ETV Bharat / sports

Syed Mushtaq Ali Trophy: ರೋಚಕ ಗೆಲುವಿನೊಂದಿಗೆ ಕ್ವಾರ್ಟರ್​ ಫೈನಲ್​ ತಲುಪಿದ ಕರ್ನಾಟಕ

author img

By

Published : Nov 16, 2021, 8:04 PM IST

Updated : Nov 16, 2021, 9:39 PM IST

ಸೌರಾಷ್ಟ್ರ ತಂಡದ ವಿರುದ್ಧ ನಡೆದ ಪ್ರೀ ಕ್ವಾರ್ಟರ್ ಪಂದ್ಯದಲ್ಲಿ 2 ವಿಕೆಟ್​ಗಳ ರೋಚಕ ಗೆಲುವು ದಾಖಲು ಮಾಡುವ ಮೂಲಕ ಕರ್ನಾಟಕ ತಂಡ ಕ್ವಾರ್ಟರ್ ಫೈನಲ್​ಗೆ ಲಗ್ಗೆ ಹಾಕಿತು.

karnataka beat saurashtra
karnataka beat saurashtra

ದೆಹಲಿ: ಸೈಯದ್​ ಮುಷ್ತಾಕ್​ ಅಲಿ ಟ್ರೋಫಿ (Syed Mushtaq Ali Trophy 2021) ಟೂರ್ನಿಯ ಎರಡನೇ ಪ್ರೀ ಕ್ವಾರ್ಟರ್​​​ ಫೈನಲ್​​ ಪಂದ್ಯದಲ್ಲಿ ಕರ್ನಾಟಕ ತಂಡ (Karnataka vs Saurashtra) ಸೌರಾಷ್ಟ್ರದ ವಿರುದ್ಧ 2 ವಿಕೆಟ್​​ಗಳ ರೋಚಕ ಗೆಲುವು ದಾಖಲು ಮಾಡಿದೆ. ಈ ಮೂಲಕ ಕ್ವಾರ್ಟರ್​​ ಫೈನಲ್​ಗೆ ಲಗ್ಗೆ ಹಾಕಿದೆ.

ದೆಹಲಿಯ ಅರುಣ್​ ಜೇಟ್ಲಿ ಮೈದಾನದಲ್ಲಿ (Arun Jaitley Stadium) ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್​ ನಡೆಸಿದ ಸೌರಾಷ್ಟ್ರ ಆರಂಭಿಕ ಆಘಾತದ ನಡುವೆ ಕೂಡ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್ ​ನಷ್ಟಕ್ಕೆ 145 ರನ್​ಗಳಿಕೆ ಮಾಡಿತು. ಆರಂಭದಲ್ಲೇ ಕರ್ನಾಟಕದ ಬೌಲಿಂಗ್ ದಾಳಿಗೆ ತತ್ತರಿಸಿದ ಸೌರಾಷ್ಟ್ರ 10 ರನ್​ಗಳಿಕೆ ಮಾಡುವಷ್ಟರಲ್ಲಿ ಎರಡು ವಿಕೆಟ್ ಕಳೆದುಕೊಂಡಿತು. ಆದರೆ ಮಧ್ಯಮ ಕ್ರಮಾಂಕದಲ್ಲಿ ಮಿಂಚಿದ ಶೆಲ್ಡನ್​ ಜಾಕ್ಸನ್​​ 43 ಎಸೆತಗಳಲ್ಲಿ ಅರ್ಧಶತಕ(50ರನ್​) ಸಿಡಿಸಿ ತಂಡಕ್ಕೆ ಆಸರೆಯಾದರು.

ಕೊನೆಯಲ್ಲಿ ತಂಡದ ಚಿರಾಗ್ (13) ಹಾಗೂ ಸಮರ್ಥ್ 17 ರನ್​ಗಳಿಕೆ ಮಾಡಿ ತಂಡ 20 ಓವರ್​ಗಳಲ್ಲಿ 145 ರನ್​ಗಳಿಕೆ ಮಾಡುವಂತೆ ಮಾಡಿದರು. ಕರ್ನಾಟಕ ಪರ ಕೌಶಿಕ್, ಕಾರ್ಯಪ್ಪ ಹಾಗೂ ವೈಶಾಖ್ ತಲಾ 2 ವಿಕೆಟ್ ಪಡೆದು ಮಿಂಚಿದರು.

