ETV Bharat / sports

"ಕನ್ನಡ್ ಅಲ್ಲ, ಕನ್ನಡ..." ಮಹಾರಾಷ್ಟ್ರ ಕ್ರಿಕೆಟಿಗನಿಗೆ ಕನ್ನಡ ಮೇಷ್ಟ್ರಾದ ಕೆ.ಗೌತಮ್‌- ವಿಡಿಯೋ ನೋಡಿ.. - ಕೃಷ್ಣಪ್ಪ ಗೌತಮ್​

ಶ್ರೀಲಂಕಾ ವಿರುದ್ಧದ ಕ್ರಿಕೆಟ್​ ಸರಣಿ ಆಡಲು ತೆರಳಿರುವ ಟೀಂ ಇಂಡಿಯಾ ಮೋಜು-ಮಸ್ತಿಯಂತಹ ಕಾರ್ಯಕ್ರಮಗಳಲ್ಲೂ ಭಾಗಿಯಾಗುತ್ತಿದ್ದು, ಬಿಸಿಸಿಐ ಹರಿಬಿಟ್ಟಿರುವ ವಿಡಿಯೋಗೆ ಇನ್ನಿಲ್ಲದ ಮೆಚ್ಚುಗೆ ವ್ಯಕ್ತವಾಗಿದೆ.

Ruturaj & Krishnappa
Ruturaj & Krishnappa
author img

By

Published : Jul 8, 2021, 3:44 PM IST

ಕೊಲಂಬೊ(ಶ್ರೀಲಂಕಾ): ಆತಿಥೇಯ ಶ್ರೀಲಂಕಾ ವಿರುದ್ಧ ನಿಗದಿತ ಓವರ್​ಗಳ ಕ್ರಿಕೆಟ್​ ಸರಣಿಯಲ್ಲಿ ಭಾಗಿಯಾಗಲು ಯಂಗ್ ಇಂಡಿಯಾ ಲಂಕಾ ಪ್ರವಾಸದಲ್ಲಿದೆ. ಜುಲೈ 13ರಿಂದ ಉಭಯ ತಂಡಗಳ ನಡುವಿನ ಕ್ರಿಕೆಟ್​ ಸರಣಿ ಆರಂಭಗೊಳ್ಳಲಿದೆ.

ಈಗಾಗಲೇ ತರಬೇತಿ ಆರಂಭಿಸಿರುವ ಟೀಂ ಇಂಡಿಯಾ ಸಮಯ ಸಿಕ್ಕ ಸಂದರ್ಭಗಳಲ್ಲಿ ಮೋಜಿನ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ.

ಟೀಂ ಇಂಡಿಯಾ ಆಲ್​ರೌಂಡರ್​ ಹಾಗೂ ಕನ್ನಡಿಗ ಕೃಷ್ಣಪ್ಪ ಗೌತಮ್​ ಹಾಗೂ ಮಹಾರಾಷ್ಟ್ರದ ಬ್ಯಾಟ್ಸ್‌ಮನ್​ ಋತುರಾಜ್​ ಗಾಯಕ್ವಾಡ್​ "Language Exchange" ಸೆಷನ್​​ನಲ್ಲಿ ಭಾಗಿಯಾಗಿದ್ದಾರೆ. ಭಾರತೀಯ ಕ್ರಿಕೆಟ್ ಮಂಡಳಿ ಖುದ್ದಾಗಿ ಈ ಕಾರ್ಯಕ್ರಮ ಆಯೋಜನೆ ಮಾಡಿತ್ತು. ಈ ವೇಳೆ ಕೃಷ್ಣಪ್ಪ ಗೌತಮ್​ ಸಹ ಆಟಗಾರ ಗಾಯಕ್ವಾಡ್​ಗೆ ಕನ್ನಡದ ಪಾಠ ಮಾಡಿದ್ದಾರೆ. ಕಾರ್ಯಕ್ರಮದ ವೇಳೆ ಕೆಲವೊಂದು ಕನ್ನಡ ಪದಗಳ ಬಗ್ಗೆ ಹೇಳಿಕೊಟ್ಟಿದ್ದು, ಇದು ಕನ್ನಡ್ ಅಲ್ಲ ಕನ್ನಡ(Kannad Alla Kannada) ಎಂದು ತಿಳಿಸಿದ್ದಾರೆ. ಇದೇ ವೇಳೆ ಗಾಯಕ್ವಾಡ ಕೂಡ ಕೆಲವೊಂದು ಮರಾಠಿ ಶಬ್ದಗಳ ಬಗ್ಗೆ ಮಾಹಿತಿ ನೀಡಿದರು.

ಭಾರತೀಯ ಕ್ರಿಕೆಟ್​ ಮಂಡಳಿ ಈ ವಿಡಿಯೋ ಶೇರ್​ ಮಾಡ್ತಿದ್ದಂತೆ ಅನೇಕರು ಇದರ ವೀಕ್ಷಣೆ ಮಾಡಿದ್ದು, ಸಾವಿರಾರು ಜನರು ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಈ ಕಾರ್ಯಕ್ರಮದ ಮೂಲಕ ಬಿಸಿಸಿಐ ವಿವಿಧ ಭಾಷೆಗಳ ಬಗ್ಗೆ ಗೊತ್ತು ಮಾಡಿಕೊಡುವ ಕೆಲಸ ಸಹ ಮಾಡಿದ್ದು, ಇದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ವಿಶೇಷವೆಂದರೆ ಆಲ್​ರೌಂಡರ್​ ಕೃಷ್ಣಪ್ಪ ಗೌತಮ್​ ಹಾಗೂ ಋತುರಾಜ್​ ಗಾಯಕ್ವಾಡ್ ಐಪಿಎಲ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ತಂಡದ ಸದಸ್ಯರಾಗಿದ್ದಾರೆ.

