ETV Bharat / sports

ಧೋನಿ ಬರ್ತಡೇಗಿಲ್ಲ ವಿಶ್​​, CSK ಬಗ್ಗೆ ಹಾಕಿದ್ದ ಪೋಸ್ಟ್ ಡಿಲೀಟ್​: ಚೆನ್ನೈ ಜೊತೆ ಜಡೇಜಾ ಸಂಬಂಧ ಕಟ್​? - ಜಡೇಜಾ ಸಿಎಸ್​ಕೆ ತಂಡ

ಚೆನ್ನೈ ಸೂಪರ್ ಕಿಂಗ್ಸ್ ಜೊತೆಗಿನ ರವೀಂದ್ರ ಜಡೇಜಾ ಸಂಬಂಧ ಹಳಿಸಿರುವ ಹಾಗೇ ಕಾಣಿಸುತ್ತಿದೆ. ಇದಕ್ಕೆ ಪ್ರೇರಕ ಎಂಬ ರೀತಿಯಲ್ಲಿ ಆಲ್​ರೌಂಡರ್ ಜಡೇಜಾ ನಿರ್ಧಾರ ಕೈಗೊಂಡಿದ್ದಾರೆ.

Ravindra Jadeja CSK
Ravindra Jadeja CSK
author img

By

Published : Jul 9, 2022, 4:47 PM IST

ಹೈದರಾಬಾದ್​: ಟೀಂ ಇಂಡಿಯಾ ಹಾಗೂ ಇಂಡಿಯನ್​ ಪ್ರೀಮಿಯರ್ ಲೀಗ್​ನ ಪ್ರಮುಖ ಆಟಗಾರರಲ್ಲಿ ರವೀಂದ್ರ ಜಡೇಜಾ ಕೂಡ ಒಬ್ಬರು. ಕಳೆದ ಅನೇಕ ವರ್ಷಗಳಿಂದಲೂ ಈ ಪ್ಲೇಯರ್​ ಚೆನ್ನೈ ಸೂಪರ್ ಕಿಂಗ್ಸ್​ ತಂಡ ಭಾಗವಾಗಿದ್ದಾರೆ. ಆದರೆ, ಇದೀಗ ದಿಢೀರ್​ ಆಗಿ ಅವರು ತೆಗೆದುಕೊಂಡಿರುವ ನಿರ್ಧಾರವೊಂದು ಅನೇಕರಲ್ಲಿ ಅಚ್ಚರಿ ಮೂಡಿಸಿದೆ. ಜೊತೆಗೆ 2023ರ ಐಪಿಎಲ್​​ನಲ್ಲಿ ಅವರು ಸಿಎಸ್​ಕೆ ತಂಡದಲ್ಲಿ ಕಾಣಿಸಿಕೊಳ್ಳಲ್ಲ ಎಂಬ ಮಾತು ಕೇಳಿ ಬರಲು ಶುರುವಾಗಿವೆ.

2022ರ ಇಂಡಿಯನ್​ ಪ್ರೀಮಿಯರ್ ಲೀಗ್​ ಆರಂಭಗೊಳ್ಳುವುದಕ್ಕೂ ಮುಂಚಿತವಾಗಿ ರವೀಂದ್ರ ಜಡೇಜಾ ಚೆನ್ನೈ ತಂಡದ ನಾಯಕನಾಗಿ ಆಯ್ಕೆಯಾಗಿದ್ದರು. ಆದರೆ, ಅವರ ನಾಯಕತ್ವದಲ್ಲಿ ಆಡಿರುವ 8 ಪಂದ್ಯಗಳ ಪೈಕಿ 6ರಲ್ಲಿ ಸೋಲು ಕಂಡಿತ್ತು. ಹೀಗಾಗಿ, ಜಡೇಜಾ ನಾಯಕತ್ವ ಮರಳಿ ಧೋನಿಗೆ ಹಸ್ತಾಂತರ ಮಾಡಿದ್ದರು. ಈ ವೇಳೆ, ಸಿಎಸ್​ಕೆ ಹಾಗೂ ಜಡೇಜಾ ನಡುವಿನ ಸಂಬಂಧ ಸರಿಯಾಗಿ ಉಳಿದಿಲ್ಲ ಎಂಬ ಮಾತು ಕೇಳಿ ಬಂದಿದ್ದವು.

