ETV Bharat / sports

ತಂಡದ ಆಯ್ಕೆಗೆ ಐಪಿಎಲ್​ ಒಂದೇ ಮಾನದಂಡವಾ: ದೇಶಿಯ ಕ್ರೀಡೆಯಲ್ಲಿ ಆಡಿದವರಿಗೇಕಿಲ್ಲ ಸ್ಥಾನ?

author img

By ETV Bharat Karnataka Team

Published : Nov 21, 2023, 6:06 PM IST

ಆಸ್ಟ್ರೇಲಿಯಾ ವಿರುದ್ಧದ 5 ಟಿ20 ಪಂದ್ಯಕ್ಕೆ ಸೂರ್ಯಕುಮಾರ್ ಯಾದವ್​ ನಾಯಕತ್ವದಲ್ಲಿ ತಂಡವನ್ನು ಪ್ರಕಟಿಸಲಾಗಿದ್ದು, ಇದಕ್ಕೆ ದೇಶಿಯ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದವರನ್ನು ಆಯ್ಕೆ ಮಾಡಲಾಗಿಲ್ಲ.

Riyan Parag, Abhishek Sharma
Riyan Parag, Abhishek Sharma

ಹೈದರಾಬಾದ್​: ಭಾರತದಲ್ಲಿ ಕ್ರಿಕೆಟ್​ಗೆ ಮಾನ್ಯತೆ ಹೆಚ್ಚಾಗಿದ್ದು, ಆಟಗಾರರ ಸಂಖ್ಯೆಯೂ ಕಡಿಮೆ ಇಲ್ಲ. ಹೀಗಾಗಿ ಆಟಗಾರರನ್ನು ತಂಡಕ್ಕೆ ಆಯ್ಕೆ ಮಾಡುವುದು ಕಠಿಣ ಕೆಲಸವೇ ಸರಿ. ಆದರೆ, ಆಯ್ಕೆಗೆ ಒಂದು ಮಾನದಂಡ ಎಂಬುದು ಇರುತ್ತದೆ. ಈಗ ಭಾರತದ ಕ್ರಿಕೆಟ್​ ಅಭಿಮಾನಿಗಳು ಬಿಸಿಸಿಐನ ಆಯ್ಕೆ ಸಮಿತಿಗೆ ಆಯ್ಕೆಗೆ ಅನುಸರಿಸಲಾಗುವ ಮಾನದಂಡ ಏನು ಎಂದು ಪ್ರಶ್ನೆ ಕೇಳುತ್ತಿದ್ದಾರೆ.

ಅಭಿಮಾನಿಗಳ ಈ ಪ್ರಶ್ನೆಗೆ ಕಾರಣ ಆಗಿರುವುದು ಆಸ್ಟ್ರೇಲಿಯಾದ ವಿರುದ್ಧ ನಡೆಯಲಿರುವ ಟಿ20 ಸರಣಿಗೆ ಆಯ್ಕೆ ಆಗಿರುವ ತಂಡದಿಂದಾಗಿ. ಗುರುವಾರದಿಂದ ಆರಂಭವಾಗುವ ಆಸೀಸ್​ ವಿರುದ್ಧದ 5 ಟಿ20 ಪಂದ್ಯಗಳ ಸರಣಿಗೆ ಸೂರ್ಯಕುಮಾರ್​ ಯಾದವ್​ ಅವರ ನಾಯಕತ್ವದಲ್ಲಿ ತಂಡವನ್ನು ಆಯ್ಕೆ ಮಾಡಲಾಗಿದೆ. ಐರ್ಲೆಂಡ್​ ವಿರುದ್ಧದ ಸರಣಿಗೆ ಹೆಚ್ಚು ಯುವಕರನ್ನೇ ಒಳಗೊಂಡ ಟಿ20 ತಂಡವನ್ನು ಕಳಿಸಲಾಗಿತ್ತು. ಇದಕ್ಕೆ ಬಹುತೇಕ 16ನೇ ಆವೃತ್ತಿಯ ಐಪಿಎಲ್​ನಲ್ಲಿ ಉತ್ತಮ ಪ್ರದರ್ಶನ ನೀಡಿದವರನ್ನು ಆಯ್ಕೆ ಮಾಡಲಾಗಿತ್ತು. ಈಗ ಆಸ್ಟ್ರೇಲಿಯಾ ವಿರುದ್ಧದ ಪಂದ್ಯಕ್ಕೂ ಹೆಚ್ಚು ಅದೇ ತಂಡವನ್ನು ಉಳಿಸಿಕೊಳ್ಳಲಾಗಿದೆ.

