ETV Bharat / sports

ಇದು ನನ್ನ ಕನಸಿನ ವರ್ಷ, ಆದ್ರೂ ಮತ್ತಷ್ಟು ಸುಧಾರಣೆಯ ಗುರಿಯಿದೆ: ಅಕ್ಷರ್ ಪಟೇಲ್

author img

By

Published : Dec 5, 2021, 8:28 PM IST

ಎಡಗೈ ಸ್ಪಿನ್ನರ್​ ರವೀಂದ್ರ ಜಡೇಜಾ ತಂಡದಲ್ಲಿದ್ದರಿಂದ ಅಕ್ಷರ್​ ಪಟೇಲ್​ ಕೆಲವು ವರ್ಷಗಳಿಂದ ಕಡಗಣನೆಗೆ ಒಳಗಾಗಿದ್ದರು. ಕೊನೆಗೆ ಸಾಕಷ್ಟು ಪರಿಶ್ರಮ, ಪ್ರಯತ್ನಗಳ ನಂತರ ತವರಿನಲ್ಲಿ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ್ದ ಅಕ್ಷರ್ ಪಟೇಲ್ ಇಂಗ್ಲೆಂಡ್​ ಮತ್ತು ನ್ಯೂಜಿಲ್ಯಾಂಡ್​ನಂತಹ ತಂಡಗಳ ವಿರುದ್ಧ ವೃತ್ತಿ ಜೀವನ ಆರಂಭಿಸಿದರೂ, ಅಷ್ಟಕ್ಕೆ ತೃಪ್ತಿಪಡುವುದಕ್ಕಾಗುವುದಿಲ್ಲ. ಮತ್ತಷ್ಟು ಸುಧಾರಣೆ ಕಾಣುತ್ತಾ ಮುಂದೆ ಸಾಗಬೇಕು ಎಂದು ಹೇಳಿದ್ದಾರೆ.

Axar Patel
ಅಕ್ಷರ್ ಪಟೇಲ್

ಮುಂಬೈ: ನ್ಯೂಜಿಲ್ಯಾಂಡ್​ ವಿರುದ್ಧ ನಡೆಯುತ್ತಿರುವ 2ನೇ ಟೆಸ್ಟ್​ ಪಂದ್ಯದಲ್ಲಿ ಆಲ್​ರೌಂಡರ್​ ಪ್ರದರ್ಶನ ತೋರುತ್ತಿರುವ ಅಕ್ಷರ್​ ಪಟೇಲ್ ಈ ವರ್ಷವನ್ನು ತಮ್ಮ ಕನಸಿನ ವರ್ಷ ಎಂದು ಕರೆದಿದ್ದಾರೆ. ಆದರೂ ಮತ್ತಷ್ಟು ಸುಧಾರಿಸಿಕೊಳ್ಳುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.

ಎಡಗೈ ಸ್ಪಿನ್ನರ್​ ರವೀಂದ್ರ ಜಡೇಜಾ ತಂಡದಲ್ಲಿದ್ದರಿಂದ ಅಕ್ಷರ್​ ಪಟೇಲ್​ ಕೆಲವು ವರ್ಷಗಳಿಂದ ಕಡಗಣನೆಗೆ ಒಳಗಾಗಿದ್ದರು. ಕೊನೆಗೆ ಸಾಕಷ್ಟು ಪರಿಶ್ರಮ, ಪ್ರಯತ್ನಗಳ ನಂತರ ತವರಿನಲ್ಲಿ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ್ದ ಅಕ್ಷರ್ ಪಟೇಲ್ ಇಂಗ್ಲೆಂಡ್​ ಮತ್ತು ನ್ಯೂಜಿಲ್ಯಾಂಡ್​ನಂತಹ ತಂಡಗಳ ವಿರುದ್ಧ ವೃತ್ತಿ ಜೀವನ ಆರಂಭಿಸಿದರೂ, ಅಷ್ಟಕ್ಕೆ ತೃಪ್ತಿಪಡುವುದಕ್ಕಾಗುವುದಿಲ್ಲ, ಮತ್ತಷ್ಟು ಸುಧಾರಣೆ ಕಾಣುತ್ತಾ ಮುಂದೆ ಸಾಗಬೇಕು ಎಂದು ಹೇಳಿದ್ದಾರೆ.

