ETV Bharat / sports

ಮುಂಬೈನಲ್ಲಿ 14 ದಿನಗಳ ಕ್ವಾರಂಟೈನ್ ಆರಂಭಿಸಿದ ಶ್ರೀಲಂಕಾ ಪ್ರವಾಸ ಕೈಗೊಳ್ಳುವ ಕ್ರಿಕೆಟಿಗರು - ಬಿಸಿಸಿಐ

ಬಿಸಿಸಿಐ ಸೀಮಿತ್ ಓವರ್​ಗಳ ತಂಡ ಮುಂಬೈಗೆ ಬಂದಿಳಿದಿರುವ ವಿಚಾರವನ್ನು ಟ್ವಿಟರ್​ನಲ್ಲಿ ಕೆಲವು ಫೋಟೋಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ತಿಳಿಸಿದೆ. ಈ ಪೋಸ್ಟ್​ನಲ್ಲಿ ಧವನ್, ಭುವನೇಶ್ವರ್​, ಪಾಂಡ್ಯ ಬ್ರದರ್ಸ್​ ಸೇರಿದಂತೆ ಇತರ ಆಟಗಾರರಿದ್ದಾರೆ.

ಭಾರತೀಯ ಕ್ರಿಕೆಟಿಗರ ಕ್ವಾರಂಟೈನ್
ಭಾರತೀಯ ಕ್ರಿಕೆಟಿಗರ ಕ್ವಾರಂಟೈನ್
author img

By

Published : Jun 15, 2021, 9:00 PM IST

ಮುಂಬೈ: ಸೀಮಿತ ಓವರ್​ಗಳ ಸರಣಿಗಾಗಿ ಲಂಕಾ ಪ್ರವಾಸ ಕೈಗೊಳ್ಳಲಿರುವ ಆಟಗಾರರು ಮುಂಬೈನ ಹೋಟೆಲ್​ನಲ್ಲಿ 14 ದಿನಗಳ ಕ್ವಾರಂಟೈನ್​ ಆರಂಭಿಸಿದೆ. 7 ದಿನಗಳ ರೂಮ್ ಕ್ವಾರಂಟೈನ್ ಮತ್ತು 7 ದಿನಗಳ ಬಯೋಬಬಲ್​ ಕ್ವಾರಂಟೈನ್​ ನಡೆಸಲಿದೆ. ಈಗಾಗಲೇ ಎಲ್ಲ 20 ಆಟಗಾರರು ಮುಂಬೈಗೆ ಸೇರಿಕೊಂಡಿದ್ದಾರೆ.

ಜೂನ್ 28ರಂದು ಕೊಲಂಬೊಗೆ ತೆರಳುವ ಮುನ್ನ ಎಲ್ಲಾ ಆಟಗಾರರಿಗೂ ನಿರಂತರ ಕೋವಿಡ್ ಪರೀಕ್ಷೆಗಳು ನಡೆಸಲಾಗುತ್ತದೆ. ಈ ತಂಡಕ್ಕೆ ಶಿಖರ್ ಧವನ್​ ನಾಯಕನಾಗಿದ್ದರೆ, ಸ್ವಿಂಗ್ ಕಿಂಗ್ ಭುವನೇಶ್ವರ್ ಕುಮಾರ್​ ಉಪನಾಯಕನಾಗಿದ್ದಾರೆ. ಒಟ್ಟು 20 ಸದಸ್ಯರ ತಂಡ ಹಾಗೂ 5 ನೆಟ್​ ಬೌಲರ್​ಗಳು ಲಂಕಾ ಪ್ರವಾಸ ಕೈಗೊಳ್ಳಲಿದ್ದಾರೆ. ಕನ್ನಡಿಗ ರಾಹುಲ್ ದ್ರಾವಿಡ್ ಈ ತಂಡಕ್ಕೆ ಕೋಚ್ ಆಗಿ ನೇಮಕವಾಗಿದ್ದಾರೆ.

ಬಿಸಿಸಿಐ ಸೀಮಿತ್ ಓವರ್​ಗಳ ತಂಡ ಮುಂಬೈಗೆ ಬಂದಿಳಿದಿರುವ ವಿಚಾರವನ್ನು ಟ್ವಿಟರ್​ನಲ್ಲಿ ಕೆಲವು ಫೋಟೋಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ತಿಳಿಸಿದೆ. ಈ ಪೋಸ್ಟ್​ನಲ್ಲಿ ಧವನ್, ಭುವನೇಶ್ವರ್​ , ಪಾಂಡ್ಯ ಬ್ರದರ್ಸ್​ ಸೇರಿದಂತೆ ಇತರ ಆಟಗಾರರಿದ್ದಾರೆ.