ಐಪಿಎಲ್ ಪ್ರದರ್ಶನವನ್ನೇ ಲೆಕ್ಕಕ್ಕೆ ತೆಗೆದುಕೊಂಡ ಆಯ್ಕೆ ಸಮಿತಿ ದೇಶೀಯ ಟಿ20 ಟೂರ್ನಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿ (ಎಸ್​​ಎಂಎಟಿ) ಆಟವನ್ನು ಪರಿಗಣಿಸಿಲ್ಲ. ಬ್ಯಾಟರ್‌ಗಳಾದ ರಿಯಾನ್ ಪರಾಗ್, ಅಭಿಷೇಕ್ ಶರ್ಮಾ ಮತ್ತು ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದರು. ಆದರೆ ಆಯ್ಕೆ ಸಮಿತಿ ಮಾತ್ರ ಇವರುಗಳ ಆಟವನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ.

  • Syed Mushtaq Ali Trophy is no criteria for Team India's T20I selection. Only good consistent show in IPL.

    - Riyan Parag has to have a very good IPL season for India's selection. (To PTI) pic.twitter.com/bSLE150tsk

    — CricketMAN2 (@ImTanujSingh) November 20, 2023 " class="align-text-top noRightClick twitterSection" data=" ">

ಭಾರತ ತಂಡದವನ್ನು ಈ ಹಿಂದೆ ಪ್ರತಿನಿಧಿಸಿದ್ದ ಭುವನೇಶ್ವರ್ ಕುಮಾರ್ ಎಸ್​​ಎಂಎಟಿಯಲ್ಲಿ ಏಳು ಪಂದ್ಯಗಳನ್ನು ಆಡಿದ್ದು 5.84 ಎಕಾನಮಿಯಿಂದ 16 ವಿಕೆಟ್‌ಗಳನ್ನು ಪಡೆದಿದ್ದಾರೆ. ಆದರೆ ಭುವಿ ಇತ್ತೀಚೆಗೆ ಗಂಟೆಗೆ 130ಕಿ.ಮೀ ವೇಗದಲ್ಲಿ ಬೌಲಿಂಗ್​ ಮಾಡುತ್ತಿದ್ದಾರೆ. ಅವರ ವೇಗ ಕಡಿಮೆ ಆಗಿರುವುದೇ ಅವರನ್ನು ಕೈಬಿಡಲು ಕಾರಣ ಎನ್ನಲಾಗುತ್ತಿದೆ.

ಪರಾಗ್, ಶರ್ಮಾಗೆ ಸಿಗದ ಅವಕಾಶ: ಯುವ ಆಟಗಾರರಾದ ರಿಯಾನ್ ಪರಾಗ್ ಮತ್ತು ಅಭಿಷೇಕ್ ಶರ್ಮಾ ಎಸ್​​ಎಂಎಟಿಯಲ್ಲಿ ಉತ್ತಮ ಬ್ಯಾಟಿಂಗ್​ ಮಾಡಿದ್ದಾರೆ. ಅಸ್ಸೋಂ ಪರ ಆಡುತ್ತಿರುವ ಪರಾಗ್ ಅವರು 182 ಸ್ಟ್ರೈಕ್ ರೇಟ್‌ನೊಂದಿಗೆ ಏಳು ಅರ್ಧಶತಕಗಳು ಸೇರಿದಂತೆ 10 ಪಂದ್ಯಗಳಿಂದ 510 ರನ್‌ಗಳೊಂದಿಗೆ ಪಂದ್ಯಾವಳಿಯಲ್ಲಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ.

