ETV Bharat / sports

ಕಿವೀಸ್​ ಬ್ಯಾಟರ್ಸ್​ ಗೆಲ್ಲುವುದಕ್ಕೆ ಪ್ರಯತ್ನಿಸದೇ, ಡ್ರಾಗೋಸ್ಕರ ಆಡಿದರು : ಗವಾಸ್ಕರ್​

author img

By

Published : Nov 30, 2021, 4:16 PM IST

ಭಾರತ ನೀಡಿದ 284 ರನ್​ಗಳ ಗುರಿಯನ್ನು ಬೆನ್ನಟ್ಟಿದ ಕಿವೀಸ್​ಗೆ 5ನೇ ದಿನ ಲಾಥಮ್ ಮತ್ತು ಸಮರ್​ವಿಲ್​ ಅತ್ಯುತ್ತಮ ಆರಂಭ ಒದಗಿಸಿಕೊಟ್ಟರು. ಈ ಸಂದರ್ಭದಲ್ಲಿ ಭಾರತೀಯ ಪಾಳಯದಲ್ಲಿ ಪಂದ್ಯವನ್ನು ಕಳೆದುಕೊಳ್ಳುವ ಆತಂಕ ಎದುರಾಗಿತ್ತು..

Sunil Gavaskar Slams to kiwis batters
ಸುನಿಲ್ ಗವಾಸ್ಕರ್​

ಕಾನ್ಪುರ : ಒಂದು ಸಂಪೂರ್ಣ ದಿನ ಕೈಯಲ್ಲಿ 9 ವಿಕೆಟ್​ಗಳಿದ್ದರು ನ್ಯೂಜಿಲ್ಯಾಂಡ್ ತಂಡ ಗೆಲ್ಲುವ ಮನಸ್ಸು ಮಾಡದೇ, ಕೇವಲ ಡ್ರಾ ಸಾಧಿಸುವ ನಿಟ್ಟಿನಲ್ಲೇ ಆಡಿತು ಎಂದು ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ಮೊದಲ ಟೆಸ್ಟ್​ ಪಂದ್ಯ ಡ್ರಾನಲ್ಲಿ ಅಂತ್ಯವಾಗಿದೆ. ಕೊನೆಯ ಕ್ಷಣದವರೆಗೂ ರೋಚಕವಾಗಿದ್ದ ಪಂದ್ಯದಲ್ಲಿ ಭಾರತೀಯರು ಕೊನೆಯವರೆಗೂ ಮೇಲುಗೈ ಸಾಧಿಸಿದರೂ, ಕಡೆಯ 9 ಓವರ್​ಗಳಲ್ಲಿ ರಚಿನ್​ ರವೀಂದ್ರ ಮತ್ತು ಅಜಾಜ್ ಪಟೇಲ್​ ಗೋಡೆಯಂತೆ ನಿಂತು ಸೋಲನ್ನು ತಪ್ಪಿಸಿದರು.

ಭಾರತ ನ್ಯೂಜಿಲ್ಯಾಂಡ್​ ಮಧ್ಯೆ 2ನೇ ಇನ್ನಿಂಗ್ಸ್​ ಅದ್ಭುತವಾಗಿ ಜರುಗಿತು. 5ನೇ ದಿನ ಭಾರತ ಸಂಪೂರ್ಣ ಅಧಿಪತ್ಯ ಸಾಧಿಸಿತು. ವಿಕೆಟ್​ ಬೀಳುತ್ತಿದ್ದಂತೆ ಒಡತ್ತಡಕ್ಕೆ ಒಳಗಾದ ಕಿವೀಸ್ ಅವಕಾಶ ಇದ್ದರೂ ಗೆಲ್ಲುವ ಪ್ರಯತ್ನವನ್ನು ಕೈಬಿಟ್ಟು ಡ್ರಾ ಸಾಧಿಸಲು ಪ್ರಯತ್ನಿಸಿತು ಎಂದು ಗವಾಸ್ಕರ್ ಸ್ಟಾರ್ ಸ್ಪೋರ್ಟ್ಸ್​ ಸಂವಾದದ ವೇಳೆ​ ತಿಳಿಸಿದ್ದಾರೆ.

ಭಾರತ ನೀಡಿದ 284 ರನ್​ಗಳ ಗುರಿಯನ್ನು ಬೆನ್ನಟ್ಟಿದ ಕಿವೀಸ್​ಗೆ 5ನೇ ದಿನ ಲಾಥಮ್ ಮತ್ತು ಸಮರ್​ವಿಲ್​ ಅತ್ಯುತ್ತಮ ಆರಂಭ ಒದಗಿಸಿಕೊಟ್ಟರು. ಈ ಸಂದರ್ಭದಲ್ಲಿ ಭಾರತೀಯ ಪಾಳಯದಲ್ಲಿ ಪಂದ್ಯವನ್ನು ಕಳೆದುಕೊಳ್ಳುವ ಆತಂಕ ಎದುರಾಗಿತ್ತು.

