ETV Bharat / sports

ಮನೀಶ್ ಪಾಂಡೆ 156, ಸಿದ್ಧಾರ್ಥ್​ ಅಜೇಯ 140; ರೈಲ್ವೇಸ್ ವಿರುದ್ಧ ಬೃಹತ್ ಮೊತ್ತ ದಾಖಲಿಸಿದ ಕರ್ನಾಟಕ

author img

By

Published : Feb 17, 2022, 8:40 PM IST

110ರನ್​ಗಳಿಗೆ 3 ವಿಕೆಟ್ ಕಳೆದಕೊಂಡಿದ್ದ ಸಂದರ್ಭದಲ್ಲಿ ಸಿದ್ಧಾರ್ಥ್​ ಜೊತೆಗೂಡಿದ ನಾಯಕ ಮನೀಶ್ ಪಾಂಡೆ ರೈಲ್ವೇಶ್​ ಬೌಲರ್​ಗಳನ್ನು ಮನಬಂದಂತೆ ದಂಡಿಸಿದರು. ಟಿ-20 ಕ್ರಿಕೆಟ್​​ನಂತೆ ಬ್ಯಾಟಿಂಗ್ ಬೀಸಿದ ಮನೀಶ್​ ಕೇವಲ 83 ಎಸೆತಗಳಲ್ಲೇ ತಮ್ಮ 10ನೇ ಪ್ರಥಮ ದರ್ಜೆ ಶತಕ ಬಾರಿಸಿದರು. ಒಟ್ಟಾರೆ 121 ಎಸೆತಗಳಲ್ಲಿ 10 ಭರ್ಜರಿ ಸಿಕ್ಸರ್​ ಮತ್ತು 12 ಬೌಂಡರಿಗಳ ನೆರವಿನಿಂದ 156 ರನ್​ಗಳಿಸಿ ಔಟಾದರು.

Tons from Manish Pandey, Siddharth put Karnataka in command vs Railways
ಮನೀಶ್ ಪಾಂಡೆ ಶತಕ

ಚೆನ್ನೈ: ನಾಯಕ ಮನೀಶ್ ಪಾಂಡೆ ಮತ್ತು ಕೆ. ಸಿದ್ಧಾರ್ಥ್​ ಅವರು ಭರ್ಜರಿ ಶತಕಗಳ ನೆರವಿನಿಂದ ಕರ್ನಾಟಕ ತಂಡ ರಣಜಿ ಟ್ರೋಪಿಯ ತನ್ನ ಮೊದಲ ಪಂದ್ಯದ ಮೊದಲ ದಿನವೇ ರೈಲ್ವೇಸ್​ ವಿರುದ್ಧ 5 ವಿಕೆಟ್ ಕಳೆದುಕೊಂಡು 392 ರನ್​ಗಳ ಬೃಹತ್​ ಮೊತ್ತ ಕಲೆಯಾಕಿದೆ.

ಟಾಸ್​ ಸೋತು ಬ್ಯಾಟಿಂಗ್ ಇಳಿದಿದ್ದ ಕರ್ನಾಟಕ ತಂಡ 50 ರನ್​ಗಳಾಗುವಷ್ಟರಲ್ಲಿ ಆರಂಭಿಕರಾದ ಮಯಾಂಕ್ ಅಗರ್ವಾಲ್​(16) ಮತ್ತು ದೇವದತ್​ ಪಡಿಕ್ಕಲ್​ ವಿಕೆಟ್ ಕಳೆದುಕೊಂಡಿತು. 3ನೇ ವಿಕೆಟ್​ಗೆ ಸಮರ್ಥ್ ಮತ್ತು ಸಿದ್ಧಾರ್ಥ್​ 60 ರನ್​ಗಳ ಜೊತೆಯಾಟ ನೀಡಿ ಚೇತರಿಕೆ ನೀಡಿದರು. ಅನುಭವಿ ಸಮರ್ಥ್​ 47 ರನ್​ಗಳಿಸಿದ್ದ ವೇಳೆ ಅವಿನಾಶ್ ಯಾದವ್​ ಬೌಲಿಂಗ್​ನಲ್ಲಿ ವಿಕೆಟ್ ಒಪ್ಪಿಸಿದರು.

