕೊಂಡು 161 ರನ್​ಗಳ ಸಾಧಾರಣ ಗುರಿಯನ್ನು ಆಸೀಸ್​ಗೆ ನೀಡಿತ್ತು. ಈ ಗುರಿಯನ್ನು ಬೆನ್ನತ್ತಿದ್ದ ಆಸ್ಟ್ರೇಲಿಯಾವನ್ನು ಟೀಮ್​ ಇಂಡಿಯಾ 154ಕ್ಕೆ ಕಟ್ಟಿಹಾಕಿ 6 ರನ್​ಗಳ ಜಯ ದಾಖಲಿಸಿತು. ಕೊನೆಯ ಓವರ್​ನಲ್ಲಿ ನಡೆದ ಮ್ಯಾಜಿಕ್​ ಈ ಗೆಲುವಿಗೆ ಕಾರಣವಾಯಿತು.

"ಆಟದಲ್ಲಿ ನಾನು ಮಾಡಿದ ಮೂರು ಓವರ್​ಗಳಲ್ಲಿ ಹೆಚ್ಚು ರನ್​ ಬಿಟ್ಟುಕೊಟ್ಟಿದ್ದೆ. ಅಲ್ಲದೇ ತಂಡದ ಉಳಿದ ಬೌಲರ್​ಗಳಿಗಿಂತಲೂ ಹೆಚ್ಚು ರನ್​ ನೀಡಿದ್ದೆ. ನಾನು ತಪ್ಪು ಮಾಡಿದ್ದೇನೆ ಎಂಬುದು ನನಗೆ ತಿಳಿದಿತ್ತು. ಆ ತಪ್ಪನ್ನು ತಿದ್ದಿಕೊಳ್ಳಲು ನನಗೆ ಒಂದು ಅವಕಾಶವನ್ನು ದೇವರು ಸೃಷ್ಟಿಸಿದ, ನಾನು ನನ್ನಲ್ಲಿ ನಂಬಿಕೆ ಇಟ್ಟಿದ್ದೇನೆ. ನನ್ನನ್ನು ನಂಬಿದ ಸಿಬ್ಬಂದಿಗೆ ಧನ್ಯವಾದಗಳು"ಎಂದು ಹೇಳಿದ್ದಾರೆ.

ಭಾರತದ ಇನ್ನಿಂಗ್ಸ್ ವೇಳೆ ವಿಕೆಟ್​ಗಳ ಪತನ ಆದರೂ ಶ್ರೇಯಸ್​ ಅಯ್ಯರ್​ ಕ್ರೀಸ್​ಗೆ ಗಟ್ಟಿಯಾಗಿ ನಿಂತು ಅರ್ಧಶತಕ ಗಳಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು. ಅವರಿಗೆ ಜಿತೇಶ್​ ಶರ್ಮಾ ಮತ್ತು ಅಕ್ಷರ್​ ಪಟೇಲ್​ ಕೂಡಾ ಸಾಥ್​ ಕೊಟ್ಟಿದ್ದರು. ಇವರುಗಳ ಬ್ಯಾಟಿಂಗ್​ನಿಂದ 160 ರನ್​ ಗುರಿ ತಲುಪಿತು. ಕಡೆಯಲ್ಲಿ 15-20 ರನ್​ ವೇಗವಾಗಿ ಗಳಿಸಿದ್ದ ತಂಡದ ಗೆಲುವಿಗೆ ಸಹಾಯವಾಯಿತು ಎಂದಿದ್ದಾರೆ ಸಿಂಗ್​.

ಹೆಚ್ಚುವರಿ ರನ್​ ಇದ್ದದ್ದು ಗೆಲುವಿಗೆ ದಾರಿ ಮಾಡಿಕೊಟ್ಟಿತು: "ನಿಜ ಹೇಳಬೇಕೆಂದರೆ, ನನ್ನ ಮನಸ್ಸಿನಲ್ಲಿ ಏನೂ ನಡೆಯುತ್ತಿರಲಿಲ್ಲ. ಸೂರ್ಯಕುಮಾರ್ ಯಾದವ್ ಹೇಳಿದ್ದು ಏನಾಗುತ್ತದೆಯೋ ಅದು ಆಗಲಿ ಎಂದು. ಕ್ರೆಡಿಟ್ ನಮ್ಮ ಬ್ಯಾಟ್ಸ್‌ಮನ್‌ಗಳಿಗೂ ಸಲ್ಲುತ್ತದೆ. ಅವರು ಈ ಟ್ರಿಕಿ ವಿಕೆಟ್‌ನಲ್ಲಿ ನಿಜವಾಗಿಯೂ ಉತ್ತಮ ಮೊತ್ತವನ್ನು ನೀಡಿದರು ಮತ್ತು ಹೆಚ್ಚುವರಿ 15 ರಿಂದ 20 ರನ್‌ಗಳನ್ನು ನಾವು ಹೊಂದಿದ್ದೆವು" ಎಂದಿದ್ದಾರೆ.

