ETV Bharat / sports

ಸೈಯದ್ ಮುಷ್ತಾಕ್ ಅಲಿಯಲ್ಲಿ ಮನೀಶ್​ ಪಾಂಡೆ ಮಿಂಚು​: ಕರ್ನಾಟಕಕ್ಕೆ ಹ್ಯಾಟ್ರಿಕ್ ಜಯ​

author img

By

Published : Nov 6, 2021, 1:10 PM IST

ಟೂರ್ನಿಯಲ್ಲಿ ಆಡಿರುವ ಮೂರು ಪಂದ್ಯಗಳಲ್ಲೂ ಗೆಲುವು ಸಾಧಿಸಿರುವ ಕರ್ನಾಟಕ ತಂಡ ಸೋಮವಾರ ತನ್ನ ಮುಂದಿನ ಪಂದ್ಯದಲ್ಲಿ ಬರೋಡ ತಂಡವನ್ನು ಎದುರಿಸಲಿದೆ. ಮಂಗಳವಾರ ಬೆಂಗಾಲ್ ವಿರುದ್ಧ ತನ್ನ ಕೊನೆಯ ಲೀಗ್ ಪಂದ್ಯವನ್ನಾಡಲಿದೆ.

Syed Mushtaq Ali Trophy
ಮನೀಶ್ ಪಾಂಡೆ

ಗುವಾಹಟಿ: ನಾಯಕ ಮನೀಶ್ ಪಾಂಡೆ ಮತ್ತು ಬೌಲರ್​ಗಳ ಭರ್ಜರಿ ಪ್ರದರ್ಶನದ ನೆರವಿನಿಂದ ಕರ್ನಾಟಕ ತಂಡ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್​ ಜಯ ಸಾಧಿಸಿ ಮುನ್ನುಗ್ಗುತ್ತಿದೆ.

ಶನಿವಾರ ಗುವಾಹಟಿಯ ಬಾರ್ಸಾಪರ ಸ್ಟೇಡಿಯಂನಲ್ಲಿ ನಡೆದ ಸರ್ವೀಸಸ್​ ವಿರುದ್ಧದ ಪಂದ್ಯದಲ್ಲಿ ಮನೀಶ್ ಪಾಂಡೆ ನೇತೃತ್ವದ ಕರ್ನಾಟಕ ತಂಡ 33 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಟಾಸ್​ ಸೋತು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡ ನಾಯಕ ಮನೀಶ್ ಪಾಂಡೆ ಜವಾಬ್ದಾರಿಯುತ ಅರ್ಧಶತಕದ ನೆರವಿನಿಂದ 6 ವಿಕೆಟ್ ನಷ್ಟಕ್ಕೆ 142 ರನ್​ಗಳಿಸಿತ್ತು. ಪಾಂಡೆ 48 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್​ ನೆರವಿನಿಂದ 51 ರನ್​ಗಳಿಸಿದರು. ಮಯಾಂಕ್​ 29 ಎಸೆತಗಳಲ್ಲಿ 28 ಮತ್ತು ಅನಿವೃದ್ಧ ಜೋಶಿ 16 ಎಸೆತಗಳಲ್ಲಿ 23 ರನ್​ಗಳಿಸಿದರು. ಪಡಿಕ್ಕಲ್(6) ಮತ್ತು ಕರುಣ್ ನಾಯರ್(6)ಕೆ ಗೌತಮ್(7) ಮತ್ತೊಮ್ಮೆ ವಿಫಲರಾದರು.

​ಸರ್ವೀಸಸ್​ ಪರ ದಿವೇಶ್​ ಪತಾನಿಯಾ 31ಕ್ಕೆ 2, ಸಚ್ಚಿದಾನಂದ್​ ಪಾಂಡೆ 31ಕ್ಕೆ1, ರಾಹುಲ್ ಸಿಂಗ್ ಮತ್ತು ಲಖನ್ ಸಿಂಗ್ ತಲಾ ಒಂದು ವಿಕೆಟ್ ಪಡೆದರು.