ಇದನ್ನೂ ಓದಿರಿ: ರೈತನ ಮಗಳಾಗಿ ಸಮಸ್ಯೆಗಳ ಬಗ್ಗೆ ಅರಿವಿದೆ, ಅವರ ಕಲ್ಯಾಣಕ್ಕೋಸ್ಕರ ಕೆಲಸ ಮಾಡುವೆ: ಕೇಂದ್ರ ಸಚಿವೆ ಶೋಭಾ

ಕೊಲಂಬೊ(ಶ್ರೀಲಂಕಾ): ಆತಿಥೇಯ ಶ್ರೀಲಂಕಾ ವಿರುದ್ಧ ನಿಗದಿತ ಓವರ್​ಗಳ ಕ್ರಿಕೆಟ್​ ಸರಣಿಯಲ್ಲಿ ಭಾಗಿಯಾಗಲು ಯಂಗ್ ಇಂಡಿಯಾ ಲಂಕಾ ಪ್ರವಾಸದಲ್ಲಿದೆ. ಜುಲೈ 13ರಿಂದ ಉಭಯ ತಂಡಗಳ ನಡುವಿನ ಕ್ರಿಕೆಟ್​ ಸರಣಿ ಆರಂಭಗೊಳ್ಳಲಿದೆ.

ಈಗಾಗಲೇ ತರಬೇತಿ ಆರಂಭಿಸಿರುವ ಟೀಂ ಇಂಡಿಯಾ ಸಮಯ ಸಿಕ್ಕ ಸಂದರ್ಭಗಳಲ್ಲಿ ಮೋಜಿನ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ.

ಟೀಂ ಇಂಡಿಯಾ ಆಲ್​ರೌಂಡರ್​ ಹಾಗೂ ಕನ್ನಡಿಗ ಕೃಷ್ಣಪ್ಪ ಗೌತಮ್​ ಹಾಗೂ ಮಹಾರಾಷ್ಟ್ರದ ಬ್ಯಾಟ್ಸ್‌ಮನ್​ ಋತುರಾಜ್​ ಗಾಯಕ್ವಾಡ್​ "Language Exchange" ಸೆಷನ್​​ನಲ್ಲಿ ಭಾಗಿಯಾಗಿದ್ದಾರೆ. ಭಾರತೀಯ ಕ್ರಿಕೆಟ್ ಮಂಡಳಿ ಖುದ್ದಾಗಿ ಈ ಕಾರ್ಯಕ್ರಮ ಆಯೋಜನೆ ಮಾಡಿತ್ತು. ಈ ವೇಳೆ ಕೃಷ್ಣಪ್ಪ ಗೌತಮ್​ ಸಹ ಆಟಗಾರ ಗಾಯಕ್ವಾಡ್​ಗೆ ಕನ್ನಡದ ಪಾಠ ಮಾಡಿದ್ದಾರೆ. ಕಾರ್ಯಕ್ರಮದ ವೇಳೆ ಕೆಲವೊಂದು ಕನ್ನಡ ಪದಗಳ ಬಗ್ಗೆ ಹೇಳಿಕೊಟ್ಟಿದ್ದು, ಇದು ಕನ್ನಡ್ ಅಲ್ಲ ಕನ್ನಡ(Kannad Alla Kannada) ಎಂದು ತಿಳಿಸಿದ್ದಾರೆ. ಇದೇ ವೇಳೆ ಗಾಯಕ್ವಾಡ ಕೂಡ ಕೆಲವೊಂದು ಮರಾಠಿ ಶಬ್ದಗಳ ಬಗ್ಗೆ ಮಾಹಿತಿ ನೀಡಿದರು.

ಭಾರತೀಯ ಕ್ರಿಕೆಟ್​ ಮಂಡಳಿ ಈ ವಿಡಿಯೋ ಶೇರ್​ ಮಾಡ್ತಿದ್ದಂತೆ ಅನೇಕರು ಇದರ ವೀಕ್ಷಣೆ ಮಾಡಿದ್ದು, ಸಾವಿರಾರು ಜನರು ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಈ ಕಾರ್ಯಕ್ರಮದ ಮೂಲಕ ಬಿಸಿಸಿಐ ವಿವಿಧ ಭಾಷೆಗಳ ಬಗ್ಗೆ ಗೊತ್ತು ಮಾಡಿಕೊಡುವ ಕೆಲಸ ಸಹ ಮಾಡಿದ್ದು, ಇದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ವಿಶೇಷವೆಂದರೆ ಆಲ್​ರೌಂಡರ್​ ಕೃಷ್ಣಪ್ಪ ಗೌತಮ್​ ಹಾಗೂ ಋತುರಾಜ್​ ಗಾಯಕ್ವಾಡ್ ಐಪಿಎಲ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ತಂಡದ ಸದಸ್ಯರಾಗಿದ್ದಾರೆ.

ಇದನ್ನೂ ಓದಿರಿ: ರೈತನ ಮಗಳಾಗಿ ಸಮಸ್ಯೆಗಳ ಬಗ್ಗೆ ಅರಿವಿದೆ, ಅವರ ಕಲ್ಯಾಣಕ್ಕೋಸ್ಕರ ಕೆಲಸ ಮಾಡುವೆ: ಕೇಂದ್ರ ಸಚಿವೆ ಶೋಭಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.