146 ರನ್​ಗಳ ಗುರಿ ಬೆನ್ನತ್ತಿದ್ದ ಕರ್ನಾಟಕ ಕೂಡ ಆರಂಭದಲ್ಲೇ ಆಘಾತ ಅನುಭವಿಸಿತು. ಸೌರಾಷ್ಟ್ರ ಎಸೆದ ಮೊದಲ ಓವರ್​ನಲ್ಲಿ ಬಿಎಆರ್ ಶರತ್ (0) ಶೂನ್ಯಕ್ಕೆ ಔಟಾದರೆ, ನಾಯಕ ಮನೀಷ್ ಪಾಂಡೆ (4) ಕೂಡ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಕರುಣ್ ನಾಯರ್ ಕೇವಲ 5 ರನ್​ಗಳಿಸಿ ಪೆವಿಲಿಯನ್​ ಸೇರಿಕೊಂಡರು.

ಮಿಂಚಿದ ರೋಹನ್​- ಅಭಿನವ್​

5ನೇ ವಿಕೆಟ್​ಗೆ ಜೊತೆಯಾದ ರೋಹನ್ ಹಾಗೂ ಅಭಿನವ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. 33ರನ್​ಗಳಿಕೆ ಮಾಡಿದ ರೋಹಿನ್​ ತಂಡಕ್ಕೆ ಉತ್ತಮ ಕಾಣಿಕೆ ನೀಡಿದರು. ಇದರ ಹೊರತಾಗಿ ಕೂಡ ವಿಕೆಟ್​ ಕಳೆದುಕೊಳ್ಳದಂತೆ ಜವಾಬ್ದಾರಿ ಆಟ ಪ್ರದರ್ಶನ ನೀಡಿದ ಅಭಿನವ್ ಮನೋಹರ್​ ಅಜೇಯ 70ರನ್​ಗಳಿಕೆ ಮಾಡಿ ತಂಡವನ್ನ19.5 ಓವರ್​ಗಳಲ್ಲಿ 8 ವಿಕೆಟ್ ​ನಷ್ಟಕ್ಕೆ 150 ರನ್​ಗಳಿಕೆ ಮಾಡಿ ಗೆಲುವಿನ ದಡ ಸೇರಿಸಿದರು.

ರೋಚಕ ಹಂತ ತಲುಪಿದ ಪಂದ್ಯ

ಕರ್ನಾಟಕ ಗೆಲುವಿಗೆ ಕೊನೆಯ 2 ಓವರ್​ಗಳಲ್ಲಿ 10ರನ್​ಗಳ ಅವಶ್ಯಕತೆ ಇತ್ತು. ಈ ವೇಳೆ 4ರನ್​ಗಳಿಕೆ ಮಾಡಿದ್ದ ವೈಶಾಖ್​ ವಿಕೆಟ್​ ಒಪ್ಪಿಸಿದರು. ಈ ಓವರ್​ನಲ್ಲಿ ಅಭಿನವ್​ 5 ರನ್ ​ಗಳಿಕೆ ಮಾಡುವಲ್ಲಿ ಯಶಸ್ವಿಯಾದರು. ಇದಾದ ಬಳಿಕ ಕೊನೆ ಓವರ್​ನಲ್ಲಿ 5ರನ್​ ಬೇಕಾಗಿತ್ತು. ಮೊದಲ ಎಸೆತದಲ್ಲಿ ಅಭಿನವ್​ 1 ರನ್ ​ಗಳಿಕೆ ಮಾಡಿದರು. ನಂತರ ಬ್ಯಾಟಿಂಗ್ ಮಾಡಲು ಬಂದ ಕಾರ್ಯಪ್ಪ ವಿಕೆಟ್​ ಒಪ್ಪಿಸಿದರು. ಹೀಗಾಗಿ ಪಂದ್ಯ ರೋಚಕ ಹಂತ ಪಡೆದುಕೊಂಡಿತು. ಆದರೆ ಕೊನೆಯಲ್ಲಿ ಭರ್ಜರಿ ಸಿಕ್ಸರ್​ ಸಿಡಿಸಿದ ಅಭಿನವ್ ತಂಡಕ್ಕೆ ಗೆಲುವಿನ ಉಡುಗೊರೆ ನೀಡಿದರು.