ಇದನ್ನೂ ಓದಿರಿ: ಟೆಸ್ಟ್​​​ನಿಂದ ಅಶ್ವಿನ್​​ರನ್ನೇ ಕೈಬಿಟ್ಟ ಮೇಲೆ T-20 ಯಿಂದ ಕೊಹ್ಲಿ ಅವರನ್ನೇ ಏಕೆ ಬಿಡಬಾರದು? ಕಪಿಲ್​ ಪ್ರಶ್ನೆ

ಐಪಿಎಲ್​ನಲ್ಲಿ ಬ್ಯಾಟಿಂಗ್​ ಹಾಗೂ ಬೌಲಿಂಗ್​ನಲ್ಲೂ ಜಡೇಜಾ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿರಲಿಲ್ಲ. ಜೊತೆಗೆ ಗಾಯದ ಸಮಸ್ಯೆಯಿಂದ ಅವರು ತಂಡದಿಂದ ಹೊರಗುಳಿದಿದ್ದರು. ಇದೀಗ, ದಿಢೀರ್​ ಆಗಿ ತಮ್ಮ ಇನ್​​ಸ್ಟಾಗ್ರಾಂ ಖಾತೆಯಿಂದ 2021, 22ರ ಸಿಎಸ್​ಕೆ ಜೊತೆಗಿನ ಎಲ್ಲ ಪೋಸ್ಟ್ ಡಿಲೀಟ್ ಮಾಡಿದ್ದಾರೆ. ಇದು ಅನೇಕ ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದ್ದು, ಮುಂದಿನ ಐಪಿಎಲ್​ನಲ್ಲಿ ಅವರು ಬೇರೊಂದು ತಂಡದ ಪರ ಕಣಕ್ಕಿಳಿಯುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಸಿಎಸ್​ಕೆ ಹಾಗೂ ಜಡೇಜಾ ಪರಸ್ಪರ ಅನ್​ಫಾಲೋ ಮಾಡಿದ್ದಾರೆ.

ಧೋನಿ ಹುಟ್ಟುಹಬ್ಬಕ್ಕೆ ವಿಶ್ ಮಾಡದ ಜಡೇಜಾ: ಪ್ರತಿ ವರ್ಷ ಮಹೇಂದ್ರ ಸಿಂಗ್ ಧೋನಿ ಹುಟ್ಟುಹಬ್ಬಕ್ಕೆ ವಿಶ್ ಮಾಡ್ತಿದ್ದ ರವೀಂದ್ರ ಜಡೇಜಾ ಈ ಸಲ ಶುಭಾಶಯ ತಿಳಿಸಿಲ್ಲ. ಈ ಮೂಲಕ ಉಭಯ ನಾಯಕರ ಮಧ್ಯೆ ಬಿರುಕು ಮೂಡಿದೆ ಎಂಬ ಮಾತು ಕೇಳಿ ಬಂದಿದೆ. 022ರ ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ನಡೆಯುವುದಕ್ಕೂ ಮುಂಚಿತವಾಗಿ ಜಡೇಜಾಗೆ ಬರೋಬ್ಬರಿ 16 ಕೋಟಿ ರೂಪಾಯಿ ನೀಡಿ ತಂಡ ತನ್ನಲ್ಲೇ ಉಳಿಸಿಕೊಂಡಿತ್ತು.

ಹೈದರಾಬಾದ್​: ಟೀಂ ಇಂಡಿಯಾ ಹಾಗೂ ಇಂಡಿಯನ್​ ಪ್ರೀಮಿಯರ್ ಲೀಗ್​ನ ಪ್ರಮುಖ ಆಟಗಾರರಲ್ಲಿ ರವೀಂದ್ರ ಜಡೇಜಾ ಕೂಡ ಒಬ್ಬರು. ಕಳೆದ ಅನೇಕ ವರ್ಷಗಳಿಂದಲೂ ಈ ಪ್ಲೇಯರ್​ ಚೆನ್ನೈ ಸೂಪರ್ ಕಿಂಗ್ಸ್​ ತಂಡ ಭಾಗವಾಗಿದ್ದಾರೆ. ಆದರೆ, ಇದೀಗ ದಿಢೀರ್​ ಆಗಿ ಅವರು ತೆಗೆದುಕೊಂಡಿರುವ ನಿರ್ಧಾರವೊಂದು ಅನೇಕರಲ್ಲಿ ಅಚ್ಚರಿ ಮೂಡಿಸಿದೆ. ಜೊತೆಗೆ 2023ರ ಐಪಿಎಲ್​​ನಲ್ಲಿ ಅವರು ಸಿಎಸ್​ಕೆ ತಂಡದಲ್ಲಿ ಕಾಣಿಸಿಕೊಳ್ಳಲ್ಲ ಎಂಬ ಮಾತು ಕೇಳಿ ಬರಲು ಶುರುವಾಗಿವೆ.