267 ರನ್​ಗಳ ಜೊತೆಯಾಟ ನೀಡಿದ ಮನೀಶ್ ​- ಸಿದ್ಧಾರ್ಥ್​ ಜೋಡಿ: 110ರನ್​ಗಳಿಗೆ 3 ವಿಕೆಟ್ ಕಳೆದಕೊಂಡಿದ್ದ ಸಂದರ್ಭದಲ್ಲಿ ಸಿದ್ಧಾರ್ಥ್​ ಜೊತೆಗೂಡಿದ ನಾಯಕ ಮನೀಶ್ ಪಾಂಡೆ ರೈಲ್ವೇಶ್​ ಬೌಲರ್​ಗಳನ್ನು ಮನಬಂದಂತೆ ದಂಡಿಸಿದರು. ಟಿ-20 ಕ್ರಿಕೆಟ್​​ನಂತೆ ಬ್ಯಾಟಿಂಗ್ ಬೀಸಿದ ಮನೀಶ್​ ಕೇವಲ 83 ಎಸೆತಗಳಲ್ಲೇ ತಮ್ಮ 10ನೇ ಪ್ರಥಮ ದರ್ಜೆ ಶತಕ ಬಾರಿಸಿದರು. ಒಟ್ಟಾರೆ 121 ಎಸೆತಗಳಲ್ಲಿ 10 ಭರ್ಜರಿ ಸಿಕ್ಸರ್​ ಮತ್ತು 12 ಬೌಂಡರಿಗಳ ನೆರವಿನಿಂದ 156 ರನ್​ಗಳಿಸಿ ಔಟಾದರು.

ಸಿದ್ಧಾರ್ಥ್​ 221 ಎಸೆತಗಳಲ್ಲಿ 17 ಬೌಂಡರಿ ಮತ್ತು 2 ಸಿಕ್ಸರ್​ಗಳ ನೆರವಿನಿಂದ ಅಜೇಯ 140 ರನ್​ಗಳಿಸಿ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿದ್ದಾರೆ. ರೈಲ್ವೇಸ್​ ಪರ ಶಿವಂ ಚೌದರಿ 22ಕ್ಕೆ2, ಯುವರಾಜ್ ಸಿಂಗ್​ 52ಕ್ಕೆ1 ಮತ್ತು ಅವಿನಾಶ್ ಯಾದವ್​ 132ಕ್ಕೆ 1 ವಿಕೆಟ್ ಪಡೆದರು.

ಇದನ್ನೂ ಓದಿ:ರಣಜಿ ಟ್ರೋಫಿ ಪದಾರ್ಪಣೆ ಪಂದ್ಯದಲ್ಲಿ ಶತಕ ಸಿಡಿಸಿ ಅಬ್ಬರಿಸಿದ U19 ಸ್ಟಾರ್​ ಯಶ್​ ಧುಲ್​

ಚೆನ್ನೈ: ನಾಯಕ ಮನೀಶ್ ಪಾಂಡೆ ಮತ್ತು ಕೆ. ಸಿದ್ಧಾರ್ಥ್​ ಅವರು ಭರ್ಜರಿ ಶತಕಗಳ ನೆರವಿನಿಂದ ಕರ್ನಾಟಕ ತಂಡ ರಣಜಿ ಟ್ರೋಪಿಯ ತನ್ನ ಮೊದಲ ಪಂದ್ಯದ ಮೊದಲ ದಿನವೇ ರೈಲ್ವೇಸ್​ ವಿರುದ್ಧ 5 ವಿಕೆಟ್ ಕಳೆದುಕೊಂಡು 392 ರನ್​ಗಳ ಬೃಹತ್​ ಮೊತ್ತ ಕಲೆಯಾಕಿದೆ.