ಇದನ್ನೂ ಓದಿ: ICC events : ಮುಂದಿನ 8 ವರ್ಷದಲ್ಲಿ 6 ವಿಶ್ವಕಪ್​, ಪಾಕ್​ನಲ್ಲಿ 2025ರ ಚಾಂಪಿಯನ್ಸ್​ ಟ್ರೋಫಿ ಆಯೋಜನೆ

ಕೊನೆಯ 2 ಓವರ್​ಗಳಲ್ಲಿ ಕರ್ನಾಟಕ ತಂಡಕ್ಕೆ ಗೆಲ್ಲಲು 10 ರನ್​ಗಳ ಅವಶ್ಯಕತೆಯಿತ್ತು. ಈ ಹಂತದಲ್ಲಿ ವಿಜಯಕುಮಾರ್ ವೈಶಾಖ್ (4) ವಿಕೆಟ್ ಒಪ್ಪಿಸಿ ಆತಂಕ ಮೂಡಿಸಿದರು. ಅದರಂತೆ ಅಂತಿಮ ಓವರ್​ನಲ್ಲಿ 6 ಎಸೆತಗಳಲ್ಲಿ ಕರ್ನಾಟಕಕ್ಕೆ 5 ರನ್​ಗಳು ಬೇಕಿತ್ತು. ಕೊನೆಯ ಓವರ್​ನ ಮೊದಲ ಎಸೆತದಲ್ಲಿ ಅಭಿನವ್ ಮನೋಹರ್ 1 ರನ್​ ಕಲೆಹಾಕಿದರೆ, 2ನೇ ಎಸೆತದಲ್ಲಿ ಕೆ.ಸಿ.ಕಾರ್ಯಪ್ಪ (0) ವಿಕೆಟ್ ಒಪ್ಪಿಸಿದರು. ಅಂತಿಮ 2 ಎಸೆತಗಳಲ್ಲಿ 2 ರನ್ ಬೇಕಿತ್ತು. ಈ ವೇಳೆ ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ ಅಭಿನವ್ ಮನೋಹರ್ ಕರ್ನಾಟಕ ತಂಡಕ್ಕೆ 2 ವಿಕೆಟ್​ಗಳ ರೋಚಕ ಜಯ ತಂದುಕೊಟ್ಟರು.

ಸೌರಾಷ್ಟ್ರ ಪರ ಉನಾದ್ಕಟ್ 4 ವಿಕೆಟ್, ಪಟೇಲ್, ಚಿರಾಗ್​ ಹಾಗೂ ಜಡೇಜಾ ತಲಾ 1 ವಿಕೆಟ್ ಪಡೆದುಕೊಂಡರು.

ದೆಹಲಿ: ಸೈಯದ್​ ಮುಷ್ತಾಕ್​ ಅಲಿ ಟ್ರೋಫಿ (Syed Mushtaq Ali Trophy 2021) ಟೂರ್ನಿಯ ಎರಡನೇ ಪ್ರೀ ಕ್ವಾರ್ಟರ್​​​ ಫೈನಲ್​​ ಪಂದ್ಯದಲ್ಲಿ ಕರ್ನಾಟಕ ತಂಡ (Karnataka vs Saurashtra) ಸೌರಾಷ್ಟ್ರದ ವಿರುದ್ಧ 2 ವಿಕೆಟ್​​ಗಳ ರೋಚಕ ಗೆಲುವು ದಾಖಲು ಮಾಡಿದೆ. ಈ ಮೂಲಕ ಕ್ವಾರ್ಟರ್​​ ಫೈನಲ್​ಗೆ ಲಗ್ಗೆ ಹಾಕಿದೆ.