143 ರನ್​ಗಳ ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನಟ್ಟಿದ ಸರ್ವೀಸಸ್​ ತಂಡ ಕರ್ನಾಟಕ ಬೌಲಿಂಗ್ ದಾಳಿಗೆ ಉತ್ತರಿಸಲಾಗದೆ 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 109ರನ್​ಗಳಿಸಿ 33 ರನ್​ಗಳ ಸೋಲು ಕಂಡಿತು. 44 ಎಸೆತಗಳಲ್ಲಿ 4 ಬೌಂಡರಿ ಸಹಿತ 34 ರನ್​ಗಳಿಸಿದ ನಾಯಕ ಗಹ್ಲೌತ್​ ರಾಹುಲ್ ಸಿಂಗ್ ತಂಡದ ಗರಿಷ್ಠ ರನ್​ ಸ್ಕೋರರ್​ ಆದರು. ಅಮಿತ್​ ಪಚ್ಚಾರ 23 ರನ್​ಗಳಿಸಿದರು. ಉಳಿದ ಬ್ಯಾಟರ್​ಗಳು 20ರ ಗಡಿ ದಾಟುವಲ್ಲಿ ವಿಫಲರಾದರು.

ಕರ್ನಾಟಕ ಪರ ಜೆ ಸುಚೀತ್​ 4 ಓವರ್​ಗಳಲ್ಲಿ 15 ರನ್​ ನೀಡಿ 1 ವಿಕೆಟ್, ಕೆ ಗೌತಮ್​ 19ಕ್ಕೆ1, ವೇಗಿ ವಿ. ವೈಶಾಕ್ 25ಕ್ಕೆ 3, ದರ್ಶನ್​ ಎಂಬಿ 30ಕ್ಕೆ 2 ವಿಕೆಟ್ ಪಡೆದು ಗೆಲುವಿನ ರೂವಾರಿಗಳಾದರು.

ಟೂರ್ನಿಯಲ್ಲಿ ಆಡಿರುವ ಮೂರು ಪಂದ್ಯಗಳಲ್ಲೂ ಗೆಲುವು ಸಾಧಿಸಿರುವ ಕರ್ನಾಟಕ ತಂಡ ಸೋಮವಾರ ತನ್ನ ಮುಂದಿನ ಪಂದ್ಯದಲ್ಲಿ ಬರೋಡ ತಂಡವನ್ನು ಎದುರಿಸಲಿದೆ. ಮಂಗಳವಾರ ಬೆಂಗಾಲ್ ವಿರುದ್ಧ ತನ್ನ ಕೊನೆಯ ಲೀಗ್ ಪಂದ್ಯವನ್ನಾಡಲಿದೆ.

ಇದನ್ನೂ ಓದಿ:ನೆಹ್ರಾ, ಧವನ್, ಪಂತ್​ ಸೇರಿದಂತೆ ಹಲವು ಪ್ರತಿಭೆಗಳಿಗೆ ಕೋಚಿಂಗ್​ ನೀಡಿದ್ದ ತಾರಕ್ ಸಿನ್ಹಾ ನಿಧನ

ಗುವಾಹಟಿ: ನಾಯಕ ಮನೀಶ್ ಪಾಂಡೆ ಮತ್ತು ಬೌಲರ್​ಗಳ ಭರ್ಜರಿ ಪ್ರದರ್ಶನದ ನೆರವಿನಿಂದ ಕರ್ನಾಟಕ ತಂಡ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್​ ಜಯ ಸಾಧಿಸಿ ಮುನ್ನುಗ್ಗುತ್ತಿದೆ.

ಶನಿವಾರ ಗುವಾಹಟಿಯ ಬಾರ್ಸಾಪರ ಸ್ಟೇಡಿಯಂನಲ್ಲಿ ನಡೆದ ಸರ್ವೀಸಸ್​ ವಿರುದ್ಧದ ಪಂದ್ಯದಲ್ಲಿ ಮನೀಶ್ ಪಾಂಡೆ ನೇತೃತ್ವದ ಕರ್ನಾಟಕ ತಂಡ 33 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಟಾಸ್​ ಸೋತು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡ ನಾಯಕ ಮನೀಶ್ ಪಾಂಡೆ ಜವಾಬ್ದಾರಿಯುತ ಅರ್ಧಶತಕದ ನೆರವಿನಿಂದ 6 ವಿಕೆಟ್ ನಷ್ಟಕ್ಕೆ 142 ರನ್​ಗಳಿಸಿತ್ತು. ಪಾಂಡೆ 48 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್​ ನೆರವಿನಿಂದ 51 ರನ್​ಗಳಿಸಿದರು. ಮಯಾಂಕ್​ 29 ಎಸೆತಗಳಲ್ಲಿ 28 ಮತ್ತು ಅನಿವೃದ್ಧ ಜೋಶಿ 16 ಎಸೆತಗಳಲ್ಲಿ 23 ರನ್​ಗಳಿಸಿದರು. ಪಡಿಕ್ಕಲ್(6) ಮತ್ತು ಕರುಣ್ ನಾಯರ್(6)ಕೆ ಗೌತಮ್(7) ಮತ್ತೊಮ್ಮೆ ವಿಫಲರಾದರು.