2022ರ ಇಂಡಿಯನ್​ ಪ್ರೀಮಿಯರ್ ಲೀಗ್​ ಆರಂಭಗೊಳ್ಳುವುದಕ್ಕೂ ಮುಂಚಿತವಾಗಿ ರವೀಂದ್ರ ಜಡೇಜಾ ಚೆನ್ನೈ ತಂಡದ ನಾಯಕನಾಗಿ ಆಯ್ಕೆಯಾಗಿದ್ದರು. ಆದರೆ, ಅವರ ನಾಯಕತ್ವದಲ್ಲಿ ಆಡಿರುವ 8 ಪಂದ್ಯಗಳ ಪೈಕಿ 6ರಲ್ಲಿ ಸೋಲು ಕಂಡಿತ್ತು. ಹೀಗಾಗಿ, ಜಡೇಜಾ ನಾಯಕತ್ವ ಮರಳಿ ಧೋನಿಗೆ ಹಸ್ತಾಂತರ ಮಾಡಿದ್ದರು. ಈ ವೇಳೆ, ಸಿಎಸ್​ಕೆ ಹಾಗೂ ಜಡೇಜಾ ನಡುವಿನ ಸಂಬಂಧ ಸರಿಯಾಗಿ ಉಳಿದಿಲ್ಲ ಎಂಬ ಮಾತು ಕೇಳಿ ಬಂದಿದ್ದವು.

ಇದನ್ನೂ ಓದಿರಿ: ಟೆಸ್ಟ್​​​ನಿಂದ ಅಶ್ವಿನ್​​ರನ್ನೇ ಕೈಬಿಟ್ಟ ಮೇಲೆ T-20 ಯಿಂದ ಕೊಹ್ಲಿ ಅವರನ್ನೇ ಏಕೆ ಬಿಡಬಾರದು? ಕಪಿಲ್​ ಪ್ರಶ್ನೆ

ಐಪಿಎಲ್​ನಲ್ಲಿ ಬ್ಯಾಟಿಂಗ್​ ಹಾಗೂ ಬೌಲಿಂಗ್​ನಲ್ಲೂ ಜಡೇಜಾ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿರಲಿಲ್ಲ. ಜೊತೆಗೆ ಗಾಯದ ಸಮಸ್ಯೆಯಿಂದ ಅವರು ತಂಡದಿಂದ ಹೊರಗುಳಿದಿದ್ದರು. ಇದೀಗ, ದಿಢೀರ್​ ಆಗಿ ತಮ್ಮ ಇನ್​​ಸ್ಟಾಗ್ರಾಂ ಖಾತೆಯಿಂದ 2021, 22ರ ಸಿಎಸ್​ಕೆ ಜೊತೆಗಿನ ಎಲ್ಲ ಪೋಸ್ಟ್ ಡಿಲೀಟ್ ಮಾಡಿದ್ದಾರೆ. ಇದು ಅನೇಕ ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದ್ದು, ಮುಂದಿನ ಐಪಿಎಲ್​ನಲ್ಲಿ ಅವರು ಬೇರೊಂದು ತಂಡದ ಪರ ಕಣಕ್ಕಿಳಿಯುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಸಿಎಸ್​ಕೆ ಹಾಗೂ ಜಡೇಜಾ ಪರಸ್ಪರ ಅನ್​ಫಾಲೋ ಮಾಡಿದ್ದಾರೆ.

ಧೋನಿ ಹುಟ್ಟುಹಬ್ಬಕ್ಕೆ ವಿಶ್ ಮಾಡದ ಜಡೇಜಾ: ಪ್ರತಿ ವರ್ಷ ಮಹೇಂದ್ರ ಸಿಂಗ್ ಧೋನಿ ಹುಟ್ಟುಹಬ್ಬಕ್ಕೆ ವಿಶ್ ಮಾಡ್ತಿದ್ದ ರವೀಂದ್ರ ಜಡೇಜಾ ಈ ಸಲ ಶುಭಾಶಯ ತಿಳಿಸಿಲ್ಲ. ಈ ಮೂಲಕ ಉಭಯ ನಾಯಕರ ಮಧ್ಯೆ ಬಿರುಕು ಮೂಡಿದೆ ಎಂಬ ಮಾತು ಕೇಳಿ ಬಂದಿದೆ. 022ರ ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ನಡೆಯುವುದಕ್ಕೂ ಮುಂಚಿತವಾಗಿ ಜಡೇಜಾಗೆ ಬರೋಬ್ಬರಿ 16 ಕೋಟಿ ರೂಪಾಯಿ ನೀಡಿ ತಂಡ ತನ್ನಲ್ಲೇ ಉಳಿಸಿಕೊಂಡಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.