ಅಕ್ಷರ್ ಪಟೇಲ್ ಇಂಗ್ಲೆಂಡ್​ ವಿರುದ್ಧದ 3 ಟೆಸ್ಟ್​ ಪಂದ್ಯಗಳಲ್ಲಿ 27 ವಿಕೆಟ್ ಪಡೆದರೆ, ಪ್ರಸ್ತುತ ನ್ಯೂಜಿಲ್ಯಾಂಡ್​ ವಿರುದ್ಧ 9 ವಿಕೆಟ್​ ಪಡೆದಿದ್ದಾರೆ. ಒಟ್ಟು 5 ಟೆಸ್ಟ್​ ಪಂದ್ಯಗಳಿಂದ 36 ವಿಕೆಟ್ ಪಡೆದಿದ್ದಾರೆ.

ಈ ವರ್ಷವನ್ನು ನನ್ನ ಕನಸಿನ ವರ್ಷ ಎಂದು ಹೇಳಬಹುದು. ಇಂಗ್ಲೆಂಡ್​ ಸರಣಿಯಲ್ಲಿ ನಾನು ಬೌಲಿಂಗ್ ಮಾಡಿದ ರೀತಿ ಮತ್ತು ಪ್ರಸ್ತುತ ನ್ಯೂಜಿಲ್ಯಾಂಡ್ ವಿರುದ್ಧ ಹೊರಬರುತ್ತಿರುವ ಪ್ರದರ್ಶನ, ಇದರ ಮಧ್ಯೆ ಐಪಿಎಲ್​ನಲ್ಲಿನ ಪ್ರದರ್ಶನವನ್ನೆಲ್ಲಾ ಪರಿಗಣಿಸಿದರೆ, ಖಂಡಿತ ಇದು ನನಗೆ ವೈಯಕ್ತಿಕವಾಗಿ ಒಳ್ಳೆಯ ವರ್ಷವಾಗಿದೆ ಎಂದು ಅಕ್ಷರ್ ಪಟೇಲ್ ಪಂದ್ಯದ ನಂತರ ನಡೆದ ವರ್ಚುವಲ್ ನಡೆದ ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದಾರೆ.

ಆದರೂ ಇಷ್ಟಕ್ಕೆ ತೃಪ್ತಿಪಡದೇ ಸುಧಾರಣೆ ಕಾಣುವುದಕ್ಕೆ ಮತ್ತು ನಾನು ಉತ್ತಮಗೊಳ್ಳಬೇಕಾದ ಕ್ಷೇತ್ರಗಳತ್ತ ಗಮನಹರಿಸಲು ಬಯಸುತ್ತೇನೆ. ಈ ಎಲ್ಲಾ ವರ್ಷಗಳಲ್ಲಿ ನಾನು ಪಟ್ಟ ಪರಿಶ್ರಮ ಅಂತಿಮವಾಗಿ ಈ ವರ್ಷ ಫಲಿತಾಂಶವನ್ನು ನೀಡಿದೆ ಎಂದು 2ನೇ ಟೆಸ್ಟ್​ನಲ್ಲಿ 52 ಮತ್ತು 41 ರನ್​ಗಳಿಸಿದ ಅಕ್ಷರ್ ಪಟೇಲ್ ಹೇಳಿದ್ದಾರೆ.

ಬ್ಯಾಟಿಂಗ್ ಬಗ್ಗೆ ಮಾತನಾಡಿ, ಬ್ಯಾಟಿಂಗ್ ಕೋಚ್​ ಮತ್ತು ಮ್ಯಾನೇಜ್​ಮೆಂಟ್​ ನನ್ನ ಬ್ಯಾಟಿಂಗ್ ಸಾಮರ್ಥ್ಯದ ಮೇಲೆ ನಂಬಿಕೆಯಿಟ್ಟಿದೆ. ಅವರೆಲ್ಲರೂ 'ನಿನ್ನಿಂದ ಸಾಧ್ಯವಿದೆ' ಎಂದು ಪ್ರೋತ್ಸಾಹಿಸುತ್ತಾರೆ. ಈ ಹಿಂದೆ ನನ್ನ ಆರಂಭವನ್ನು ದೊಡ್ಡದಾಗಿ ಪರಿವರ್ತಿಸಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ನನಗೆ ಅವಕಾಶ ಸಿಕ್ಕಿದೆ, ಅದನ್ನು ದೊಡ್ಡದಾಗಿ ಪರಿವರ್ತಿಸಿದೆ. ನನ್ನ ಬ್ಯಾಟಿಂಗ್ ತಂಡಕ್ಕೆ ಅನುಕೂಲವಾಗಿದೆ. ನಾನು, ಜಡ್ಡು ಮತ್ತು ಆಶ್ವಿನ್ ಬಾಯ್ ಆಲ್​ರೌಂಡರ್​ ಆಗಿರುವುದರಿಂದ ನಮ್ಮ ಬ್ಯಾಟರ್​ಗಳ ಮೇಲೆ ಒತ್ತಡವನ್ನು ಸ್ವಲ್ಪ ಕಡಿಮೆ ಮಾಡಿದೆ. ಇದು ಒಳ್ಳೆಯ ಸೂಚನೆ. ಎಷ್ಟು ಸಾಧ್ಯವೋ ಅಷ್ಟು ತಂಡಕ್ಕೆ ಕೊಡುಗೆ ನೀಡಲು ಪ್ರಯತ್ನಿಸುವೆ ಎಂದಿದ್ದಾರೆ.