ಜುಲೈ 13, 16 ಹಾಗೂ 18ರಂದು ಏಕದಿನ ಪಂದ್ಯಗಳು ಹಾಗೂ ಜುಲೈ 21, 23 ಹಾಗೂ 25ರಂದು ಟಿ-20 ಪಂದ್ಯಗಳು ನಡೆಯಲಿದೆ. ಕೊರೊನಾ ಕಾರಣದಿಂದ ಶ್ರೀಲಂಕಾದ ಪ್ರೇಮದಾಸ​ ಕ್ರೀಡಾಂಗಣದಲ್ಲಿಯೇ ಎಲ್ಲ ಪಂದ್ಯಗಳು ನಡೆಯಲಿವೆ.

ತಂಡ ಇಂತಿದೆ:

ಶಿಖರ್ ಧವನ್ (ನಾಯಕ), ಭುವನೇಶ್ವರ್ ಕುಮಾರ್ (ಉಪನಾಯಕ), ಪೃಥ್ವಿ ಶಾ, ದೇವದತ್ತ್​​ ಪಡಿಕ್ಕಲ್, ರುತುರಾಜ್ ಗಾಯಕ್ವಾಡ್​, ಸೂರ್ಯಕುಮಾರ್ ಯಾದವ್, ಮನೀಶ್​ ಪಾಂಡೆ, ಹಾರ್ದಿಕ್​ ಪಾಂಡ್ಯ, ನಿತೀಶ್ ರಾಣಾ, ಇಶಾನ್ ಕಿಶನ್ (ವಿ.ಕೀ), ಸಂಜು ಸ್ಯಾಮ್ಸನ್ (ವಿ.ಕೀ), ಯಜುವೇಂದ್ರ ಚಹಲ್, ರಾಹುಲ್​ ಚಹರ್, ಕೃಷ್ಣಪ್ಪ ಗೌತಮ್, ಕೃನಾಲ್​ ಪಾಂಡ್ಯ, ಕುಲದೀಪ್ ಯಾದವ್, ವರುಣ್​​ ಚಕ್ರವರ್ತಿ, ದೀಪಕ್​​ ಚಹರ್, ನವದೀಪ್​ ಸೈನಿ, ಚೇತನ್​​ ಸಕಾರಿಯಾ

ಇದನ್ನು ಓದಿ:ಲಂಕಾ ಪ್ರವಾಸಕ್ಕೆ ರಾಹುಲ್ ದ್ರಾವಿಡ್ ಹೆಡ್​ ಕೋಚ್: ದಾದಾ ಅಧಿಕೃತ ಘೋಷಣೆ

ಮುಂಬೈ: ಸೀಮಿತ ಓವರ್​ಗಳ ಸರಣಿಗಾಗಿ ಲಂಕಾ ಪ್ರವಾಸ ಕೈಗೊಳ್ಳಲಿರುವ ಆಟಗಾರರು ಮುಂಬೈನ ಹೋಟೆಲ್​ನಲ್ಲಿ 14 ದಿನಗಳ ಕ್ವಾರಂಟೈನ್​ ಆರಂಭಿಸಿದೆ. 7 ದಿನಗಳ ರೂಮ್ ಕ್ವಾರಂಟೈನ್ ಮತ್ತು 7 ದಿನಗಳ ಬಯೋಬಬಲ್​ ಕ್ವಾರಂಟೈನ್​ ನಡೆಸಲಿದೆ. ಈಗಾಗಲೇ ಎಲ್ಲ 20 ಆಟಗಾರರು ಮುಂಬೈಗೆ ಸೇರಿಕೊಂಡಿದ್ದಾರೆ.