ದೆಹಲಿಯ ಅರುಣ್​ ಜೇಟ್ಲಿ ಮೈದಾನದಲ್ಲಿ (Arun Jaitley Stadium) ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್​ ನಡೆಸಿದ ಸೌರಾಷ್ಟ್ರ ಆರಂಭಿಕ ಆಘಾತದ ನಡುವೆ ಕೂಡ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್ ​ನಷ್ಟಕ್ಕೆ 145 ರನ್​ಗಳಿಕೆ ಮಾಡಿತು. ಆರಂಭದಲ್ಲೇ ಕರ್ನಾಟಕದ ಬೌಲಿಂಗ್ ದಾಳಿಗೆ ತತ್ತರಿಸಿದ ಸೌರಾಷ್ಟ್ರ 10 ರನ್​ಗಳಿಕೆ ಮಾಡುವಷ್ಟರಲ್ಲಿ ಎರಡು ವಿಕೆಟ್ ಕಳೆದುಕೊಂಡಿತು. ಆದರೆ ಮಧ್ಯಮ ಕ್ರಮಾಂಕದಲ್ಲಿ ಮಿಂಚಿದ ಶೆಲ್ಡನ್​ ಜಾಕ್ಸನ್​​ 43 ಎಸೆತಗಳಲ್ಲಿ ಅರ್ಧಶತಕ(50ರನ್​) ಸಿಡಿಸಿ ತಂಡಕ್ಕೆ ಆಸರೆಯಾದರು.

ಕೊನೆಯಲ್ಲಿ ತಂಡದ ಚಿರಾಗ್ (13) ಹಾಗೂ ಸಮರ್ಥ್ 17 ರನ್​ಗಳಿಕೆ ಮಾಡಿ ತಂಡ 20 ಓವರ್​ಗಳಲ್ಲಿ 145 ರನ್​ಗಳಿಕೆ ಮಾಡುವಂತೆ ಮಾಡಿದರು. ಕರ್ನಾಟಕ ಪರ ಕೌಶಿಕ್, ಕಾರ್ಯಪ್ಪ ಹಾಗೂ ವೈಶಾಖ್ ತಲಾ 2 ವಿಕೆಟ್ ಪಡೆದು ಮಿಂಚಿದರು.

146 ರನ್​ಗಳ ಗುರಿ ಬೆನ್ನತ್ತಿದ್ದ ಕರ್ನಾಟಕ ಕೂಡ ಆರಂಭದಲ್ಲೇ ಆಘಾತ ಅನುಭವಿಸಿತು. ಸೌರಾಷ್ಟ್ರ ಎಸೆದ ಮೊದಲ ಓವರ್​ನಲ್ಲಿ ಬಿಎಆರ್ ಶರತ್ (0) ಶೂನ್ಯಕ್ಕೆ ಔಟಾದರೆ, ನಾಯಕ ಮನೀಷ್ ಪಾಂಡೆ (4) ಕೂಡ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಕರುಣ್ ನಾಯರ್ ಕೇವಲ 5 ರನ್​ಗಳಿಸಿ ಪೆವಿಲಿಯನ್​ ಸೇರಿಕೊಂಡರು.

ಮಿಂಚಿದ ರೋಹನ್​- ಅಭಿನವ್​

5ನೇ ವಿಕೆಟ್​ಗೆ ಜೊತೆಯಾದ ರೋಹನ್ ಹಾಗೂ ಅಭಿನವ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. 33ರನ್​ಗಳಿಕೆ ಮಾಡಿದ ರೋಹಿನ್​ ತಂಡಕ್ಕೆ ಉತ್ತಮ ಕಾಣಿಕೆ ನೀಡಿದರು. ಇದರ ಹೊರತಾಗಿ ಕೂಡ ವಿಕೆಟ್​ ಕಳೆದುಕೊಳ್ಳದಂತೆ ಜವಾಬ್ದಾರಿ ಆಟ ಪ್ರದರ್ಶನ ನೀಡಿದ ಅಭಿನವ್ ಮನೋಹರ್​ ಅಜೇಯ 70ರನ್​ಗಳಿಕೆ ಮಾಡಿ ತಂಡವನ್ನ19.5 ಓವರ್​ಗಳಲ್ಲಿ 8 ವಿಕೆಟ್ ​ನಷ್ಟಕ್ಕೆ 150 ರನ್​ಗಳಿಕೆ ಮಾಡಿ ಗೆಲುವಿನ ದಡ ಸೇರಿಸಿದರು.