ಇದನ್ನೂ ಓದಿ: "ಐಪಿಎಲ್​ ಆಡಬೇಡಿ" ಜೋಫ್ರಾ ಆರ್ಚರ್‌ಗೆ ಇಸಿಬಿ ಸೂಚನೆ

ಬೆಂಗಳೂರು: ಇಲ್ಲಿನ ಎಂ. ಚಿನ್ನಸ್ವಾಮಿ ಮೈದಾನದಲ್ಲಿ ಭಾನುವಾರ ರಾತ್ರಿ ರೋಚಕ ಓವರ್​ನ ಪಂದ್ಯವೊಂದು ನಡೆದದ್ದು ಕ್ರಿಕೆಟ್​ ಅಭಿಮಾನಿಗಳಿಗೆ ಗೊತ್ತೇ ಇದೆ. ಪಂದ್ಯದ ಮೊದಲ ಓವರ್ ಹಾಗೇ ಮಿಕ್ಕೆರಡು ಓವರ್​ಗಳನ್ನು ದಾರಾಳ ರನ್​ ಕೊಟ್ಟಿದ್ದ ಅರ್ಶದೀಪ್​ ಸಿಂಗ್​​ ಕೊನೆಯ ಓವರ್ ಮಾಡಲು ಬಂದಾಗ ಪಂದ್ಯ ಗೆಲುವು ದೂರ ಎಂಬಂತಾಗಿತ್ತು.

ಆದರೆ ಅರ್ಶದೀಪ್​ ಕೇವಲ 3 ರನ್​ ಕೊಟ್ಟು ಪಂದ್ಯವನ್ನು 6 ರನ್​ನಿಂದ ಗೆಲ್ಲಿಸಿದ್ದರು. ಪಂದ್ಯದ ನಂತರ ಮಾತನಾಡಿದ ಅವರು ಮೂರು ಓವರ್​ನಲ್ಲಿ ಕಳಪೆ ಬೌಲಿಂಗ್​ ಪ್ರದರ್ಶನ ನೀಡಿದ್ದಾಗಿ ಒಪ್ಪಿಕೊಂಡದ್ದಲ್ಲದೇ, ಹೀಗಿದ್ದರೂ ಕಡೆಯ ಓವರ್​ನಲ್ಲಿ ತಿದ್ದಿಕೊಳ್ಳಲು ಅವಕಾಶ ಕೊಟ್ಟ ಟೀಮ್​ ಮ್ಯಾನೇಜ್​ಮೆಂಟ್​ಗೆ ಧನ್ಯವಾದ ಹೇಳಿದ್ದಾರೆ.

ನಿನ್ನೆ ನಡೆದ ಪಂದ್ಯದಲ್ಲಿ ಟಾಸ್​ ಸೋತು ಭಾರತ ಮೊದಲು ಬ್ಯಾಟ್​ ಮಾಡಿತ್ತು. 8 ವಿಕೆಟ್​ ಕಳೆದುಕೊಂಡು 161 ರನ್​ಗಳ ಸಾಧಾರಣ ಗುರಿಯನ್ನು ಆಸೀಸ್​ಗೆ ನೀಡಿತ್ತು. ಈ ಗುರಿಯನ್ನು ಬೆನ್ನತ್ತಿದ್ದ ಆಸ್ಟ್ರೇಲಿಯಾವನ್ನು ಟೀಮ್​ ಇಂಡಿಯಾ 154ಕ್ಕೆ ಕಟ್ಟಿಹಾಕಿ 6 ರನ್​ಗಳ ಜಯ ದಾಖಲಿಸಿತು. ಕೊನೆಯ ಓವರ್​ನಲ್ಲಿ ನಡೆದ ಮ್ಯಾಜಿಕ್​ ಈ ಗೆಲುವಿಗೆ ಕಾರಣವಾಯಿತು.