ಇದನ್ನೂ ಓದಿ:ಭಾರತೀಯ ಸ್ಪಿನ್ನರ್​ ಎದುರಿಸಲು ಮಯಾಂಕ್ ಆಟ ನನೆಗೆ ತುಂಬಾ ನೆರವಾಯಿತು : ಮಿಚೆಲ್​

ಮುಂಬೈ: ನ್ಯೂಜಿಲ್ಯಾಂಡ್​ ವಿರುದ್ಧ ನಡೆಯುತ್ತಿರುವ 2ನೇ ಟೆಸ್ಟ್​ ಪಂದ್ಯದಲ್ಲಿ ಆಲ್​ರೌಂಡರ್​ ಪ್ರದರ್ಶನ ತೋರುತ್ತಿರುವ ಅಕ್ಷರ್​ ಪಟೇಲ್ ಈ ವರ್ಷವನ್ನು ತಮ್ಮ ಕನಸಿನ ವರ್ಷ ಎಂದು ಕರೆದಿದ್ದಾರೆ. ಆದರೂ ಮತ್ತಷ್ಟು ಸುಧಾರಿಸಿಕೊಳ್ಳುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.

ಎಡಗೈ ಸ್ಪಿನ್ನರ್​ ರವೀಂದ್ರ ಜಡೇಜಾ ತಂಡದಲ್ಲಿದ್ದರಿಂದ ಅಕ್ಷರ್​ ಪಟೇಲ್​ ಕೆಲವು ವರ್ಷಗಳಿಂದ ಕಡಗಣನೆಗೆ ಒಳಗಾಗಿದ್ದರು. ಕೊನೆಗೆ ಸಾಕಷ್ಟು ಪರಿಶ್ರಮ, ಪ್ರಯತ್ನಗಳ ನಂತರ ತವರಿನಲ್ಲಿ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ್ದ ಅಕ್ಷರ್ ಪಟೇಲ್ ಇಂಗ್ಲೆಂಡ್​ ಮತ್ತು ನ್ಯೂಜಿಲ್ಯಾಂಡ್​ನಂತಹ ತಂಡಗಳ ವಿರುದ್ಧ ವೃತ್ತಿ ಜೀವನ ಆರಂಭಿಸಿದರೂ, ಅಷ್ಟಕ್ಕೆ ತೃಪ್ತಿಪಡುವುದಕ್ಕಾಗುವುದಿಲ್ಲ, ಮತ್ತಷ್ಟು ಸುಧಾರಣೆ ಕಾಣುತ್ತಾ ಮುಂದೆ ಸಾಗಬೇಕು ಎಂದು ಹೇಳಿದ್ದಾರೆ.

ಅಕ್ಷರ್ ಪಟೇಲ್ ಇಂಗ್ಲೆಂಡ್​ ವಿರುದ್ಧದ 3 ಟೆಸ್ಟ್​ ಪಂದ್ಯಗಳಲ್ಲಿ 27 ವಿಕೆಟ್ ಪಡೆದರೆ, ಪ್ರಸ್ತುತ ನ್ಯೂಜಿಲ್ಯಾಂಡ್​ ವಿರುದ್ಧ 9 ವಿಕೆಟ್​ ಪಡೆದಿದ್ದಾರೆ. ಒಟ್ಟು 5 ಟೆಸ್ಟ್​ ಪಂದ್ಯಗಳಿಂದ 36 ವಿಕೆಟ್ ಪಡೆದಿದ್ದಾರೆ.