​ಸರ್ವೀಸಸ್​ ಪರ ದಿವೇಶ್​ ಪತಾನಿಯಾ 31ಕ್ಕೆ 2, ಸಚ್ಚಿದಾನಂದ್​ ಪಾಂಡೆ 31ಕ್ಕೆ1, ರಾಹುಲ್ ಸಿಂಗ್ ಮತ್ತು ಲಖನ್ ಸಿಂಗ್ ತಲಾ ಒಂದು ವಿಕೆಟ್ ಪಡೆದರು.

143 ರನ್​ಗಳ ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನಟ್ಟಿದ ಸರ್ವೀಸಸ್​ ತಂಡ ಕರ್ನಾಟಕ ಬೌಲಿಂಗ್ ದಾಳಿಗೆ ಉತ್ತರಿಸಲಾಗದೆ 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 109ರನ್​ಗಳಿಸಿ 33 ರನ್​ಗಳ ಸೋಲು ಕಂಡಿತು. 44 ಎಸೆತಗಳಲ್ಲಿ 4 ಬೌಂಡರಿ ಸಹಿತ 34 ರನ್​ಗಳಿಸಿದ ನಾಯಕ ಗಹ್ಲೌತ್​ ರಾಹುಲ್ ಸಿಂಗ್ ತಂಡದ ಗರಿಷ್ಠ ರನ್​ ಸ್ಕೋರರ್​ ಆದರು. ಅಮಿತ್​ ಪಚ್ಚಾರ 23 ರನ್​ಗಳಿಸಿದರು. ಉಳಿದ ಬ್ಯಾಟರ್​ಗಳು 20ರ ಗಡಿ ದಾಟುವಲ್ಲಿ ವಿಫಲರಾದರು.

ಕರ್ನಾಟಕ ಪರ ಜೆ ಸುಚೀತ್​ 4 ಓವರ್​ಗಳಲ್ಲಿ 15 ರನ್​ ನೀಡಿ 1 ವಿಕೆಟ್, ಕೆ ಗೌತಮ್​ 19ಕ್ಕೆ1, ವೇಗಿ ವಿ. ವೈಶಾಕ್ 25ಕ್ಕೆ 3, ದರ್ಶನ್​ ಎಂಬಿ 30ಕ್ಕೆ 2 ವಿಕೆಟ್ ಪಡೆದು ಗೆಲುವಿನ ರೂವಾರಿಗಳಾದರು.

ಟೂರ್ನಿಯಲ್ಲಿ ಆಡಿರುವ ಮೂರು ಪಂದ್ಯಗಳಲ್ಲೂ ಗೆಲುವು ಸಾಧಿಸಿರುವ ಕರ್ನಾಟಕ ತಂಡ ಸೋಮವಾರ ತನ್ನ ಮುಂದಿನ ಪಂದ್ಯದಲ್ಲಿ ಬರೋಡ ತಂಡವನ್ನು ಎದುರಿಸಲಿದೆ. ಮಂಗಳವಾರ ಬೆಂಗಾಲ್ ವಿರುದ್ಧ ತನ್ನ ಕೊನೆಯ ಲೀಗ್ ಪಂದ್ಯವನ್ನಾಡಲಿದೆ.

ಇದನ್ನೂ ಓದಿ:ನೆಹ್ರಾ, ಧವನ್, ಪಂತ್​ ಸೇರಿದಂತೆ ಹಲವು ಪ್ರತಿಭೆಗಳಿಗೆ ಕೋಚಿಂಗ್​ ನೀಡಿದ್ದ ತಾರಕ್ ಸಿನ್ಹಾ ನಿಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.