ಟಾಸ್​ ಸೋತು ಬ್ಯಾಟಿಂಗ್ ಇಳಿದಿದ್ದ ಕರ್ನಾಟಕ ತಂಡ 50 ರನ್​ಗಳಾಗುವಷ್ಟರಲ್ಲಿ ಆರಂಭಿಕರಾದ ಮಯಾಂಕ್ ಅಗರ್ವಾಲ್​(16) ಮತ್ತು ದೇವದತ್​ ಪಡಿಕ್ಕಲ್​ ವಿಕೆಟ್ ಕಳೆದುಕೊಂಡಿತು. 3ನೇ ವಿಕೆಟ್​ಗೆ ಸಮರ್ಥ್ ಮತ್ತು ಸಿದ್ಧಾರ್ಥ್​ 60 ರನ್​ಗಳ ಜೊತೆಯಾಟ ನೀಡಿ ಚೇತರಿಕೆ ನೀಡಿದರು. ಅನುಭವಿ ಸಮರ್ಥ್​ 47 ರನ್​ಗಳಿಸಿದ್ದ ವೇಳೆ ಅವಿನಾಶ್ ಯಾದವ್​ ಬೌಲಿಂಗ್​ನಲ್ಲಿ ವಿಕೆಟ್ ಒಪ್ಪಿಸಿದರು.

267 ರನ್​ಗಳ ಜೊತೆಯಾಟ ನೀಡಿದ ಮನೀಶ್ ​- ಸಿದ್ಧಾರ್ಥ್​ ಜೋಡಿ: 110ರನ್​ಗಳಿಗೆ 3 ವಿಕೆಟ್ ಕಳೆದಕೊಂಡಿದ್ದ ಸಂದರ್ಭದಲ್ಲಿ ಸಿದ್ಧಾರ್ಥ್​ ಜೊತೆಗೂಡಿದ ನಾಯಕ ಮನೀಶ್ ಪಾಂಡೆ ರೈಲ್ವೇಶ್​ ಬೌಲರ್​ಗಳನ್ನು ಮನಬಂದಂತೆ ದಂಡಿಸಿದರು. ಟಿ-20 ಕ್ರಿಕೆಟ್​​ನಂತೆ ಬ್ಯಾಟಿಂಗ್ ಬೀಸಿದ ಮನೀಶ್​ ಕೇವಲ 83 ಎಸೆತಗಳಲ್ಲೇ ತಮ್ಮ 10ನೇ ಪ್ರಥಮ ದರ್ಜೆ ಶತಕ ಬಾರಿಸಿದರು. ಒಟ್ಟಾರೆ 121 ಎಸೆತಗಳಲ್ಲಿ 10 ಭರ್ಜರಿ ಸಿಕ್ಸರ್​ ಮತ್ತು 12 ಬೌಂಡರಿಗಳ ನೆರವಿನಿಂದ 156 ರನ್​ಗಳಿಸಿ ಔಟಾದರು.

ಸಿದ್ಧಾರ್ಥ್​ 221 ಎಸೆತಗಳಲ್ಲಿ 17 ಬೌಂಡರಿ ಮತ್ತು 2 ಸಿಕ್ಸರ್​ಗಳ ನೆರವಿನಿಂದ ಅಜೇಯ 140 ರನ್​ಗಳಿಸಿ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿದ್ದಾರೆ. ರೈಲ್ವೇಸ್​ ಪರ ಶಿವಂ ಚೌದರಿ 22ಕ್ಕೆ2, ಯುವರಾಜ್ ಸಿಂಗ್​ 52ಕ್ಕೆ1 ಮತ್ತು ಅವಿನಾಶ್ ಯಾದವ್​ 132ಕ್ಕೆ 1 ವಿಕೆಟ್ ಪಡೆದರು.

ಇದನ್ನೂ ಓದಿ:ರಣಜಿ ಟ್ರೋಫಿ ಪದಾರ್ಪಣೆ ಪಂದ್ಯದಲ್ಲಿ ಶತಕ ಸಿಡಿಸಿ ಅಬ್ಬರಿಸಿದ U19 ಸ್ಟಾರ್​ ಯಶ್​ ಧುಲ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.