  • - Not selected in T20 WC 2021.
    - Not played in T20 WC 2022.
    - Not selected in Asia Cup 2023.
    - Not selected in World Cup 2023.
    - Not selected in T20I series vs AUS.

    Feel for Yuzi Chahal - He is one of the greatest white ball spinners of this generation! pic.twitter.com/5Yzf3jnDOs

    — CricketMAN2 (@ImTanujSingh) November 20, 2023 " class="align-text-top noRightClick twitterSection" data=" ">

ಪಂಜಾಬ್ ತಂಡದಲ್ಲಿ ಬ್ಯಾಟಿಂಗ್​ ಜೊತೆಗೆ ಎಡಗೈ ಸ್ಪಿನ್ನರ್ ಕೂಡ ಆಗಿರುವ ಶರ್ಮಾ ಎಸ್ಎಂಎಟಿಯ 10 ಪಂದ್ಯಗಳಿಂದ 485 ರನ್ ಗಳಿಸುವ ಮೂಲಕ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ 192 ಸ್ಟ್ರೈಕ್-ರೇಟ್‌ನೊಂದಿಗೆ ಎರಡು ಶತಕ ಮತ್ತು ಮೂರು ಅರ್ಧಶತಕವನ್ನು ಶರ್ಮಾ ಕಲೆಹಾಕಿದ್ದಾರೆ. ಈ ಪಂದ್ಯಾವಳಿಯ ಪ್ರದರ್ಶನದ ನಂತರ ಈ ಯುವ ಪ್ರತಿಭೆಗಳಿಗೆ ಭಾರತ ತಂಡದ ಕದ ತೆರೆಯುವ ನಿರೀಕ್ಷೆ ಇತ್ತು, ಆದರೆ ಅದು ಹುಸಿಯಾಗಿದೆ.

ಸ್ಥಾನ ಕಳೆದುಕೊಂಡ ಚಹಾಲ್​: ಟಿ20 ಸ್ಪಿನ್​ ಸ್ಪೆಷಾಲಿಸ್ಟ್​ ಎಂದೇ ಕರೆಸಿಕೊಳ್ಳುತ್ತಿದ್ದ ಯಜುವೇಂದ್ರ ಚಹಾಲ್​ ಸಹ ತಂಡಕ್ಕೆ ಮರಳಿಲ್ಲ. ವೆಸ್ಟ್​ ಇಂಡೀಸ್​ ಪ್ರವಾಸದಲ್ಲಿ ತಂಡದ ಜೊತೆಗೆ ಚಹಾಲ್​ ಇದ್ದರು. ಆದರೆ ನಂತರ ಏಷ್ಯಾಕಪ್​ ಮತ್ತು ವಿಶ್ವಕಪ್​ ತಂಡದಲ್ಲಿ ಅವರಿಗೆ ಸ್ಥಾನ ಸಿಕ್ಕಿಲ್ಲ. ಹಾಗೇ ಈಗ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಟಿ20 ಸರಣಿಗೂ ಆಯ್ಕೆ ಮಾಡಿಕೊಂಡಿಲ್ಲ. ಆಯ್ಕೆ ಆಗದಿದ್ದದ್ದಕ್ಕೆ ಎಕ್ಸ್​ ಆ್ಯಪ್​ನಲ್ಲಿ ಚಹಾಲ್​ ಸ್ಮೈಲಿ ಎಮೋಜಿ ಹಾಕಿ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ.

ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ರುತುರಾಜ್ ಗಾಯಕ್ವಾಡ್ (ಉಪನಾಯಕ), ಇಶಾನ್ ಕಿಶನ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ (ವಿಕೆಟ್​ ಕೀಪರ್​), ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಶಿವಂ ದುಬೆ, ರವಿ ಬಿಷ್ಣೋಯ್, ಅರ್ಷದೀಪ್​ ಸಿಂಗ್, ಪ್ರಸಿದ್ಧ್ ಕೃಷ್ಣ, ಅವೇಶ್ ಖಾನ್, ಮುಖೇಶ್ ಕುಮಾರ್

ಇದನ್ನೂ ಓದಿ: ತಂಡದಲ್ಲಿ ಸಂಜು ಸ್ಯಾಮ್ಸನ್​ಗೆ ಸ್ಥಾನ ಏಕಿಲ್ಲ?; ಬಿಸಿಸಿಐ ವಿರುದ್ಧ ನೆಟ್ಟಿಗರ ಕಿಡಿ

ಹೈದರಾಬಾದ್​: ಭಾರತದಲ್ಲಿ ಕ್ರಿಕೆಟ್​ಗೆ ಮಾನ್ಯತೆ ಹೆಚ್ಚಾಗಿದ್ದು, ಆಟಗಾರರ ಸಂಖ್ಯೆಯೂ ಕಡಿಮೆ ಇಲ್ಲ. ಹೀಗಾಗಿ ಆಟಗಾರರನ್ನು ತಂಡಕ್ಕೆ ಆಯ್ಕೆ ಮಾಡುವುದು ಕಠಿಣ ಕೆಲಸವೇ ಸರಿ. ಆದರೆ, ಆಯ್ಕೆಗೆ ಒಂದು ಮಾನದಂಡ ಎಂಬುದು ಇರುತ್ತದೆ. ಈಗ ಭಾರತದ ಕ್ರಿಕೆಟ್​ ಅಭಿಮಾನಿಗಳು ಬಿಸಿಸಿಐನ ಆಯ್ಕೆ ಸಮಿತಿಗೆ ಆಯ್ಕೆಗೆ ಅನುಸರಿಸಲಾಗುವ ಮಾನದಂಡ ಏನು ಎಂದು ಪ್ರಶ್ನೆ ಕೇಳುತ್ತಿದ್ದಾರೆ.

ಅಭಿಮಾನಿಗಳ ಈ ಪ್ರಶ್ನೆಗೆ ಕಾರಣ ಆಗಿರುವುದು ಆಸ್ಟ್ರೇಲಿಯಾದ ವಿರುದ್ಧ ನಡೆಯಲಿರುವ ಟಿ20 ಸರಣಿಗೆ ಆಯ್ಕೆ ಆಗಿರುವ ತಂಡದಿಂದಾಗಿ. ಗುರುವಾರದಿಂದ ಆರಂಭವಾಗುವ ಆಸೀಸ್​ ವಿರುದ್ಧದ 5 ಟಿ20 ಪಂದ್ಯಗಳ ಸರಣಿಗೆ ಸೂರ್ಯಕುಮಾರ್​ ಯಾದವ್​ ಅವರ ನಾಯಕತ್ವದಲ್ಲಿ ತಂಡವನ್ನು ಆಯ್ಕೆ ಮಾಡಲಾಗಿದೆ. ಐರ್ಲೆಂಡ್​ ವಿರುದ್ಧದ ಸರಣಿಗೆ ಹೆಚ್ಚು ಯುವಕರನ್ನೇ ಒಳಗೊಂಡ ಟಿ20 ತಂಡವನ್ನು ಕಳಿಸಲಾಗಿತ್ತು. ಇದಕ್ಕೆ ಬಹುತೇಕ 16ನೇ ಆವೃತ್ತಿಯ ಐಪಿಎಲ್​ನಲ್ಲಿ ಉತ್ತಮ ಪ್ರದರ್ಶನ ನೀಡಿದವರನ್ನು ಆಯ್ಕೆ ಮಾಡಲಾಗಿತ್ತು. ಈಗ ಆಸ್ಟ್ರೇಲಿಯಾ ವಿರುದ್ಧದ ಪಂದ್ಯಕ್ಕೂ ಹೆಚ್ಚು ಅದೇ ತಂಡವನ್ನು ಉಳಿಸಿಕೊಳ್ಳಲಾಗಿದೆ.

