ETV Bharat / sports

ರಣಜಿ: ​ಪಡಿಕ್ಕಲ್ ಅಜೇಯ 161; ಮೊದಲ ದಿನ ಪಾಂಡಿಚೇರಿ ವಿರುದ್ಧ ಕರ್ನಾಟಕ ಪ್ರಾಬಲ್ಯ

author img

By

Published : Mar 3, 2022, 9:45 PM IST

ಸಿ ಗುಂಪಿನಲ್ಲಿ ಸ್ಥಾನ ಪಡೆದಿರುವ ಕರ್ನಾಟಕ ತಂಡ ಈಗಾಗಲೆ 2 ಲೀಗ್​ ಪಂದ್ಯಗಳಲ್ಲಿ ತಲಾ ಒಂದು ಜಯ ಮತ್ತು ಒಂದು ಡ್ರಾ ಸೇರಿದಂತೆ 9 ಅಂಕಗಳನ್ನು ಪಡೆದು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಇದೀಗ ಕೊನೆಯ ಲೀಗ್​ ಪಂದ್ಯದಲ್ಲೂ ಪಾಂಡಿಚೇರಿ ವಿರುದ್ಧವೂ ಪ್ರಾಬಲ್ಯ ಸಾಧಿಸಿದ್ದು, ಕ್ವಾರ್ಟರ್​ ಫೈನಲ್​ಗೆ ಹತ್ತಿರವಾಗುವ ಮುನ್ಸೂಚನೆ ನೀಡಿದೆ.

Devdutt Padikkal century
ದೇವದತ್ ಪಡಿಕ್ಕಲ್​ ಶತಕ

ಚೆನ್ನೈ: ಯುವ ಬ್ಯಾಟರ್ ದೇವದತ್ ಪಡಿಕ್ಕಲ್ ಪಾಂಡಿಚೇರಿ ವಿರುದ್ಧ ನಡೆಯುತ್ತಿರುವ ರಣಜಿ ಟ್ರೋಫಿ ಪಂದ್ಯದಲ್ಲಿ ಅಜೇಯ ಶತಕ ಸಿಡಿಸಿ ಕರ್ನಾಟಕ ತಂಡ ಮೊದಲ ದಿನ ಗೌರವ ಮೊತ್ತ ದಾಖಲಿಸಲು ಕಾರಣರಾದರು.

ಸಿ ಗುಂಪಿನಲ್ಲಿ ಸ್ಥಾನ ಪಡೆದಿರುವ ಕರ್ನಾಟಕ ತಂಡ ಈಗಾಗಲೆ 2 ಲೀಗ್​ ಪಂದ್ಯಗಳಲ್ಲಿ ತಲಾ ಒಂದು ಜಯ ಮತ್ತು ಒಂದು ಡ್ರಾ ಸೇರಿದಂತೆ 9 ಅಂಕಗಳನ್ನು ಪಡೆದು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಇದೀಗ ಕೊನೆಯ ಲೀಗ್​ ಪಂದ್ಯದಲ್ಲೂ ಪಾಂಡಿಚೇರಿ ವಿರುದ್ಧವೂ ಪ್ರಾಬಲ್ಯ ಸಾಧಿಸಿದ್ದು, ಕ್ವಾರ್ಟರ್​ ಫೈನಲ್​ಗೆ ಸನಿಹವಾಗುವ ಮುನ್ಸೂಚನೆ ನೀಡಿದೆ.

ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡ ಮೊದಲ ದಿನ 90 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು 293 ರನ್​​ಗಳಿಸಿದೆ. ಆರಂಭಿಕ ಬ್ಯಾಟರ್​ ರವಿಕುಮಾರ್ ಸಮರ್ಥ್​ (11) ಮತ್ತು ಕಳೆದ ಪಂದ್ಯದ ಶತಕ ವೀರ ಕರುಣ್ ನಾಯರ್(6) ಇಂದು ಬೇಗನೆ ವಿಕೆಟ್​ ಒಪ್ಪಿಸಿದರು. ಆದರೆ ದೇವದ್​ ಪಡಿಕ್ಕಲ್(161) ಮತ್ತು ಕೆ.ವಿ. ಸಿದ್ಧಾರ್ಥ್​(85) 3ನೇ ವಿಕೆಟ್​ಗೆ 223 ರನ್​ಗಳ ಜೊತೆಯಾಟ ನೀಡಿ ಚೇತರಿಕೆ ನೀಡಿದ್ದಲ್ಲದೆ, ಬೃಹತ್​ ಮೊತ್ತದತ್ತ ತಂಡವನ್ನು ಕೊಂಡೊಯ್ದರು.

