ETV Bharat / sports

ಶ್ರೀಲಂಕಾ ವಿರುದ್ಧದ ಸರಣಿ: ಈ ಐವರಲ್ಲಿ ಆರಂಭಿಕರು ಯಾರಾಗ್ತಾರೆ?

author img

By

Published : Jul 14, 2021, 11:16 PM IST

ಶ್ರೀಲಂಕಾ ವಿರುದ್ಧದ ಸೀಮಿತ ಓವರ್​ಗಳಲ್ಲಿ ಅನುಭವದ ಆಧಾರ ಮೇಲೆ ಪರಿಗಣಿಸಿದರೆ ನಾಯಕ ಶಿಖರ್ ಧವನ್​ ಜೊತೆಗೆ ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್​ ಆಡಿರುವ ಆರಂಭಿಕ ಬ್ಯಾಟ್ಸ್​ಮನ್ ಪೃಥ್ವಿ ಶಾ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.

ಶ್ರೀಲಂಕಾ ವಿರುದ್ಧ ಆರಂಭಿಕರು
ಶ್ರೀಲಂಕಾ ವಿರುದ್ಧ ಆರಂಭಿಕರು

ಕೊಲಂಬೊ: ಭಾರತ ತಂಡ ಸೀಮಿತ ಓವರ್​ಗಳ ಸರಣಿಗಾಗಿ ಶ್ರೀಲಂಕಾ ಪ್ರವಾಸ ಕೈಗೊಂಡಿದೆ. ಆದರೆ ಈ ಪ್ರವಾಸಕ್ಕೆ ಕೋವಿಡ್​ ಕಾರಣದಿಂದ ಬರೋಬ್ಬರಿ 20 ಆಟಗಾರರ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ಸರಣಿ ಆರಂಭಕ್ಕೆ ಕೇವಲ ನಾಲ್ಕು ದಿನ ಬಾಕಿಯಿದೆ. ಆದರೆ ಟೀಂ ಇಂಡಿಯಾ ಪರ ಆರಂಭಿಕ ಬ್ಯಾಟ್ಸ್​ಮನ್ ಯಾರಾಗ್ತಾರೆ ಎನ್ನುವುದು ಇನ್ನೂ ಖಾತ್ರಿಯಾಗಿಲ್ಲ. ಅನುಭವದ ಆಧಾರ ಮೇಲೆ ಪರಿಗಣಿಸಿದರೆ ನಾಯಕ ಶಿಖರ್ ಧವನ್​ ಜೊತೆಗೆ ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್​ ಆಡಿರುವ ಬ್ಯಾಟ್ಸ್​ಮನ್ ಪೃಥ್ವಿ ಶಾ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.

ಪೃಥ್ವಿ ಶಾ ಭಾರತ ತಂಡದಿಂದ ಹೊರಬಿದ್ದ ಮೇಲೆ ತಮ್ಮ ಆಟದಲ್ಲಿ ಬದಲಾವಣೆ ಮಾಡಿಕೊಂಡು ದೇಶಿ ಕ್ರಿಕೆಟ್​ನಲ್ಲಿ ಭರ್ಜರಿ ರನ್​ಗಳಿಸಿದ್ದಾರೆ. ಅಲ್ಲದೆ ವಿಜಯ್ ಹಜಾರೆ ಟ್ರೋಫಿಯಲ್ಲಿ 800+ ರನ್ ಬಾರಿಸುವುದರ ಜೊತೆಗೆ ನಾಯಕತ್ವ ವಹಿಸಿ ತಂಡವನ್ನು ಚಾಂಪಿಯನ್​ ಮಾಡಿದ್ದಾರೆ. ಇನ್ನು ಐಪಿಎಲ್​ನಲ್ಲೂ ಡೆಲ್ಲಿ ತಂಡದ ಪರ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ತೋರಿ ಅಗ್ರಸ್ಥಾನದಲ್ಲಿರುವಂತೆ ಮಾಡಿದ್ದಾರೆ. ಈ ಎಲ್ಲ ದಾಖಲೆಗಳ ನೆರವಿನಿಂದ ಲಂಕಾ ಪ್ರವಾಸದಲ್ಲಿ ಶಿಖರ್ ಧವನ್​ ಜೊತೆಗೆ ಆರಂಭಿಕರಾಗುವುದಕ್ಕೆ ಶಾ ಮೊದಲ ಆಯ್ಕೆ ಎಂಬ ಮಾತು ಕೇಳಿ ಬರುತ್ತಿದೆ.