ಐಪಿಎಲ್ ಪ್ರದರ್ಶನವನ್ನೇ ಲೆಕ್ಕಕ್ಕೆ ತೆಗೆದುಕೊಂಡ ಆಯ್ಕೆ ಸಮಿತಿ ದೇಶೀಯ ಟಿ20 ಟೂರ್ನಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿ (ಎಸ್​​ಎಂಎಟಿ) ಆಟವನ್ನು ಪರಿಗಣಿಸಿಲ್ಲ. ಬ್ಯಾಟರ್‌ಗಳಾದ ರಿಯಾನ್ ಪರಾಗ್, ಅಭಿಷೇಕ್ ಶರ್ಮಾ ಮತ್ತು ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದರು. ಆದರೆ ಆಯ್ಕೆ ಸಮಿತಿ ಮಾತ್ರ ಇವರುಗಳ ಆಟವನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ.

  • Syed Mushtaq Ali Trophy is no criteria for Team India's T20I selection. Only good consistent show in IPL.

    - Riyan Parag has to have a very good IPL season for India's selection. (To PTI) pic.twitter.com/bSLE150tsk

    — CricketMAN2 (@ImTanujSingh) November 20, 2023 " class="align-text-top noRightClick twitterSection" data=" ">

ಭಾರತ ತಂಡದವನ್ನು ಈ ಹಿಂದೆ ಪ್ರತಿನಿಧಿಸಿದ್ದ ಭುವನೇಶ್ವರ್ ಕುಮಾರ್ ಎಸ್​​ಎಂಎಟಿಯಲ್ಲಿ ಏಳು ಪಂದ್ಯಗಳನ್ನು ಆಡಿದ್ದು 5.84 ಎಕಾನಮಿಯಿಂದ 16 ವಿಕೆಟ್‌ಗಳನ್ನು ಪಡೆದಿದ್ದಾರೆ. ಆದರೆ ಭುವಿ ಇತ್ತೀಚೆಗೆ ಗಂಟೆಗೆ 130ಕಿ.ಮೀ ವೇಗದಲ್ಲಿ ಬೌಲಿಂಗ್​ ಮಾಡುತ್ತಿದ್ದಾರೆ. ಅವರ ವೇಗ ಕಡಿಮೆ ಆಗಿರುವುದೇ ಅವರನ್ನು ಕೈಬಿಡಲು ಕಾರಣ ಎನ್ನಲಾಗುತ್ತಿದೆ.

ಪರಾಗ್, ಶರ್ಮಾಗೆ ಸಿಗದ ಅವಕಾಶ: ಯುವ ಆಟಗಾರರಾದ ರಿಯಾನ್ ಪರಾಗ್ ಮತ್ತು ಅಭಿಷೇಕ್ ಶರ್ಮಾ ಎಸ್​​ಎಂಎಟಿಯಲ್ಲಿ ಉತ್ತಮ ಬ್ಯಾಟಿಂಗ್​ ಮಾಡಿದ್ದಾರೆ. ಅಸ್ಸೋಂ ಪರ ಆಡುತ್ತಿರುವ ಪರಾಗ್ ಅವರು 182 ಸ್ಟ್ರೈಕ್ ರೇಟ್‌ನೊಂದಿಗೆ ಏಳು ಅರ್ಧಶತಕಗಳು ಸೇರಿದಂತೆ 10 ಪಂದ್ಯಗಳಿಂದ 510 ರನ್‌ಗಳೊಂದಿಗೆ ಪಂದ್ಯಾವಳಿಯಲ್ಲಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ.

  • - Not selected in T20 WC 2021.
    - Not played in T20 WC 2022.
    - Not selected in Asia Cup 2023.
    - Not selected in World Cup 2023.
    - Not selected in T20I series vs AUS.