​ಶತಕದ ಮೂಲಕ ಫಾರ್ಮ್​ಗೆ ಮರಳಿದ ದೇವದತ್: ದೇವದತ್​ ಪಡಿಕ್ಕಲ್ ಕಳೆದ 2 ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದರು. ಅವರು ಕಳೆದ ನಾಲ್ಕು ಇನ್ನಿಂಗ್ಸ್​ಗಳಲ್ಲಿ ಕ್ರಮವಾಗಿ 21, 4, 8, 49 ರನ್​ಗಳಿಗೆ ವಿಕೆಟ್​ ಒಪ್ಪಿಸಿದ್ದರು. ಆದರೆ ಇಂದು ಆರಂಭಿಕರಾಗಿ ಕಣಕ್ಕಿಳಿದು ಆಕರ್ಷಕ ಶತಕ ದಾಖಲಿಸಿ ಫಾರ್ಮ್​ಗೆ ಮರಳಿದರು. ಇದು ಅವರ ಚೊಚ್ಚಲ ಪ್ರಥಮ ದರ್ಜೆ ಶತಕವಾಗಿತ್ತು. 21 ವರ್ಷದ ಯುವ ಬ್ಯಾಟರ್​ 277 ಎಸೆತಗಳಲ್ಲಿ 20 ಬೌಂಡರಿ ಮತ್ತು 2 ಸಿಕ್ಸರ್​ ಜೊತೆಗೆ ಅಜೇಯ 161 ರನ್​ಗಳಿಸಿದರು.

ಇವರಿಗೆ ಸಾಥ್ ನೀಡಿದ ಸಿದ್ಧಾರ್ಥ್​ 168 ಎಸೆತಗಳಲ್ಲಿ 11 ಬೌಂಡರಿ ಸಹಿತ 85 ರನ್​ಗಳಿಸಿರು. ನಾಯಕ ಮನೀಶ್ ಪಾಂಡೆ 33 ಎಸೆತಗಳಲ್ಲಿ ಅಜೇಯ 21 ರನ್​ಗಳಿಸಿ ಪಡಿಕ್ಕಲ್ ಜೊತೆಗೆ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿದ್ದಾರೆ.

ಇದನ್ನೂ ಓದಿ:100ನೇ ಪಂದ್ಯದ​ ಸಂಭ್ರಮದಲ್ಲಿರುವ ಕೊಹ್ಲಿಯ ಸಂಪೂರ್ಣ ಟೆಸ್ಟ್​ ಕ್ರಿಕೆಟ್ ಅಂಕಿ-ಅಂಶ ಇಲ್ಲಿದೆ

ಚೆನ್ನೈ: ಯುವ ಬ್ಯಾಟರ್ ದೇವದತ್ ಪಡಿಕ್ಕಲ್ ಪಾಂಡಿಚೇರಿ ವಿರುದ್ಧ ನಡೆಯುತ್ತಿರುವ ರಣಜಿ ಟ್ರೋಫಿ ಪಂದ್ಯದಲ್ಲಿ ಅಜೇಯ ಶತಕ ಸಿಡಿಸಿ ಕರ್ನಾಟಕ ತಂಡ ಮೊದಲ ದಿನ ಗೌರವ ಮೊತ್ತ ದಾಖಲಿಸಲು ಕಾರಣರಾದರು.

ಸಿ ಗುಂಪಿನಲ್ಲಿ ಸ್ಥಾನ ಪಡೆದಿರುವ ಕರ್ನಾಟಕ ತಂಡ ಈಗಾಗಲೆ 2 ಲೀಗ್​ ಪಂದ್ಯಗಳಲ್ಲಿ ತಲಾ ಒಂದು ಜಯ ಮತ್ತು ಒಂದು ಡ್ರಾ ಸೇರಿದಂತೆ 9 ಅಂಕಗಳನ್ನು ಪಡೆದು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಇದೀಗ ಕೊನೆಯ ಲೀಗ್​ ಪಂದ್ಯದಲ್ಲೂ ಪಾಂಡಿಚೇರಿ ವಿರುದ್ಧವೂ ಪ್ರಾಬಲ್ಯ ಸಾಧಿಸಿದ್ದು, ಕ್ವಾರ್ಟರ್​ ಫೈನಲ್​ಗೆ ಸನಿಹವಾಗುವ ಮುನ್ಸೂಚನೆ ನೀಡಿದೆ.

ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡ ಮೊದಲ ದಿನ 90 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು 293 ರನ್​​ಗಳಿಸಿದೆ. ಆರಂಭಿಕ ಬ್ಯಾಟರ್​ ರವಿಕುಮಾರ್ ಸಮರ್ಥ್​ (11) ಮತ್ತು ಕಳೆದ ಪಂದ್ಯದ ಶತಕ ವೀರ ಕರುಣ್ ನಾಯರ್(6) ಇಂದು ಬೇಗನೆ ವಿಕೆಟ್​ ಒಪ್ಪಿಸಿದರು. ಆದರೆ ದೇವದ್​ ಪಡಿಕ್ಕಲ್(161) ಮತ್ತು ಕೆ.ವಿ. ಸಿದ್ಧಾರ್ಥ್​(85) 3ನೇ ವಿಕೆಟ್​ಗೆ 223 ರನ್​ಗಳ ಜೊತೆಯಾಟ ನೀಡಿ ಚೇತರಿಕೆ ನೀಡಿದ್ದಲ್ಲದೆ, ಬೃಹತ್​ ಮೊತ್ತದತ್ತ ತಂಡವನ್ನು ಕೊಂಡೊಯ್ದರು.

​ಶತಕದ ಮೂಲಕ ಫಾರ್ಮ್​ಗೆ ಮರಳಿದ ದೇವದತ್: ದೇವದತ್​ ಪಡಿಕ್ಕಲ್ ಕಳೆದ 2 ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದರು. ಅವರು ಕಳೆದ ನಾಲ್ಕು ಇನ್ನಿಂಗ್ಸ್​ಗಳಲ್ಲಿ ಕ್ರಮವಾಗಿ 21, 4, 8, 49 ರನ್​ಗಳಿಗೆ ವಿಕೆಟ್​ ಒಪ್ಪಿಸಿದ್ದರು. ಆದರೆ ಇಂದು ಆರಂಭಿಕರಾಗಿ ಕಣಕ್ಕಿಳಿದು ಆಕರ್ಷಕ ಶತಕ ದಾಖಲಿಸಿ ಫಾರ್ಮ್​ಗೆ ಮರಳಿದರು. ಇದು ಅವರ ಚೊಚ್ಚಲ ಪ್ರಥಮ ದರ್ಜೆ ಶತಕವಾಗಿತ್ತು. 21 ವರ್ಷದ ಯುವ ಬ್ಯಾಟರ್​ 277 ಎಸೆತಗಳಲ್ಲಿ 20 ಬೌಂಡರಿ ಮತ್ತು 2 ಸಿಕ್ಸರ್​ ಜೊತೆಗೆ ಅಜೇಯ 161 ರನ್​ಗಳಿಸಿದರು.

ಇವರಿಗೆ ಸಾಥ್ ನೀಡಿದ ಸಿದ್ಧಾರ್ಥ್​ 168 ಎಸೆತಗಳಲ್ಲಿ 11 ಬೌಂಡರಿ ಸಹಿತ 85 ರನ್​ಗಳಿಸಿರು. ನಾಯಕ ಮನೀಶ್ ಪಾಂಡೆ 33 ಎಸೆತಗಳಲ್ಲಿ ಅಜೇಯ 21 ರನ್​ಗಳಿಸಿ ಪಡಿಕ್ಕಲ್ ಜೊತೆಗೆ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿದ್ದಾರೆ.

ಇದನ್ನೂ ಓದಿ:100ನೇ ಪಂದ್ಯದ​ ಸಂಭ್ರಮದಲ್ಲಿರುವ ಕೊಹ್ಲಿಯ ಸಂಪೂರ್ಣ ಟೆಸ್ಟ್​ ಕ್ರಿಕೆಟ್ ಅಂಕಿ-ಅಂಶ ಇಲ್ಲಿದೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.