ಇನ್ನು ಕರ್ನಾಟಕದ ಯುವ ಆರಂಭಿಕ ಬ್ಯಾಟ್ಸ್​ಮನ್ ದೇವದತ್ ಪಡಿಕ್ಕಲ್ ಅಂತಾರಾಷ್ಟ್ರೀಯ ಕ್ರಿಕೆಟ್​ ಅನುಭವ ಇಲ್ಲ ಎನ್ನುವುದನ್ನು ಬಿಟ್ಟರೆ ದೇಶಿ ಕ್ರಿಕೆಟ್​ ಮತ್ತು ಐಪಿಎಲ್​ನಲ್ಲಿ ಪೃಥ್ವಿ ಶಾಗೆ ಸರಿದೂಗುವಂತೆ ಆಡಿದ್ದಾರೆ. ಸ್ಥಿರತೆಯಲ್ಲೂ ಕೂಡ ಶಾ ಅವರಿಗಿಂತಲೂ ಒಂದು ಕೈ ಮೇಲೆಂದರೆ ತಪ್ಪೇನಿಲ್ಲ. ಆದರೆ ದೇವದತ್ ಎಡಗೈ ಆರಂಭಿಕನಾಗಿರುವುದರಿಂದ ಪೃಥ್ವಿಗೆ ಹೆಚ್ಚಿನ ಅವಕಾಶವಿದೆ. ಒಂದು ವೇಳೆ ಮೊದಲೆರಡು ಪಂದ್ಯಗಳಲ್ಲಿ ಭಾರತ ಗೆದ್ದರೆ ದೇವದತ್​ಗೆ ಪದಾರ್ಪಣೆ ಭಾಗ್ಯ ಸಿಗಲಿದೆ.

ಇನ್ನು ಮಹಾರಾಷ್ಟ್ರ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಆಡುವ ಋತುರಾಜ್ ಗಾಯಕ್ವಾಡ್​ ಮತ್ತು ದೆಹಲಿ ಮೂಲದ ಕೆಕೆಆರ್​ ತಂಡದಲ್ಲಿ ಇನ್ನಿಂಗ್ಸ್​ ಆರಂಭಿಸಿರುವ ಅನುಭವಿ ನಿತೀಶ್ ರಾಣಾ ಕೂಡ ತಂಡದಲ್ಲಿದ್ದಾರೆ. ಈ ತಂಡದಲ್ಲಿ ಐದು ಮಂದಿ ಆರಂಭಿಕರಿರುವುದರಿಂದ ದ್ರಾವಿಡ್​ ಕೋಚಿಂಗ್​ನಲ್ಲಿ ಎಷ್ಟು ಮಂದಿಗೆ ಅವಕಾಶ ಸಿಗಬಹುದು ಎಂದು ಕಾದುನೋಡಬೇಕಿದೆ.

ಜುಲೈ 18, 20 ಮತ್ತು 23 ರಂದು ಏಕದಿನ ಪಂದ್ಯ ಮತ್ತು ಜುಲೈ 25, 27 ಮತ್ತು 29ರಂದು ಟಿ20 ಪಂದ್ಯಗಳು ನಡೆಯಲಿವೆ.

ಇದನ್ನೂ ಓದಿ: EXCLUSIVE : ಸಂಜು ಸಾಮ್ಸನ್ ಗೆಲುವು ತಂದುಕೊಡಬಲ್ಲ ಆಟಗಾರ.. ಆದರೆ, ಸ್ಥಿರತೆ ಮುಖ್ಯ ಅಂತಾರೆ ಅಗರ್ಕರ್​..

ಕೊಲಂಬೊ: ಭಾರತ ತಂಡ ಸೀಮಿತ ಓವರ್​ಗಳ ಸರಣಿಗಾಗಿ ಶ್ರೀಲಂಕಾ ಪ್ರವಾಸ ಕೈಗೊಂಡಿದೆ. ಆದರೆ ಈ ಪ್ರವಾಸಕ್ಕೆ ಕೋವಿಡ್​ ಕಾರಣದಿಂದ ಬರೋಬ್ಬರಿ 20 ಆಟಗಾರರ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ಸರಣಿ ಆರಂಭಕ್ಕೆ ಕೇವಲ ನಾಲ್ಕು ದಿನ ಬಾಕಿಯಿದೆ. ಆದರೆ ಟೀಂ ಇಂಡಿಯಾ ಪರ ಆರಂಭಿಕ ಬ್ಯಾಟ್ಸ್​ಮನ್ ಯಾರಾಗ್ತಾರೆ ಎನ್ನುವುದು ಇನ್ನೂ ಖಾತ್ರಿಯಾಗಿಲ್ಲ. ಅನುಭವದ ಆಧಾರ ಮೇಲೆ ಪರಿಗಣಿಸಿದರೆ ನಾಯಕ ಶಿಖರ್ ಧವನ್​ ಜೊತೆಗೆ ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್​ ಆಡಿರುವ ಬ್ಯಾಟ್ಸ್​ಮನ್ ಪೃಥ್ವಿ ಶಾ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.