ಆದರೆ, ಒಂದೆರಡು ವಿಕೆಟ್​ ಕಳೆದುಕೊಂಡ ನಂತರ ಕಿವೀಸ್​ ಗೆಲ್ಲುವ ಆಲೋಚನೆ ಕೈಬಿಟ್ಟು ಡ್ರಾ ಸಾಧಿಸಿದರೆ ಸಾಕು ಎನ್ನುವ ರೀತಿಯಲ್ಲಿ ಆಡಿತು ಎಂದು ಗವಾಸ್ಕರ್​ ಹೇಳಿದ್ದಾರೆ.

ಇದನ್ನೂ ಓದಿ:ಪರಿಪೂರ್ಣ ಸ್ಪಿನ್​ ಬೌಲರ್​ ಆಗಲು ನನಗೆ ಹರ್ಭಜನ್​ ಸಿಂಗ್​ ಸ್ಫೂರ್ತಿ: ಆರ್​. ಅಶ್ವಿನ್​

ಕಾನ್ಪುರ : ಒಂದು ಸಂಪೂರ್ಣ ದಿನ ಕೈಯಲ್ಲಿ 9 ವಿಕೆಟ್​ಗಳಿದ್ದರು ನ್ಯೂಜಿಲ್ಯಾಂಡ್ ತಂಡ ಗೆಲ್ಲುವ ಮನಸ್ಸು ಮಾಡದೇ, ಕೇವಲ ಡ್ರಾ ಸಾಧಿಸುವ ನಿಟ್ಟಿನಲ್ಲೇ ಆಡಿತು ಎಂದು ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ಮೊದಲ ಟೆಸ್ಟ್​ ಪಂದ್ಯ ಡ್ರಾನಲ್ಲಿ ಅಂತ್ಯವಾಗಿದೆ. ಕೊನೆಯ ಕ್ಷಣದವರೆಗೂ ರೋಚಕವಾಗಿದ್ದ ಪಂದ್ಯದಲ್ಲಿ ಭಾರತೀಯರು ಕೊನೆಯವರೆಗೂ ಮೇಲುಗೈ ಸಾಧಿಸಿದರೂ, ಕಡೆಯ 9 ಓವರ್​ಗಳಲ್ಲಿ ರಚಿನ್​ ರವೀಂದ್ರ ಮತ್ತು ಅಜಾಜ್ ಪಟೇಲ್​ ಗೋಡೆಯಂತೆ ನಿಂತು ಸೋಲನ್ನು ತಪ್ಪಿಸಿದರು.

ಭಾರತ ನ್ಯೂಜಿಲ್ಯಾಂಡ್​ ಮಧ್ಯೆ 2ನೇ ಇನ್ನಿಂಗ್ಸ್​ ಅದ್ಭುತವಾಗಿ ಜರುಗಿತು. 5ನೇ ದಿನ ಭಾರತ ಸಂಪೂರ್ಣ ಅಧಿಪತ್ಯ ಸಾಧಿಸಿತು. ವಿಕೆಟ್​ ಬೀಳುತ್ತಿದ್ದಂತೆ ಒಡತ್ತಡಕ್ಕೆ ಒಳಗಾದ ಕಿವೀಸ್ ಅವಕಾಶ ಇದ್ದರೂ ಗೆಲ್ಲುವ ಪ್ರಯತ್ನವನ್ನು ಕೈಬಿಟ್ಟು ಡ್ರಾ ಸಾಧಿಸಲು ಪ್ರಯತ್ನಿಸಿತು ಎಂದು ಗವಾಸ್ಕರ್ ಸ್ಟಾರ್ ಸ್ಪೋರ್ಟ್ಸ್​ ಸಂವಾದದ ವೇಳೆ​ ತಿಳಿಸಿದ್ದಾರೆ.

ಭಾರತ ನೀಡಿದ 284 ರನ್​ಗಳ ಗುರಿಯನ್ನು ಬೆನ್ನಟ್ಟಿದ ಕಿವೀಸ್​ಗೆ 5ನೇ ದಿನ ಲಾಥಮ್ ಮತ್ತು ಸಮರ್​ವಿಲ್​ ಅತ್ಯುತ್ತಮ ಆರಂಭ ಒದಗಿಸಿಕೊಟ್ಟರು. ಈ ಸಂದರ್ಭದಲ್ಲಿ ಭಾರತೀಯ ಪಾಳಯದಲ್ಲಿ ಪಂದ್ಯವನ್ನು ಕಳೆದುಕೊಳ್ಳುವ ಆತಂಕ ಎದುರಾಗಿತ್ತು.

ಆದರೆ, ಒಂದೆರಡು ವಿಕೆಟ್​ ಕಳೆದುಕೊಂಡ ನಂತರ ಕಿವೀಸ್​ ಗೆಲ್ಲುವ ಆಲೋಚನೆ ಕೈಬಿಟ್ಟು ಡ್ರಾ ಸಾಧಿಸಿದರೆ ಸಾಕು ಎನ್ನುವ ರೀತಿಯಲ್ಲಿ ಆಡಿತು ಎಂದು ಗವಾಸ್ಕರ್​ ಹೇಳಿದ್ದಾರೆ.

ಇದನ್ನೂ ಓದಿ:ಪರಿಪೂರ್ಣ ಸ್ಪಿನ್​ ಬೌಲರ್​ ಆಗಲು ನನಗೆ ಹರ್ಭಜನ್​ ಸಿಂಗ್​ ಸ್ಫೂರ್ತಿ: ಆರ್​. ಅಶ್ವಿನ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.