ಈ ವರ್ಷವನ್ನು ನನ್ನ ಕನಸಿನ ವರ್ಷ ಎಂದು ಹೇಳಬಹುದು. ಇಂಗ್ಲೆಂಡ್​ ಸರಣಿಯಲ್ಲಿ ನಾನು ಬೌಲಿಂಗ್ ಮಾಡಿದ ರೀತಿ ಮತ್ತು ಪ್ರಸ್ತುತ ನ್ಯೂಜಿಲ್ಯಾಂಡ್ ವಿರುದ್ಧ ಹೊರಬರುತ್ತಿರುವ ಪ್ರದರ್ಶನ, ಇದರ ಮಧ್ಯೆ ಐಪಿಎಲ್​ನಲ್ಲಿನ ಪ್ರದರ್ಶನವನ್ನೆಲ್ಲಾ ಪರಿಗಣಿಸಿದರೆ, ಖಂಡಿತ ಇದು ನನಗೆ ವೈಯಕ್ತಿಕವಾಗಿ ಒಳ್ಳೆಯ ವರ್ಷವಾಗಿದೆ ಎಂದು ಅಕ್ಷರ್ ಪಟೇಲ್ ಪಂದ್ಯದ ನಂತರ ನಡೆದ ವರ್ಚುವಲ್ ನಡೆದ ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದಾರೆ.

ಆದರೂ ಇಷ್ಟಕ್ಕೆ ತೃಪ್ತಿಪಡದೇ ಸುಧಾರಣೆ ಕಾಣುವುದಕ್ಕೆ ಮತ್ತು ನಾನು ಉತ್ತಮಗೊಳ್ಳಬೇಕಾದ ಕ್ಷೇತ್ರಗಳತ್ತ ಗಮನಹರಿಸಲು ಬಯಸುತ್ತೇನೆ. ಈ ಎಲ್ಲಾ ವರ್ಷಗಳಲ್ಲಿ ನಾನು ಪಟ್ಟ ಪರಿಶ್ರಮ ಅಂತಿಮವಾಗಿ ಈ ವರ್ಷ ಫಲಿತಾಂಶವನ್ನು ನೀಡಿದೆ ಎಂದು 2ನೇ ಟೆಸ್ಟ್​ನಲ್ಲಿ 52 ಮತ್ತು 41 ರನ್​ಗಳಿಸಿದ ಅಕ್ಷರ್ ಪಟೇಲ್ ಹೇಳಿದ್ದಾರೆ.

ಬ್ಯಾಟಿಂಗ್ ಬಗ್ಗೆ ಮಾತನಾಡಿ, ಬ್ಯಾಟಿಂಗ್ ಕೋಚ್​ ಮತ್ತು ಮ್ಯಾನೇಜ್​ಮೆಂಟ್​ ನನ್ನ ಬ್ಯಾಟಿಂಗ್ ಸಾಮರ್ಥ್ಯದ ಮೇಲೆ ನಂಬಿಕೆಯಿಟ್ಟಿದೆ. ಅವರೆಲ್ಲರೂ 'ನಿನ್ನಿಂದ ಸಾಧ್ಯವಿದೆ' ಎಂದು ಪ್ರೋತ್ಸಾಹಿಸುತ್ತಾರೆ. ಈ ಹಿಂದೆ ನನ್ನ ಆರಂಭವನ್ನು ದೊಡ್ಡದಾಗಿ ಪರಿವರ್ತಿಸಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ನನಗೆ ಅವಕಾಶ ಸಿಕ್ಕಿದೆ, ಅದನ್ನು ದೊಡ್ಡದಾಗಿ ಪರಿವರ್ತಿಸಿದೆ. ನನ್ನ ಬ್ಯಾಟಿಂಗ್ ತಂಡಕ್ಕೆ ಅನುಕೂಲವಾಗಿದೆ. ನಾನು, ಜಡ್ಡು ಮತ್ತು ಆಶ್ವಿನ್ ಬಾಯ್ ಆಲ್​ರೌಂಡರ್​ ಆಗಿರುವುದರಿಂದ ನಮ್ಮ ಬ್ಯಾಟರ್​ಗಳ ಮೇಲೆ ಒತ್ತಡವನ್ನು ಸ್ವಲ್ಪ ಕಡಿಮೆ ಮಾಡಿದೆ. ಇದು ಒಳ್ಳೆಯ ಸೂಚನೆ. ಎಷ್ಟು ಸಾಧ್ಯವೋ ಅಷ್ಟು ತಂಡಕ್ಕೆ ಕೊಡುಗೆ ನೀಡಲು ಪ್ರಯತ್ನಿಸುವೆ ಎಂದಿದ್ದಾರೆ.

ಇದನ್ನೂ ಓದಿ:ಭಾರತೀಯ ಸ್ಪಿನ್ನರ್​ ಎದುರಿಸಲು ಮಯಾಂಕ್ ಆಟ ನನೆಗೆ ತುಂಬಾ ನೆರವಾಯಿತು : ಮಿಚೆಲ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.