ಪೃಥ್ವಿ ಶಾ ಭಾರತ ತಂಡದಿಂದ ಹೊರಬಿದ್ದ ಮೇಲೆ ತಮ್ಮ ಆಟದಲ್ಲಿ ಬದಲಾವಣೆ ಮಾಡಿಕೊಂಡು ದೇಶಿ ಕ್ರಿಕೆಟ್​ನಲ್ಲಿ ಭರ್ಜರಿ ರನ್​ಗಳಿಸಿದ್ದಾರೆ. ಅಲ್ಲದೆ ವಿಜಯ್ ಹಜಾರೆ ಟ್ರೋಫಿಯಲ್ಲಿ 800+ ರನ್ ಬಾರಿಸುವುದರ ಜೊತೆಗೆ ನಾಯಕತ್ವ ವಹಿಸಿ ತಂಡವನ್ನು ಚಾಂಪಿಯನ್​ ಮಾಡಿದ್ದಾರೆ. ಇನ್ನು ಐಪಿಎಲ್​ನಲ್ಲೂ ಡೆಲ್ಲಿ ತಂಡದ ಪರ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ತೋರಿ ಅಗ್ರಸ್ಥಾನದಲ್ಲಿರುವಂತೆ ಮಾಡಿದ್ದಾರೆ. ಈ ಎಲ್ಲ ದಾಖಲೆಗಳ ನೆರವಿನಿಂದ ಲಂಕಾ ಪ್ರವಾಸದಲ್ಲಿ ಶಿಖರ್ ಧವನ್​ ಜೊತೆಗೆ ಆರಂಭಿಕರಾಗುವುದಕ್ಕೆ ಶಾ ಮೊದಲ ಆಯ್ಕೆ ಎಂಬ ಮಾತು ಕೇಳಿ ಬರುತ್ತಿದೆ.

ಇನ್ನು ಕರ್ನಾಟಕದ ಯುವ ಆರಂಭಿಕ ಬ್ಯಾಟ್ಸ್​ಮನ್ ದೇವದತ್ ಪಡಿಕ್ಕಲ್ ಅಂತಾರಾಷ್ಟ್ರೀಯ ಕ್ರಿಕೆಟ್​ ಅನುಭವ ಇಲ್ಲ ಎನ್ನುವುದನ್ನು ಬಿಟ್ಟರೆ ದೇಶಿ ಕ್ರಿಕೆಟ್​ ಮತ್ತು ಐಪಿಎಲ್​ನಲ್ಲಿ ಪೃಥ್ವಿ ಶಾಗೆ ಸರಿದೂಗುವಂತೆ ಆಡಿದ್ದಾರೆ. ಸ್ಥಿರತೆಯಲ್ಲೂ ಕೂಡ ಶಾ ಅವರಿಗಿಂತಲೂ ಒಂದು ಕೈ ಮೇಲೆಂದರೆ ತಪ್ಪೇನಿಲ್ಲ. ಆದರೆ ದೇವದತ್ ಎಡಗೈ ಆರಂಭಿಕನಾಗಿರುವುದರಿಂದ ಪೃಥ್ವಿಗೆ ಹೆಚ್ಚಿನ ಅವಕಾಶವಿದೆ. ಒಂದು ವೇಳೆ ಮೊದಲೆರಡು ಪಂದ್ಯಗಳಲ್ಲಿ ಭಾರತ ಗೆದ್ದರೆ ದೇವದತ್​ಗೆ ಪದಾರ್ಪಣೆ ಭಾಗ್ಯ ಸಿಗಲಿದೆ.

ಇನ್ನು ಮಹಾರಾಷ್ಟ್ರ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಆಡುವ ಋತುರಾಜ್ ಗಾಯಕ್ವಾಡ್​ ಮತ್ತು ದೆಹಲಿ ಮೂಲದ ಕೆಕೆಆರ್​ ತಂಡದಲ್ಲಿ ಇನ್ನಿಂಗ್ಸ್​ ಆರಂಭಿಸಿರುವ ಅನುಭವಿ ನಿತೀಶ್ ರಾಣಾ ಕೂಡ ತಂಡದಲ್ಲಿದ್ದಾರೆ. ಈ ತಂಡದಲ್ಲಿ ಐದು ಮಂದಿ ಆರಂಭಿಕರಿರುವುದರಿಂದ ದ್ರಾವಿಡ್​ ಕೋಚಿಂಗ್​ನಲ್ಲಿ ಎಷ್ಟು ಮಂದಿಗೆ ಅವಕಾಶ ಸಿಗಬಹುದು ಎಂದು ಕಾದುನೋಡಬೇಕಿದೆ.

ಜುಲೈ 18, 20 ಮತ್ತು 23 ರಂದು ಏಕದಿನ ಪಂದ್ಯ ಮತ್ತು ಜುಲೈ 25, 27 ಮತ್ತು 29ರಂದು ಟಿ20 ಪಂದ್ಯಗಳು ನಡೆಯಲಿವೆ.

ಇದನ್ನೂ ಓದಿ: EXCLUSIVE : ಸಂಜು ಸಾಮ್ಸನ್ ಗೆಲುವು ತಂದುಕೊಡಬಲ್ಲ ಆಟಗಾರ.. ಆದರೆ, ಸ್ಥಿರತೆ ಮುಖ್ಯ ಅಂತಾರೆ ಅಗರ್ಕರ್​..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.