ಜೂನ್ 28ರಂದು ಕೊಲಂಬೊಗೆ ತೆರಳುವ ಮುನ್ನ ಎಲ್ಲಾ ಆಟಗಾರರಿಗೂ ನಿರಂತರ ಕೋವಿಡ್ ಪರೀಕ್ಷೆಗಳು ನಡೆಸಲಾಗುತ್ತದೆ. ಈ ತಂಡಕ್ಕೆ ಶಿಖರ್ ಧವನ್​ ನಾಯಕನಾಗಿದ್ದರೆ, ಸ್ವಿಂಗ್ ಕಿಂಗ್ ಭುವನೇಶ್ವರ್ ಕುಮಾರ್​ ಉಪನಾಯಕನಾಗಿದ್ದಾರೆ. ಒಟ್ಟು 20 ಸದಸ್ಯರ ತಂಡ ಹಾಗೂ 5 ನೆಟ್​ ಬೌಲರ್​ಗಳು ಲಂಕಾ ಪ್ರವಾಸ ಕೈಗೊಳ್ಳಲಿದ್ದಾರೆ. ಕನ್ನಡಿಗ ರಾಹುಲ್ ದ್ರಾವಿಡ್ ಈ ತಂಡಕ್ಕೆ ಕೋಚ್ ಆಗಿ ನೇಮಕವಾಗಿದ್ದಾರೆ.

ಬಿಸಿಸಿಐ ಸೀಮಿತ್ ಓವರ್​ಗಳ ತಂಡ ಮುಂಬೈಗೆ ಬಂದಿಳಿದಿರುವ ವಿಚಾರವನ್ನು ಟ್ವಿಟರ್​ನಲ್ಲಿ ಕೆಲವು ಫೋಟೋಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ತಿಳಿಸಿದೆ. ಈ ಪೋಸ್ಟ್​ನಲ್ಲಿ ಧವನ್, ಭುವನೇಶ್ವರ್​ , ಪಾಂಡ್ಯ ಬ್ರದರ್ಸ್​ ಸೇರಿದಂತೆ ಇತರ ಆಟಗಾರರಿದ್ದಾರೆ.

ಜುಲೈ 13, 16 ಹಾಗೂ 18ರಂದು ಏಕದಿನ ಪಂದ್ಯಗಳು ಹಾಗೂ ಜುಲೈ 21, 23 ಹಾಗೂ 25ರಂದು ಟಿ-20 ಪಂದ್ಯಗಳು ನಡೆಯಲಿದೆ. ಕೊರೊನಾ ಕಾರಣದಿಂದ ಶ್ರೀಲಂಕಾದ ಪ್ರೇಮದಾಸ​ ಕ್ರೀಡಾಂಗಣದಲ್ಲಿಯೇ ಎಲ್ಲ ಪಂದ್ಯಗಳು ನಡೆಯಲಿವೆ.

ತಂಡ ಇಂತಿದೆ:

ಶಿಖರ್ ಧವನ್ (ನಾಯಕ), ಭುವನೇಶ್ವರ್ ಕುಮಾರ್ (ಉಪನಾಯಕ), ಪೃಥ್ವಿ ಶಾ, ದೇವದತ್ತ್​​ ಪಡಿಕ್ಕಲ್, ರುತುರಾಜ್ ಗಾಯಕ್ವಾಡ್​, ಸೂರ್ಯಕುಮಾರ್ ಯಾದವ್, ಮನೀಶ್​ ಪಾಂಡೆ, ಹಾರ್ದಿಕ್​ ಪಾಂಡ್ಯ, ನಿತೀಶ್ ರಾಣಾ, ಇಶಾನ್ ಕಿಶನ್ (ವಿ.ಕೀ), ಸಂಜು ಸ್ಯಾಮ್ಸನ್ (ವಿ.ಕೀ), ಯಜುವೇಂದ್ರ ಚಹಲ್, ರಾಹುಲ್​ ಚಹರ್, ಕೃಷ್ಣಪ್ಪ ಗೌತಮ್, ಕೃನಾಲ್​ ಪಾಂಡ್ಯ, ಕುಲದೀಪ್ ಯಾದವ್, ವರುಣ್​​ ಚಕ್ರವರ್ತಿ, ದೀಪಕ್​​ ಚಹರ್, ನವದೀಪ್​ ಸೈನಿ, ಚೇತನ್​​ ಸಕಾರಿಯಾ

ಇದನ್ನು ಓದಿ:ಲಂಕಾ ಪ್ರವಾಸಕ್ಕೆ ರಾಹುಲ್ ದ್ರಾವಿಡ್ ಹೆಡ್​ ಕೋಚ್: ದಾದಾ ಅಧಿಕೃತ ಘೋಷಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.