"ಆಟದಲ್ಲಿ ನಾನು ಮಾಡಿದ ಮೂರು ಓವರ್​ಗಳಲ್ಲಿ ಹೆಚ್ಚು ರನ್​ ಬಿಟ್ಟುಕೊಟ್ಟಿದ್ದೆ. ಅಲ್ಲದೇ ತಂಡದ ಉಳಿದ ಬೌಲರ್​ಗಳಿಗಿಂತಲೂ ಹೆಚ್ಚು ರನ್​ ನೀಡಿದ್ದೆ. ನಾನು ತಪ್ಪು ಮಾಡಿದ್ದೇನೆ ಎಂಬುದು ನನಗೆ ತಿಳಿದಿತ್ತು. ಆ ತಪ್ಪನ್ನು ತಿದ್ದಿಕೊಳ್ಳಲು ನನಗೆ ಒಂದು ಅವಕಾಶವನ್ನು ದೇವರು ಸೃಷ್ಟಿಸಿದ, ನಾನು ನನ್ನಲ್ಲಿ ನಂಬಿಕೆ ಇಟ್ಟಿದ್ದೇನೆ. ನನ್ನನ್ನು ನಂಬಿದ ಸಿಬ್ಬಂದಿಗೆ ಧನ್ಯವಾದಗಳು"ಎಂದು ಹೇಳಿದ್ದಾರೆ.

ಭಾರತದ ಇನ್ನಿಂಗ್ಸ್ ವೇಳೆ ವಿಕೆಟ್​ಗಳ ಪತನ ಆದರೂ ಶ್ರೇಯಸ್​ ಅಯ್ಯರ್​ ಕ್ರೀಸ್​ಗೆ ಗಟ್ಟಿಯಾಗಿ ನಿಂತು ಅರ್ಧಶತಕ ಗಳಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು. ಅವರಿಗೆ ಜಿತೇಶ್​ ಶರ್ಮಾ ಮತ್ತು ಅಕ್ಷರ್​ ಪಟೇಲ್​ ಕೂಡಾ ಸಾಥ್​ ಕೊಟ್ಟಿದ್ದರು. ಇವರುಗಳ ಬ್ಯಾಟಿಂಗ್​ನಿಂದ 160 ರನ್​ ಗುರಿ ತಲುಪಿತು. ಕಡೆಯಲ್ಲಿ 15-20 ರನ್​ ವೇಗವಾಗಿ ಗಳಿಸಿದ್ದ ತಂಡದ ಗೆಲುವಿಗೆ ಸಹಾಯವಾಯಿತು ಎಂದಿದ್ದಾರೆ ಸಿಂಗ್​.

ಹೆಚ್ಚುವರಿ ರನ್​ ಇದ್ದದ್ದು ಗೆಲುವಿಗೆ ದಾರಿ ಮಾಡಿಕೊಟ್ಟಿತು: "ನಿಜ ಹೇಳಬೇಕೆಂದರೆ, ನನ್ನ ಮನಸ್ಸಿನಲ್ಲಿ ಏನೂ ನಡೆಯುತ್ತಿರಲಿಲ್ಲ. ಸೂರ್ಯಕುಮಾರ್ ಯಾದವ್ ಹೇಳಿದ್ದು ಏನಾಗುತ್ತದೆಯೋ ಅದು ಆಗಲಿ ಎಂದು. ಕ್ರೆಡಿಟ್ ನಮ್ಮ ಬ್ಯಾಟ್ಸ್‌ಮನ್‌ಗಳಿಗೂ ಸಲ್ಲುತ್ತದೆ. ಅವರು ಈ ಟ್ರಿಕಿ ವಿಕೆಟ್‌ನಲ್ಲಿ ನಿಜವಾಗಿಯೂ ಉತ್ತಮ ಮೊತ್ತವನ್ನು ನೀಡಿದರು ಮತ್ತು ಹೆಚ್ಚುವರಿ 15 ರಿಂದ 20 ರನ್‌ಗಳನ್ನು ನಾವು ಹೊಂದಿದ್ದೆವು" ಎಂದಿದ್ದಾರೆ.

ಇದನ್ನೂ ಓದಿ: "ಐಪಿಎಲ್​ ಆಡಬೇಡಿ" ಜೋಫ್ರಾ ಆರ್ಚರ್‌ಗೆ ಇಸಿಬಿ ಸೂಚನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.