ರೋಚಕ ಹಂತ ತಲುಪಿದ ಪಂದ್ಯ

ಕರ್ನಾಟಕ ಗೆಲುವಿಗೆ ಕೊನೆಯ 2 ಓವರ್​ಗಳಲ್ಲಿ 10ರನ್​ಗಳ ಅವಶ್ಯಕತೆ ಇತ್ತು. ಈ ವೇಳೆ 4ರನ್​ಗಳಿಕೆ ಮಾಡಿದ್ದ ವೈಶಾಖ್​ ವಿಕೆಟ್​ ಒಪ್ಪಿಸಿದರು. ಈ ಓವರ್​ನಲ್ಲಿ ಅಭಿನವ್​ 5 ರನ್ ​ಗಳಿಕೆ ಮಾಡುವಲ್ಲಿ ಯಶಸ್ವಿಯಾದರು. ಇದಾದ ಬಳಿಕ ಕೊನೆ ಓವರ್​ನಲ್ಲಿ 5ರನ್​ ಬೇಕಾಗಿತ್ತು. ಮೊದಲ ಎಸೆತದಲ್ಲಿ ಅಭಿನವ್​ 1 ರನ್ ​ಗಳಿಕೆ ಮಾಡಿದರು. ನಂತರ ಬ್ಯಾಟಿಂಗ್ ಮಾಡಲು ಬಂದ ಕಾರ್ಯಪ್ಪ ವಿಕೆಟ್​ ಒಪ್ಪಿಸಿದರು. ಹೀಗಾಗಿ ಪಂದ್ಯ ರೋಚಕ ಹಂತ ಪಡೆದುಕೊಂಡಿತು. ಆದರೆ ಕೊನೆಯಲ್ಲಿ ಭರ್ಜರಿ ಸಿಕ್ಸರ್​ ಸಿಡಿಸಿದ ಅಭಿನವ್ ತಂಡಕ್ಕೆ ಗೆಲುವಿನ ಉಡುಗೊರೆ ನೀಡಿದರು.

ಇದನ್ನೂ ಓದಿ: ICC events : ಮುಂದಿನ 8 ವರ್ಷದಲ್ಲಿ 6 ವಿಶ್ವಕಪ್​, ಪಾಕ್​ನಲ್ಲಿ 2025ರ ಚಾಂಪಿಯನ್ಸ್​ ಟ್ರೋಫಿ ಆಯೋಜನೆ

ಕೊನೆಯ 2 ಓವರ್​ಗಳಲ್ಲಿ ಕರ್ನಾಟಕ ತಂಡಕ್ಕೆ ಗೆಲ್ಲಲು 10 ರನ್​ಗಳ ಅವಶ್ಯಕತೆಯಿತ್ತು. ಈ ಹಂತದಲ್ಲಿ ವಿಜಯಕುಮಾರ್ ವೈಶಾಖ್ (4) ವಿಕೆಟ್ ಒಪ್ಪಿಸಿ ಆತಂಕ ಮೂಡಿಸಿದರು. ಅದರಂತೆ ಅಂತಿಮ ಓವರ್​ನಲ್ಲಿ 6 ಎಸೆತಗಳಲ್ಲಿ ಕರ್ನಾಟಕಕ್ಕೆ 5 ರನ್​ಗಳು ಬೇಕಿತ್ತು. ಕೊನೆಯ ಓವರ್​ನ ಮೊದಲ ಎಸೆತದಲ್ಲಿ ಅಭಿನವ್ ಮನೋಹರ್ 1 ರನ್​ ಕಲೆಹಾಕಿದರೆ, 2ನೇ ಎಸೆತದಲ್ಲಿ ಕೆ.ಸಿ.ಕಾರ್ಯಪ್ಪ (0) ವಿಕೆಟ್ ಒಪ್ಪಿಸಿದರು. ಅಂತಿಮ 2 ಎಸೆತಗಳಲ್ಲಿ 2 ರನ್ ಬೇಕಿತ್ತು. ಈ ವೇಳೆ ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ ಅಭಿನವ್ ಮನೋಹರ್ ಕರ್ನಾಟಕ ತಂಡಕ್ಕೆ 2 ವಿಕೆಟ್​ಗಳ ರೋಚಕ ಜಯ ತಂದುಕೊಟ್ಟರು.

ಸೌರಾಷ್ಟ್ರ ಪರ ಉನಾದ್ಕಟ್ 4 ವಿಕೆಟ್, ಪಟೇಲ್, ಚಿರಾಗ್​ ಹಾಗೂ ಜಡೇಜಾ ತಲಾ 1 ವಿಕೆಟ್ ಪಡೆದುಕೊಂಡರು.

Last Updated : Nov 16, 2021, 9:39 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.