    Feel for Yuzi Chahal - He is one of the greatest white ball spinners of this generation! pic.twitter.com/5Yzf3jnDOs

    — CricketMAN2 (@ImTanujSingh) November 20, 2023 " class="align-text-top noRightClick twitterSection" data=" ">

ಪಂಜಾಬ್ ತಂಡದಲ್ಲಿ ಬ್ಯಾಟಿಂಗ್​ ಜೊತೆಗೆ ಎಡಗೈ ಸ್ಪಿನ್ನರ್ ಕೂಡ ಆಗಿರುವ ಶರ್ಮಾ ಎಸ್ಎಂಎಟಿಯ 10 ಪಂದ್ಯಗಳಿಂದ 485 ರನ್ ಗಳಿಸುವ ಮೂಲಕ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ 192 ಸ್ಟ್ರೈಕ್-ರೇಟ್‌ನೊಂದಿಗೆ ಎರಡು ಶತಕ ಮತ್ತು ಮೂರು ಅರ್ಧಶತಕವನ್ನು ಶರ್ಮಾ ಕಲೆಹಾಕಿದ್ದಾರೆ. ಈ ಪಂದ್ಯಾವಳಿಯ ಪ್ರದರ್ಶನದ ನಂತರ ಈ ಯುವ ಪ್ರತಿಭೆಗಳಿಗೆ ಭಾರತ ತಂಡದ ಕದ ತೆರೆಯುವ ನಿರೀಕ್ಷೆ ಇತ್ತು, ಆದರೆ ಅದು ಹುಸಿಯಾಗಿದೆ.

ಸ್ಥಾನ ಕಳೆದುಕೊಂಡ ಚಹಾಲ್​: ಟಿ20 ಸ್ಪಿನ್​ ಸ್ಪೆಷಾಲಿಸ್ಟ್​ ಎಂದೇ ಕರೆಸಿಕೊಳ್ಳುತ್ತಿದ್ದ ಯಜುವೇಂದ್ರ ಚಹಾಲ್​ ಸಹ ತಂಡಕ್ಕೆ ಮರಳಿಲ್ಲ. ವೆಸ್ಟ್​ ಇಂಡೀಸ್​ ಪ್ರವಾಸದಲ್ಲಿ ತಂಡದ ಜೊತೆಗೆ ಚಹಾಲ್​ ಇದ್ದರು. ಆದರೆ ನಂತರ ಏಷ್ಯಾಕಪ್​ ಮತ್ತು ವಿಶ್ವಕಪ್​ ತಂಡದಲ್ಲಿ ಅವರಿಗೆ ಸ್ಥಾನ ಸಿಕ್ಕಿಲ್ಲ. ಹಾಗೇ ಈಗ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಟಿ20 ಸರಣಿಗೂ ಆಯ್ಕೆ ಮಾಡಿಕೊಂಡಿಲ್ಲ. ಆಯ್ಕೆ ಆಗದಿದ್ದದ್ದಕ್ಕೆ ಎಕ್ಸ್​ ಆ್ಯಪ್​ನಲ್ಲಿ ಚಹಾಲ್​ ಸ್ಮೈಲಿ ಎಮೋಜಿ ಹಾಕಿ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ.

ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ರುತುರಾಜ್ ಗಾಯಕ್ವಾಡ್ (ಉಪನಾಯಕ), ಇಶಾನ್ ಕಿಶನ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ (ವಿಕೆಟ್​ ಕೀಪರ್​), ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಶಿವಂ ದುಬೆ, ರವಿ ಬಿಷ್ಣೋಯ್, ಅರ್ಷದೀಪ್​ ಸಿಂಗ್, ಪ್ರಸಿದ್ಧ್ ಕೃಷ್ಣ, ಅವೇಶ್ ಖಾನ್, ಮುಖೇಶ್ ಕುಮಾರ್

ಇದನ್ನೂ ಓದಿ: ತಂಡದಲ್ಲಿ ಸಂಜು ಸ್ಯಾಮ್ಸನ್​ಗೆ ಸ್ಥಾನ ಏಕಿಲ್ಲ?; ಬಿಸಿಸಿಐ ವಿರುದ್ಧ ನೆಟ್ಟಿಗರ ಕಿಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.